11 ಮೇ 2019

ಬೇಗ (ಹನಿ)

*ಬೇಗ*

ಮುಗಿಲ ಮಲ್ಲಿಗೆ
ಗಗನದ ತಾರೆ
ಕಡಲ ಮುತ್ತು
ಏನೇನೋ ತಂದು
ಕೊಡುವ ವಾಗ್ದಾನ
ಮಾಡಿದ್ದ ಹುಡುಗ .
ಅವಳು ಮದುವೆಯಾಗು
ಎಂದಾಗ ಹೋರಟೇಬಿಟ್ಟ
ಬರುವೆನೆಂದು ಬೇಗ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಮಾಯ (ಹನಿ)

*ಮಾಯ*

ಅಂದು
ಅವಳು ಮಾತನಾಡುತ್ತಿದ್ದರೆ
ಮೈಯಲ್ಲಾ ಕಿವಿ ,ತನ್ಮಯ.
ಇಂದು
ಅವಳು ಮಾತನಾಡಲು
ಶುರುಮಾಡಿದರೆ
ಅವನು ಮಾಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಾವೆಲ್ಲ ಒಂದು(ದೇಶ ಭಕ್ತಿ ಗೀತೆ)

*ನಾವೆಲ್ಲ ಒಂದು*

ಬನ್ನಿ ಸೇವೆ ಮಾಡೋಣ
ತಾಯ ಸೇವೆ ಮಾಡೋಣ

ಯಾರೂ ಇಲ್ಲ ಹಿಂದೆ ಮುಂದು
ಕೂಗಿ ಹೇಳಿ ನಾವೆಲ್ಲ ಒಂದು

ಭಾರತಾಂಭೆ ಪುತ್ರರು ನಾವು
ಕೊಡದಿರೋಣ ಮಾತೆಗೆ ನೋವು

ಸರ್ವ ಜನಾಂಗದ ಬೀಡಿದು
ಸಾಧು ಸಂತರ ನಾಡಿದು

ಹಚ್ಚೋಣ ದೇಶಭಕ್ತಿಯ ದೀವಿಗೆ
ಜಯಘೋಷ ಮೊಳಗಲಿ ತಾಯಿಗೆ

ದೇಶಭಕ್ತಿ ಇರಲಿ ಕಣ ಕಣದಲಿ
ಮಾತೆಗೆ ನಮಿಸೋಣ ತನು ಮನದಲಿ‌


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮೇ 2019

ಪ್ರಕೃತಿಯೇ ದೈವವು (ಕವನ)

*ಪ್ರಕೃತಿಯೆ ದೈವವು*

ಧರಣಿಯಲಿ ಭರಣಿಯಾಗಮನದಿ
ಹಸಿರೊದ್ದ ಭೂಮಾತೆಯ
ನೋಡಲು ನಯನಾನಂದ

ತರುಲತೆಗಳ ತೋರಣ
ಭೂಮಾತೆಗೆ ಅಲಂಕಾರ
ತರಣಿಯ ಸೊಬಗೇ ಅಂದ

ಪುಷ್ಪಗಳ ಮತ್ತುವ
ಪತಂಗಗಳ ಹಿಂಡು
ಪುಷ್ಪಪಾತ್ರೆಯಾದ ಭುವಿಯೇ ಚೆಂದ

ಸುಜಲದ ಹಿನ್ನಲೆಯಲ್ಲಿ
ಸುಫಲವ ಹೊಂದಿರುವ
ಕಣ್ಣಿಗೌತಣವ ನೀಡುವ ಧರೆಯೇ ಅಂದ

ಭುವಿಗೂ ಬಾನಿಗೂ
ಹಬ್ಬಿದ ಇಂದ್ರಚಾಪದ ವರ್ಣಗಳು
ಭೂಮಿಗೆ ಅಲಂಕಾರ

ಪ್ರಕೃತಿಗೆ ಸಮವಿಲ್ಲ
ಪ್ರಕೃತಿಯೆ ದೈವವು
ಪ್ರಕೃತಿಯು ನಮ್ಮ ಜೀವವು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*



04 ಮೇ 2019

ವಚನ೫

*ವಚನ೫*

ಗುರಿಯಿರಲಿ ಬಾಳಿಗೆ
ಗುರಿಯ ತಲುಪಲು
ದಾರಿಯು ಶುದ್ದವಿರಲಿ
ಸರಿತಪ್ಪಿನ ಅರಿವಿರಲಿ
ಅರಿತು ಮುನ್ನಡೆ ಬಾಳಲಿ
ಹರಿಯ ಕರುಣೆಯಿಂದ
ಬಾಳು ಬಂಗಾರವಾಗುವುದು
ನೋಡಾ ಶ್ರೀದೇವಿತನಯ

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*