16 ಏಪ್ರಿಲ್ 2018

ನಂದಾದೀಪ (ಚೌ ಚೌಪದಿ)

*ಚೌ ಚೌ ಪದಿ*

*ನಂದಾದೀಪ*

ನೀರಿಗೆ ನೈದಿಲೆ ಶೃಂಗಾರ
ನೀನೆ ನನ್ನ ಸಂಗೀತ
ನಿನ್ನ ಪ್ರೀತಿಯು ಕ್ಷಿತಿಜದಂತೆ ಅನಂತ
ನನ್ನ ಬಾಳಿಗೆ ನೀನೆ ನಂದಾದೀಪ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

15 ಏಪ್ರಿಲ್ 2018

ಪರಿಸರ ಉಳಿಸೋಣ (ಭಾವಗೀತೆ)

*ಪರಿಸರ ಉಳಿಸೋಣ*

ಮರಗಿಡಗಳ ಬೆಳೆಸೋಣ ನಾವು
ಪರಿಸರವನು ಉಳಿಸೋಣ |ಪ|

ನಾವು ಮಾಡಿದ ಮಲಿನತೊಳೆಯಲು
ನಮ್ಮ ಮುಂದಿನ ಪೀಳಿಗೆ ಉಳಿಸಲು
ಭಗ್ನಗೊಂಡ ಪ್ರಕೃತಿ ಬೆಳೆಸಲು
ಎಲ್ಲ ಜೀವಿಗಳಿಗೆ ಸಮಪಾಲು ನೀಡಲು|೧|

ನಿಲ್ಲಿಸಿ ಮರವ ಕಡಿವುದನಿಂದೆ
ಬೆಳೆಸಿ ಕಾಡನು ಬದುಕಲೆಂದೆ
ಪೋಲು ಮಾಡದಿರಿ ನೀರನ್ನು
ಉಳಿಸಿದ ನೀರು ಗಳಿಕೆಗೆ ಸಮಾನ|೨|

ಆಳಕೆ ಕೊರೆದರು ನೀರೆ ಇಲ್ಲ
ಮೇಳಕೆ ಹಕ್ಕಿಯ ಕಲರವ ಇಲ್ಲ
ಮೈಕಾಸುರನ ಹಾವಳಿ ನಿಂತಿಲ್ಲ
ಪ್ರಾಣಿ ಪಕ್ಷಿಗೆ ಉಳಿಗಾಲ ಇಲ್ಲ|೩|

ಉಸಿರಾಡೋ ಗಾಳಿ ಶುಧ್ದವೆ ಇಲ್ಲ
ವಾಹನ ಕಾರ್ಖಾನೆ ಬೆಳೆದಿವೆಯಲ್ಲ
ರೋಗಕೆ ವಾಯು ಕಾರಣವಾಯಿತಲ್ಲ
ಗಾಳಿಯ ಕೊಳ್ಳುವ ದಿನ‌ದೂರವಿಲ್ಲ|೪|

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

10 ಏಪ್ರಿಲ್ 2018

ಚುಟುಕುಗಳು (ಅನ್ನ ,ಅಮರ ಆತ್ಮರು)

ಚುಟುಕುಗಳು

*೧*

*ಅನ್ನ*

ಹಸಿದಿಹ ಹೊಟ್ಟೆಗಳು ಸಾವಿರಾರು
ಕೆಲವರು ಅನ್ನವ ಪೋಲುಮಾಡುವರು
ನೀಡಿ ಉಳಿದ ಅನ್ನವ ಓ ಅಣ್ಣ
ಒಂದು ಹಿಡಿ ಅನ್ನ ಅಮೃತ ಸಮಾನ

*೨*

*ಅಮರ ಆತ್ಮರು*

ಕೊರಗದಿರೋಣ ಪಾಪಿಗಳೆಂದು
ಮರುಗದಿರೋಣ ಕೆಟ್ಟವರೆಂದು
ಏಕೆಂದರೆ  ಅಮರ ಅತ್ಮರು ನಾವು
ತಿಳಿಯಿರಿ  ಅಮೃತ ಪುತ್ರರು ನಾವು


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

09 ಏಪ್ರಿಲ್ 2018

ಹೂಹಕ್ಕಿ ಬಂಧ ( ಹನಿಗವನ)


ಹನಿಗವನ

*ಹೂ ಹಕ್ಕಿ ಬಂಧ*

ಮಧುವನೀರುವೆನು ಪುಷ್ಪದಿಂದ
ರಸವನೀರುವೆನು ಕೊಕ್ಕಿನಿಂದ
ಹೂ ಹಕ್ಕಿ ಬಂಧಕೆ ಕೊನೆಯಿಲ್ಲ
ಪರೋಪಕಾರವ  ಮರೆಯಲ್ಲ
ಮನುಜ ನೀನೇಕೆ ಇದ ತಿಳಿದಿಲ್ಲ
ಮತ್ಸರದಿ ಉರಿಯುತಿರುವೆಯಲ್ಲ

 *ಸಿ.ಜಿ,ವೆಂಕಟೇಶ್ವರ*
*ಗೌರಿಬಿದನೂರು*

ಚೌ ಚೌ ಪದಿ

ಚೌ ಚೌ ಪದಿ

ಮನದ ತಿಳಿಗೊಳ ಕಲಕಿದ ನೀರೆ ನೀನು
ನನ್ನ ಕನಸಿನ    ಚಲುವ ಚಂದ್ರಿಕೆ ನೀನು
ನಿಯಮಗಳೇತಕೆ ನಿನ್ನ ವರ್ಣಿಸಲು?
ನಿನ್ನ ನೆನಪು ಜೀರುಂಡೆಯಂತೆ ಗುಯ್ ಗುಡುತಿದೆ

 *ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*