13 ಡಿಸೆಂಬರ್ 2017

ಹನಿಗವನಗಳು (ಆರಾಧನೆ)

*ಹನಿಗವನಗಳು*

*೧*

*ರೋದಿಸುತ್ತಾರೆ*

ನಮ್ಮ ಜನ ಸಿನಿಮಾ ತಾರೆಯರು,
ಪತ್ರಕರ್ತರು, ಆಟಗಾರರ ಕುರುಡಾಗಿ
ಆರಾಧಿಸುತ್ತಾರೆ
ಅವರ ನಿಜ ಬಣ್ಣ ಬಯಲಾಗಿ
ಜೈಲು ಸೇರಿದಾಗ ಸುಮ್ಮನೇ
ರೋದಿಸುತ್ತಾರೆ


*೨*

*ಕಾಳಿಯಾಗುತ್ತಾಳೆ*

ನನ್ನವಳ ಬಂಗಾರ ,ಬೆಳ್ಳಿ.ವಜ್ರದ
ಆಭರಣಗಳಿಂದ ಅಲಂಕರಿಸಿ
ಆರಾಧನೆ ಮಾಡಿದರೆ
ಶ್ರೀದೇವಿಯಾಗುತ್ತಾಳೆ
ಬರೀ ಹೂಗಳು, ಅರಿಷಿಣ ,ಕುಂಕುಮ
ಇವುಗಳಿಂದ ಸರಳವಾಗಿ
ಆರಾಧಿಸಿದರೆ ಭದ್ರ
ಕಾಳಿಯಾಗುತ್ತಾಳೆ

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

12 ಡಿಸೆಂಬರ್ 2017

ನನ್ನ ಖುಷಿ (ಶಿಶು ಗೀತೆ)

*ನನ್ನ ಖುಷಿ*

ನೀರು ಬೇಕು ನನಗೆ ಈಗ
ದಾಹ ನೀಗಲು
ಕುಡಿಯಬೇಕು ನಳದ ನೀರು
ಮನವ ತಣಿಯಲು

ಬಾಟಲಿಯ ನೀರು ಮುಚ್ಚಿ
ಚೀಲದಲಿಡುವೆನು
ಅಮ್ಮನ ಕಣ್ಣ ತಪ್ಪಿಸಿ  ನಳದ
ನೀರು ಕುಡಿವೆನು

ಬಿಸಿಯೊ ತಂಪೋ ನೀರ ಬಗ್ಗೆ
ನಾನು ಅರಿಯೆನು
ರಭಸದಿಂದ ಬರುವ ನೀರಿಗೆ
ಬೊಗಸೆ ಒಡ್ಡುವೆನು

ಯಾರು ಏನು ನೋಡುವರೆಂಬ
ಪರಿವೆ ನನಗಿಲ್ಲ
ನನ್ನ ಖುಷಿಯ ಅನುಭವಿಸುವೆ
ಎಂದು ಬಿಡಲ್ಲ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (೪ನಲಿವಿನ ಹನಿಗಳು)

*೧*
*ವಜ್ರದುಂಗುರ*


ನಲಿಯುತ ನನ್ನ ಬಳಿ ಬಂದವಳು
ಕೇಳಿದಳು ವಜ್ರದುಂಗುರ
ನಾನು ಕೊಡಿಸದಿದ್ದಾಗ
ಉಲಿದಳು ಆಕೆ   ನಾನೊಬ್ಬ
ಪ್ರೀತಿಯ ಬೆಲೆ ತಿಳಿಯದ ಗಮಾರ

*೨*

*ನಲ್ಲ*

ನೋವು ನಲಿವಿನಲಿ ಜೊತೆಗಿರುವೆ
ಎಂದಿದ್ದ ನನ್ನ ನಲ್ಲ
ಮದುವೆಯಾಗು ಎಂದಾಕ್ಷಣ
ಕಾಣಿಸದೇ ಮರೆಯಾಗಿ
ಕೈ ಕೊಟ್ಟನಲ್ಲ !

*೩*

*ಸುಲಿಯುತಿಹಳು*

ಮದುವೆಗೆ ಮೊದಲು ನನ್ನವಳು
ನುಲಿಯುತ್ತಿದ್ಸಳು
ಮದುವೆಯಾದ ಹೊಸದರಲ್ಲಿ
ನಲಿಯುತ್ತಿದ್ದಳು
ಈಗ ಕೊಳ್ಳುಬಾಕಳಾಗಿ ನನ್ನ ಜೇಬ
ಸುಲಿಯುತಿಹಳು !

*೪*

*ಸಮ್ಮಿಶ್ರ ಸರ್ಕಾರ*

ಕೈಯಲಿ ಕಮಲ  ಹಿಡಿದ ಹುಡುಗ
ನಾನು ಬಿ.ಜೆ ಪಿ ಯವನು ನನ್ನ
ಮದುವೆಯಾಗೆಂದ ಅವಳ ಬಳಿಸಾರಿದ
ಸರಸರ
ನಾನು ಕಾಂಗ್ರೆಸ್ ನವಳು ಆಗುವುದಿಲ್ಲ
ಎಂದು ಅವಳು ತೋರಿದಳು ನಕಾರದ
ಕರ
ಪವಾಡ ಎಂಬಂತೆ ಈಗ ನಡೆಯುತ್ತಿದೆ
ಅವರಿಬ್ಬರ ಸಂಸಾರದ ಸಮ್ಮಿಶ್ರ
ಸರ್ಕಾರ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

11 ಡಿಸೆಂಬರ್ 2017

ಸಾಧಿಸಿ ತೋರುವೆ (ಹನಿ)

ಕತ್ತಲು ಬೆಳಕಿನ ಜೀವನ ನನದು
ಬೆಳಕು ಕಂಡಿಲ್ಲ  ಮೋಡ ಕವಿದು
ನಿನ್ನೆ ಇದ್ದ ನೌಕರಿ ಇಂದು ಇಲ್ಲ
ಕೈ ಹಿಡಿದ ‌ನಲ್ಲೆಯ ಸುಳಿವಿಲ್ಲ
ಆದರೂ ನಾನು ದೃತಿಗೆಟ್ಟಿಲ್ಲ
ಬರುವುದು ಒಳ್ಳೆ ದಿನ ಸುಳ್ಳಲ್ಲ
ಸಾಧಿಸಿ ತೋರುವೆ ಜಗಕ್ಕೆಲ್ಲಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನ

ಹನಿಗವನ

ಬಾಳುವೆ

ಕರದಲ್ಲಿರುವುದು ನನ್ನ ಕೂಸು
ಬೆಳಗಿ ನನ್ನೆದೆಗೆ ಆನಂದ ಸೂಸು
ಮರಳು ಕೊಚ್ಚಿಹೋಗದಿರಲಿ
ಮರುಳು ಮಾಡದಿರಲಿ ಸಲಿಲ
ಕರಗತವಾಗಬೇಕಿದೆ ಬಾಳುವೆ
ನಾನು ನಿನ್ನೊಂದಿಗೆ  ಬಾಳುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*