30 ಡಿಸೆಂಬರ್ 2017

ಎರಡು ಶಾಯಿರಿಗಳು

ಶಾಯಿರಿಗಳು

*೧*

*ಮನವಿ*

ನೀ ನನ್ನ ತೊರೆದಾಗ
ನನ್ನ ಹೃದಯದ ಪಾಡು
ಗೆಳತಿ ಕೇಳಬೇಡ
ಕೃಪೆ ಮಾಡಿ ಬೇರೆಯವರ
ಹೃದಯಕ್ಕೆ ಹೋಗಬೇಡ
ಅವರಿಗೂ ನೋವ
ನೀಡಬೇಡ

*೨*

*ಹೃದಯ*

ನನ್ನ ಖಾಲಿ ಹೃದಯದಿ
ನೀ ಬಂದು ನೆಲೆಸಿದೆ
ತುಂಬಿರುವ ಈ
ತುಳುಕದು ನೀನಿರುವವರೆಗೆ
ನೋವಿಗೆ ಜಾಗವಿರದು
ನಲಿವೇ ಎಲ್ಲೆಲ್ಲೂ



*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಚಿತ್ರ ಹನಿಗವನ

ಚಿತ್ರ ಹನಿಗವನ

*ದೇಶಭಕ್ತಿ*

ನಾವೆಂದಿಗೂ ಅಲ್ಲ  ಅನಾಥರು
ನಾವೇ ಭಾರತ ಭಾಗ್ಯವಿಧಾತರು
ನಮಗೆ ಮೈತುಂಬ ಬಟ್ಟೆಯಿಲ್ಲ
ನಮ್ಮ ದೇಶ ಭಕ್ತಿಗೆ ಕೊರತೆಯಿಲ್ಲ
ಹಾಡುವೆವು ಜನಗಣ ಮನದುಂಬಿ
ಗೌರವ ತೋರುವೆವು ಹೃದಯದುಂಬಿ

*ಸಿ.ಜಿ. ವೆಂಕಟೇಶ್ವರ*
*ಗೌರಿಬಿದನೂರು*

ಚಿತ್ರ ಹನಿಗವನ

ಏಕಾಂತ

ಕೆಳಗಡೆ ಹೊಳೆಯ ನೀರಿನ ಸೆಳೆತ
ಹೃದಯದಿ ಭಾವನೆಗಳ ಮೊರೆತ
ಇನಿಯನ ನಿರೀಕ್ಷೆಯಲಿ ನಾನು
ಮೈಮರೆತಿರುವೆ ಬರುವನವನು
ಬೇಸರವಾಗಿದೆ ಈ ಏಕಾಂತ
ಎಂದು‌ ಬರುವೆ ನೀ ಕಾಂತ

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು

ಕನ್ನಡ ನಾಡು (ಭಾವಗೀತೆ)



ಭಾವಗೀತೆ

*ಕನ್ನಡ ನಾಡು*

ನೋಡು ಬಾ ಯಾತ್ರಿಕ ನಮ್ಮ ನಾಡಸಿರಿಯ
ಸುಂದರ ಮನೋಹರ  ಕರುನಾಡ  ಸಿರಿಯ

ಗಂಗ ಕದಂಬ ರಾಷ್ಟ್ರಕೂಟರು ಆಳಿದ ನಾಡು
ಸಂಗೀತ ನಾಟ್ಯ  ಸಾಹಿತ್ಯ ಕಲೆಗಳ ನೆಲೆವೀಡು
ಕಲೆ  ನಾಟಕ ಶಿಲ್ಪಕಲೆಗಳ ತವರೂರು ಇದು
ಆದಿಪಂಪ ಕುಮಾರವ್ಯಾಸರುದಿಸುದ ನಾಡಿದು

ಕೃಷ್ಣ ತುಂಗೆ ಕಾವೇರಿ ನೇತ್ರಾವತಿಯರ ತಾಣ
ತೇಗ ಹೊನ್ನೆ ಬೀಟೆ  ಗಂಧದ ಮರಗಳ ವನ
ನವಿಲು ಸಾರಂಗ ಹುಲಿ ಕರಡಿಯ ನೋಡಿ
ಸಹ್ಯಾದ್ರಿಯ ಸೊಬಗಿನ ಸುಂದರ ಮೋಡಿ

ಹಕ್ಕ ಬುಕ್ಕ ಕೃಷ್ಣದೇವರಾಯರಾಳಿದ ನಾಡು
ಕನಕ ಪುರಂದರ ದಾಸರ ಪದಗಳ ನೆಲೆವೀಡು
ಶಾಸ್ತ್ರೀಯ ನುಡಿ ಕನ್ನಡ ಭಾಷೆಯ ತವರೂರು
ದಾನಧರ್ಮಗಳಿಗೆ ಹೆಸರಾದ ಹಿರಿಯೂರು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

29 ಡಿಸೆಂಬರ್ 2017

ಹನಿಗವನಗಳು (ಜೀವನ. ಕುವೆಂಪು ರವರಿಗೆ ಸಮರ್ಪಣೆ)


ಹನಿಗವನಗಳು

*೧*

*ಸೂತ್ರಧಾರ*

ಜೀವನವೊಂದು ನಾಟಕ ರಂಗ
ನಾವೆಲ್ಲ ಪಾತ್ರ ದಾರಿಗಳು
ಭಗವಂತ ಸೂತ್ರಧಾರ
ಸೂತ್ರ ಹರಿದರೆ
ಹೊಲಿಯಲು
ಉಪಯೋಗಕ್ಕೆ ಬರುವುದಿಲ್ಲ
ನಮ್ಮ ಸೂಜಿದಾರ

*೨*

*ದಾರಿ*

ಒಳ್ಳೆಯ ಮಾರ್ಗದಿ ನಡೆ
ಜೀವನ ಉತ್ತಮವಾಗುವುದು
ಎಂದು ಬುದ್ದಿಹೇಳಿದೆ
ಸಾರಿ ಸಾರಿ
ಕೇಳಲಿಲ್ಲ ಹಿಡಿದ ಅಡ್ಡದಾರಿ
ಪರಿಣಾಮ ಭಗವಂತ
ಬೇಗ  ತೋರಿದ
ಯಮಪುರಕ್ಕೆ ದಾರಿ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*