This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
23 ಏಪ್ರಿಲ್ 2020
22 ಏಪ್ರಿಲ್ 2020
ಸಹನೆ ಬೇಕು (ಭಾವಗೀತೆ)
*ಸಹನೆ ಬೇಕು*
(ಇಂದು ೨೧/೪/೨೦೨೦ ವಿಶ್ವ ಸೃಜನಶೀಲ ದಿನ)
ಕುಂಚವನಿಡಿದು ಬಣ್ಣಗಳ
ಚಿತ್ತಾರದಿಂದ ಚಿತ್ರ ಬಿಡಿಸಬೇಕು
ಆಹಾ ಎನ್ನುವ ಕಲಾಕೃತಿ
ರಚಿಸಲು ಕಲಾವಿದಗೆ ಸಹನೆ ಬೇಕು.
ಶೃತಿ ,ಲಯ, ಯತಿ ಗತಿ
ರಾಗ ತಾಳ ಗೊತ್ತಿರಬೇಕು
ಕಿವಿಗಿಂಪಾದ ಹಾಡು ಹಾಡಲು
ಸಂಗೀತಗಾರನಿಗೆ ಸಹನೆ ಬೇಕು.
ಮುದ್ರೆ, ಭಾವನೆ ತಾಣಗಳ
ಆಳವಾದ ಅಭ್ಯಾಸವಿರಬೇಕು
ಮನತಣಿಸುವ ನರ್ತನ ಮಾಡಲು
ನೃತ್ಯಗಾರ್ತಿಗೆ ಸಹನೆ ಬೇಕು
ಕಗ್ಗಲ್ಲನು ಕಡೆದು ತಿದ್ದಿ ತೀಡಿ
ಮೂರುತಿ ಕೆತ್ತನೆ ಮಾಡಬೇಕು
ಕಣ್ಮನ ಸೆಳೆವ ಕಲಾಕೃತಿಗಳ
ರಚಿಸಲು ಶಿಲ್ಪಿಗೆ ಸಹನೆ ಬೇಕು.
*ಸಿ ಜಿ ವೆಂಕಟೇಶ್ವರ*
*ತುಮಕೂರು*
(ಇಂದು ೨೧/೪/೨೦೨೦ ವಿಶ್ವ ಸೃಜನಶೀಲ ದಿನ)
ಕುಂಚವನಿಡಿದು ಬಣ್ಣಗಳ
ಚಿತ್ತಾರದಿಂದ ಚಿತ್ರ ಬಿಡಿಸಬೇಕು
ಆಹಾ ಎನ್ನುವ ಕಲಾಕೃತಿ
ರಚಿಸಲು ಕಲಾವಿದಗೆ ಸಹನೆ ಬೇಕು.
ಶೃತಿ ,ಲಯ, ಯತಿ ಗತಿ
ರಾಗ ತಾಳ ಗೊತ್ತಿರಬೇಕು
ಕಿವಿಗಿಂಪಾದ ಹಾಡು ಹಾಡಲು
ಸಂಗೀತಗಾರನಿಗೆ ಸಹನೆ ಬೇಕು.
ಮುದ್ರೆ, ಭಾವನೆ ತಾಣಗಳ
ಆಳವಾದ ಅಭ್ಯಾಸವಿರಬೇಕು
ಮನತಣಿಸುವ ನರ್ತನ ಮಾಡಲು
ನೃತ್ಯಗಾರ್ತಿಗೆ ಸಹನೆ ಬೇಕು
ಕಗ್ಗಲ್ಲನು ಕಡೆದು ತಿದ್ದಿ ತೀಡಿ
ಮೂರುತಿ ಕೆತ್ತನೆ ಮಾಡಬೇಕು
ಕಣ್ಮನ ಸೆಳೆವ ಕಲಾಕೃತಿಗಳ
ರಚಿಸಲು ಶಿಲ್ಪಿಗೆ ಸಹನೆ ಬೇಕು.
*ಸಿ ಜಿ ವೆಂಕಟೇಶ್ವರ*
*ತುಮಕೂರು*
ಸಿಹಿಜೀವಿಯ ನಾಲ್ಕು ಶಾಯರಿಗಳು
*ಸಿಹಿಜೀವಿಯ ನಾಲ್ಕು ಶಾಯರಿಗಳು*
*ಶಾಯರಿ೧*
ಅವಳ ಮನೆ ಮುಂದೆ ನಿಂತು
ದಿನವೂ ಅವಳ ನೋಡುವುದೇ ವಿಸ್ಮಯ
ಅವರಮ್ಮ ಬಂದಳು ಬೈಯುತ
ಯಾವುದರಲ್ಲಿ ಹೊಡೀ ಬೇಕು ನಿನ್ನ ಮನೆಕಾಯ.
ದಿನವೂ ಅವಳ ನೋಡುವುದೇ ವಿಸ್ಮಯ
ಅವರಮ್ಮ ಬಂದಳು ಬೈಯುತ
ಯಾವುದರಲ್ಲಿ ಹೊಡೀ ಬೇಕು ನಿನ್ನ ಮನೆಕಾಯ.
*ಶಾಯಿರಿ೨*
ನೀನೆಷ್ಟು ಬೈದರೂ, ದೂರ ಸರಿದರೂ
ನನ್ನ ಹೃದಯದಲ್ಲಿ ಕಟ್ಟವೆ ನಿನಗೆ ಮಂದಿರ
ಪ್ರೀತಿಯಲಿ ನಾ ಸೋತರೂ ಚಿಂತೆಯಿಲ್ಲ
ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲವೂಸುಂದರ.
ನನ್ನ ಹೃದಯದಲ್ಲಿ ಕಟ್ಟವೆ ನಿನಗೆ ಮಂದಿರ
ಪ್ರೀತಿಯಲಿ ನಾ ಸೋತರೂ ಚಿಂತೆಯಿಲ್ಲ
ಪ್ರೀತಿ ಮತ್ತು ಯುದ್ದದಲ್ಲಿ ಎಲ್ಲವೂಸುಂದರ.
*ಶಾಯರಿ ೩*
ಆ ಮುಂಗುರುಳ ನಾರಿ ಸಿಗದಿದ್ದರೆ
ನೇಣು ಹಾಕಿಕೊಳ್ಳಲು ಹುಡುಕಿದ ಹಗ್ಗ
ತಲೆ ಕಡಿಯುತ್ತಿದೆ ಎಂದು ಕೆರೆಯಲು
ಅವಳು ತೆಗೆದು ಬಿಟ್ಟಳು ವಿಗ್ಗ .
ನೇಣು ಹಾಕಿಕೊಳ್ಳಲು ಹುಡುಕಿದ ಹಗ್ಗ
ತಲೆ ಕಡಿಯುತ್ತಿದೆ ಎಂದು ಕೆರೆಯಲು
ಅವಳು ತೆಗೆದು ಬಿಟ್ಟಳು ವಿಗ್ಗ .
*ಶಾಯರಿ ೪*
ತಿಳಿದವರೆಂದರು
ಪ್ರೀತಿ ಮಾಯೆ ಹುಷಾರು
ಈಗ ನಾನಾಗಿರುವೆ ದೇವದಾಸ್
ಹುಡುಕುತಿಹೆನು ನನ್ನ ಪಾರು
ಪ್ರೀತಿ ಮಾಯೆ ಹುಷಾರು
ಈಗ ನಾನಾಗಿರುವೆ ದೇವದಾಸ್
ಹುಡುಕುತಿಹೆನು ನನ್ನ ಪಾರು
*ಸಿ ಜಿ ವೆಂಕಟೇಶ್ವರ*
*ತುಮಕೂರು*
*ತುಮಕೂರು*
21 ಏಪ್ರಿಲ್ 2020
20 ಏಪ್ರಿಲ್ 2020
ಸಿಹಿಜೀವಿಯ ಮೂರು ಹನಿಗಳು
*ಸಿಹಿಜೀವಿಯ ಮೂರು ಹನಿಗಳು*
*೧*
*ಮರಳಿ ಗೂಡಿಗೆ*
ಹಳ್ಳಿಯನು ಕಾಲಕಸವಾಗಿ
ಕಂಡು ಪಟ್ಟಣಕ್ಕೆ
ಹಾರಿದರು |
ನಗರವೇ ಲೋಕವೆಂದು
ಮೆರೆದರು
ಕಾಲನು ಅಬ್ಬರಿಸಲು
ಮರಳಿ ಗೂಡಿಗೆ
ಸೇರಿದರು.||
*೨*
*ನಾಕ ಸಿಗದು*
ಎಲ್ಲಾ ಕಾಲಕೂ
ನಮ್ಮ ನಡೆ ನುಡಿ
ಒಂದೇ ಆಗಿದ್ದರೆ
ಲೋಕ ಮೆಚ್ಚುವುದು|
ಗೋಸುಂಬೆಯಂತೆ
ಕ್ಷಣಕೊಂದೊಂದು
ಬಣ್ಣ ಬದಲಾಯಿಸಿದರೆ
ನಮಗೆ ನಾಕ ಸಿಗದು.||
*೩*
*ಹುಷಾರು*
ಅವನಂದ ನಾನು
ಯಾವಾಗಲೂ
ಕಾಣುವೆ
ಸಿಹಿ ಕನಸು|
ಅವಳೆಂದಳು
ಹುಷಾರು
ಬರಬಹುದು
ಡಯಾಬಿಟಿಸ್ಸು.||
*ಸಿ ಜಿ ವೆಂಕಟೇಶ್ವರ*
*ತುಮಕೂರು*
*೧*
*ಮರಳಿ ಗೂಡಿಗೆ*
ಹಳ್ಳಿಯನು ಕಾಲಕಸವಾಗಿ
ಕಂಡು ಪಟ್ಟಣಕ್ಕೆ
ಹಾರಿದರು |
ನಗರವೇ ಲೋಕವೆಂದು
ಮೆರೆದರು
ಕಾಲನು ಅಬ್ಬರಿಸಲು
ಮರಳಿ ಗೂಡಿಗೆ
ಸೇರಿದರು.||
*೨*
*ನಾಕ ಸಿಗದು*
ಎಲ್ಲಾ ಕಾಲಕೂ
ನಮ್ಮ ನಡೆ ನುಡಿ
ಒಂದೇ ಆಗಿದ್ದರೆ
ಲೋಕ ಮೆಚ್ಚುವುದು|
ಗೋಸುಂಬೆಯಂತೆ
ಕ್ಷಣಕೊಂದೊಂದು
ಬಣ್ಣ ಬದಲಾಯಿಸಿದರೆ
ನಮಗೆ ನಾಕ ಸಿಗದು.||
*೩*
*ಹುಷಾರು*
ಅವನಂದ ನಾನು
ಯಾವಾಗಲೂ
ಕಾಣುವೆ
ಸಿಹಿ ಕನಸು|
ಅವಳೆಂದಳು
ಹುಷಾರು
ಬರಬಹುದು
ಡಯಾಬಿಟಿಸ್ಸು.||
*ಸಿ ಜಿ ವೆಂಕಟೇಶ್ವರ*
*ತುಮಕೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)




