25 ಜೂನ್ 2025

ನಮ್ಮ ದಾರಿ...


 


ತಲುಪಲು ನಮ್ಮ 

ಜೀವನದ ಗುರಿ। 

ನಾವೇ ಸವೆಸಬೇಕು 

ನಮ್ಮ ದಾರಿ|


ಸಿಹಿಜೀವಿ ವೆಂಕಟೇಶ್ವರ


#KannadaKavana #Kavana #KannadaPoetry #KannadaLiterature #PoetryLovers #KannadaWriters #LiteraryArt #WrittenWord #IndianPoetry #CulturalHeritage #Verses #CreativeWriting #SpokenWord #ArtInWords #PoeticExpressions #LanguageOfLove #Storytelling #Inspiration


24 ಜೂನ್ 2025

ಸಂತೆ


 ನಮ್ಮ ಬಾಲ್ಯದ ದಿನಗಳಲ್ಲಿ  ಶನಿವಾರ ಬಂತು ಅಂದ್ರೆ ಏನೋ ಖುಷಿ.ಅದ್ರಲ್ಲೂ ಅಮ್ಮ ಸಂತೆಗೆ ಹೋಗ್ತಾರೆ ಅಂದ್ರೆ   ಖುಷಿಯು ಇಮ್ಮಡಿಯಾಗ್ತಿತ್ತು.ಯಾಕಂದ್ರೆ ಸಂತೆಯಿಂದ ಅಮ್ಮ ತರಕಾರಿ ಕಮ್ಮಿ ತಂದ್ರೂ ಕಾರ ಮಂಡಕ್ಕಿ ಪಕ್ಕಾ ತರ್ತಿದ್ರು.ನಿನ್ನೆ ಅದೇ   ಸಂತೆಗೆ ಅಮ್ಮನೊಂದಿಗೆ ಅಣ್ಣ ನಾನು ಹೋಗಿದ್ವಿ. ಅಮ್ಮ ಅನಾರೋಗ್ಯ ನಿಮಿತ್ತ ಕಾರಲ್ಲೇ ಕೂತಿದ್ರು.ಅಣ್ಣ ತರಕಾರಿ ತಂದ್ರು.ಕಾರ ಮಂಡಕ್ಕಿ ಮಾತ್ರ ತರಲಿಲ್ಲ.ಯಾಕಂದ್ರೆ ಅಮ್ಮ ಕಾರಮಂಡಕ್ಕಿ ತಿನ್ನೋ ಸ್ಥಿತಿಯಲ್ಲಿರಲಿಲ್ಲ."ನೀವ್ ತಿನ್ವಂತ್ರಿ ಕಾರ ಮಂಡಕ್ಕಿ ತಕ್ಕಳ್ರಪ್ಪ" ಅಂದ್ರು ಅಮ್ಮ  ನಮ್ಮತ್ರ ದುಡ್ಡಿದ್ರೂ ಅವತ್ತು  ನಾವು ಕಾರ ಮಂಡಕ್ಕಿ ತೊಗೊಳ್ಳಲಿಲ್ಲ.

#ChildhoodMemories #Nostalgia #RetroVibes #ThrowbackThursday #HappyTimes #ChildhoodAgain #MemoriesMatter #FondMemories #InnocenceLost #MemoryLane #GoodOldDays #BlastFromThePast #PreciousMoments #ThrowbackMemories #LifeAsAKid #JoyfulDays #GrowingUp #CherishedTimes #ForeverYoung

ಸುಭಾಷಿತ

ಇಂದಿನ ಸುಭಾಷಿತ:- 

ಅನಭಿಜ್ಞಾಯ ಶಾಸ್ತ್ರಾರ್ಥಾನ್ ಪುರುಷಾಃ ಪಶುಬುದ್ಧಯಃ | ಪ್ರಾಗಲ್ಭ್ಯಾದ್ ವಕ್ತುಮಿಚ್ಛಂತಿ ಮಂತ್ರೇಷ್ವಭ್ಯಂತರೀಕೃತಾಃ || || ೨ || ರಾಮಾಯಣ, ಯುದ್ಧಕಾಂಡ, ೬೩-೧೪ 

 "ಮಂತ್ರಿಗಳಲ್ಲಿ ಪಶುಬುದ್ಧಿಯ ಜನರೂ ಸೇರಿಕೊಂಡಿರುತ್ತಾರೆ. ಅವರು ಯಾವ ಶಾಸ್ತ್ರಾರ್ಥವನ್ನೂ ತಿಳಿಯದೆ ದುಡುಕಿನ ವಾಗ್ಜಾಲದಿಂದ ಮಾತಾಡಲು, ಸಲಹೆ ಕೊಡಲು ಬಯಸುತ್ತಾರೆ.
#KannadaQuotes #KannadaWisdom #KannadaLove #KannadaInspiration #QuoteOfTheDay #WisdomInKannada #MotivationalQuotes #KannadaCulture #KannadaLiterature #InspirationalKannada #LifeQuotes #KannadaLanguage #QuotesInKannada #KarnatakaPride #KannadaSayings #KarnatakaCulture #Encouragement #LifeLessons #PositiveVibes #KannadaHeritage



23 ಜೂನ್ 2025

ಸುಭಾಷಿತ


 ಸತ್ಯೇನ ರಕ್ಷತೇ ಧರ್ಮ: ವಿದ್ಯಾ ಯೋಗೇನ ರಕ್ಷ್ಯತೇ | ಮೃಜಯಾ ರಕ್ಷತೇ ರೂಪಂ ಕುಲಂ ವೃತ್ತೇನ ರಕ್ಷತೇ ||

-

  "ಸತ್ಯದಿಂದ ಧರ್ಮವು ರಕ್ಷಿತವಾಗುತ್ತದೆ. ವಿದ್ಯೆಗೆ ಯೋಗದಿಂದ, ಸ್ವಚ್ಛತೆಯಿಂದ ರೂಪಕ್ಕೆ ರಕ್ಷಣೆಯೊದಗುತ್ತದೆ. ಸದ್ವರ್ತನೆಯಿಂದ ಕುಲದ ರಕ್ಷಣೆಯಾಗುತ್ತದೆ."

31 ಮೇ 2025

ಚಾಣಕ್ಯ ನೀತಿ ಶ್ಲೋಕ:-


 ಚಾಣಕ್ಯ ನೀತಿ ಶ್ಲೋಕ:- 


ಅನಂತಶಾಸ್ತ್ರಂ ಬಹುಲಾಶ್ಚ ವಿದ್ಯಾ: ಅಲ್ಪಶ್ಚ ಕಾಲೋ ಬಹುವಿಘ್ನತಾ ಚ |ವತ್ಸಾರಭೂತಂ ತದುಪಾಸನೀಯಂ ಹಂಸಾಂ ಯಥಾಕ್ಷೀರ ಮಿವಾಂಬುಮಧ್ಯಾತ್ || 

 ಶಾಸ್ತ್ರಗಳು ಆನಂತವಾಗಿವೆ. ವಿದ್ಯೆಗಳಂತೂ ಲೆಕ್ಕವಿಲ್ಲದಷ್ಟಿವೆ. ನಮಗೆ ಇರುವ ಕಾಲಾವಕಾಶವೂ ಬಹಳ ಕಡಿಮೆ. ಜೊತೆಗೆ ವಿಘ್ನಗಳು ಬೇರೆ. ಆದುದರಿಂದ ಹಂಸವು ನೀರಿನ ಮಧ್ಯದಲ್ಲಿ ಹಾಲನ್ನು ಮಾತ್ರ ಸ್ವೀಕರಿಸುವಂತೆ ಸಾರವಾದುದನ್ನು ಮಾತ್ರ ಗ್ರಹಿಸಬೇಕು.