16 ಅಕ್ಟೋಬರ್ 2020

ಸ್ವರ್ಗಕ್ಕೆ ಪಯಣ( S P ಬಾಲಸುಬ್ರಹ್ಮಣ್ಯಂ ರವರಿಗೆ ನುಡಿ ನಮನ)

*ಸ್ವರ್ಗಕ್ಕೆ ಪಯಣ*



ಗಾಯನ ಲೋಕದ ಧೀಮಂತ

ನಟನಾ ಲೋಕದ ಶ್ರೀಮಂತ

ನೀನಗೆ ನೀನೆ ಸಾಟಿ ಬಾಲಣ್ಣ

ಮತ್ತೊಮ್ಮೆ ಹುಟ್ಟಿ ಬಾರಣ್ಣ.


ಕಂಠದಲ್ಲೆ ನವರಸ ತೋರಿದೆ

ಸರಿಗಮಗಳ ಕುಣಿದಾಡಿಸಿದೆ

ದಾಖಲೆಗಳನು ದೂಳೆಬ್ಬಿಸಿದೆ

ಭಾಷಾ ಸಾಮರಸ್ಯ ಬೆಳೆಸಿದೆ.


ನಾಯಕರಿಗೆ ನೀ ಶಾರೀರವಾದೆ 

ಸತತವಾಗಿ ಹರಿಸಿದೆ ಗಾನಸುಧೆ 

ಸಂಗೀತ ಲೋಕದ ದಿಗ್ಗಜ ನೀವು

ಎಂದಿಗೂ ಮರೆಯೊಲ್ಲ ನಾವು.


ತರ ತರ ಹಾಡನು ಹಾಡುತಲಿ

ಮೈಲಿಗಲ್ಲುಗಳ  ದಾಟುತಲಿ 

ಅಭಿಮಾನಿಗಳನು ಅಗಲಿದಿರಿ 

ಸ್ವರ್ಗಕೆ ಪಯಣವ ಮಾಡಿದಿರಿ.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ