22 ಮೇ 2019

ನಾನು ಬದಲಾಗುತ್ತಿದ್ದೇನೆ (ಕವನ)

*ನಾನು ಬದಲಾಗುತ್ತಿದ್ದೇನೆ*

ಹೌದು ನಾನು ಬದಲಾಗುತ್ತಿದ್ದೇನೆ
ಅಪ್ಪ, ಅಮ್ಮ ಅಣ್ಣ ತಮ್ಮ
ಬಂಧು ,ಬಳಗವನ್ನು ಪ್ರೀತಿಯಿಂದ
ನೋಡಿಕೊಂಡೆನು .
ನಾನು ಈಗ ನನ್ನನ್ನೂ ಪ್ರೀತಿಸಲು
ಕಲಿಯುತ್ತಿದ್ದೇನೆ

ಹೌದು ನಾನು ಬದಲಾಗುತ್ತಿದ್ದೇನೆ
ನಾನು ,ನನ್ನಿಂದ ನಾನು‌ಇದ್ದರೆ ಮಾತ್ರ
ನನ್ನ ಸಂಸಾರ, ನನ್ನ ಊರು,ಎಂಬ ಸಂಕುಚಿತ ಮನೋಭಾವ ಬದಲಾಗಿದೆ
ಪ್ರಪಂಚದ ಭಾರ ಹೊರಲು ನಾನು
ಅಟ್ಲಸ್ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ತರಕಾರಿ ,ಹಣ್ಣು ,ಮಾರುವ ಬಡವರೊಂದಿಗೆ ಚೌಕಾಸಿ ಮಾಡಿರುವೆ.
ಚಿಲ್ಲರೆ ಹಣಕ್ಕಾಗಿ ಟ್ಯಾಕ್ಸಿ ಚಾಲಕನೊಂದಿಗೆ ಜಗಳವಾಡಿರುವೆ.
ಚೌಕಾಸಿ ಮಾಡದೆ ಕೊಟ್ಟ ಹಣದಿಂದ ಅವರ ಮಕ್ಕಳ ಶಿಕ್ಷಣ ಬೆಳಗುವುದ ಕಂಡು
ಸಂತಸ ಪಡುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ಅಹಂ ನಿಂದ ಬ್ರಹ್ಮನೂ ಕೆಟ್ಟ
ಎಂದು ತಿಳಿದಿದ್ದರೂ ಒಣ ಪ್ರತಿಷ್ಠೆ
ಅಹಂಕಾರದಿಂದ ಸಂಬಂಧಗಳ
ಕಳೆದುಕೊಂಡ ಮೇಲೆ
ಈಗ ಸಂಬಂಧಗಳ ಉಳಿಸಿ
ಬೆಳೆಸಲು ಅಹಂ ಕಡಿಮೆ
ಮಾಡಿಕೊಳ್ಳಲು ಕಲಿಯುತ್ತಿದ್ದೇನೆ.

ಹೌದು ನಾನು ಬದಲಾಗುತ್ತಿದ್ದೇನೆ
ಬೇರೆಯರೊಂದಿಗೆ ಹೋಲಿಕೆ
ಮಾಡಿ, ಬಟ್ಟೆಯ ಒಂದು ಕಲೆ
ನೋಡಿ‌ ಬೇಸರ ಪಟ್ಟಿರುವುದನ್ನು
ಮರೆತು ಬಟ್ಟೆಗಿಂತ ನಾನು ನಡೆಯುವಬಟ್ಟೆ ಮತ್ತು ವ್ಯಕ್ತಿತ್ವ ಮುಖ್ಯ
ಎಂಬುದನ್ನು ಅರಿಯುತ್ತಿದ್ದೇನೆ.

ಹೌದು ನಾನೂ ಬದಲಾಗುತ್ತಿದ್ದೇನೆ
ನನ್ನ ಸಂತೋಷವನ್ನು ಬೇರೆಯವರು
ನಿರ್ಧರಿಸಯವ ಕಾಲವಿತ್ತು
ಪ್ರತಿದಿನವೂ ಜೀವಿಸುವ
ಬಾಹ್ಯಸಂತೋಷಕ್ಕಿಂತ
ಆಂತರಿಕ ಸಂತೋಷ ಮುಖ್ಯ
ನನ್ನ ಸಂತೋಷಕ್ಕೆ ನಾನೇ ಕಾರಣ
ಎಂಬ ಸತ್ಯ ಅರಿಯುತ್ತಿದ್ದೇನೆ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*













11 ಮೇ 2019

ಬೇಗ (ಹನಿ)

*ಬೇಗ*

ಮುಗಿಲ ಮಲ್ಲಿಗೆ
ಗಗನದ ತಾರೆ
ಕಡಲ ಮುತ್ತು
ಏನೇನೋ ತಂದು
ಕೊಡುವ ವಾಗ್ದಾನ
ಮಾಡಿದ್ದ ಹುಡುಗ .
ಅವಳು ಮದುವೆಯಾಗು
ಎಂದಾಗ ಹೋರಟೇಬಿಟ್ಟ
ಬರುವೆನೆಂದು ಬೇಗ .

*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*

ಮಾಯ (ಹನಿ)

*ಮಾಯ*

ಅಂದು
ಅವಳು ಮಾತನಾಡುತ್ತಿದ್ದರೆ
ಮೈಯಲ್ಲಾ ಕಿವಿ ,ತನ್ಮಯ.
ಇಂದು
ಅವಳು ಮಾತನಾಡಲು
ಶುರುಮಾಡಿದರೆ
ಅವನು ಮಾಯ

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

ನಾವೆಲ್ಲ ಒಂದು(ದೇಶ ಭಕ್ತಿ ಗೀತೆ)

*ನಾವೆಲ್ಲ ಒಂದು*

ಬನ್ನಿ ಸೇವೆ ಮಾಡೋಣ
ತಾಯ ಸೇವೆ ಮಾಡೋಣ

ಯಾರೂ ಇಲ್ಲ ಹಿಂದೆ ಮುಂದು
ಕೂಗಿ ಹೇಳಿ ನಾವೆಲ್ಲ ಒಂದು

ಭಾರತಾಂಭೆ ಪುತ್ರರು ನಾವು
ಕೊಡದಿರೋಣ ಮಾತೆಗೆ ನೋವು

ಸರ್ವ ಜನಾಂಗದ ಬೀಡಿದು
ಸಾಧು ಸಂತರ ನಾಡಿದು

ಹಚ್ಚೋಣ ದೇಶಭಕ್ತಿಯ ದೀವಿಗೆ
ಜಯಘೋಷ ಮೊಳಗಲಿ ತಾಯಿಗೆ

ದೇಶಭಕ್ತಿ ಇರಲಿ ಕಣ ಕಣದಲಿ
ಮಾತೆಗೆ ನಮಿಸೋಣ ತನು ಮನದಲಿ‌


*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*

05 ಮೇ 2019

ಪ್ರಕೃತಿಯೇ ದೈವವು (ಕವನ)

*ಪ್ರಕೃತಿಯೆ ದೈವವು*

ಧರಣಿಯಲಿ ಭರಣಿಯಾಗಮನದಿ
ಹಸಿರೊದ್ದ ಭೂಮಾತೆಯ
ನೋಡಲು ನಯನಾನಂದ

ತರುಲತೆಗಳ ತೋರಣ
ಭೂಮಾತೆಗೆ ಅಲಂಕಾರ
ತರಣಿಯ ಸೊಬಗೇ ಅಂದ

ಪುಷ್ಪಗಳ ಮತ್ತುವ
ಪತಂಗಗಳ ಹಿಂಡು
ಪುಷ್ಪಪಾತ್ರೆಯಾದ ಭುವಿಯೇ ಚೆಂದ

ಸುಜಲದ ಹಿನ್ನಲೆಯಲ್ಲಿ
ಸುಫಲವ ಹೊಂದಿರುವ
ಕಣ್ಣಿಗೌತಣವ ನೀಡುವ ಧರೆಯೇ ಅಂದ

ಭುವಿಗೂ ಬಾನಿಗೂ
ಹಬ್ಬಿದ ಇಂದ್ರಚಾಪದ ವರ್ಣಗಳು
ಭೂಮಿಗೆ ಅಲಂಕಾರ

ಪ್ರಕೃತಿಗೆ ಸಮವಿಲ್ಲ
ಪ್ರಕೃತಿಯೆ ದೈವವು
ಪ್ರಕೃತಿಯು ನಮ್ಮ ಜೀವವು

*ಸಿ ಜಿ.ವೆಂಕಟೇಶ್ವರ*
*ಗೌರಿಬಿದನೂರು*