This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
31 ಡಿಸೆಂಬರ್ 2017
ಗಜ಼ಲ್ ೨೦ (ಇದು ಹೊಸ ವರ್ಷ)ಕನ್ನಡ ಸಾಹಿತ್ಯ ಲೋಕ ವಾಟ್ಸಪ್ ಬಳಗದ ಸ್ಪರ್ಧೆಯಲ್ಲಿ ಅತ್ಯುತ್ತಮ ಎಂದು ಪುರಸ್ಕಾರ ಪಡೆದ ಗಜ಼ಲ್
*ಗಜ಼ಲ್ ೨೦*
ಹುಚ್ಚು ಕೇಕೆ ಗದ್ದಲ ಪ್ರದರ್ಶನ ಇದು ಹೊಸವರ್ಷ ?
ವಸಂತನಾಗಮನದಿ ಪ್ರಕೃತಿ ನರ್ತನ ಇದು ಹೊಸವರ್ಷ.
ಕಂಠಪೂರ್ತಿ ಎಣ್ಣೆ ಕುಡಿದು ವಾಂತಿ ಮಾಡಿ ಬಿದ್ದು ಒದ್ದಾಡುವರು .
ಎಣ್ಣೆ ಅಭ್ಯಂಜನ ಸ್ನಾನದ ತಂಪಿಗೆ ಹೂವಾದ ಮೈಮನ ಇದು ಹೊಸ ವರ್ಷ.
ಕೇಕು ಬಾಕುಗಳ ದರ್ಬಾರು ಪಿಜಾ ಬರ್ಗರುಗಳ ಕಾರಬಾರು.
ಬೇವು ಬೆಲ್ಲವ ಹಂಚಿ ನೋವು ನಲಿವಿನ ಆಹ್ವಾನ ಇದು ಹೊಸ ವರ್ಷ.
ಮದ್ಯರಾತ್ರಿಯ ಅಬ್ಬರ ಊರ ಜನಕೆ ಉಪದ್ರವ ನೀಡುವರು.
ಹಗಲಿನಲಿ ಮನೆ ಮಂದಿ ನಲಿವ ಸಹಜೀವನ ಇದು ಹೊಸ ವರ್ಷ.
ಕರ್ಕಶ ಗಾನ ಅಸಭ್ಯ ಅಶ್ಲೀಲ ಉಡುಗೆಗಳ ಗಲಾಟೆಗಳ ಅಬ್ಬರ.
ವೆಂಕಟೇಶನ ಧ್ಯಾನ ಮಾಡಿ ಮಾಡುವ ನಮನ ಇದು ಹೊಸ ವರ್ಷ.
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
ಹುಚ್ಚು ಕೇಕೆ ಗದ್ದಲ ಪ್ರದರ್ಶನ ಇದು ಹೊಸವರ್ಷ ?
ವಸಂತನಾಗಮನದಿ ಪ್ರಕೃತಿ ನರ್ತನ ಇದು ಹೊಸವರ್ಷ.
ಕಂಠಪೂರ್ತಿ ಎಣ್ಣೆ ಕುಡಿದು ವಾಂತಿ ಮಾಡಿ ಬಿದ್ದು ಒದ್ದಾಡುವರು .
ಎಣ್ಣೆ ಅಭ್ಯಂಜನ ಸ್ನಾನದ ತಂಪಿಗೆ ಹೂವಾದ ಮೈಮನ ಇದು ಹೊಸ ವರ್ಷ.
ಕೇಕು ಬಾಕುಗಳ ದರ್ಬಾರು ಪಿಜಾ ಬರ್ಗರುಗಳ ಕಾರಬಾರು.
ಬೇವು ಬೆಲ್ಲವ ಹಂಚಿ ನೋವು ನಲಿವಿನ ಆಹ್ವಾನ ಇದು ಹೊಸ ವರ್ಷ.
ಮದ್ಯರಾತ್ರಿಯ ಅಬ್ಬರ ಊರ ಜನಕೆ ಉಪದ್ರವ ನೀಡುವರು.
ಹಗಲಿನಲಿ ಮನೆ ಮಂದಿ ನಲಿವ ಸಹಜೀವನ ಇದು ಹೊಸ ವರ್ಷ.
ಕರ್ಕಶ ಗಾನ ಅಸಭ್ಯ ಅಶ್ಲೀಲ ಉಡುಗೆಗಳ ಗಲಾಟೆಗಳ ಅಬ್ಬರ.
ವೆಂಕಟೇಶನ ಧ್ಯಾನ ಮಾಡಿ ಮಾಡುವ ನಮನ ಇದು ಹೊಸ ವರ್ಷ.
*ಸಿ.ಜಿ ವೆಂಕಟೇಶ್ವರ*
*ಗೌರಿಬಿದನೂರು*
ಗಜ಼ಲ್ ೧೯(ನೋಡಿಲ್ಲಿ)
*ಗಜ಼ಲ್ ೧೯(ನೋಡಿಲ್ಲಿ)
ಮೂರು ದಿನದ ಸಂತೆಯಲಿ ನೂರಾರು ತಕಾರಾರು ನೋಡಿಲ್ಲಿ
ನಾಲ್ಕು ದಿನದ ಜಾತ್ರೆಗೆ ಸಾವಿರಾರು ಪುಕಾರು ನೋಡಿಲ್ಲಿ
ಚೆಂಡು ಬಲೂನು ವಾಚು ಬೇಕು ಬಾಲ್ಯದ ಜೀವಕೆ
ಸರ ಬಳೆ ಬಿಂದಿ ಯೌವನದ ಬೇಡಿಕೆ ನೂರಾರು ನೋಡಿಲ್ಲಿ
ಬೆಂಡು ಬತ್ತಾಸು ಸಿಹಿಯ ಪುಳಕ ಸವಿಯ ಜಳಕ
ಕಾರಾ ಬೂಂದಿಯ ಕಾರಕೆ ನಾಲಿಗೆ ಚುರು ಚುರು ನೋಡಿಲ್ಲಿ
ಹೂವಿನ ಪಲ್ಲಕ್ಕಿ ತೇರುಗಳ ನೈವೇದ್ಯ ಹಣ್ಣು ಕಾಯಿ
ಬಾಯಿಗೆ ಬೀಗ ಹಾಕಿ ನೆನಪುಗಳ ಕಾರುಬಾರು ನೋಡಿಲ್ಲಿ
ಮೆರವಣಿಗೆಯಲಿ ಜನಜಂಗುಳಿ ಎಲ್ಲೆಡೆ ಭಕ್ತರು
ಸೀಜೀವಿಯು ಹೊರಟಾಗ ಬರಲಿಲ್ಲ ನೆಂಟರು ನೋಡಿಲ್ಲಿ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
ಮೂರು ದಿನದ ಸಂತೆಯಲಿ ನೂರಾರು ತಕಾರಾರು ನೋಡಿಲ್ಲಿ
ನಾಲ್ಕು ದಿನದ ಜಾತ್ರೆಗೆ ಸಾವಿರಾರು ಪುಕಾರು ನೋಡಿಲ್ಲಿ
ಚೆಂಡು ಬಲೂನು ವಾಚು ಬೇಕು ಬಾಲ್ಯದ ಜೀವಕೆ
ಸರ ಬಳೆ ಬಿಂದಿ ಯೌವನದ ಬೇಡಿಕೆ ನೂರಾರು ನೋಡಿಲ್ಲಿ
ಬೆಂಡು ಬತ್ತಾಸು ಸಿಹಿಯ ಪುಳಕ ಸವಿಯ ಜಳಕ
ಕಾರಾ ಬೂಂದಿಯ ಕಾರಕೆ ನಾಲಿಗೆ ಚುರು ಚುರು ನೋಡಿಲ್ಲಿ
ಹೂವಿನ ಪಲ್ಲಕ್ಕಿ ತೇರುಗಳ ನೈವೇದ್ಯ ಹಣ್ಣು ಕಾಯಿ
ಬಾಯಿಗೆ ಬೀಗ ಹಾಕಿ ನೆನಪುಗಳ ಕಾರುಬಾರು ನೋಡಿಲ್ಲಿ
ಮೆರವಣಿಗೆಯಲಿ ಜನಜಂಗುಳಿ ಎಲ್ಲೆಡೆ ಭಕ್ತರು
ಸೀಜೀವಿಯು ಹೊರಟಾಗ ಬರಲಿಲ್ಲ ನೆಂಟರು ನೋಡಿಲ್ಲಿ
*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*
30 ಡಿಸೆಂಬರ್ 2017
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)