21 ನವೆಂಬರ್ 2017

*ಕರ್ಮ* ಆದ್ಯಾತ್ಮ ಚಿತ್ರ ಕವನ

*ಕರ್ಮ* ಆದ್ಯಾತ್ಮ ಚಿತ್ರ ಕವನ

ಬೀಸಬೇಕು ನಾವೆಲ್ಲರು ರಾಗಿಯ
ಸೋಸಬೇಕು ಅನ್ಯ  ಕಸಕಡ್ಡಿಯ
ಕಾಯಕವೆ ಕೈಲಾಸ ಪಾಲಿಸಬೇಕು
ಪಾಯಸವು ಜೀವನ ಸವಿಯಬೇಕು

ಬೀಸು ಕಲ್ಲಿನಂತಹ ಜೀವನದಿ
ಬೀಸುತಿರಬೇಕು ನಿರಂತರ
ಈಸೀಸೇ ಧಾನ್ಯ ಹಾಕಬೇಕು
ಇಲ್ಲಿ ಮಿತ ಆಸೆಗಳಿರಬೇಕು

ತಾಳ್ಮೆಯಿಂದ ಏಕಾಗ್ರತೆಯಲಿ ಬೀಸಿದರೆ
ಬರುವುದು ಭಕ್ತಿ ಯೆಂಬ ಹಿಟ್ಟು
ಅದ ನೋಡಿ ನಮಗಾಗುವುದು
ಆತ್ಮಾನಂದ ಸ್ವಯಂ ತೃಪ್ತಿ

ನಮ್ಮ ಕರ್ಮ ನಾವು ಮಾಡಬೇಕು
ಫಲಾಫಲ  ಭಗವಂತಗೆ ಬಿಡಬೇಕು
ನಾಳಿನ ಕೂಳಿಗೆ ಇಂದು ದುಡಿಬೇಕು
ಕೊನೆಗೆ ಪರಮಾತ್ಮನಲಿ ಲೀನವಾಗಬೇಕು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ