*ಸಿಹಿಜೀವಿಯ ಹನಿ*
*ನಿರ್ಧಾರ*
ಆಸೆಯಿದ್ದರೆ ನಮಗೆ
ನಾವೂ ಸಹ
ಮರದಂತೆ ಎತ್ತರಕ್ಕೆ
ಬೆಳೆಯಬೇಕು.|
ಜೀವನದಿ ಮೊದಲು
ಬೇರಿನಂತೆ ಆಳಕ್ಕೆ
ಇಳಿಯಬೇಕು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸಿಹಿಜೀವಿಯ ಹನಿ*
*ನಿರ್ಧಾರ*
ಆಸೆಯಿದ್ದರೆ ನಮಗೆ
ನಾವೂ ಸಹ
ಮರದಂತೆ ಎತ್ತರಕ್ಕೆ
ಬೆಳೆಯಬೇಕು.|
ಜೀವನದಿ ಮೊದಲು
ಬೇರಿನಂತೆ ಆಳಕ್ಕೆ
ಇಳಿಯಬೇಕು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಬವಣೆ*
ಅಂಗವಿಕಲರು
ವಿಕಲಚೇತನರಾದರು
ವಿಶೇಷಚೇತನರಾದರು
ದಿವ್ಯಾಂಗರಾದರು
ಹೆಸರುಗಳಲ್ಲಿ ಮಾತ್ರ
ಏನೇನೋ ಬದಲಾವಣೆ|
ಇನ್ನೂ ತಪ್ಪಲಿಲ್ಲ
ಅವರ ಬವಣೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ನಿಯಮ
ಯಮ
ಕ್ರೂರಿ
ನಿಶ್ಚಿತ
ಅನಿಶ್ಚಿತ
ಶಿಕ್ಷಕ
ಆಟಗಾರ
ಮಾಟಗಾರ
ಊಹಿಸಲಾರದ್ದು
ತಪ್ಪಿಸಲಾರದ್ದು
ಅದುವೇ....
ವಿಧಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನಾಗಪ್ಪನ
ಕಾರಣದಿಂದ
ರೆಕ್ಕೆ ಬಲಿಯುವ
ಮೊದಲೆ " ಗೋವಿಂದ"
ನ ಪಾದ ಸೇರಿದ
ಅಪ್ಪ
ಅಪ್ಪನಿಲ್ಲದ
ಕೊರಗ ನೀಗಿ
"ಶ್ರೀದೇವಿ" ಯಂತೆ
ಸಾಕಿ ಸಲಹಿದಳು
ಅಮ್ಮ
*ಸಿಹಿಜೀವಿ*
ಗೋವಿಂದಪ್ಪ ಶ್ರೀದೇವಮ್ಮನ ತನಯ
ಸಿ ಜಿ ವೆಂಕಟೇಶ್ವರ
*ಸಿಹಿಜೀವಿಯ ಹನಿ*
*ಎಚ್ಚರವಿರಲಿ!*
ಏನೆಂದರೆ ಅದನ್ನು ತೆರೆಯದಿರಿ
ಎಲ್ಲೆಂದರಲ್ಲಿ ಒತ್ತದಿರಿ
ಕಳ್ಳಗಣ್ಣುಗಳಿವೆ,ಕಳ್ಳಗಿವಿಗಳಿವೆ
ನಿಮ್ಮ ಮಾನ ಹರಾಜಾಗಬಹುದು
ನಿಮ್ಮ ಹಣ ಸಂಪತ್ತು
ಮಂಗಮಾಯವಾಗಬಹುದು.
ಎಲ್ಲೆಲ್ಲೂ ಹರಡಿದೆ
ಮೋಸದ ಜಾಲ |
ಮೈಮರೆತರೆ ವರವಾಗಿರುವುದೇ
ಶಾಪವಾಗುವುದು
ಎಚ್ಚರವಿರಲಿ! ಇದು
ಅಂತರ್ಜಾಲ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
(ಇಂದು ವಿಶ್ವ ಅಂತರ್ಜಾಲ ಸುರಕ್ಷತಾ ದಿನ)