11 ಡಿಸೆಂಬರ್ 2017

ಸಾಧಿಸಿ ತೋರುವೆ (ಹನಿ)

ಕತ್ತಲು ಬೆಳಕಿನ ಜೀವನ ನನದು
ಬೆಳಕು ಕಂಡಿಲ್ಲ  ಮೋಡ ಕವಿದು
ನಿನ್ನೆ ಇದ್ದ ನೌಕರಿ ಇಂದು ಇಲ್ಲ
ಕೈ ಹಿಡಿದ ‌ನಲ್ಲೆಯ ಸುಳಿವಿಲ್ಲ
ಆದರೂ ನಾನು ದೃತಿಗೆಟ್ಟಿಲ್ಲ
ಬರುವುದು ಒಳ್ಳೆ ದಿನ ಸುಳ್ಳಲ್ಲ
ಸಾಧಿಸಿ ತೋರುವೆ ಜಗಕ್ಕೆಲ್ಲಾ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನ

ಹನಿಗವನ

ಬಾಳುವೆ

ಕರದಲ್ಲಿರುವುದು ನನ್ನ ಕೂಸು
ಬೆಳಗಿ ನನ್ನೆದೆಗೆ ಆನಂದ ಸೂಸು
ಮರಳು ಕೊಚ್ಚಿಹೋಗದಿರಲಿ
ಮರುಳು ಮಾಡದಿರಲಿ ಸಲಿಲ
ಕರಗತವಾಗಬೇಕಿದೆ ಬಾಳುವೆ
ನಾನು ನಿನ್ನೊಂದಿಗೆ  ಬಾಳುವೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಹನಿಗವನಗಳು (ನೋವು)

*ಹನಿಗವನಗಳು*

*೧*

*ನನ್ನವಳು*

ನಮ್ಮ ಜೀವನದಲ್ಲಿ ಸಹಜ
ನಲಿವು ನೋವುಗಳು
ಮೊದಲನೆಯದು ನಾನು
ಎರಡನೆಯದು
ನನ್ನವಳು !

*೨*

*ಹಬ್ಬ*

ಈ ರಾಜಕಾರಣಿಗಳ ಆಟಗಳಿಗೆ
ಜನರು ಅನುಭವಿಸಿದ ನೋವುಗಳು
ಒಂದೇ ಎರಡೆ......ಅಬ್ಬಾ
ಇವರಿಗಿದೆ ಬರುವ ಚುನಾವಣೆಯಲಿ
ಮಾರಿ ಹಬ್ಬ .!

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

10 ಡಿಸೆಂಬರ್ 2017

ಹನಿಗವನಗಳು (ಹೂ)



*ಹನಿಗವನಗಳು*
*೧*
*ಹುಡುಕಾಟ*

ಹೂ ನಗೆ ಬೀರಿ ಕರೆದವಳೆ
ಮುಗುಳ್ನಗೆ ತೋರಿ ನಲಿದವಳೆ
ಈಗೆಲ್ಲಿರುವೆ ?
ಅವಳಂದಳು
ದೊಡ್ಡ ಶ್ರೀಮಂತ ನ
ಹುಡುಕಾಟದಲ್ಲಿರುವೆ

*೨*
*ತೂಕ*

ಮೊದಲು ನನ್ನವಳು
ಮಲ್ಲಿಗೆ ಹೂವಿನ
ತೂಕದವಳು
ಈಗ
ಕ್ವಿಂಟಲ್ ಗಟ್ಟಲೆ
ತೂಗುವವಳು .

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

06 ಡಿಸೆಂಬರ್ 2017

ನನ್ನ ಕನ್ನಡ ಮೇಷ್ಟ್ರು ( ಲೇಖನ)

ನನ್ನ ಕನ್ನಡ ಮೇಷ್ಟ್ರು

ನನ್ನ ಪ್ರಾಥಮಿಕ ಶಾಲಾ ಶಿಕ್ಷಕರಾದ ಟಿ.ಎನ್ ತಿಪ್ಪೇಸ್ವಾಮಿ ಸರ್ ರವರು ಅಂದು ನಮಗೆ ಕನ್ನಡ ಪದ್ಯಗಳನ್ನು ಪ್ರತಿ  ಶನಿವಾರ  ರಾಗವಾಗಿ "ವಸಂತ     ಬಂದ. ಋತುಗಳ ರಾಜ..." ಕನ್ನಡಕೆ ಹೋರಾಡು ಕನ್ನಡದ ಕಂದ ......." ಈಗೆ  ಹಾಡಿ ನಮಗೂ ಹೇಳಿಕೊಡುವ ರೀತಿ ಹಾಗೂ ನಮಗೆ ಅವರು ಮಾಡುವ ರೀತಿ ಆಸಕ್ತಿ ಕೆರಳಿಸುವ ಬೋಧನ ಕ್ರಮ ನೋಡಿ ಅಂದೆ ನಾನು ಶಿಕ್ಷಕನಾಗಲು ತೀರ್ಮಾನಕ್ಕೆ ಬಂದೆ ಗುರುಗಳ ಆಶೀಉರ್ವಾದದಿಂದ ಇಂದು ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷನಾಗಿ ಹದಿನೆಂಟು ವರ್ಷದಿಂದ ಸೇವೆ  ಸಲ್ಲಿಸುತ್ತಿದ್ದೇನೆ .ನಾನು ಕನ್ನಡದಲ್ಲಿ ಪ್ರಬಂಧ, ಪತ್ರಲೇಖನ ದಿನಚರಿ ಬರೆಯಲು ಅಂದು ಪ್ರೇರೇಪಣೆ ನೀಡಿದ್ದರಿಂದ ಇಂದು ಕವನ‌,ಕಥೆ,ಲೇಖನ ಬರೆಯುತ್ತಿದ್ದೇನೆ ಈಗಾಗಲೇ ಒಂದು ಕವನ  ಸಂಕಲನ ಬಿಡುಗಡೆಯಾಯಿತು ಮತ್ತೋಂದರ ಬಿಡುಗಡೆಗೆ ಸಿದ್ದತೆ ಆರಂಭವಾಗಿದೆ . ನಾನು ಈ ಮಟ್ಟಿಗೆ ಬೆಳೆಯಲು ಸಾದ್ಯವಾದ ಹೊಳಲ್ಕೆರೆ ತಾಲ್ಲೂಕಿನ ಚೌಡಗೋಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ  ಶಾಲೆ ಹಾಗೂ ಗುರುಗಳಾದ ಟಿ
ಎನ್ ತಿಪ್ಪೇಸ್ವಾಮಿ ಸರ್ ರವರನ್ನು ಹೇಗೆ ಮರೆಯಲಿ?

ಸಿ.ಜಿ.ವೆಂಕಟೇಶ್ವರ
ಗೌರಿಬಿದನೂರು