11 ಏಪ್ರಿಲ್ 2020

ಶಾಯರಿ

ಶಾಯರಿ

ಅವನು ನೋಡಿದ ಅವಳನ್ನು
ವಿವಿಧ ಕೋನಗಳ ಬದಲಿಸಿ|
ಅವಳು ಹೊಡೆದಳು ಅವನ
ಚಪ್ಪಲಿಯ ಬೆಲ್ಟ್ ಸಡಿಲಿಸಿ||

"ಸಿ ಜಿ ವೆಂಕಟೇಶ್ವರ*
*ತುಮಕೂರು*

10 ಏಪ್ರಿಲ್ 2020

ಮೂರು ಶಾಯರಿಗಳು


*ಮೂರು  ಶಾಯರಿಗಳು*

*೧*

ನಾನು ಸದಾ ಅವಳ ಹೊಗಳುತ್ತಲೇ ಇದ್ದೆ
ಲಾವಣ್ಯವತಿ‌ ಗುಣವತಿ ಸೌಂದರ್ಯವತಿ|
ಬಿಟ್ಟೇ ಹೋದಳು ನನ್ನನು ಗೊಣಗುತ್ತ
ಮಾಡದೆ ಕೆಲಸ ವರ್ಣನೆಯಾಯಿತು ಅತಿ||.

*೨*

ನನಗೂ ಆಸೆ ಕಣೇ ಕೊಡಿಸಲು ನಿನಗೆ
ಬಂಗಾರದ ,ಬೆಳ್ಳಿಯ, ವಜ್ರದ ಒಡವೆಗಳನ್ನ|
ಮೊದಲು ನೋಡಿಕೋ ಧರಿಸಬೇಕಿರುವ
ನಿನ್ನ ಕೈ ಕಾಲು ಮೂಗು ಕಿವಿಗಳನ್ನ||

*೩*

ಕಾಯುತಲೇ ಇದ್ದೆ ಒಂದಲ್ಲ ಒಂದು
ದಿನ ಅವಳು ಬೀರುವಳು ಕಿರುನಗೆ|
ಧನವಿರುವವನ  ಮದುವೆಯಾಗಿ
ನನ್ನ ಹೃದಯಕ್ಕೆ ಹಾಕಿ ಹೋದಳು ಹೊಗೆ||

ಮನಸ್ಸು ಮಾಡು (ಭಾವಗೀತೆ)

*ಮನಸ್ಸು ಮಾಡು*

ಚಿಂತಿಪೆ ಏಕೆ ಓ ಗೆಳೆಯ
ಬೆಳಗಬೇಕು ನೀ ಧರೆಯ
ಏಳು ಎದ್ದೇಳು ನಿಲ್ಲದಿರು
ಕೈಲಾಗದವನೆಂದು ಕೊರಗದಿರು.

ಮನಸ್ಸು ಮಾಡು ನೀ ಗೆಳೆಯ
ತೆಗೆದಿಡು ಮನದ ಕೊಳೆಯ
ನಿನ್ನಲಿದೆ ಅಪಾರ ಶಕುತಿ
ಕಾಪಾಡುವಳು ಆ ಪಾರ್ವತಿ.

ಹಿಂದಡಿ‌ ಇಡದಿರು‌ ಎಂದು
ನುಗ್ಗುತಿರು ಜಗ ನಿನ್ನದೆಂದು
ಧೈರ್ಯವಂತರಿಗಿದೆ ದಾರಿ
ಶುರು ಮಾಡು ಮುಟ್ಟುವೆ ಗುರಿ.

ನೀನಾಗು ಒಂದು ಜೀವನದಿ
ಸಮರಸವಿರಲಿ ಜೀವನದಿ
ಅಶಕ್ತರ ಸಹಾಯಕೆ ಸನಿಹವಾಗು
ಮೂಕಪ್ರಾಣಿಗಳ ಸಂರಕ್ಷಕನಾಗು.

*ಸಿ ಜಿ ವೆಂಕಟೇಶ್ವರ*
*ತುಮಕೂರು*






09 ಏಪ್ರಿಲ್ 2020

ಬದುಕಬೇಕು (ಕವನ)

*ಬದುಕಬೇಕು*

ಬದುಕಬೇಕು ನೀನು ಬದುಕಬೇಕು
ಇತರರಿಗೆ ದಾರಿ ದೀಪವಾಗಬೇಕು
ಪ್ರತಿಕ್ಷಣವು ಜೀವಿಸುತಲಿರಬೇಕು
ಶಿವಮೆಚ್ಚಿ ಅಹುದಹುದು ಎನ್ನಬೇಕು.

ಅವರಿವರ ತೆಗೆಳಿಕೆಗೆ ಕಿವಿಗೊಡಬೇಡ
ಸರಿದಾರಿಯಲಿ ನಡೆವುದ ಮರೆಯಬೇಡ
ಅನವರತ ನಡೆ ಗುರಿ ಮುಟ್ಟುವೆ ನೋಡ
ನೀ ಹಾಡು ನಿನ್ನೆದೆಯ ಗೆಲುವ ಹಾಡ.

ಜೀವನವಿದು ಮೂರು ದಿನದ ಬಾಳು
ಇರುವುದು ಬಾಳಲ್ಲಿ  ಏಳು ಬೀಳು
ನಿನ್ನಂತೆ ಇತರರ ಬಾಳು ಕೇಳು
ಸಕಲ ಚರಾಚರದೊಂದಿಗೆ ಬಾಳು.

ಸೋತೆನೆಂದು ಮೂಲೆಯಲಿ ಕೂರದಿರು
ಗೆಲುವು ಸಿಗದು‌ ಎಂದು ಕೊರಗದಿರು
ನಿನ್ನ ದಾರಿಗೆ ನೀನಾಗು‌ ಗುರು
ಸನ್ಮಾನಿಸುವರು ಗೆದ್ದಾಗ ಜನರು.

ಕಾಯಕದಿ ಕೈಲಾಸವನು ಕಂಡರೆ
ಜನರಲ್ಲಿ‌ ಜನಾರ್ದನನು ಕಂಡರೆ
ಹಂಚಿ‌ ತಿನ್ನುವ ಗುಣವ ನೀ ಕಲಿತರೆ
ನಂದನವಾಗುವುದು ಈ ಧರೆ.

*ಸಿ ಜಿ‌ ವೆಂಕಟೇಶ್ವರ*
*ತುಮಕೂರು*

08 ಏಪ್ರಿಲ್ 2020

ಮನವಿ(ಹನುಮ ಜಯಂತಿಯ ಶುಭಾಶಯಗಳು)

ಮನವಿ

(ಇಂದು ಹನುಮ ಜಯಂತಿ)

ಇಂದು ನಿಮ್ಮ ‌ಜನಮದಿನ
ಮಾರುತಿ ತುಂಬಿಹನು ನನ್ನ ಮ‌ನ
ಕೊಡದಿದ್ದರೂ ಸರಿ ಧನ
ಹರಸು‌ ನೀಡಿ ಒಳ್ಳೆಯ ಗುಣ
ಆಗಲಿ ನನ್ನ ಜನ್ಮ ಪಾವನ

*ಸಿ ಜಿ ವೆಂಕಟೇಶ್ವರ*
*ತುಮಕೂರು*