15 ಡಿಸೆಂಬರ್ 2017

ಹನಿಗವನಗಳು(ಕಲ್ಪನೆ)

*ಹನಿಗವನಗಳು*

*೧*

*ಪ್ರಶ್ನೆ*

ಅವಳಂದಳು
ಕೈತುಂಬ ಹಣ
ಮೈತುಂಬ ಒಡವೆ
ಹಾಕಿಕೊಂಡ ಕಲ್ಪನೆ
ಸುಂದರವಲ್ಲವೆ ?
ಅವನುತ್ತರಿಸಿದ
ಮಲಗು ಸಾಕು ರಾತ್ರಿ
ಹನ್ನೆರಡಾಗಿಲ್ಲವೆ ?

*೨*

*ಸಾದ್ಯತೆ*

ನನ್ನವಳೆಂದಳು ರೀಹಾಗೇ ಕಲ್ಪಿಸಿಕೊಳ್ಳಿ
ನಾವೊಂದು ಬಂಗಲೆ ಕಟ್ಟಿಸಿದ್ದೇವೆಂದು
ನಾನು ಶಾಂತವಾಗಿ ಉತ್ತರಿಸಿದೆ
ಹೌದು ಹಾಗೆಯೇ ಕಲ್ಪಿಸಿಕೊಳ್ಳೋಣ
ನಮ್ಮ ಮಾವ ಕಟ್ಟಿಸಿಕೊಟ್ಟರೆಂದು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಸಂಬಂಧಗಳಲ್ಲಿ ಮೇಲುಗೈ ಸಾಧಿಸುವ ಚಿಹ್ನೆಗಳು(ಲೇಖನ)

ಸಂಬಂಧಗಳಲ್ಲಿ ಮೇಲುಗೈ ಸಾಧಿಸುವ ಚಿಹ್ನೆಗಳು

ಯಾವುದೇ ಸಂಬಂಧಗಳು ಪರಸ್ಪರ ನಂಬಿಕೆ, ಗೌರವ ,ಪ್ರೀತಿ ಮತ್ತು ವಿಶ್ವಾಸಗಳಿಂದ ಗಟ್ಟಿಯಾಗಿ ಮುಂದುವರೆಯುತ್ತವೆ .ಪ್ರೀತಿಯ ಕೊಡು ಕೊಳ್ಳುವ ಮೂಲಕ ಸಂಬಂಧಗಳು ಗಟ್ಟಿಯಾಗಿ ನಮ್ಮಲ್ಲಿ ನಂಬಿಕೆ ಬೆಳೆದು ಅದು ಮುಂದಿನ ನಮ್ಮ ಜೀವನದ ಭದ್ರ ಬುನಾದಿಯಾಗುತ್ತದೆ .ಆದರೆ ಕೆಲವೊಮ್ಮೆ ನಮ್ಮ ದೇಶದ ಪುರುಷ ಪ್ರಧಾನ ಕುಟುಂಬದ ಮುಂದುವರೆದ ಭಾಗವಾಗಿ ಕೆಲ ಹುಡುಗರು ಹುಡುಗಿಯರ ಅರಿವಿಗೆ ಬಾರದೇ ಅವರ ಮೇಲೆ ಹಿಡಿತ ಸಾಧಿಸಿ ನಿಯಂತ್ರಿಸುವ ಪ್ರಯತ್ನ ಮಾಡುವರು .
ನಿಮ್ಮ ಸಂಬಂಧಗಳಲ್ಲಿ ನಿಮ್ಮ ಗೆಳೆಯ ಈ ಕೆಳಗಿನಂತೆ ವರ್ತಿಸಿದಾಗ ಅವನು ನಿಮ್ಮ ಮೇಲೆ ನಿಯಂತ್ರಣ ಮಾಡುವ ಕಾರ್ಯ ಮಾಡುತ್ತಿದ್ದಾನೆ ಎಂದು ತಿಳಿಯಬಹುದು.

1 ಮೇಲುಗೈ ಸಾಧಿಸಲು ಯತ್ನ

ಕೆಲ ವಿಚಾರದಲ್ಲಿ ಅಭಿಪ್ರಾಯ ತಿಳಿಸಿ ನಿಮ್ಮ ಅಭಿಪ್ರಾಯ ಹೇಳುವ ಮೊದಲೆ ಅವನ ಎತ್ತರದ ದ್ವನಿ ಮತ್ತು ಕಣ್ಣಿನ ತೀಕ್ಷ್ಣ ನೋಟದ ಮೂಲಕ ನೀವು ಅವನು ಹೇಳಿದ ವಿಚಾರಗಳನ್ನು ನಿಮಗಿಷ್ಟವಿಲ್ಲದಿದ್ದರೂ ಒಪ್ಪುವಂತಹ ಪರಿಸ್ಥಿತಿಯನ್ನು ಸೃಷ್ಟಿ ಮಾಡುವನು ಈ ರೀತಿ ಪದೇ ಪದೇ ಆದರೆ ನಿಮ್ಮ ಮೇಲೆ ನಿಮ್ಮ ಹುಡುಗ ನಿಮಗರಿವಿಲ್ಲದೇ ಮೇಲುಗೈ ಸಾಧಿಸಿರುತ್ತಾನೆ .

2,ಅಪರಾಧಿ ಭಾವ ಕಾಡುವಂತೆ ಮಾಡುವುದು

ಕೆಲವೊಮ್ಮೆ ನೀವು ತಪ್ಪು ಮಾಡದಿದ್ದರೂ ಪದೇ ಪದೇ ನೀವು ತಪ್ಪು ಮಾಡಿರುವಿ ರೆಂದು ಬಿಂಬಿಸಿ ನಿಮ್ಮನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿಮಗೆ ನೀವೇ ತಪ್ಪಿತಸ್ಥರೆಂದು ಸಾಬೀತುಪಡಿಸಲು ಕೆಲ ಹುಡುಗರು ಪ್ರಯತ್ನ ಮಾಡುವರು .

3 ನಿಮ್ಮನ್ನು ನೀವೇ ಅನುಮಾನಿಸುವಿಕೆ

ಮೊದಲಿಗೆ ನೀವು ಆತ್ಮವಿಶ್ವಾಸವನ್ನು ಹೊಂದಿದ ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವ ಗುಣ ಹೊಂದಿರುವಿರಿ , ಕ್ರಮೇಣ  ನಿಮ್ಮ ಚಿಕ್ಕ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ನೀವು ಅನವಶ್ಯಕವಾಗಿ ನಿಮ್ಮ ಹುಡುಗನ ಮೇಲೆ ಅವಲಂಬಿತವಾದರೆ ಇದು ಸಹ ನಿಮ್ಮ ಮೇಲೆ ನಿಮ್ಮ ಹುಡುಗನ ಮೇಲುಗೈ ಸಾಧಿಸುವ ಲಕ್ಷಣವಾಗಿರಬಹುದು

4 ಅವಕಾಶವಾದಿತನ

ನಿಮಗೆ ನಿಮ್ಮ ಕುಟುಂಬದ, ಮತ್ತು ಸ್ನೇಹಿತರ ಜೊತೆಗೆ ಬಹುಮುಖ್ಯ ಕೆಲಸ ಕಾರ್ಯ ಇದ್ದಾಗ ನಿಮ್ಮ ಹುಡುಗ ನಿಮ್ಮ ಉಪಸ್ಥಿತಿಯನ್ನು ಬಲವಂತ ಪಡಿಸುವದು,ಇದಕ್ಕೆ ತದ್ವಿರುದ್ಧವಾಗಿ ಅವನ ಮನೆಯ ಕೆಲಸ,ಸ್ನೇಹಿತರ ಕಾರ್ಯದಲ್ಲಿ ನಿಮಗೆ ತಿಳಿಸದೇ ಅನವಶ್ಯಕ ಕಾಯಿಸುವುದು ಇವು ಆ ಹುಡುಗ ಮೇಲುಗೈ ಸಾಧಿಸುವ ಸೂಚನೆ.

5 ಬಲಿಪಶು ನಾಟಕ

ಕೆಲ ವಿಷಯಗಳಲ್ಲಿ ಅನವಶ್ಯಕ ವಾಗಿ ಗೊಂದಲ ಉಂಟಾದಾಗ ಎಲ್ಲಾ ಸಮಯದಲ್ಲಿ ಹುಡುಗ ನಾನು ನಿನಗಾಗಿ ಎಲ್ಲಾ ತ್ಯಾಗ ಮಾಡಿದ್ದೇನೆ, ನನ್ನ ಎಲ್ಲಾ ನೋವುಗಳಿಗೆ ನೀನು ಹಾಗೂ ನಿನ್ನ ಪ್ರೀತಿಯೇ ಕಾರಣ ಎಂದು ಪದೇ ಪದೇ ಹೇಳುತ್ತಿದ್ದರೆ ಹಾಗೂ  ಹುಡುಗಿ ಕ್ಷಮೆ ಕೇಳುವಂತೆ ಮಾಡುವ ಮೂಲಕ ನೀವು ಅವರ ನಾಟಕಕ್ಕೆ ಮನ್ನಣೆ ನೀಡಿದರೆ ಹುಡಗನ ಮೇಲುಗೈ ಒಪ್ಪಿಕೊಂಡಂತೆಯೇ ಸರಿ .

 ,6 ಎಮೋಷನಲ್ ಬ್ಲಾಕ್‌ ಮೇಲ್

ಹುಡುಗ ಪದೇ ಪದೇ "ನೀನಿಲ್ಲದಿದ್ದರೆ ನಾನು ಬದುಕುವುದಿಲ್ಲ, ಸಾಯತ್ತೇನೆ" "ನನ್ನ ಕೈ ಕೊಯ್ದು ಕೊಳ್ಳವೆ" ಇತ್ಯಾದಿ ಮಾತುಗಳನ್ನು ಹೇಳುತ್ತಿದ್ದರೆ ಅವನಿಗೆ ನಿನ್ನ ಪ್ರೀತಿಯ ಬದಲಾಗಿ ನಿನ್ನನ್ನು ಭಾವನಾತ್ಮಕವಾಗಿ ಕರುಣೆ ಗಿಟ್ಟಿಸಿ ಎಮೋಷನಲ್ ಬ್ಲಾಕ್‌ ಮೆಲ್ ಮಾಡುವನು ಆಗ ಅವನು ಹೇಳಿದಂತೆ ಕೇಳಲು ನಿಮ್ಮನ್ನು  ಅಣಿಗೊಳಿಸುವನು.


ಈಗೆ ಸಂಬಂಧಗಳು ಪರಸ್ಪರ ನಂಬಿಕೆ. ಮೆಚ್ಚುಗೆ, ಗೌರವ ಹೊಂದಿ ಮುಂದುವರೆಯಬೇಕು ಇಲ್ಲಿ ಯಾರೂ ಮೇಲಲ್ಲ  ಯಾರೂ  ಕೀಳಲ್ಲ ಕೆಲವೊಮ್ಮೆ ಈ ಮೇಲ್ಕಂಡ ಕಾರಣದಿಂದಾಗಿ ಯಾರೇ ಸಂಬಂಧಗಳಲ್ಲಿ ಮೇಲುಗೈ ಸಾಧಿಸಲು ಪ್ರಯತ್ನ ಪಟ್ಟರೆ ಅಂತಹ ಸಂಬಂದದಿಂದ ಹೊರ ಬರುವ ಸ್ವಾತಂತ್ರ್ಯ ನಿಮ್ಮದಾಗಿರಬೇಕು ಏಕೆಂದರೆ ನಿಮ್ಮ ಸುಂದರ ಜೀವನ ನಿಮ್ಮ ಕೈಯಲ್ಲಿದೆ ಅಲ್ಲವೇ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

14 ಡಿಸೆಂಬರ್ 2017

ಕಿರುಗಥೆ (ಸಂಬಂಧಗಳು)

ಕಿರುಗಥೆ
,ಸಂಬಂಧಗಳು

ಸಾಹುಕಾರ್ ತಿಮ್ಮಯ್ಯ ವಯೋಸಹಜ ಖಾಯಿಲೆಯಿಂದ ಮರಣಹೊಂದಿದಾಗ ಅವರ ಇಬ್ಬರು ಹೆಂಡತಿಯರು ಮತ್ತು ಮಕ್ಕಳು ಅವರ ಕೋಟಿಗಟ್ಟಲೆ  ಆಸ್ತಿಯ ಹಂಚಿಕೊಳ್ಳಲು ಶವ ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದ ಕಂಡು ಊರ ಹಿರಿಯ ಜುಂಜಣ್ಣ " ಇದು ಕಿತ್ತಾಡುವ ಸಮಯವೆ ? ಮೊದಲು ಕಾರ್ಯ ಮಾಡಿ ಆಮೇಲೆ ನಿಮ್ಮ ವ್ಯವಹಾರ" ಎಂದು ಗದರಿದಾಗ ಅಂತ್ಯ ಸಂಸ್ಕಾರಕ್ಕೆ ಮುಂದಾದರು.
ಒಂದು ವಾರದ ಬಳಿಕ ರಾಜಿ ಪಂಚಾಯತಿ ಬಳಿಕ ಉಭಯ ಪತ್ನಿ ಮತ್ತು ಮಕ್ಕಳು ಸಂತಸದಿಂದ ತಿಮ್ಮಯ್ಯನವರ ಮರೆತು ಆನಂದದಿಂದ ಮೈಮರೆತಿದ್ದರು. ನಾಲ್ಕು ವರ್ಷದ "ರವಿ ಅಮ್ನ ಈ ನಾಯಿ ಏನೂ ತಿನ್ನುತ್ತಿಲ್ಲ" ಎಂದಾಗ ಅವರ ಗಮನಕ್ಕೆ ಬಂದಿದ್ದು. ವಾರದಿಂದ ಆ ನಾಯಿ ತನ್ನ ಮಾಲಿಕನ ನೆನೆದು ಕಣ್ಣೀರುಡುತ್ತ ಆಹಾರ ನೀರು ಸೇವಿಸದೇ ಒಂದು ಮೂಲೆಯಲ್ಲಿ ಮುದುರಿತ್ತು .

ಹನಿಗವನಗಳು (ದಾರಿ)

*ಹನಿಗವನಗಳು*

*೧*
*ಮನೆ*

ದಿಡೀರ್ ಶ್ರೀಮಂತ ರಾಗಲು
ಹಿಡಿವರು ಅಡ್ಡದಾರಿ ನೂರಾರು
ಕಟ್ಟಿಸುವರು ಮಹಾಮನೆ
ಕೊನೆಗೆ ಇವರ ಕೈ ಬೀಸಿ
ಕರೆವುದು ಸೆರೆಮನೆ !

*೨*

*ಮಾರಿ*

ನನ್ನವಳೆಂದಳು ಕಟ್ಟಿ ಒಂದು
ನಮ್ಮದೇ ಸ್ವಂತ ಮನೆ
ಹಿಡಿಯದೇ ಯಾವುದೇ
ಅಡ್ಡದಾರಿ
ನಾನಂದೇ ಕಟ್ಟುವೆ ಮನೆ
ನಿನ್ನ ಒಡವೆಗಳ
ಮಾರಿ !

*೩*

*ಹಾರ*

ಇವರು ಮಹಾನ್ ವ್ಯಕ್ತಿ!
ಹೋದಲ್ಲೆಲ್ಲಾ ಸನ್ಮಾನ
ಹೂವಿನ ಹಾರ
ಇವರ ಘನಂದಾರಿ ಕೆಲಸಕ್ಕೆ
ಇವರ ಕೈಬೀಸಿ ಕರೆದಿದೆ
ಪರಪ್ಪನ ಅಗ್ರಹಾರ!

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

13 ಡಿಸೆಂಬರ್ 2017

*ದೇವರು ನನ್ನ ಅನಿಸಿಕೆ*(ಲೇಖನ)

*ದೇವರು ನನ್ನ ಅನಿಸಿಕೆ*

ಪ್ರಪಂಚದ ಎಲ್ಲಾ ಕಾರ್ಯಗಳು ಒಂದು ಅಗೋಚರ ಶಕ್ತಿ ಯ ನಿಯಮಕ್ಕೆ ಮತ್ತು ನಿಯಂತ್ರಣ ಕ್ಕೆ ಒಳಪಟ್ಟಿರುವುದು ಸುಳ್ಳಲ್ಲ ಈ ವಿಶೇಷವಾದ ಶಕ್ತಿಯನ್ನು ಕೆಲವರು ಕೆಲವೊಂದು ಹೆಸರಿನಲ್ಲಿ ಕರೆದುಕೊಂಡಿದ್ದರೆ ಬಹುತೇಕರು ಹೇಳುವ ಹೆಸರೆ *ದೇವರು*
ದೇವರನ್ನು ವಿವಿಧ ಧರ್ಮದ ಆಧಾರದ ಮೇಲೆ ವಿವಿಧ ಹೆಸರುಗಳಿಂದ ಕರೆದರೂ ನಮ್ಮ ಅನುಕೂಲಕ್ಕೆ ಸಂಭೋದಿಸಿದರೂ ದೇವನೊಬ್ಬ ನಾಮ ಹಲವು ಎಂಬುದು ಸರ್ವವೇದ್ಯ
"ರಘುಪತಿ ರಾಘವ ರಾಜಾರಾಂ ,ಪತಿತಪಾವನ ಸೀತಾರಾಂ, ಈಶ್ವರ ಅಲ್ಲಾ, ತೇರೆ ನಾಮ್, ಸಬ್ ಕೋ ಸನ್ಮತಿ ದೇ ಭಗವಾನ್" ಎಂದು ಗಾಂಧೀಜಿಯವರು ದೇವರ ವಿವಿದ ನಾಮಾವಳಿ ಬೇರೆ ಇದ್ದರೂ ಪರಮಾತ್ಮ ಒಬ್ಬನೇ ಎಂದು ಪ್ರತಿಪಾದಿಸಿದರು. ದೇವರು ಕೇವಲ ಮಂದಿರ ಮಸೀದಿಗಳಲ್ಲಿ ಇಲ್ಲ ಬದಲಾಗಿ ನಾವು ಮಾಡುವ ಕಾರ್ಯ ದಲ್ಲಿ ದೇವರಿದ್ದಾನೆ "ದಿನಗಟ್ಟಲೆ ಮಂತ್ರ ಹೇಳುವ ,ಜಪತಪ ಮಾಡುವ ಕೋಣೆಯಲ್ಲಿ ದೇವರಿಲ್ಲ, ಬದಲಿಗೆ ಹರಿದ ಬಟ್ಟೆಗಳನ್ನು ಧರಿಸಿ ಹೊಲದಲ್ಲಿ ಹೂಳುವ ರೈತನ ಬಳಿ ,ಮಾಸಿದ ಅಂಗಿ ಧರಿಸಿ ರಸ್ತೆ ಕೆಲಸ ಮಾಡುವವನ ಬಳಿ ದೇವನಿರುವನು" ಎಂದು ನಮ್ಮ ಕವಿ ರವೀಂದ್ರ ನಾಥ್ ಠಾಕೂರ್ ರವರು ಹೇಳಿದಂತೆ ದೇವರನ್ನು ನಮ್ಮ ಕ್ರಮದಲ್ಲಿ ಕಾಣಬೇಕು ಇದನ್ನೇ ಭಗವದ್ಗೀತೆಯ*ಕರ್ಮ ಮಾರ್ಗ* ಎಂದಿರುವುದು .ಭಕ್ತಿಭಂಡಾರಿ ಬಸವಣ್ಣ ನವರು ಇದೇ ಅರ್ಥ ದಲ್ಲಿ‌"ಕಾಯಕವೇ ಕೈಲಾಸ" ಎಂದರು.  ಆಡಂಬರದ ಭಕ್ತಿ ಯನ್ನು ದೇವರು ಒಪ್ಪುವುದಿಲ್ಲ ಸ್ವಾಮಿ ವಿವೇಕಾನಂದರು ಹೇಳುವಂತೆ" ಜನತಾ ಸೇವೆಯೇ ಜನಾರ್ದನ ಸೇವೆ " ನಮ್ಮ ಶುದ್ದಮನಸ್ಸಿನಲ್ಲಿ ದೇವರ ಸ್ಮರಿಸಿ ಬೇಡಿದೊಡೆ ಅವ ನಮ್ಮ ಕೈಬಿಡಲಾರ ಅದಕ್ಕೆ ಉದಾಹರಣೆಗೆ ಬೇಡರ ಕಣಣಯ, ಭಕ್ತ ಸಿರಿಯಾಳ ಇತ್ಯಾದಿ ಉದಾಹರಣೆ ನೀಡಬಹುದು. ಇನ್ನೂ ಕೆಲ ಕವಿ ವಾಣಿ ಹೇಳಿದಂತೆ " ಮನೆಯೇ ಮಂತ್ರಾಲಯ ,ಮನಸೇ ದೇವಾಲಯ, ದೇವರೆಂದು ಪ್ರೇಮ ಸ್ವರೂಪ, " ಎಂಬಂತೆ ದೇವರು ಸದಾ ನಮ ಮೇಲೆ ದಯೆ ತೋರುವನು
ಹಿಂದೆ ಕೆಲ ಯೋಗಿಗಳು ಸಾಧು ಪುರುಷರು ಸಿದ್ದಿಯಿಂದ ದೇವರ ಸ್ಥಾನ ಪಡೆದು ಹರಸಿದ್ದರು ಇದನ್ನು ಬಂಡವಾಳ ಮಾಡಿಕೊಂಡ ಕೆಲ ಡೊಂಗಿ ಬಾಬಾ ಗಳನ್ನು ಜನರು ಕುರುಡರಂತೆ ಹಿಂಬಾಲಿಸುತ್ತಿರುವುದು ವಿಪರ್ಯಾಸ .ದೇವರ ಹೆಸರಲ್ಲಿ ನಮ್ಮ ನಮ್ಮಲ್ಲಿ ಜಗಳ ಆಡುವುದು ಸರಿಯಲ್ಲ . ನಾವೆಲ್ಲರೂ ಒಂದೆ ದೇವರ ಆರಾಧನೆ ಮಾಡಲು ವಿವಿಧ ಮಾರ್ಗ ಅನುಸರಿಸಿದರೂ ಅವನ ಕರುಣೆ ಎಲ್ಲರ ಮೇಲಿರಲಿದೆ
ಇನ್ನು ಮುಂದಾದರು ಪ್ರಬುದ್ಧ ರಾಗೋಣ
ದೇವರ ದಯೆ ಪಡೆಯೋಣ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*