25 ಏಪ್ರಿಲ್ 2020

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿ

ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ಹನಿ

ಎರಡು ಚುಟುಕುಗಳು

ಎರಡು ಚುಟುಕುಗಳು


*ದೇಗುಲಗಳು*

ಸಕಲ ಕಾಲಕೂ ಮನಕಾನಂದ ನೀಡುತ್ತಿವೆ
ಬೇಲೂರು ಹಳೇಬೀಡಿನ ಶಿಲಾಬಾಲಿಕೆಗಳು
ಕಲಾರಸಿಕರನ್ನು ಕೈಬೀಸಿ ಕರೆಯುತ್ತಲಿವೆ
ಕನ್ನಡ ನಾಡಿನ ವಿಶ್ವ ಪ್ರಸಿದ್ಧ ದೇಗುಲಗಳು.


*ನಿಲ್ಲುತ್ತಿಲ್ಲ*

ವೈರಾಣುವಿನ ಪ್ರವರಕ್ಕೆ ಹೈರಾಣಾಗಿದೆ ಜಗ
ಎಲ್ಲಡೆ ಮರಣಮೃದಂಗವು  ನಿಲ್ಲುತ್ತಿಲ್ಲ
ವೈದ್ಯರು,ನಾರಾಯಣ,ಶ್ರಮಿಸುತ್ತಲಿದ್ದಾರೆ
ಕಾಲವನ್ನು ತಡೆಯೋರು ಯಾರೂ ಇಲ್ಲ.

*ಸಿ ಜಿ ವೆಂಕಟೇಶ್ವರ*
*ತುಮಕೂರು*

24 ಏಪ್ರಿಲ್ 2020

ಪುಸ್ತಕ ವಿಮರ್ಶೆ (ಜೋಗಿ ಕತೆಗಳು)


ಪುಸ್ತಕ ವಿಮರ್ಶೆ
ಇಂದು ನಾನು ಓದಿದ ಪುಸ್ತಕ ಜೋಗಿ ಕಥೆಗಳು
ಒಂದಕ್ಕಿಂತ ಒಂದು ವಿಭಿನ್ನವಾದ ಕಥಾವಸ್ತುವನ್ನು ಒಳಗೊಂಡ ೨೧ ಕಥೆಗಳನ್ನು ಒಂದೆ ಓದಿಗೆ ಆರಿಸಿಕೊಂಡು ಹೋದ ಪುಸ್ತಕ .ಜೋಗಿರವರ ಭಾಷೆ ಕಥೆಗಳಲ್ಲಿ ಬರುವ ತಿರುವುಗಳನ್ನು ಓದಿಯೇ ಅನುಭವಿಸಬೇಕು
ಅವರ ಗೆಳೆಯ ಸೂರಿಯವರ ವಿಮರ್ಶೆ ಪುಸ್ತಕದ ಮೊದಲ ಪುಟಗಳಲ್ಲಿ ಓದಿದ ಮೇಲೆ ಇಡಿ ಕಥೆಗಳ ಓದಿದ ಮೇಲೆ ಸೂರಿ ಒಬ್ಬ ಸಾಮಾನ್ಯ ಓದುಗನಂತೆ ವಿಮರ್ಶೆ ಮಾಡಿರುವುದು ನನ್ನ ಅರಿವಿಗೆ ಬಂತು.
ಈ ಕಥೆಗಳಲ್ಲಿ ಬರುವ ಬಹುತೇಕ ಪಾತ್ರಗಳು ನಾವು ಕೇಳಿದ ಮಹಾನ್ ವ್ಯಕ್ತಿಗಳದು ಉದಾಹರಣೆಗೆ ಪುರಂದರ ವಿಠ್ಠಲ ಗೊರೂರು ರಾಮಸ್ವಾಮಿ ಇತ್ಯಾದಿ .
ಒಟ್ಟಿನಲ್ಲಿ ಇಂದು ಒಂದು ಉತ್ತಮ ಪುಸ್ತಕ ಓದಿದ ಖುಷಿ
*ಸಿ.ಜಿ.ವೆಂಕಟೇಶ್ವರ*

ಸುಖಿ(ಹನಿ)

*ಸುಖಿ*

ಅವಳಿದ್ದರೆ ನನಗೆ ಸಂತಸ
ಅವರಿದ್ದರೆ ನಾನು ಸುಖಿ
ಎಂದು ಹಲುಬುತ್ತಿದ್ದೆ
ವಿಸ್ಮಯವೆಂದರೆ ಈಗೀಗ
ಅವರಿವರು ಇರದೇ
ಸುಖವಾಗಿರುವೆ ನಾನು
ಪರಮಾನಂದ ಅನುಭವಿಸುವೆ
ಇಲ್ಲದಿದ್ದರೆ " ನಾನು".