30 ಜೂನ್ 2018

ಗುಟ್ಟೇನು (ಭಾವಗೀತೆ)

*ಗುಟ್ಟೇನು*

ಶ್ವೇತ ವಸ್ತ್ರ ದಾರಿ ನೀರೆ
ಹೇಳಿ ಬಿಡೆ ನೀನ್ಯಾರೆ

ಹಸಿರ ವನದಲಿ ಕುಳಿತಿರುವೆ
ಕರದಲಿ ಪುಸ್ತಕ ಹಿಡಿದಿರುವೆ
ಮಸ್ತಕಕೆ ಮೇವು ನೀಡಿರುವೆ
ಸಮಸ್ತದೊಳು ಒಂದಾಗುವ ಪರಿಯ ಹೇಳೆ

ಬಣ್ಣ ಬಣ್ಣದ ಮರದಡಿಯಲಿ
ಬಣ್ಣದ ಕನಸಹರಡಿ ಕುಳಿತ ಬಾಲೆ
ಲೋಕದ  ಜಂಜಡ ತೊರೆದು
ಸುಖವಾಗಿರುವ ರೀತಿ ನಮಗೂ ಹೇಳೆ

ನಿನ್ನೆಗಳ ಗೊಡವೆ ನಿನಗಿಲ್ಲ
ನಾಳೆಗಳ ಚಿಂತೆ ಸುಳಿದಿಲ್ಲ
ವರ್ತಮಾನದಿ ಬದುಕುತಿರುವ
ಮಂದಹಾಸದ  ಗುಟ್ಟೇನು ಹೇಳೆ?

*ಸಿ ಜಿ ವೆಂಕಟೇಶ್ವರ*
*ಗೌರಿಬಿದನೂರು*





28 ಜೂನ್ 2018

ಹನಿಗವನಗಳು



ಅವಳೆಂದಳು
ನನ್ನ ಜೊತೆಗಿರುವವರೆಗೆ
ಸುಖ ಕೊಡುವೆ ನಿನಗೆ
ನೀನೇ ಇಂದ್ರ ಚಂದ್ರ ನನಗೆ
ನಿನ್ನ ಹಣ ಮುಗಿದ ಮೇಲೆ
ಖಂಡಿತ ಕೈ ಕೊಡುವೆ ನಿನಗೆ



ಕೇವಲ ಸುಖವಲ್ಲದೆ
ಕಷ್ಟದಲ್ಲೂ ಜೊತೆಗಿರುವೆನೆಂದೆ
ಅವಳೊಲವ ಪಡೆಯಲು
ದೂರಮಾಡಿಕೊಂಡೆ ನನ್ನ ತಂದೆ
ನನ್ನೊಲವ ಲೆಕ್ಕಿಸದೆ ಅವಳೆಂದಳು‌
ನೀ ನನಗೇನು ತಂದೆ ?

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

27 ಜೂನ್ 2018

ನಮ್ಮ ಜೀವನ‌ಶೈಲಿ ಹೇಗಿರಬೇಕು?( ಸಂಗ್ರಹ‌ಲೇಖನ)

*ಯಾವ ಸಮಯದಲ್ಲಿ ನಿದ್ದೆ ಹೋಗಬೇಕು?*

ಜೇಮ್ಸ್ ಪಾಂಗ್ ರವರ ವಿಚಾರಗಳು, ಸಲಹೆಗಳು.

ನಿದ್ರೆ ಮಾಡಲು ಅತ್ಯುತ್ತಮ ಸಮಯ ಎಂಬುದು ಇದೆಯೇ? *ನಮ್ಮಲ್ಲಿ ಒಂದು ಸಲಹೆಯ ಮಾತಿದೆ. ಬೇಗ ಮಲಗಿ ಬೇಗ ಎದ್ದೇಳಿ. ಅದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಎಷ್ಟು ಸಮಂಜಸ?* ಹಾಗಿದ್ದರೆ, ತಡವಾಗಿ ಮಲಗಿ ತಡವಾಗಿ ಏಳುವುದು ಸೂಕ್ತವೇ?

*ವಾಸ್ತವವಾಗಿ ಹೇಳಬೇಕೆಂದರೆ, ನಿಮ್ಮ ದೇಹದಲ್ಲಿ ಅದ್ಭುತವಾದ ಜೈವಿಕ ಗಡಿಯಾರವೊಂದು ಚಾಲನೆಯಲ್ಲಿದೆ.* ಇದು ಅತ್ಯಂತ ನಿಖರವಾದುದು. ಅದು ನಿಮ್ಮ ನಿದ್ರೆಯ ಅವಧಿ ಸಹಿತವಾಗಿ, ನಿಮ್ಮ ದೇಹದ ವಿವಿಧ ಕಾರ್ಯವಿಧಾನಗಳನ್ನು ನಿಯಂತ್ರಣದಲ್ಲಿ ಇಡುತ್ತದೆ.

*ರಾತ್ರಿ ೧೧ಘಂಟೆಯಿಂದ ಬೆಳಗುಜಾವದ ೩ ಘಂಟೆಯವರೆಗೆ*, ಬಹುಪಾಲು ನಿಮ್ಮ ರಕ್ತಪರಿಚಲನೆಯು ನಿಮ್ಮ *ಯಕೃತ್ತಿ(ಲಿವರ್) ನಲ್ಲಿ* ಕೇಂದ್ರೀಕೃತವಾಗಿರುತ್ತದೆ. ನಿಮ್ಮ ಯಕೃತ್ತು ಹೆಚ್ಚಿನ ರಕ್ತಸಂಚಯನ ಹೊಂದಿದ್ದರಿಂದ  ಹೆಚ್ಚಿನ ಗಾತ್ರದ್ದಾಗುತ್ತದೆ. ಇದು ಅತ್ಯಂತ ಮಹತ್ವದ ಅವಧಿಯಾಗಿದ್ದು, ಈ ಸಮಯದಲ್ಲಿ ನಿಮ್ಮ ದೇಹವು ವಿಷಪೂರಿತ ಅಂಶಗಳನ್ನು ಹೊರಹಾಕುವ ಕಾರ್ಯವನ್ನು ಮಾಡುತ್ತಿರುತ್ತದೆ. ಇಡೀ ದಿನದಲ್ಲಿ ಸಂಗ್ರಹವಾದ ದೈಹಿಕ ವಿಷಸಂಗ್ರಹವನ್ನು ನಿವಾರಿಸುವ ಹಾಗೂ ವಿಭಜಿಸುವ ಕಾರ್ಯವನ್ನು ನಿಮ್ಮ ಯಕೃತ್ತು ಮಾಡುತ್ತಿರುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ನೀವು ನಿಗದಿತ ಸಮಯದಲ್ಲಿ ನಿದ್ರೆ ಮಾಡದೇ ಇದ್ದರೆ, ನಿಮ್ಮ ಯಕೃತ್ತು ವಿಷಕಾರಿ ತ್ಯಾಜ್ಯಗಳನ್ನು ನಿವಾರಿಸುವ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸಲು ಸಾಧ್ಯವಾಗದು.

*ನೀವು ರಾತ್ರಿ ೧೧ರೊಳಗೆ ನಿದ್ರೆಗೆ ಹೋದರೆ, ನಿಮ್ಮ ದೇಹದ ಶುದ್ಧೀಕರಣ ಕ್ರಿಯೆಗೆ ಪೂರ್ತಿ ನಾಲ್ಕು ತಾಸುಗಳ ಅವಧಿ ಸಿಗುತ್ತದೆ*

ನೀವು ರಾತ್ರಿ ೧೨ಕ್ಕೆ ನಿದ್ದೆ ಹೋದರೆ, ನಿಮಗೆ ಮೂರು ತಾಸುಗಳ ಅವಧಿ ಸಿಗುತ್ತದೆ.

ನೀವು ರಾತ್ರಿ ೧ಕ್ಕೆ ಮಲಗಿದರೆ, ನಿಮಗೆ ಎರಡು ತಾಸುಗಳ ಅವಧಿ ಲಭ್ಯವಾಗುತ್ತದೆ.

ಮತ್ತು, ನೀವು ರಾತ್ರಿ ಎರಡು ಗಂಟೆಗೆ ಮಲಗಿದರೆ ನಿಮಗೆ ವಿಷಕಾರಿ ವಸ್ತು ನಿವಾರಣೆಗೆ, ಕೇವಲ ಒಂದೇ ತಾಸಿನ ಅವಧಿ ಸಿಗುತ್ತದೆ.

*ಒಂದುವೇಳೆ, ನೀವು ಬೆಳಗಿನ ಜಾವ ಮೂರು ಘಂಟೆಗೆ ನಿದ್ದೆ ಹೋದರೆ?*
*ದುರ್ದೈವದ ಸಂಗತಿಯೆಂದರೆ, ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳ ನಿವಾರಣೆ ಮಾಡಲು ವಸ್ತುಶಃ ಏನೂ ಸಮಯವೇ ಸಿಗುವದಿಲ್ಲ.* ನೀವು ಇದೇ ರೀತಿ ನಿಮ್ಮ ನಿದ್ರೆಯ ಸಮಯ ಪದ್ಧತಿಯನ್ನು ಮುಂದುವರೆಸಿದ್ದಲ್ಲಿ, ಕಾಲಾಂತರದಲ್ಲಿ, ವಿಷಕಾರಿ ವಸ್ತುಗಳು ನಿಮ್ಮ ದೇಹದಲ್ಲಿ ಸಂಗ್ರಹವಾಗುತ್ತಲೇ ಇರುತ್ತವೆ. ಇದರ ನಂತರ ಏನು ಆಗುತ್ತದೆ ಎಂಬುದು ನಿಮಗೇ ಗೊತ್ತಲ್ಲವೇ?

*ನೀವು ತಡವಾಗಿ ಮಲಗಿ, ತಡವಾಗಿ ಎದ್ದರೆ ಆಗುವ ಪರಿಣಾಮವೇನು?*

ನೀವು ಎಂದಾದರೂ ರಾತ್ರಿ ತಡವಾಗಿ ನಿದ್ರೆ ಹೋಗಿದ್ದೀರಾ? ಮರುದಿನ ನೀವು ಎಷ್ಟೇ ತಡವಾಗಿ ಎದ್ದರೂ ಸಹ ನಿಮಗೆ ಬಹಳೇ ಆಯಾಸವಾಗುವ ಅನುಭವ ಆಗಿದೆಯೇ?

*ಖಂಡಿತವಾಗಿಯೂ ತಡವಾಗಿ ಮಲಗಿ ತಡವಾಗಿ ಏಳುವ ವಿಧಾನ ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕರ. ನಿಮ್ಮ ದೇಹದಿಂದ ವಿಷಕಾರಿ ವಸ್ತುಗಳ ನಿವಾರಣೆಗೆ ಸಾಕಷ್ಟು ಸಮಯ ಸಿಗದಿರುವುದಷ್ಟೇ ಅಲ್ಲ, ನಿಮ್ಮ ದೇಹವು ಅದರ ಅತಿಮುಖ್ಯ ಕಾರ್ಯನಿರ್ವಹಣೆಯಿಂದಲೂ ಸಹ ವಂಚಿತವಾಗುತ್ತದೆ.*

*ಬೆಳಗಿನ ಜಾವದ ೩ಘಂಟೆಯಿಂದ ೫ಘಂಟೆಯವರೆಗೆ,* ಬಹುಪಾಲು ರಕ್ತಪರಿಚಲನೆಯು ನಿಮ್ಮ *ಪುಪ್ಫುಸ*(lung)ದಲ್ಲಿ ಕೇಂದ್ರೀಕೃತವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು? ಸರಿ, ಆವಾಗ ನೀವು ವ್ಯಾಯಾಮ ಮಾಡಬೇಕು ಹಾಗೂ ಶುದ್ಧ ಗಾಳಿಯಲ್ಲಿ ಉಸಿರಾಡಬೇಕು. ನಿಮ್ಮ ದೇಹದಲ್ಲಿ ಒಳ್ಳೆಯ ಶಕ್ತಿಯನ್ನು ಹೊಂದಬೇಕು, ಪ್ರಮುಖವಾಗಿ ಒಂದು ಹೂದೋಟದಲ್ಲಿ ಇರಬೇಕು. ಈ ಅವಧಿಯಲ್ಲಿ ವಾತಾವರಣವು ಬಹಳ ಶುದ್ಧವಾಗಿದ್ದು, ಸಾಕಷ್ಟು ಲಾಭದಾಯಕ ಋಣವಿದ್ಯುತ್ ಕಣಗಳನ್ನು ಒಳಗೊಂಡಿರುತ್ತದೆ.

*ಬೆಳಗಿನ ಜಾವದ ೫ಘಂಟೆಯಿಂದ ಮುಂಜಾನೆ ೭ ಘಂಟೆಯ ಅವಧಿಯಲ್ಲಿ* ರಕ್ತಪರಿಚಲನೆಯು ಹೆಚ್ಚಿನದಾಗಿ *ದೊಡ್ಡ ಕರುಳಿನಲ್ಲಿ* ಕೇಂದ್ರೀಕೃತವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಏನು ಮಾಡಬೇಕು? ನೀವು ವಿಸರ್ಜನಾ ಕಾರ್ಯ ಮಾಡಬೇಕು! ನಿಮ್ಮ ದೊಡ್ಡ ಕರುಳಿನಲ್ಲಿ ಸಂಗ್ರಹಿತವಾದ ಎಲ್ಲ ಅನವಶ್ಯಕಗಳನ್ನು ಹೊರಹಾಕಬೇಕು. ನಿಮ್ಮ ದೇಹವು ಹೆಚ್ಚು ಪೌಷ್ಟಿಕಾಂಶಗಳನ್ನು ದಿನವಿಡೀ ಸ್ವೀಕರಿಸಲು ನಿಮ್ಮ ದೇಹವನ್ನು ಸಿದ್ಧಗೊಳಿಸಿಕೊಳ್ಳಬೇಕು.

*ಮುಂಜಾನೆ ೭ರಿಂದ ೯ಘಂಟೆಯವರೆಗೆ,* ಬಹುತೇಕ ರಕ್ತೊರಿಚಲನೆಯು ನಿಮ್ಮ *ಉದರದಲ್ಲಿ ಅಂದರೆ, ಹೊಟ್ಟೆಯಲ್ಲಿ* ಕೇಂದ್ರೀಕೃತವಾಗಿರುತ್ತದೆ. ಈ ಅವಧಿಯಲ್ಲಿ ನೀವು ಏನು ಮಾಡಬೇಕು? ನಿಮ್ಮ ಬೆಳಗಿನ ಉಪಾಹಾರವನ್ನು ಮಾಡಬೇಕು! ಇದು ನಮಗೆ ಆ ದಿನದ ಅತ್ಯಂತ ಪ್ರಮುಖವಾದ ಊಟವಾಗಿರುತ್ತದೆ. ಬೆಳಗಿನ ಉಪಾಹಾರದಲ್ಲಿ ಅವಶ್ಯಕವಾದ ಎಲ್ಲ ಪೌಷ್ಟಿಕಾಂಶಗಳು ಸಿಗುವಂತೆ ಖಚಿತಪಡಿಸಿಕೊಳ್ಳಿ. *ನಿಗದಿತ ಸಮಯದಲ್ಲಿ ಯೋಗ್ಯ ಉಪಾಹಾರವನ್ನು ಸೇವಿಸದೇ ಇರುವುದು ನಿಮಗೆ ಭವಿಷ್ಯದ ದಿನಗಳಲ್ಲಿ ಬಹಳಷ್ಟು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ತರುತ್ತದೆ*.

ಇದು ನೀವು ನಿಮ್ಮ ದೈನಿಕವಾಗಿ ಅನುಸರಿಸಬೇಕಾದ ವಿಧಾನ.

*ಹಳ್ಳಿಗಳಲ್ಲಿ ಹಾಗೂ ಹೊಲಗದ್ದೆಗಳ ಪರಿಸರದಲ್ಲಿ ಜೀವಿಸುವ ಜನರು ಆರೋಗ್ಯಪೂರ್ಣರಾಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅವರು ಬೇಗನೇ ನಿದ್ದೆಹೋಗುತ್ತಾರೆ ಹಾಗೂ ಬೇಗ ಎದ್ದೇಳುತ್ತಾ ಅವರ ಜೈವಿಕ ಗಡಿಯಾರದ ಅನುಸಾರ ಜೀವಿಸುವುದರ ಕಾರಣ ಆರೋಗ್ಯವಂತರಾಗಿ ಇರುತ್ತಾರೆ*.

ಯಾರೇ ಒಬ್ಬರು ಈ ಮೇಲೆ ವಿವರಿಸಿದ ವಿಧಾನವನ್ನು ಅನುಸರಿಸುತ್ತಾರೋ, ಅವರು  ಖಂಡಿತವಾಗಿ ಆಲ್ಹಾದತೆಯ ಅನುಭವ ಪಡೆಯುತ್ತಾರೆ ಹಾಗೂ ದಿನವಿಡೀ ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ.

*ಈ ವಾಸ್ತವಗಳನ್ನು ನಮ್ಮ ಯುವಪೀಳಿಗೆಯು ಅರಿತುಕೊಳ್ಳುವ ಅಗತ್ಯ ಇರುವದರಿಂದ, ಇದನ್ನು ಸಾಧ್ಯವಾದಷ್ಟು ಹೆಚ್ಚು ಮುಂದುವರಿಕೆ ಮಾಡಿರಿ*

ಆಂಗ್ಲಭಾಷೆಯಲ್ಲಿ ನನ್ನ ಆತ್ಮೀಯರಿಂದ ನನಗೆ ಬಂದ ಅವತರಣಿಕೆಯನ್ನು ಅನುವಾದಿಸಿ ಕಳಿಸಿದ್ದೇನೆ. ಇದರಿಂದ ಕೆಲವರಿಗಾದರೂ, ವಿಶೇಷತಃ ಪ್ರಯೋಜನವಾದಲ್ಲಿ ನನ್ನ ಶ್ರಮ ಸಾರ್ಥಕ.

ಜೀವನದಲ್ಲಿ ಗೆಲ್ಲಬೇಕೆ?(ಸಂಗ್ರಹ ಲೇಖನ)

*ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೆ ಎಂಬ ಉಮೇದು ಇರುವವರು ದಯವಿಟ್ಟು ಕೆಳಗಿನ ವಾಕ್ಯಗಳನ್ನು ಗಮನಿಸಿರಿ.*

ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು.
ಒಂದು ಯುದ್ಧದಿಂದಾಗಿ  *ತಿಮ್ಮಪ್ಪ ನಾಯಕ ಕನಕದಾಸ* ರಾಗಿ ಬದಲಾದರು.

*ನಾರದ* ನ  ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ   *ವಾಲ್ಮೀಕಿ* ಯಾದರು.

ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ
 *ಬಸವಣ್ಣ ಜಗಜ್ಯೋತಿ* ಯಾದರು.

ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ *ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ* ಯಾದರು.

ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ *ನರೇಂದ್ರ ವಿವೇಕಾನಂದ* ರಾದರು.

ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ *ಸೂಪರ್ ಸ್ಟಾರ್ ಉಪೇಂದ್ರ* ರಾದರು.

ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ *ರವಿ ಡಿ ಚನ್ನಣ್ಣನವರ್* ಇಂದು ಐಪಿಎಸ್ ಅಧಿಕಾರಿಯಾದರು.

ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ *ಎಸ್.ಆರ್.ಕಂಠಿ* ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ *"ಭರತ"* ರಾದರು.

ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ,  ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ *ಅಣ್ಣಾ ಹಜಾರೆ ಆಧುನಿಕ ಗಾಂಧಿ* ಯಾದರು.

ಬೀದಿ ದೀಪದಲ್ಲಿ ಓದಿದ *ವಿಶ್ವೇಶ್ವರಯ್ಯ ಭಾರತ ರತ್ನ* ರಾದರು.

ಎಂಟನೇ ತರಗತಿ ಫೇಲ್ ಆದ *ಸಚಿನ್* ಇಂದು ಕ್ರಿಕೆಟ್ ಲೋಕದ ದೇವರಾದರು.

ಪೆಟ್ರೋಲ್ ಹಾಕುತ್ತಿದ್ದ *ಅಂಬಾನಿ* ಇಂದು ಭಾರತದ *ನಂಬರ್ ಒನ್* ಶ್ರೀಮಂತರಾದರು.

*ಗೋಪಾಲ್ ಕೃಷ್ಣ ರೋಲಂಕಿ* ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
 ಹಿಂದಿ ಬರದಿದ್ದರೂ *ಐಎಎಸ್* ಪರೀಕ್ಷೆಯಲ್ಲಿ ಮೂರನೇ Rank ಬಂದರು.

ಚಪ್ಪಲಿ ಹೊಲಿಯುತ್ತಿದ್ದ ಕುಟುಂಬದಿಂದ ಬಂದ *ಅಬ್ರಹಾಂ ಲಿಂಕನ್* ಸತತ ಸೋಲು ಕಂಡರು ಕೊನೆಗೆ *ಅಮೆರಿಕದ ಅಧ್ಯಕ್ಷ* ರಾದರು.

*ಎನ್. ಅಂಬಿಕಾ* ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ *ಐಪಿಎಸ್* ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆಯಾದರು. (ಈಕೆಯ ಬದುಕು ತುಂಬಾ ರೋಚಕವಾಗಿದೆ *ಮಿಸ್* ಮಾಡದೆ ತಿಳಿದುಕೊಳ್ಳಿ).

ನಮ್ಮ ಜಿಲ್ಲೆಯವನೊಬ್ಬ
*ಐಎಎಸ್* ಅಧಿಕಾರಿಯಾದ.
ನಮ್ಮ ತಾಲೂಕಿನವನೊಬ್ಬ
*ಕೆ.ಎ.ಎಸ್* ಅಧಿಕಾರಿಯಾದ.
ನಮ್ಮ ಊರಿನವನೊಬ್ಬ
*ಪಿ.ಎಸ್.ಐ.* ಆದ.
ನಮ್ಮ ಓಣಿಯವನೊಬ್ಬ
*ಎಫ್.ಡಿ.ಎ.* ಆದ.
ನಮ್ಮ ಮನೆಯ ಪಕ್ಕದವನೊಬ್ಬ
*ಎಸ್.ಡಿ.ಎ* ಆದ.

ಇದೆಲ್ಲವನ್ನು ನೋಡಿದರೂ ನಾವು ಏನೂ ಆಗಲಿಲ್ಲ...? ಏಕೆಂದರೆ ನಮ್ಮಲ್ಲಿ *ಸಾಧಿಸುವ ಛಲವೇ ಸತ್ತು* ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.

*ಕಷ್ಟ ಯಾರಿಗಿಲ್ಲಾ...?*
*ಅವಮಾನ ಯಾರಿಗಾಗಿಲ್ಲ...??*
*ಸೋಲನ್ನ ಯಾರು ನೋಡಿಲ್ಲ...??*

*ಕಷ್ಟ* ಗಳನ್ನ ಮನುಷ್ಯ *ಮೌನ* ವಾಗಿ ದಾಟಬೇಕು.
*ಪರಿಶ್ರಮ* ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ *ಯಶಸ್ಸಿನ ಫಲ* ಜಗತ್ತಿಗೆ ಕೇಳಿಸುವಷ್ಟು ಜೋರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ *ಪುಸ್ತಕ* ಎಂದಿಗೂ ಮಾಡಲಾರದು.

*ಎದೆಗೆ ಬಿದ್ದ ಅಕ್ಷರ..*
*ಭೂಮಿಗೆ ಬಿದ್ದ ಬೀಜ..* ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.

*ಪುಸ್ತಕ* ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.

*ಕಠಿಣ ಪರಿಶ್ರಮ,ದೃಢ ಸಂಕಲ್ಪ, ತಾಳ್ಮೆ* ಯೊಂದಿದ್ದರೆ ಏನನ್ನಾದರೂ ಸಾಧಿಸಬಹುದು.

ಇಂತಹ *ಸಂದೇಶಗಳು* ಹಲವರಿಗೆ *ಸ್ಫೂರ್ತಿ* ಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ.
*ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.*

ಭವಿಷ್ಯದ ಬಗ್ಗೆ ಚಿಂತಿಸದಿದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು  *ಗಾರ್ಲ ವರ್ದಿ* ರವರು ಹೇಳುತ್ತಾರೆ.

ಯೋಚಿಸಿ ನಿರ್ಧರಿಸಿ.
ಯಾಕಂದ್ರೆ *ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ*.

ಓದಿದ ನಂತರ ಸರಿಯೆನಿಸಿದರೆ ಮುನ್ನಾಹಿಸಿ ಮತ್ತು ಇಂದಿನ ಯುವ ಜನತೆಗೆ ಓದಿ ಹೇಳಿರಿ.

26 ಜೂನ್ 2018

ಮರೆಯುವೆಯಾ ?( ಭಾವಗೀತೆ)

*ಮರೆಯುವೆಯಾ?*

ಹೆತ್ತವರೊಡಲುರಿಸಿ ಮೆರೆಯುವೆಯಾ?
ತುತ್ತನಿತ್ತವರ ಮಮತೆಯ ಮರೆಯುವೆಯಾ?

ಹೆತ್ತು ಹೊತ್ತು ಮುದ್ದು ಮಾಡಿ
ನೋವ ನುಂಗಿ ಪ್ರೀತಿ ನೀಡಿ
ಲಾಲಿ ಹಾಡಿ ತಟ್ಟಿ ಮಲಗಿಸಿ
ಹೊಟ್ಟೆ ಕಟ್ಟಿ ಬೆಳೆಸಿದವರ ಮರೆವೆಯಾ?

ಅಕ್ಕ ಪಕ್ಕ ಸರೀಕರಂತೆ
ಒಪ್ಪವಾಗಿ ಬೆಳೆಸಿ ನಲಿದು
ಚೊಕ್ಕವಾದ ಗುಣವ ಕಲಿಸಿ
ಸ್ವಾರ್ಥವಿರದ ಮುಗ್ದಜೀವಗಳನು ಮರೆವೆಯಾ?

ಉಡುಗೆ ತೊಡುಗೆ ಉಡಿಸಿ ನೋಡಿ
ಹರಿದ ಅರಿವೆ ತೊಟ್ಟು ಬಾಳಿ
ತಾನು ಅನ್ನವುಣದೆ ನಿನಗೆ
ಮೃಷ್ಟಾನ್ನವಿಟ್ಟು ತೃಪ್ತಿ ಕಂಡ ಕೈಗಳ ಮರೆವೆಯಾ ?


*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*