03 ಮಾರ್ಚ್ 2021

ಬೆಳವಣಿಗೆ .

 ದಿಡೀರ್ ಬೆಳೆದು ನಿಲ್ಲಲಾಗುವುದಿಲ್ಲ

ಬೆಳೆಸುವವರು  ಬಹಳಿಲ್ಲ 

ಬೆಳೆವ ಚಿಗುರನ್ನೇ ಚಿವುಟುವರಲ್ಲ

ಬೆಳೆದು ನಿಂತಾಗ ನಿನ್ನ ಸಹಾಯ

ಬೇಡುತ ಬರುವರು ಎಲ್ಲಾ.

02 ಮಾರ್ಚ್ 2021

ಗಾಳಿಪಟ .ಹನಿ

 


*ಗಾಳಿಪಟ*


ನಾವೆಂದೂ ಆಗಲಾರದು

ಬೇರೆಯವರು ನಿಯಂತ್ರಿಸುವ

ಗಾಳಿಪಟ|

ಆಟ ಸಾಕೆನಿಸಿದಾಗ

ಬರ್ರೆಂದು ಕೆಳಕ್ಕೆಳೆದು

ತೋರಿಸಿಬಿಡುವರು

ಪ್ರಪಾತ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

01 ಮಾರ್ಚ್ 2021

ಜೀವನ .ಹನಿ

 





*ಜೀವನ*


ಯಾರಿಗೂ ಸಾದ್ಯವಿಲ್ಲ

ಜೀವನ ನಡೆಸಲು 

ಬರೆದಿಟ್ಟಂತೆ|

ಸನ್ಮಾರ್ಗದಿ ನಡೆದು 

ಸಾಧಿಸಿದರೆ ಜೀವಿಸಬಹುದು

ಬರೆದಿಡುವಂತೆ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

          

28 ಫೆಬ್ರವರಿ 2021

ವಿಜ್ಞಾನದ ಸದುಪಯೋಗ .ಹನಿ


 *ವಿಜ್ಞಾನದ ಸದುಪಯೋಗ*


ವಿಜ್ಞಾನವೇ ಬದಲಾವಣೆಗೆ ಕಾರಣ

ಜ್ಞಾನ ಅದರ ಬೇರು 

ಎಂಬುದನ್ನು ನೆನಪಿನಲ್ಲಿಡೋಣ

ವಿಜ್ಞಾನವನ್ನು ಸದುಪಯೋಗ 

ಪಡಿಸಿಕೊಳ್ಳೋಣ

ಅಜ್ಞಾನವನ್ನು ತೊಲಗಿಸೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಓ ಗಿಳಿರಾಮ ... ಕವನ


 




*ಓ ಗಿಳಿರಾಮ*


ಓ ಗಿಳಿರಾಮ ....

ಎಲ್ಲಿರುವನು ನನ್ನ ರಾಮ

ತಿಳಿಸಿಬಿಡು ಸಲ್ಲಿಸುವೆ 

ನಿನಗೆ ನನ್ನ ಪ್ರಣಾಮ .


ದಿನಪ ಬರುವ ಮೊದಲೇ

ದಿನವೂ ಬಂದು

ಕದ್ದು ನೋಡುತ್ತಿದ್ದ, ಈಗೀಗ

ಅವನ ಸುದ್ದಿಯಿಲ್ಲ ನೀನೇ ಹೇಳು 

ನಲ್ಲನಿಲ್ಲದೆ ಹೇಗಿರಲಿ?


ಮಣಿ ಸರವ ನೀಡಿ

ಹಣೆಗೊಂದು ಮುತ್ತನಿತ್ತು 

ಸ್ವರ್ಗಕ್ಕೆ ಕರೆದೊಯ್ದಿದ್ದನು

ಕಣಿ ಹೇಳು ನನಗಿಂದು 

ಅವನೆಂದು ಬರುವನು ?


ಅಕ್ಕರೆಯ ಮಾತನಾಡಿ

ಸಕ್ಕರೆಯ ಸವಿ ನೀಡಿ 

ಪ್ರೇಮ ಲೋಕ ಸೃಷ್ಟಿಸಿದ್ದ ನನಗಾಗಿ

ಸಿಕ್ಕರೆ ನನ್ನ ಮಾರನಿಗೇಳು

ಕಾಯುತಿಹಳು ನಿನ್ನರಸಿ ನಿನಗಾಗಿ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು