19 ನವೆಂಬರ್ 2017

ಗಜ಼ಲ್ ೯(ಕವಿತೆ)

ಗಜ಼ಲ್ ೯

ಭಾವನೆಗಳ ವ್ಯಕ್ತ ಪಡಿಸಲು  ಬರೆಯುವೆ ಕವಿತೆ
ನನ್ನ ಆತ್ಮ ತೃಪ್ತಿಗಾಗಿ ಸೃಷ್ಟಿ ಮಾಡುವೆ   ಕವಿತೆ

ನವರಸಗಳ ಬಳಕೆಯಿಲ್ಲದಿದ್ದರೂ ರಸವತ್ತಾದ
ಸಮರಸ ತತ್ವ ಸಾರುವ ರಚನೆ ಅದುವೆ ಕವಿತೆ

ಭಾವನೆಗಳ ತಾಕಲಾಟ ಬರೆವ ಪೀಕಾಲಾಟ
ಮುಗಿಸಿ ಮಗು ಪಡೆವಂತೆ ಹಡೆಯುವೆ ಕವಿತೆ

ಪ್ರಾಸ ತ್ರಾಸಗಳ ಅರಿವಿಲ್ಲದ ನೋವು ನಲಿವ ಮರೆಯದ
ಸರಿ ತಪ್ಪುಗಳ ಸಂಘರ್ಷ ಮುಗಿಸಿ ಪಡೆಯುವೆ  ಕವಿತೆ

ಸೀಜೀವಿಯ ಹೃದಯ  ಭಾಷೆಯನು ಸಹೃದಯರಿಗೆ
ತಲುಪಿಸಲು  ಅನವರತ ನಾ ರಚಿಸುವೆ ಕವಿತೆ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ