07 ಆಗಸ್ಟ್ 2018

*ಗಜ್ಹಲ್41*(ಸುಮ)


                       *ಗಜ್ಹಲ್41*

ಪ್ರಕೃತಿಯ ಸೌಂದರ್ಯ ಅಡಗಿಸಿ ಕೊಂಡು ಸುಗಂಧ ಸೂಸುವುದು  ಸುಮ
ವಿಕೃತ ಮನಸ್ಸು ಗಳಿಗೆ ಉಚಿತ ಪಾಠ ಹೇಳುವುದು ಸುಮ

ವ್ರತ ಉಪವಾಸ ನಾನ ತಂತ್ರ ಅಡ್ಡ ದಾರಿಗಳು ಭಗವಂತನ ಕಾಣಲು
ಎಲ್ಲ ದೇವರ ಅಲಂಕರಿಸಿ ಹೆಮ್ಮೆಯಿಂದ
ನಗುವುದು ಸುಮ

ಎಲೆ ಕಾಯಿ ಹಣ್ಣು ಬೀಜವಾಗಲು ಮೂಲ ಹೂ
ಆದರೂ ಎಂದಿಗೂ ನಾನು ನನ್ನಿಂದ ಎಂದು ಬೀಗದು ಸುಮ

ಸಾವಿಗಂಜಿ ಯಾಯಾತಿಯಾಗಲು ಚಡಪಡಿಸುವರು ಜನ ಸುರಿಯುವರು ಧನ
ಒಂದೇ ದಿನ ಬಾಳಿದರೂ ಸೌಂದರ್ಯದಿ ಬಾಳಿ ಸಾರ್ಥಕ್ಯ ಪಡೆವುದು ಸುಮ

ಸ್ವಾರ್ಥದ ಸಂಕುಚಿತ ಭಾವನೆಯ ಜಗದಲಿ ಬಂದಿಯಾಗಿಹರು ಮಂದಿ
ಸೀಜೀವಿಯಂತೆ  ಪರಹಿತ ಬಯಸೆಂದು ಸಂದೇಶ ನೀಡುವುದು ಸುಮ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಆಗಸ್ಟ್ 2018

ಪ್ರಕೃತಿ ಶಾಲೆ( ಶಿಶುಗೀತೆ)

*ಪ್ರಕೃತಿ ಶಾಲೆ*(ಶಿಶುಗೀತೆ)

ಬ್ಯಾಗು  ಬೇಡ
ಪುಸ್ತಕ ಬೇಡ
ಆಡಲು  ಹೋಗುವೆವು

ಆಟವ ಅಡುತ
ಹಾಡನ್ನು ಹಾಡುತ
ನಕ್ಕು ನಲಿಯುವೆವು

ಕೈಚೀಲ ಬೇಡ
ಮಣ ಭಾರ ಬೇಡ
ನಮ್ಮ ಪ್ರತಿಭೆ ತೋರುವೆವು

ಅಂಕಗಳ ಗೊಡವೆ ನಮಗಿಲ್ಲ
ಒತ್ತಡ ನಮಗೆ ಬೇಕಿಲ್ಲ
ಮರಕೋತಿ ಆಟ ಆಡುವೆವು

ಚಿನ್ನಿ ದಾಂಡು
ಗೋಲಿ ಲಗೋರಿ
ಆಟವಾಡಿ ನಲಿಯುವೆವು

ಕಲಿಯಲು ಶಾಲೆಯೆ ಬೇಕಿಲ್ಲ
ಪ್ರಕೃತಿ ಶಾಲೆ ಮರೆಯಲ್ಲ
ಸಮಾಜದೊಂದಿಗೆ ಬೆಳೆಯುವೆವು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*




05 ಆಗಸ್ಟ್ 2018

ಮಗಳೆಂಬ ಅಮ್ಮ ( ಲೇಖನ)

             
ಮಳೆ ಹಾಡು
ನಾನು ಹುಟ್ಟು ಹಬ್ಬ ಆಚರಿಸುವ ಪದ್ಥತಿ ಪಾಲಿಸಿಲ್ಲ ಆದರೆ ನನ್ನ ಮಕ್ಕಳ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಅಲ್ಲದಿದ್ದರೂ ಅವರಿಗೆ ಹುಟ್ಟು ಹಬ್ಬದಂದು ಹೊಸ ಬಟ್ಟೆಗಳನ್ನು ಕೊಡಿಸಿ ಅವರ ಸಂತೋಷ ಪಡಿಸುವುದನ್ನು ಮರೆಯುವುದಿಲ್ಲ .ಇಂತಹ ಹುಟ್ಟುಹಬ್ಬದ ದಿನ ಸಾಮಾನ್ಯವಾಗಿ ದೇವರ ದರ್ಶನ ಪಡೆಯಲು ದೇವಾಲಯಗಳಿಗೆ ಹೋಗುತ್ತೇವೆ .ಕಳೆದ ವರ್ಷ ನನ್ನ ದೊಡ್ಡ ಮಗಳ. ಹುಟ್ಟು ಹಬ್ಬದ ಸಮಯದಲ್ಲಿ ನಾನು ನನ್ನ ಹುಟ್ಟೂರಾದ ಹೊಳಲ್ಕೆರೆ ತಾಲೂಕಿನ ಚೌಡಗೊಂಡನಹಳ್ಳಿಯಲ್ಲಿ ಇದ್ದೇ ಯಥಾ ಪ್ರಕಾರ ಹುಟ್ಟು ಹಬ್ಬಕ್ಕೆ ತಂದಿದ್ದ ಹೊಸ ಉಡುಪು ಧರಿಸಿದ ನನ್ನ ಮಗಳು ಎಲ್ಲರೊಂದಿಗೆ ಸೆಲ್ಪಿ ತೆಗೆದುಕೊಂಡು ಅಪ್ಪ ದೇವಸ್ಥಾನ ಕ್ಕೆ ಹೋಗೋಣ ಎಂದಳು ಆಗ ಸಂಜೆ  ಮಬ್ಬುಗತ್ತಲು  ,ನಮ್ಮ ಹಳ್ಳಿಯಿಂದ ಏಳು ಕಿಲೊಮೀಟರ್ ದೂರವಿರುವ ಹೊರಕೆರೆದೇವರ ಪುರದ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಕ್ಕೆ ಮೂವರು ಮಕ್ಕಳೊಂದಿಗೆ ಬೈಕ್ ನಲ್ಲಿ ಹೊರಟು‌ನಿಂತಾಗ ಅಮ್ಮ "  ಮೋಡ ಜೋರಾಗಿದೆ ನಮ್ಮ ಊರಿನ ಚೌಡಮ್ಮನ ಗುಡಿಗೆ ಹೋಗಿ ಬರ್ರಪ್ಪ ದೂರ ಬೇಡ ಅಂದರು " ನಾವು ಅವರ ಮಾತು ಕಿವಿಗೆ ಹಾಕಿಕೊಳ್ಳದೇ ಬೈಕ್ ಹತ್ತಿ ಹೊರಟೇ ಬಿಟ್ಟೆವು .ದೇವರ ದರ್ಶನ ಪಡೆದು ಹಿಂತಿರುಗುವಾಗ ಸಂಪೂರ್ಣ ಕತ್ತಲಾಗಿ ಮಾರ್ಗ ಮದ್ಯದಲ್ಲಿ ಮಳೆ ಆರಂಭವಾಗಿ ಮಳೆ ಹನಿಗಳು ನಮ್ಮ ಮೇಲೆ ಬಿದ್ದರೆ ಯಾರೋ ನಲ್ಲಿ ಹೊಡೆದಂತಾಗುತ್ತಿತ್ರು ಅಲ್ಲೇ ಎಲ್ಲಾದರೂ ನಿಲ್ಲಿಸೋಣವೆಂದರೆ ಒಂದೂ ಮನೆಯಿಲ್ಲ . ನನ್ನ ಮಗಳ ಹುಟ್ಡುಹಬ್ಬದ ಹೊಸ ಬಟ್ಟೆಯಾದಿಯಾಗಿ  ಎಲ್ಲರ ಬಟ್ಟೆಗಳು ಮಳೆಯಲ್ಲಿ ನೆನೆದು ಚಳಿಗೆ ನಡುಗಲಾರಂವಿಸಿದೆವು. ಸ್ವಲ್ಪ ದೂರ ಮಣ್ಣಿನ ರಸ್ತೆಯಲ್ಲಿ ನಾನು ನಿದಾನವಾಗಿ ಬೈಕ್ ಓಡಿ ಸುತ್ತಿದ್ದರೂ ಜಾರಿ ಎಲ್ಲರೂ ಬೈಕ್ ನಿಂದ ಬಿದ್ದೇಬಿಟ್ಟೆವು  ಕತ್ತಲಾಗಿದ್ದರಿಂದ ನನಗೆ ಗಾಬರಿಯಾಗಿ  ಶೋಭಿತ.,ವರ್ಷಿತ, ದೀಪಿಕ ನುಮಗೆ ಏನೂ ಆಗಿಲ್ಲ ತಾನೆ ಎಂದು ಕೇಳುವ ಮೊದಲೇ "  ಅಪ್ಪ ನಿನಗೇನೂ ಆಗಿಲ್ಲ ತಾನೆ " ಎಂದು ನನ್ನ ದೊಡ್ಡ ಮಗಳು  ಶೋಭಿತ ಬಂದು  ನನ್ನ ಮೈಕೈ ಮುಟ್ಟಿ ನೋಡಿದಳು ಮನೆಯಲ್ಲೂ ನನ್ನ ಕಣ್ಣಲ್ಲಿ ಒಂದೆರಡು ಹನಿ ಜಾರಿ ಬಿದ್ದದ್ದು  ನನ್ನ ಮಕ್ಕಳಿಗೆ ಕಾಣಲಿಲ್ಲ .ಆಗ ಅಮ್ಮ ನೆನಪಿಗೆ ಬಂದು ಮಗಳು ಅಮ್ಮ ಎಂದು ಯಾರೋ ಹೇಳಿದ್ದು ನೆನಪಾಯಿತು,. ಮಳೆಯಲ್ಲಿ ಮತ್ತೆ ಬೈಕ್ ಸ್ಟಾರ್ಟ್ ಮಾಡಿ ಸ್ವಲ್ಪ ದೂರ ಚಲಿಸಿದಾಗ ಇಳಿಜಾರಿನಲ್ಲಿ ಮತ್ತೆ ಬೈಕ್ ಸ್ಕಿಡ್ ಆಗಿ ನಾನು ಬ್ಯಾಲೆನ್ಸ್ ಮಾಡಿ ಬೈಕ್ ನಿಲ್ಲಿಸಿದೆ ನನ್ನ ಮಗಳು ಅಪ್ಪ ಈ ಇಲಿಜಾರಿನಲ್ಲಿ ನಾವು ಇಳಿದು‌ ನಡೆವೆವು ಎಂದು ಅವಳ ತಂಗಿಯರೊಂದಿಗೆ ಕತ್ತಲಲ್ಲಿ ಬೈಕ್ ನ ಬೆಳಕಿನಲ್ಲಿ ನಡೆದು ಮುಂದೆ ಸಾಗಿದಳು .ಕೊನೆಗೆ ರಾತ್ರಿ ಎಂಟುಗಂಟೆಗೆ ಮನೆ ಸೇರಿದಾಗ ಅಲ್ಲಿ ಕರೆಂಟ್ ಇರಲಿಲ್ಲ ಬೈಕ್ ಇಳಿದಾಗ ನನ್ನ ದೊಡ್ಡ ಮಗಳು ತನ್ನ ತಂಗಿಯರಿಗೆ ನಾವು ಜಾರಿ ಬಿದ್ದದ್ದನ್ನು ಯಾರಿಗೂ ಹೇಳಬೇಡಿ ಎಂದು ಎಂದು ಪಿಸುಮಾತಿನಲ್ಲಿ ಹೇಳಿದಳು.ಬೈಕ್ ಸದ್ದು ಕೇಳಿ ಅಮ್ಮ ಒಳಗಿನಿಂದ ಪ್ರೀತಿಯಿಂದ ಬೈಯಲು ಶುರುಮಾಡಿದರು ." ದೊಡ್ಡವರು ಏನಾದರೂ ಹೇಳಿದರೆ ಕೇಳಲ್ಲ ...... ಎಂದು ಪ್ರೀತಿಯಿಂದ ಬಯ್ಯತ್ತಲೇ ಇದ್ದರು ನಾವು ಮರುಮಾತನಾಡದೇ ಒಳಗೆ ಹೋಗಿ ಸಣ್ಣ ಪುಟ್ಟು ತರಚುಗಾಯಗಳನ್ನು ನೋಡಿಕೊಂಡೆವು .
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

30 ಜುಲೈ 2018

ಮಿತಿ ಮೀರಿದ ಬಳಕೆ ದಿನ* (Earth over shoot day ) ಆಗಸ್ಟ್ 1 ಲೇಖನ

                         *ಮಿತಿ ಮೀರಿದ ಬಳಕೆ ದಿನ*
(Earth over shoot day )
ಆಗಸ್ಟ್ 1

ಏನೆಂದು ನಾ ಹೇಳಲಿ ...ಮಾನವನಾಸೆಗೆ ಕೊನೆ ಎಲ್ಲಿ‌.... ಎಂಬ ಅಣ್ಣಾವ್ರ ಹಾಡು  ಇಂದಿಗೂ ಎಂದಿಗೂ ಪ್ರಸ್ತುತ .ಆಸೆಯೇ ದುಃಖದ ಮೂಲ ಎಂದು ಬುದ್ದನಾದಿಯಾಗಿ ಹಲವು ಮಹಾಷಯರು ಪ್ರತಿಪಾದಿಸಿದರೂ ನಾವಿರುವುದೇ ಈಗೆ ಎಂಬ ಧೋರಣೆಯನ್ನು ಮುಂದುವರೆಸಿಕೊಂಡು ಬಂದ ಪರಿಣಾಮ ನಾವು ಈಗಾಗಲೇ ವೈಯಕ್ತಿಕ ವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರ ಪರಿಣಾಮವಾಗಿ ನಮ್ಮ ಸಾಮಾಜಿಕ, ಆರ್ಥಿಕ, ಆರೋಗ್ಯ ದ ಮೇಲೆ ಹಲವಾರು ದುಷ್ಪರಿಣಾಮಗಳನ್ನು  ಅನುಭವಿಸುತ್ತಿದ್ದೇವೆ .
ಇದು ಇಲ್ಲಿಗೇ ನಿಂತಿಲ್ಲ  ನಾವು ಮಾಡಿರುವ ಅವಾಂತರಗಳಿಂದ  ಪರಿಸರ ಮತ್ತು ಜಗದ ಮೇಲೆ ಬೀರಿರುವ ಪರಿಣಾಮ ನೆನದರೆ ಹಗಲಿನಲ್ಲಿಯೂ ಬೆಚ್ಚಿ ಬೀಳುವಂತಾಗುತ್ತದೆ.
ಹಸಿರು ಮನೆ ಪರಿಣಾಮ ,ಎಲ್ ನಿನೊ ಲಾ ನಿನೊ ,ಜಾಗತಿಕ ತಾಪಮಾನ ,ಓಜೋನ್ ಪದರದ ಹಾನಿಯಾಗಿರುವುದು ಒಂದೇ ಎರಡೆ ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆದೀತು ,ಇವೆಲ್ಲವುಗಳ ಪರಿಣಾಮವಾಗಿ ಋತುವಿನಲ್ಲಿ ಅದಲು ಬದಲು ಅದಿಕ ತಾಪಮಾನ, ದಿನಕ್ಕೊಂದು ಹೊಸ ರೋಗಗಳ ಸೇರ್ಪಡೆ, ಅನ್ನಹಾರಕ್ಕೆ ಹಾಹಾಕಾರ ,ಪ್ರಾಣಿ ಮಾನವ ಸಂಘರ್ಷ, ಮಾಲಿನ್ಯದಂತಹ ಅಪಸವ್ಯಯಗಳು ಮಾಮೂಲಾಗಿಬಿಟ್ಟಿವೆ .
ಇವೆಲ್ಲದರ ಪರಿಣಾಮವಾಗಿ ಈಗ ಬರಲಿರುವ ಆಗಸ್ಟ್‌ ಒಂದನ್ನು ನಾವು
Earth over shoot day   (ಮಿತಿ ಮೀರಿದ ಬಳಕೆ ದಿನ ) ಆಚರಿಸುತ್ತಿದ್ದೇವೆ  ಹಾಗಾದರೆ

 ಮಿತಿಮೀರಿದ ಬಳಕೆ ದಿನ ಎಂದರೇನು?

ಜಗತ್ತಿನ ಎಲ್ಲಾ ಜನರು ನಾವು ಬಳಸಲು ಯೋಗ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಜಲ ,ವಾಯು,ಮುಂತಾದವುಗಳನ್ನು ನಾವು ಮಿತಿ ಮೀರಿ ಬಳಸಿದ್ದೇವೆ ಹೇಗೆಂದರೆ ಒಂದು ವರ್ಷದಲ್ಲಿ ನಾವು ಬಳಸ ಬೇಕಿದ್ದ ಸಂಪನ್ಮೂಲಗಳನ್ನು ಇದೇ ಜುಲೈ ತಿಂಗಳ ಮೂವತ್ತೊಂದನೆ ತಾರೀಖಿಗೆ ಮುಗಿಸಿದ್ದೇವೆ ! ಇದರ ನೆನಪಿಗೆ ಮತ್ತು ಮುಂದೆ ನಮ್ಮ ಜೀವನದ ದುಃಸ್ತಿತಿ ನೆನೆದು ಎಚ್ಚರಿಕೆಯಿಂದ  Earth over shoot day   (ಮಿತಿ ಮೀರಿದ ಬಳಕೆ ದಿನ )   ಆಚರಣೆ ಮಾಡುತ್ತಿದ್ದೇವೆ .

1970 ರಿಂದ ನಾವು ಇಂತಹ ಮಿತಿಮೀರಿದ ಸಂಪನ್ಮೂಲಗಳ ಬಳಕೆಯನ್ನು ಅಳತೆ ಮಾಡಲಾರಂಭಿಸಿದೆವು ಆ ವರ್ಷ ಒಂದು ದಿನ ಮೊದಲೇ ನಾವು ನಮ್ಮ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ 1976 ರಲ್ಲಿ ನವಂಬರ್ ನಲ್ಲಿ ನಮ್ಮ ವರ್ಷದ ಸಂಪನ್ಮೂಲಗಳನ್ನು ಬರಿದು ಮಾಡಿದೆವು. 1990 ರಲ್ಲಿ ಸೆಪ್ಟೆಂಬರ್ ಮೂವತ್ತಕ್ಕೆ ನಮ್ಮ ಸಂಪನ್ಮೂಲಗಳನ್ನು ದೋಚಿದೆವು  ಕಳೆದ ವರ್ಷ 2018 ರಲ್ಲಿ ಮೂರಕ್ಕೆ ನಮ್ಮ ಸಂಪನ್ಮೂಲಗಳನ್ನು ಮುಗಿಸಿದೆವು .ಈ ವರ್ಷ ಮೂರು ದಿನ ಮೊದಲೇ ನಮ್ಮ ಸಂಪನ್ಮೂಲಗಳನ್ನು ಬರಿದು ಮಾಡಿ ಆಗಸ್ಟ್ ಒಂದರಂದು ಮಿತಿ ಮೀರಿದ ಬಳಕೆ ದಿನ ಆಚರಣೆ ಮಾಡುವ ದುಃಸ್ತಿತಿ ಬಂದೊದಗಿದೆ .
ನಾವು ಈಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಕೆ ಮಾಡಿದರೆ ಮುಂದಿನ ವರ್ಷಗಳಲ್ಲಿ ಎರಡು ಮೂರು ತಿಂಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ಮುಗಿಸಿ ಮುಂದಿನ ಪೀಳಿಗೆಯ ಸಂಪನ್ಮೂಲಗಳನ್ನು ಬರಿದು ಮಾಡುವ ಬಕಾಸುರರಾಗುವುದರಲ್ಲಿ ಸಂದೇಹವಿಲ್ಲ .

ಈಗಲೂ ಕಾಲ ಮಿಂಚಿಲ್ಲ ನಮ್ಮಂತೆ ಇತರೆ ಪ್ರಾಣಿ ಪಕ್ಷಿ ಗಳಿಗೂ ಜೀವಿಸಲು ಅವಕಾಶ ನೀಡಬೇಕು ಬದುಕು ಬದುಕಲು ಬಿಡು ಎಂಬ ನಿಯಮ ಪಾಲಿಸಬೇಕು  ನಾವು ವಿವೇಚನೆಯಿಂದ ನಮಗೆ ಲಬ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿ ಸುಸ್ಥಿರ ಅಭಿವೃದ್ಧಿ ಮಾಡುವ ಅಗತ್ಯವಿದೆ ಇಲ್ಲವಾದರೆ ನಮ್ಮ ಭಯಾನಕ  ಅಂತ್ಯಕೆ  ನಾವೇ ಮುನ್ನುಡಿ ಬರೆದಂತಾಗುತ್ತದೆ  ಯೋಚಿಸಿ ಯೋಜಿಸಿ  ಜೀವಿಸೋಣ  ಮಹಾತ್ಮ ಗಾಂಧೀಜಿ ಯವರು ಹೇಳಿದಂತೆ "ಪ್ರಕೃತಿ ಇರುವುದು ನಮ್ಮ ಆಸೆ ಈಡೇರಿಲು ಮಾತ್ರ ಆದರೆ ದುರಾಸೆಯನ್ನಲ್ಲ " ಎಂಬುದನ್ನು ನಾವು ಮರೆಯಬಾರದು.

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

29 ಜುಲೈ 2018

ನೆನದೇವ ಕನ್ನಡದ ಹಿರಿಮೆ ( ಕವಿತೆ ) ಹಚ್ಚೇವು ಕನ್ನಡದ ದೀಪ ಮಾದರಿಯಲ್ಲಿ


               ನೆನೆದೇವೋ ಕನ್ನಡದ ಹಿರಿಮೆ
ಕನ್ನಡದ ಹಿರಿಮೆ ನಮ್ಮಯ ಗರಿಮೆ
ಎದೆಯುಬ್ಬಿ ಹೊಗಳುವ ನುಡಿಯ | ನೆನದೇವ|
                 ೧

ಆದಿಕಾಲದಿಂದ ಆದಿಪಂಪನಿಂದ
ಬೆಳದಂತ ಭಾಷೆ ನಮ್ಮ ಕನ್ನಡ
ಸುಲಿದ ಬಾಳೆಯ ಹಾಗೆ ಸಿಗುರಳಿದ ಕಬ್ಬಿನ ಹಾಗೆ
ಸುಂದರ ಭಾಷೆ ನಮ್ಮ ಕನ್ನಡ
ಹಳಗನ್ನಡವಿರಲಿ ಹೊಸಗನ್ನಡವಿರಲಿ
ಕನ್ನಡದ ಕಂಪ ಸವಿದೇವು
ಬಳಸುತ್ತ ನುಡಿಯ ಬೆಳಸುತ್ತ ಭಾಷೆಯ
ನಲಿಯೋಣ ,ಕಣ ಕಣಗಳಲ್ಲಿ ಮನ ಮನೆಗಳಲ್ಲಿ
ನೆನದೇವ ಕನ್ನಡದ ಹಿರಿಮೆ

                           | ನೆನದೇವ ಕನ್ನಡದ |

              ೨

ಶಾಸ್ತ್ರೀಯ ಭಾ಼ಷೆ ಶಾಸ್ತ್ರೋಕ್ತ ಭಾಷೆ
ವಿದೇಶಿಯರು ಮೆಚ್ಚಿದ ಭಾಷೆ
ಸ್ಪಟಿಕದಂತಹ ಉಚ್ಚಾರದ ನುಡಿಯ
ಪಟಪಟನೆ ಉಲಿದು ನಲಿವೇವು
ನಮ್ಮ ನುಡಿಬರದ ಅನ್ಯ ರಿಗೆ
ಪ್ರೀತಿಯಿಂದಲಿ ಭಾಷೆ ಕಲಿಸುವೆವು
ಕಣಕಣದಿ ಅಭಿಮಾನ
ಉಕ್ಕುತಿದೆ ಸ್ವಾಭಿಮಾನ
ಮುನ್ನೆಡೆಗೆ ತಡೆಯುಂಟೆ ತಾಯ್ನುಡಿಗೆ
ನಾಡಮಕ್ಕಳು ಸೇರಿ ಮಾತೃಭಾಷೆಗೆ ನಮಿಸಿ
ನೆನದೇವ ಕನ್ನಡದ ಹಿರಿಮೆ

                               |ನೆನದೇವ ಕನ್ನಡದ|

              ೩

ನಮ್ಮ ನುಡಿ ಮೆಚ್ಚಿ ನಮ್ಮ ನಾಡಿಗೆ
ಬಂದರೆ ಸ್ವಾಗತಿಸುವ
ರತ್ನಗಂಬಳಿ ಹಾಸಿ ರತ್ನದಂತಹ
ನುಡಿ ಕಲಿಸುವೆವು
ನಮ್ಮನ್ನವನುಂಡು ನುಡಿವಿರೋಧಿಸುವವರ
ನಡುಮುರಿಯಲು ಹಿಂಜರಿಯೆವು
ಮರೆಯಲ್ಲ ಛಲವ ನಿಲ್ಲಲ್ಲ
ನಾಡೋಲವುಅನವರತ
ನಾಲಿಗೆಯ ಸೀಳಿ ನರಕಕ್ಕೆ ಇಳಿಸಿದರೂ
ನೆನದೇವ ಕನ್ನಡದ ಹಿರಿಮೆ

                      |ನೆನದೇವ ಕನ್ನಡದ|


            ೪


ರನ್ನ ಜನ್ನರ ಚೆನ್ನ ನುಡಿಉಳಿಸಲು
ಎಲ್ಲರೂ ಒಂದುಗೂಡೋಣ
ನಮ್ಮಂತರಂಗದಿ ಕನ್ನಡಮ್ಮನ
ಪೂಜೆ ಮಾಡೋಣ
ಅನ್ಮವನು ನೀಡಿದ
ಕನ್ನಡಮ್ಮಗೆ ವಂದನೆಯ ಗೀತೆ ಹಾಡೋಣ
ತೊರೆದೇವು ಅನೇಕತೆ ಹೊಂದೋಣ ಏಕತೆ
ನಮ್ಮ ನುಡಿಗೆ ಒಗ್ಗೂಡೋಣ
ಅಂತರಂಗದ ನುಡಿಗೆ ಸಂತಸದಿ ನಮಿಸಿ
ನೆನದೇವ ಕನ್ನಡದ ಹಿರಿಮೆ

                                 |ನೆನದೇವ ಕನ್ನಡದ|


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*