*ಸಿಹಿಜೀವಿಯ ಹನಿ*
*ಸುರಿಯುವರು*
ನಾವು ತಿನ್ನುವ ಅನ್ನ
ಸಂಪಾದಿಸಲು
ಅನ್ನದಾತ ಹೊಲಗಳಲ್ಲಿ
ಬೆವರು ಸುರಿಸುವರು|
ನಗರದ ಜನ ತಿಂದ
ಅನ್ನ ಕರಗಿಸಲು
ಜಿಮ್ ಗಳಿಗೆ ಹಣ
ಸುರಿಯುವರು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸಿಹಿಜೀವಿಯ ಹನಿ*
*ಸುರಿಯುವರು*
ನಾವು ತಿನ್ನುವ ಅನ್ನ
ಸಂಪಾದಿಸಲು
ಅನ್ನದಾತ ಹೊಲಗಳಲ್ಲಿ
ಬೆವರು ಸುರಿಸುವರು|
ನಗರದ ಜನ ತಿಂದ
ಅನ್ನ ಕರಗಿಸಲು
ಜಿಮ್ ಗಳಿಗೆ ಹಣ
ಸುರಿಯುವರು ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ
ಕುಣಿದ ದಿನವು ನೆನಪಿದೆ
ನನ್ನ ನೃತ್ಯ ಕಂಡು ಅವನು
ಮೆಚ್ಚಿದ ಮಾತು ನೆನಪಿದೆ.
ವಾಲೆ ಜುಮುಕಿ ಕುಣಿತ ಕಂಡು
ಕರಗಳನ್ನು ತಟ್ಟಿ ನಲಿದು
ಬೆರಳಿನುಂಗುರದ ಸೌಂದರ್ಯ
ಕಂಡು ಅವನು ನಲಿದ ನೆನೆಪಿದೆ .
ನಾಗರ ಜಡೆ ಸರಿಸಿ ನಿಂದು
ರಾಗ ತಾಳ ಲಯಕೆ
ಕುಣಿಯುವಾಗ ಅವನು
ಮುಗುಳು ನಕ್ಕ ನೆನಪಿದೆ.
ನನ್ನ ನೃತ್ಯ ಮುಗಿದ ಮೇಲೆ
ಬಳಿಗೆ ಬಂದು ಬೈತಲೆ ಬಟ್ಟು
ಸರಿಸಿ ಮುತ್ತ ನೀಡಿದಾಗ
ಕಂಠೀಹಾರ ಬಿಗಿಯಾದುದು ನೆನಪಿದೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಶಾಲೆಗೆ ನಮಿಸೋಣ*
ಬನ್ನಿರಿ ಗೆಳೆಯರೆ
ಬನ್ನಿರಿ ಎಲ್ಲರೂ
ಶಾಲೆಯ ಕಡೆಗೆ ಹೊರಡೋಣ
ಹೊಸ ವರ್ಷದಲ್ಲಿ
ಹೊಸ ಪಾಠಗಳ
ಕಲಿಯುತ ನಾವು ಮುನ್ನೆಡೆಯೋಣ.
ಕರೋನ ಮುನ್ನೆಚ್ಚರಿಕೆ
ಪಾಲಿಸಿ ಮಾಸ್ಕ್ ಧರಿಸಿ
ಸಾಮಾಜಿಕ ಅಂತರ ಕಾಪಾಡೋಣ .
ಗುರುಗಳು ಹೇಳಿದ
ಹಿತವಚನಗಳ ಕೇಳುತ
ನಮ್ಮ ಭವಿಷ್ಯವ ರೂಪಿಸಿಕೊಳ್ಳೋಣ .
ಮನೆಯೇ ಶಾಲೆಯು
ಶಾಲೆಯು ದೇಗುಲ
ಮನೆಗೂ ಶಾಲೆಗೂ ನಮಿಸೋಣ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಬರಲಿದೆ ವರ್ಷ ಇಪ್ಪತ್ತು ಇಪ್ಪತ್ತೊಂದು |
ನಮ್ಮ ಬದುಕಲ್ಲಿ ಹರ್ಷ ತುಂಬಿರಲಿ ಎಂದೆಂದೂ||
ಹೊಸ ಕ್ಯಾಲೆಂಡರ್ ವರ್ಷದ ಹಾರ್ಧಿಕ ಶುಭಾಶಯಗಳು 💐💐
ಸಿಹಿಜೀವಿ
ಸಿ ಜಿ ವೆಂಕಟೇಶ್ವರ