21 ಫೆಬ್ರವರಿ 2021

ಸೌಂದರ್ಯರಾಶಿ .ಕವನ


 


*ಸೌಂದರ್ಯ ರಾಶಿ* ಕವನ

ಭತ್ತದ ಹೊಲದಲಿರುವ ನಿಂದಿರುವ
ಬತ್ತದ ಸೌಂದರ್ಯ ರಾಶಿ ನೀನು|
ಘಮಘಮಿಸುವ ಹೂವಂತವಳೆ
ಹುಷಾರು ಮುತ್ತಿದಾವು ಜೇನು||

ಮತ್ತೆ ಮತ್ತೆ ನಿನ್ನ ನೋಡುತ್ತಿದ್ದರೆ
ಸಮಯ ಜಾರಿದ ಪರಿವೆಯೇ ಇರದು|
ಮಧು ಬಟ್ಟಲನಿಡಿದಿರುವ ಮುಗುದೆ
ನಿನ್ನ ನೋಡಿದರೆ ಮತ್ತೇರುವುದು ||

ಸಿಂಹಕಟಿ ,ಸಂಪಿಗೆ ಮೂಗಿನವಳೆ
ಹುಚ್ಚು ಹಿಡಿಸಿದೆ ನಿನ್ನ ಮೈಮಾಟ|
ನನ್ನನು ಕೂಡ ಬಲ್ಲೆಯಾ ಒಮ್ಮೆ
ಆಡಬಹುದು ನಾವು ಸರಸದಾಟ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

19 ಫೆಬ್ರವರಿ 2021

ಅಳುಕದಿರು ಮನವೆ ... ಹನಿ

 ಅಳುಕದಿರು ಮನವೆ...


ಅಳುವ ದಿನಗಳು ಅಳಿಯುವವು

ಅಳಿಲಿಗೂ ಸೇವಾ ಭಾಗ್ಯ ಲಬಿಸುವುದು

ಅಳಿಯುವ ಮುನ್ನ 

ಆಳಾಗಿ ದುಡಿದು 

ಅರಸನಾಗಿ ಉಣ್ಣು |

ಸತ್ಕರ್ಮ ಮಾಡುತ 

ಧರ್ಮ ಮಾರ್ಗದಿ ನಡೆ

ಕ್ರಮೇಣವಾಗಿ ತೆರೆಯುವುದು

ನಿನ್ನ ಒಳಗಣ್ಣು ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ದಿನಕರ ಹನಿ


 ದಿನಕರ


(ರಥ ಸಪ್ತಮಿಯ ನೆನಪಲ್ಲಿ)


ಮೂಡಣದರಮನೆಯ

ಬಾಗಿಲ ತೆರೆದು 

ಜಗಬೆಳಗಲು ದಿನವೂ

ಬರುವ ದಿನಕರ|

ಬನ್ನಿ ನಾವೆಲ್ಲರೂ

ನಮಿಸೋಣ ಆ ರವಿಗೆ

ಮುಗಿದು ನಮ್ಮ ಕರ|

18 ಫೆಬ್ರವರಿ 2021

ನಡೆ ನುಡಿ ಹನಿ .

 ನಡೆ ನುಡಿ


 ನಮ್ಮ  ನಡೆ ನುಡಿ 

ಬಂಗಾರದಂತಿರಬೇಕು

ಬದುಕು ಬಂಗಾರವಾಗಲು

ಬಾಳು ಹಸನಾಗಲು

ನಾವು ನಿಜವಾದ

ಮಾನವರಾಗಲು



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

17 ಫೆಬ್ರವರಿ 2021