This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
23 ಅಕ್ಟೋಬರ್ 2020
ಹಣ _ಗುಣ ( ಹನಿ)
21 ಅಕ್ಟೋಬರ್ 2020
ಸ್ಕಂದಮಾತೆ ( ಭಕ್ತಿ ಗೀತೆ)
*ಸ್ಕಂದ ಮಾತೆ*
ಸ್ಕಂದ ಮಾತೆಯೆ ನಮಿಪೆವು
ನಾವು ತಲೆಬಾಗಿ
ಅಭಯ ಹಸ್ತವ ನೀಡಮ್ಮ
ನಮಗೆ ತಾಯಾಗಿ
ಸಿಂಹದ ಮೇಲೆ ಕುಳಿತು
ಅಭಯವ ನೀಡುತಿರುವೆ
ಸ್ಕಂದನ ತೊಡೆಯ ಮೇಲೆ
ಕೂರಿಸಿಕೊಂಡು ಆಡಿಸುತಿರುವೆ.
ಕಮಲ ಗುಲಾಬಿ ಪುಷ್ಪಗಳ
ಪ್ರಿಯೆ ನೀನು ನನ್ನಮ್ಮ
ದುರಿತಗಳ ತರಿಯುತ
ಸರಿದಾರಿಯ ನಮಗೆ ತೋರಮ್ಮ.
ಹಣೆಯಲಿರುವ ಮುಕ್ಕಣ್ಣನ
ಕಣ್ಣಲಿ ನೀ ನೋಡು
ಪದ್ಮಾಸನ ಪ್ರಿಯೆ ಚತುರ್ಭುಜೆ
ನಮ್ಮನು ಹರಸಿ ಕಾಪಾಡು
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
16 ಅಕ್ಟೋಬರ್ 2020
ಸ್ವರ್ಗಕ್ಕೆ ಪಯಣ( S P ಬಾಲಸುಬ್ರಹ್ಮಣ್ಯಂ ರವರಿಗೆ ನುಡಿ ನಮನ)
*ಸ್ವರ್ಗಕ್ಕೆ ಪಯಣ*
ಗಾಯನ ಲೋಕದ ಧೀಮಂತ
ನಟನಾ ಲೋಕದ ಶ್ರೀಮಂತ
ನೀನಗೆ ನೀನೆ ಸಾಟಿ ಬಾಲಣ್ಣ
ಮತ್ತೊಮ್ಮೆ ಹುಟ್ಟಿ ಬಾರಣ್ಣ.
ಕಂಠದಲ್ಲೆ ನವರಸ ತೋರಿದೆ
ಸರಿಗಮಗಳ ಕುಣಿದಾಡಿಸಿದೆ
ದಾಖಲೆಗಳನು ದೂಳೆಬ್ಬಿಸಿದೆ
ಭಾಷಾ ಸಾಮರಸ್ಯ ಬೆಳೆಸಿದೆ.
ನಾಯಕರಿಗೆ ನೀ ಶಾರೀರವಾದೆ
ಸತತವಾಗಿ ಹರಿಸಿದೆ ಗಾನಸುಧೆ
ಸಂಗೀತ ಲೋಕದ ದಿಗ್ಗಜ ನೀವು
ಎಂದಿಗೂ ಮರೆಯೊಲ್ಲ ನಾವು.
ತರ ತರ ಹಾಡನು ಹಾಡುತಲಿ
ಮೈಲಿಗಲ್ಲುಗಳ ದಾಟುತಲಿ
ಅಭಿಮಾನಿಗಳನು ಅಗಲಿದಿರಿ
ಸ್ವರ್ಗಕೆ ಪಯಣವ ಮಾಡಿದಿರಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಸಿಹಿಜೀವಿಯ ಹಾಯ್ಕಗಳು
*ಸಿಹಿಜೀವಿಯ ಹಾಯ್ಕುಗಳು*
೧೦೧
ಅನ್ನದಾತನು
ದೇಶದ ಬೆನ್ನೆಲುಬು
ನೇಗಿಲ ಯೋಗಿ
೧೦೨
ಸ್ನೇಹಕ್ಕೆ ಅರ್ಥ
ನನ್ನ ಗೆಳೆಯ ಮುತ್ತು
ಪುರಾವೆಯೇಕೆ?
೧೦೩
ಅನ್ನದ ಬೆಲೆ
ಹಸಿದವಗೆ ಗೊತ್ತು
ಹಸಿದು ನೋಡು
೧೦೪
ಶ್ರೀದೇವಿ ಮಾತೆ
ಮಾತೆಯ ಮಾತುಗಳು
ಮನಕೆ ಇಂಪು
೧೦೫
ಇಳೆಗೆ ಮಳೆ
ಮಳೆಯ ಅವಾಂತರ
ರೈತ ಕಂಗಾಲು
೧೦೬
ಆರೋಗ್ಯಬೇಕೆ?
ಕೈತೊಳೆವುದ ಕಲಿ
ಸೋಂಕಿಂದ ಮುಕ್ತಿ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು.
15 ಅಕ್ಟೋಬರ್ 2020
ಮಳೆ ಹನಿಯ ಬಗ್ಗೆ ಸಿಹಿಜೀವಿಯ ಹನಿಗಳು
*ಹನಿಗಳ ಮೇಲೆ ಸಿಹಿಜೀವಿಯ ಹನಿಗಳು*
ಹನಿ೧
*ನಿಲ್ಲಿಸು*
ವರುಣ ತೋರು ಕರುಣ
ಬರಲಿ ಬಿಡು ಅರುಣ
ನಿಲ್ಲಿಸು ನಿನ್ನಾರ್ಭಟವ
ಕೊಡದಿರು ಕಾಟವ
ಹನಿ೨
*ನೆಲೆ ಎಲ್ಲಿ?*
ವರುಣನ ಆಗಮನ
ಜೀವಸಂಕುಲದ ನಮನ
ವರಣಾರ್ಭಟವಾಗಲು
ಬದುಕು ಚೆಲ್ಲಾಪಿಲ್ಲಿ.
ಜೀವಿಗಳಿಗೆ ನೆಲೆ ಎಲ್ಲಿ?
ಹನಿ೩
*ನಿಶ್ಶೇಷ*
ತೂತು ಬಿದ್ದಿರಬಹುದು
ಆಕಾಶ
ರೈತರ ಮನದಿ ಕ್ಲೇಶ |
ಬೆಳೆ ಮತ್ತು ಬಾಳಾಗಬಹುದು
ನಿಶ್ಶೇಷ||
ಹನಿ೪
*ಮಳೆ*
ನಮಗೂ ಬೇಕೇ ಬೇಕು
ಮಳೆ |
ಅತಿಯಾದರೆ ?
ಹೊಡೆದುಬಿಡುವುದೇನೋ
ರೈತರ ಶವಪೆಟ್ಟಿಗೆಗೆ ಕೊನೆಯ
ಮಳೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು.