This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
25 ಜನವರಿ 2018
24 ಜನವರಿ 2018
ಹಾಡುವೆನು (ಭಾವಗೀತೆ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಗುಂಪಿನಿಂದ ಉತ್ತಮ ಗೀತೆ ಪುರಸ್ಕಾರ ಲಬಿಸಿದೆ
*ಹಾಡುವೆನು*
ಹಾಡೊಂದ ನಾ ಹಾಡುವೆನು
ಕೇಳುಗರ ಮನ ತಣಿಸುವೆನು
ನೋವಿದೆ ನಲಿವಿದೆ ಹಾಡಲಿ
ಕೇಳುಗರಿಲ್ಲದೇ ಹೇಗೆ ಹಾಡಲಿ
ನಿಮ್ಮ ಮಂತ್ರಮುಗ್ಧಗೊಳಿಸುವೆ
ರಾಗ ರಸಗಳಲಿ ಮೈಮರೆಸುವೆ
ಮನರಂಜನೆಯನೀಗ ನೀಡುವೆ
ಮನಕಾನಂದವನು ಈಯುವೆನು
ಬೇಧ ಭಾವಗಳಿಲ್ಲ ನನ್ನ ಹಾಡಲ್ಲಿ
ಹಿರಿ ಕಿರಿಯರ ಗೊಡವೆಗಳಿಲ್ಲ
ಸ್ಪೃಶ್ಯಾಸ್ಪೃಶ್ಯತೆ ಗಾನಕೆ ತಿಳಿದಿಲ್ಲ
ಕಿತ್ತಾಟ ಕಚ್ಚಾಟ ಇಲ್ಲವೇ ಇಲ್ಲ
ದೇವನೊಲಿಸುವೆ ನನ್ನ ಹಾಡಲಿ
ದಾನವರ ಹಳಿವೆ ಹಾಡುತ ಜಗದಲಿ
ಕೆಡಿಸುವ ಮಾತಿಲ್ಲ ಗಾಯನದಲಿ
ಕೂಡಿಸುವೆ ಎಲ್ಲರ ನನ್ನ ಹಾಡಲಿ
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
23 ಜನವರಿ 2018
ಹನಿಗವನಗಳು (ಹಾಡು)
ಹನಿಗವನಗಳು
೧
*ಕೈಚಳಕ*
ಹಾಡುಗಾರ ಹಾಡುತ್ತಿದ್ದನು
ತನ್ಮಯದಿಂದ
ಕೇಳುಗರು ಕೇಳುತ್ತಿದ್ದರು
ಆನಂದದಿಂದ
ಕಿಸೆಗಳ್ಳರು ಹಣ ಎಗರಿಸಿದ್ದರು
ಕೈಚಳಕದಿಂದ
೨
*ತಾಕತ್ತು*
ನನ್ನ ಹಾಡಲಿ ಜನರ ಸೆಳೆವ
ಶಕ್ತಿಯಿದೆ
ನೋವ ಮರೆಸುವ
ಔಷಧವಿದೆ
ಎಡವಟ್ಟಾದರೆ ಕೊಳೆತ ಮೊಟ್ಟೆ
ತರುವ ತಾಕತ್ತಿದೆ
೩
*ಭಾವನೆ*
ಗೋಷ್ಠಿ ಮುಗಿಸಿದ ಗಾಯಕ
ಕೇಳಿದ ಸಂಭಾವನೆ
ಆಯೋಜಕನೆಂದನು
ನೀವು ನಮ್ಮವರೆಂಬ
ಭಾವನೆ
ನೀವು ನಮ್ಮ ತಂಗಿಯ
ಮಧುವೆಯಾಗದಿದ್ದರೂ
ನನ್ನ ಭಾವನೇ
*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*
22 ಜನವರಿ 2018
ನಮಗೆ ಎಂತಹ ಮುಖ್ಯ ಮಂತ್ರಿ ಬೇಕು? (ಸಂಗ್ರಹ ಲೇಖನ)
ಈ ರಾಜ್ಯವನ್ನು ಲಿಂಗಾಯಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಒಕ್ಕಲಿಗನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ದಲಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಬ್ರಾಹ್ಮಣನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಕುರುಬನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಇತರೆ ಯಾವ ಜಾತಿಯವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಯಾವ ಧರ್ಮದವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ರೈತ ಕಾರ್ಮಿಕ ವಿಜ್ಞಾನಿ ಸಮಾಜ ಸೇವಕ ಧಾರ್ಮಿಕ ಮುಖಂಡ ಮುಂತಾದ ಯಾರೂ ಮುನ್ನಡೆಸಬಾರದು.
ಏಕೆಂದರೆ ,...
ಇವರು ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಮ್ಮ ಹಿತದ ಪಕ್ಷಪಾತಿಗಳಾಗುತ್ತಾರೆ. ಅದು ಅವರವರದೇ ಆಡಳಿತವಾಗುತ್ತದೆ.
ಸುಮಾರು ಏಳು ಕೋಟಿ ಜನಸಂಖ್ಯೆಯ ಹೆಚ್ಚು ಕಡಿಮೆ ಜಪಾನ್ ದೇಶದಷ್ಟು ವಿಸ್ತೀರ್ಣದ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಅಂಧಾಭಿಮಾನಿಗಳಲ್ಲದ ಉದಾರ ಮನಸ್ಸಿನ ಈ ನಮ್ಮ ಕರ್ನಾಟಕ ರಾಜ್ಯವನ್ನು ಆಳುವವನು ಮುನ್ನಡೆಸುವವನು ಒಬ್ಬ ಮನುಷ್ಯನಾಗಿರಬೇಕು.
ಹೌದು,
ಇದನ್ನು ಕಲ್ಪಿಸಿಕೊಳ್ಳಲು ಬಹಳ ಜನರಿಗೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಅವರಿಗೆ ಮನುಷ್ಯರೇ ಕಾಣುತ್ತಿಲ್ಲ. ಎಲ್ಲರೂ ಹುಟ್ಟಿನಿಂದಲೇ ಬಂದ TITLE ಗಳಿಂದಲೇ ಗುರುತಿಸಲ್ಪಡುತ್ತಾರೆ. ತಾವು ಸೃಷ್ಟಿಯ ಸ್ವತಂತ್ರ ಜೀವಿಗಳು ಎಂದು ಮರೆತು ಬಿಟ್ಟಿದ್ದಾರೆ. ಹುಟ್ಟಿದ ಕ್ಷಣವೇ ಅನೇಕ ಬಂಧನಗಳಿಂದ ಬಂಧಿಗಳಾಗುತ್ತಾರೆ.
ಅದರೆ ಈಗಲೂ ಕೆಲವು ಮನುಷ್ಯರಿದ್ದಾರೆ. ಈ ಎಲ್ಲವನ್ನೂ ಮೀರಿದವರಿದ್ದಾರೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಈ ಸುಂದರ ಪ್ರದೇಶವನ್ನು ಮುನ್ನಡೆಸುವ ಅವಕಾಶ ಕೊಡಬೇಕಾಗಿದೆ. ಮತಭಿಕ್ಷೆಬೇಡಿ ಜನರ ಭಾವನೆಗಳನ್ನು ಕೆರಳಿಸಿ ಸುಳ್ಳುಭರವಸೆ ನೀಡುವವರಿಗಿಂತ ನಾವೇ ಖುದ್ದಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ.
ಆಗ ರಾಮರಾಜ್ಯ ಭೀಮರಾಜ್ಯ ಕಲ್ಯಾಣ ರಾಜ್ಯ ಖಂಡಿತ ಸಾಧ್ಯವಿದೆ. ಕಳ್ಳರಿಲ್ಲದ ವಂಚಕರಿಲ್ಲದ ಭ್ರಷ್ಟರಿಲ್ಲದ ದುರಹಂಕಾರಿಗಳಿಲ್ಲದ ನೆಮ್ಮದಿಯ ಕ್ರಿಯಾತ್ಮಕ ಚಟುವಟಿಕೆಗಳ ಸಾಧಕರ ನಾಡು ಇದಾಗುತ್ತದೆ.
ಅಹಹಹಹಾ.........
ನಿಮ್ಮ ಮನಸ್ಸಿನಾಳದ ಮುಸುನಗೆ ನಿಮ್ಮ ಮುಖದಲ್ಲಿ ನನಗೆ ಕಾಣುತ್ತಿದೆ. ಇದೊಂದು ಹಗಲುಗನಸು ಎಂಬದು ನಿಮ್ಮ ಅನಿಸಿಕೆ.
ಏಕೆ.......ಕೋಟ್ಯಾಂತರ ಮೈಲಿಗಳ ಮಂಗಳನಲ್ಲಿಗೆ ಮುನ್ನುಗ್ಗುತ್ತಿಲ್ಲವೇ -
ಸಾಗರದ ತಳವನ್ನು ಸ್ಪರ್ಶಿಸಿಲ್ಲವೇ - ಸಾವಿರಾರು ಕಿಲೋಮೀಟರ್ ವೇಗದಲ್ಲಿ ಶಬ್ದದ ವೇಗವನ್ನು ಮೀರಿ ಹಾರಾಡುವ ವಿಮಾನವನ್ನು ಕಂಡುಹಿಡಿದಿಲ್ಲವೇ,
ವಿಶ್ವವನ್ನೇ ಏಕಕಾಲದಲ್ಲಿ ಸಂಪರ್ಕಿಸುವ ಸಾಧನ ಸಂಶೋದಿಸಿಲ್ಲವೇ ,
ಇಡೀ ಭೂಮಂಡಲವನ್ನೇ ಕ್ಷಣಾರ್ಧದಲ್ಲಿ ನಾಶ ಮಾಡುವ ಬಾಂಬ್ ಗಳನ್ನು ಸೃಷ್ಟಿಸಿಲ್ಲವೇ.
ಇದೆಲ್ಲಾ ಸಾಧ್ಯವಾಗಿರಬೇಕಾದರೆ ಕೇವಲ ನಮ್ಮದೇ ಮನಸ್ಸುಗಳನ್ನು ನಿಯಂತ್ರಿಸಿ ಸಾಧಿಸಬಹುದಾದ ಆಡಳಿತ ರೂಪಿಸಲು ಸಾಧ್ಯವಿಲ್ಲವೇ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಯಾದರೆ ಇದು ಸಾಧ್ಯ.
ಆ ನಿರೀಕ್ಷೆಯಲ್ಲಿ ........
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ
ಸಂಗ್ರಹ
ಸಿ.ಜಿ.ವೆಂಕಟೇಶ್ವರ
ಕೃಪೆ
ವಿವೇಕಾನ೦ದ. ಹೆಚ್.ಕೆ.
ಈ ರಾಜ್ಯವನ್ನು ಒಕ್ಕಲಿಗನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ದಲಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಬ್ರಾಹ್ಮಣನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಕುರುಬನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಇತರೆ ಯಾವ ಜಾತಿಯವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಯಾವ ಧರ್ಮದವನೂ ಮುನ್ನಡೆಸಬಾರದು.
ಈ ರಾಜ್ಯವನ್ನು ರೈತ ಕಾರ್ಮಿಕ ವಿಜ್ಞಾನಿ ಸಮಾಜ ಸೇವಕ ಧಾರ್ಮಿಕ ಮುಖಂಡ ಮುಂತಾದ ಯಾರೂ ಮುನ್ನಡೆಸಬಾರದು.
ಏಕೆಂದರೆ ,...
ಇವರು ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಮ್ಮ ಹಿತದ ಪಕ್ಷಪಾತಿಗಳಾಗುತ್ತಾರೆ. ಅದು ಅವರವರದೇ ಆಡಳಿತವಾಗುತ್ತದೆ.
ಸುಮಾರು ಏಳು ಕೋಟಿ ಜನಸಂಖ್ಯೆಯ ಹೆಚ್ಚು ಕಡಿಮೆ ಜಪಾನ್ ದೇಶದಷ್ಟು ವಿಸ್ತೀರ್ಣದ ವಿಶ್ವದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಅಂಧಾಭಿಮಾನಿಗಳಲ್ಲದ ಉದಾರ ಮನಸ್ಸಿನ ಈ ನಮ್ಮ ಕರ್ನಾಟಕ ರಾಜ್ಯವನ್ನು ಆಳುವವನು ಮುನ್ನಡೆಸುವವನು ಒಬ್ಬ ಮನುಷ್ಯನಾಗಿರಬೇಕು.
ಹೌದು,
ಇದನ್ನು ಕಲ್ಪಿಸಿಕೊಳ್ಳಲು ಬಹಳ ಜನರಿಗೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಅವರಿಗೆ ಮನುಷ್ಯರೇ ಕಾಣುತ್ತಿಲ್ಲ. ಎಲ್ಲರೂ ಹುಟ್ಟಿನಿಂದಲೇ ಬಂದ TITLE ಗಳಿಂದಲೇ ಗುರುತಿಸಲ್ಪಡುತ್ತಾರೆ. ತಾವು ಸೃಷ್ಟಿಯ ಸ್ವತಂತ್ರ ಜೀವಿಗಳು ಎಂದು ಮರೆತು ಬಿಟ್ಟಿದ್ದಾರೆ. ಹುಟ್ಟಿದ ಕ್ಷಣವೇ ಅನೇಕ ಬಂಧನಗಳಿಂದ ಬಂಧಿಗಳಾಗುತ್ತಾರೆ.
ಅದರೆ ಈಗಲೂ ಕೆಲವು ಮನುಷ್ಯರಿದ್ದಾರೆ. ಈ ಎಲ್ಲವನ್ನೂ ಮೀರಿದವರಿದ್ದಾರೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಈ ಸುಂದರ ಪ್ರದೇಶವನ್ನು ಮುನ್ನಡೆಸುವ ಅವಕಾಶ ಕೊಡಬೇಕಾಗಿದೆ. ಮತಭಿಕ್ಷೆಬೇಡಿ ಜನರ ಭಾವನೆಗಳನ್ನು ಕೆರಳಿಸಿ ಸುಳ್ಳುಭರವಸೆ ನೀಡುವವರಿಗಿಂತ ನಾವೇ ಖುದ್ದಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ.
ಆಗ ರಾಮರಾಜ್ಯ ಭೀಮರಾಜ್ಯ ಕಲ್ಯಾಣ ರಾಜ್ಯ ಖಂಡಿತ ಸಾಧ್ಯವಿದೆ. ಕಳ್ಳರಿಲ್ಲದ ವಂಚಕರಿಲ್ಲದ ಭ್ರಷ್ಟರಿಲ್ಲದ ದುರಹಂಕಾರಿಗಳಿಲ್ಲದ ನೆಮ್ಮದಿಯ ಕ್ರಿಯಾತ್ಮಕ ಚಟುವಟಿಕೆಗಳ ಸಾಧಕರ ನಾಡು ಇದಾಗುತ್ತದೆ.
ಅಹಹಹಹಾ.........
ನಿಮ್ಮ ಮನಸ್ಸಿನಾಳದ ಮುಸುನಗೆ ನಿಮ್ಮ ಮುಖದಲ್ಲಿ ನನಗೆ ಕಾಣುತ್ತಿದೆ. ಇದೊಂದು ಹಗಲುಗನಸು ಎಂಬದು ನಿಮ್ಮ ಅನಿಸಿಕೆ.
ಏಕೆ.......ಕೋಟ್ಯಾಂತರ ಮೈಲಿಗಳ ಮಂಗಳನಲ್ಲಿಗೆ ಮುನ್ನುಗ್ಗುತ್ತಿಲ್ಲವೇ -
ಸಾಗರದ ತಳವನ್ನು ಸ್ಪರ್ಶಿಸಿಲ್ಲವೇ - ಸಾವಿರಾರು ಕಿಲೋಮೀಟರ್ ವೇಗದಲ್ಲಿ ಶಬ್ದದ ವೇಗವನ್ನು ಮೀರಿ ಹಾರಾಡುವ ವಿಮಾನವನ್ನು ಕಂಡುಹಿಡಿದಿಲ್ಲವೇ,
ವಿಶ್ವವನ್ನೇ ಏಕಕಾಲದಲ್ಲಿ ಸಂಪರ್ಕಿಸುವ ಸಾಧನ ಸಂಶೋದಿಸಿಲ್ಲವೇ ,
ಇಡೀ ಭೂಮಂಡಲವನ್ನೇ ಕ್ಷಣಾರ್ಧದಲ್ಲಿ ನಾಶ ಮಾಡುವ ಬಾಂಬ್ ಗಳನ್ನು ಸೃಷ್ಟಿಸಿಲ್ಲವೇ.
ಇದೆಲ್ಲಾ ಸಾಧ್ಯವಾಗಿರಬೇಕಾದರೆ ಕೇವಲ ನಮ್ಮದೇ ಮನಸ್ಸುಗಳನ್ನು ನಿಯಂತ್ರಿಸಿ ಸಾಧಿಸಬಹುದಾದ ಆಡಳಿತ ರೂಪಿಸಲು ಸಾಧ್ಯವಿಲ್ಲವೇ.
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಯಾದರೆ ಇದು ಸಾಧ್ಯ.
ಆ ನಿರೀಕ್ಷೆಯಲ್ಲಿ ........
ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ
ಸಂಗ್ರಹ
ಸಿ.ಜಿ.ವೆಂಕಟೇಶ್ವರ
ಕೃಪೆ
ವಿವೇಕಾನ೦ದ. ಹೆಚ್.ಕೆ.
21 ಜನವರಿ 2018
*ಗಜ಼ಲ್*೨೧ (ಪ್ರೀತಿ ಇಲ್ಲದ ಮೇಲೆ)
*ಗಜ಼ಲ್*೨೧ (ಪ್ರೀತಿ ಇಲ್ಲದ ಮೇಲೆ)
ಚೆಲುವಿಲ್ಲ ಒಲವಿಲ್ಲ ಎಲ್ಲೆಡೆ ಹಣದ ಲೆಕ್ಕಾಚಾರ
ಪ್ರಕೃತಿಯೆಡೆ ಅತ್ಯಾಚಾರ ಲಾಭದ ಲೆಕ್ಕಾಚಾರ
ತಾಯ ಎದೆಹಾಲು ಡಬ್ಬಿ ಬಾಟಲ್ಗಳಲಿ ತುಂಬಿದೆ
ದಂಪತಿಗಳಲಿ ಮೇಲು ಕೀಳಿನ ಮುಗಿಯದ ಲೆಕ್ಕಾಚಾರ
ಅನಾಥಾಶ್ರಮ ವೃದ್ದಾಶ್ರಮ ಹೆಚ್ಚಳ ಎಲ್ಲೆಲ್ಲೂ
ಬಾಡಿಗೆ ತಾಯಿ ಬಾಡಿಗೆ ಸಂಬಂಧದ ಲೆಕ್ಕಾಚಾರ
ಧನಕನಕಗಳು ಎಲ್ಲಾ ಸಂಬಂಧಗಳಿಗೆ ಆಧಾರ
ದನಕರುಗಳು ಕೇವಲ ಮಾಂಸದ ಲೆಕ್ಕಾಚಾರ
ಭುವಿಯಲಿ ಅರಳುವ ಬಂಧಗಳ ಕೊರತೆ
ಸೀಜೀವಿಗೆ ಪ್ರೀತಿ ತುಂಬಿದ ಜಗದ ಲೆಕ್ಕಾಚಾರ
*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)