14 ಅಕ್ಟೋಬರ್ 2024

ಸೆಲಾ ಪಾಸ್..ಅರುಣಾಚಲ ಪ್ರದೇಶ್..







ಸೆಲಾ ಟನಲ್


ಸೆಲಾ ಟನಲ್ , ಭಾರತ ಸರ್ಕಾರವು 2018-19 ಬಜೆಟ್‌ನಲ್ಲಿ ಎಲ್ಲಾ ಹವಾಮಾನ ರಸ್ತೆ ಸಾರಿಗೆ ಸುರಂಗ ನಿರ್ಮಾಣಕ್ಕೆ ಹಣವನ್ನು ಘೋಷಿಸಿತು  ಜನವರಿ 2019 ರಲ್ಲಿ ನಿರ್ಮಾಣ ಪ್ರಾರಂಭವಾಗಿ  

ಮಾರ್ಚ್ 09, 2024 ರಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ವಿಕಸಿತ್  ಭಾರತ್ ವಿಕಸಿತ್  ಈಶಾನ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಲಾ ಸುರಂಗ ಯೋಜನೆಯನ್ನು ವರ್ಚುವಲ್ ಕಾರ್ಯಕ್ರಮದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಿದರು.  ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯ ತವಾಂಗ್‌ನಿಂದ ಅಸ್ಸಾಂನ ತೇಜ್‌ಪುರವನ್ನು ಸಂಪರ್ಕಿಸುವ ರಸ್ತೆಯಲ್ಲಿ 13,000 ಅಡಿ.  ಒಟ್ಟು 825 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸುರಂಗವು ಬಲಿಪರಾ - ಚರಿದುವಾರ್ - ತವಾಂಗ್ ರಸ್ತೆಯಲ್ಲಿ ಸೆಲಾ ಪಾಸ್ ಮೂಲಕ ತವಾಂಗ್‌ಗೆ ಎಲ್ಲಾ ಹವಾಮಾನ ಸಂಪರ್ಕವನ್ನು ಒದಗಿಸುತ್ತದೆ, ಸಶಸ್ತ್ರ ಪಡೆಗಳ ಸನ್ನದ್ಧತೆಗೆ ಇದು ಸಹಕಾರಿ ಮತ್ತು ಗಡಿ ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.  


 

11 ಅಕ್ಟೋಬರ್ 2024

ಪರೋಪಕಾರ ಮಾಡೋಣ


ಭಾರತದಲ್ಲಿ ಬ್ರಿಟಿಷ್ ರ ಆಳುವಿಕೆ ಇದ್ದಾಗ ಬ0ಗಾಲ ದೇಶದಲ್ಲಿ ನಡೆದ ಒ0ದು ಸತ್ಯ ಘಟನೆ-


ಅಲ್ಲಿ ಕೊಲ್ಕತ್ತಾ ಪಟ್ಟಣಕ್ಕೆ ತಲುಪುವ ದೊಡ್ಡ ರೈಲು ಮಾರ್ಗ ಹಾದಿದೆ. ಮಾರ್ಗ ಮಧ್ಯ ಇರುವ ಚಿಕ್ಕ ನದಿಗೆ ಸೇತುವೆಯನ್ನು ಕಟ್ಟಲಾಗಿದೆ. ಆ ಸೇತುವೆ ಸಮೀಪ ನದಿಯ ದಡದಲ್ಲಿ ಬಡವರ ಒ0ದು ಗುಡಿಸಲು. ಅದರಲ್ಲಿ ಒಬ್ಬ ತಾಯಿ ಮಗಳು ವಾಸವಾಗಿದ್ದರು.ಅದು ಅರಣ್ಯ ಪ್ರದೇಶ.ಸಮೀಪದಲ್ಲಿ ಯಾವ ಗ್ರಾಮವೂ ಇರಲಿಲ್ಲ. 


ಒ0ದು ರಾತ್ರಿ ಧಾರಾಕಾರ ಮಳೆ.ಒ0ದೆರಡು ತಾಸಿನ ನ0ತರ ಮಳೆ ಕಡಿಮೆಯಾಯ್ತು .ಅಷ್ಟೊತ್ತಿಗೆ ಗುಡಿಸಲೆಲ್ಲಾ ನೀರಾಯ್ತು .ಇರುವ ಒ0ದೆರಡು ಹಾಸಿಗೆ ಹೊದಿಕೆಗಳೂ ನೆನೆದವು.ಮಲಗುವಷ್ಟೂ ಒಣಗಿದ ಸ್ಥಳವಿರಲಿಲ್ಲ.ಮಧ್ಯದಲ್ಲಿ ಒ0ದು ಒಲೆಯನ್ನು  ಹೊತ್ತಿಸಿ ಅದರ ಸುತ್ತ ತಾಯಿ ಮಗಳು ಕೂತಲ್ಲೇ ತೂಕಡಿಸುತ್ತಿದ್ದರು.ಇದ್ದಕ್ಕಿದ್ದ0ತೆ ಹೊರಗೆ ಭಯಂಕರ ಸದ್ದಾಯಿತು.

ಇದೇನಿದು ಎಂದು ಮಗಳು ಹೊರಗೆ ಬಂದು ನೋಡಿದಳು.ಮಿಂಚಿನ ಬೆಳಕಿನಲ್ಲಿ ನದಿಗೆ ಅಡ್ಡಲಾಗಿದ್ದ ಸೇತುವೆ ಕುಸಿದು ಬಿದ್ದದ್ದು ಕ0ಡಿತು !


ಮಗಳು ತಾಯಿಗೆ ಹೇಳಿದಳು, ಅಮ್ಮಾ ಇಷ್ಟರಲ್ಲೇ ಸಾವಿರಾರು ಜನರನ್ನು ತುಂಬಿಕೊ0ಡು ರೈಲು ಬರಲಿದೆ. ಈ ರಾತ್ರಿ ಅವರಿಗೆ ಸೇತುವೆ ಕುಸಿತದ್ದು ಕಾಣದೇ ಹೋದರೆ ಎ0ಥ ಭಯ0ಕರ ಅಪಘಾತವಾಗುತ್ತೆ ! ಇದನ್ನು ಹೇಗಾದರೂ ಮಾಡಿ ತಪ್ಪಿಸಲೇಬೇಕು.  ತಾಯಿ ಹೇಳಿದಳು, ಹೌದು ಮಗಳೇ ನಾವೇನು ಮಾಡಬಲ್ಲೆವು ?

ಒ0ದು ಕಟ್ಟಿಗೆಗೆ ಬಟ್ಟೆಯನ್ನು ದೀವಟಿಗೆ ಮಾಡಿ ತೋರಿಸಬಹುದಲ್ಲಾ ! ಅ0ದಳು ಮಗಳು.

ಸರಿ ಮಗಳೇ , ಒಣಗಿದ ಬಟ್ಟೆ ಎಲ್ಲಿದೆ ? ಎ0ದಳು ತಾಯಿ. 

ಅಮ್ಮಾ ನನ್ನ ಮೈಮೇಲಿರುವ ಬಟ್ಟೆಯು ಒಣದಾಗಿಯೇ ಇದೆಯಲ್ಲಾ ! ಎ0ದಳು ಮಗಳು


ಅವಳ ಹೃದಯ ಸಿರಿಗೆ ತಾಯಿ ತಕ್ಷಣ ಒಪ್ಪಿದಳು.ಮಗಳು ತನ್ನ ಮೈಮೇಲಿದ್ದ ಮಾನದ ಬಟ್ಟೆಯನ್ನು ಒ0ದು ಕಟ್ಟಿಗೆಗೆ ಕಟ್ಟಿ ಉರಿಸಿದಳು.ಆ ದೀವಟಿಗೆಯನ್ನು ಕೈಯಲ್ಲಿ ಹಿಡಿದು ತಾಯಿ ಮಗಳು ಕೂಡಿ ಕಾಣದ ಬ0ಧುಗಳ ಪ್ರಾಣವನ್ನು ಉಳಿಸಲು ರೈಲಿಗೆ ಎದುರಾಗಿ ದಾರಿಯನ್ನು ಹಿಡಿದು ನಡೆದರು.


ರೈಲು ಬರುವುದು ಒ0ದೆರಡು ನಿಮಿಷ ಉಳಿದಿತ್ತು.ಅಷ್ಟರಲ್ಲೇ ಕೈಯೊಳಗಿನ ದೀವಟಿಗೆ ನ0ದುವ0ತಾಯ್ತು .ತತ್ ಕ್ಷಣ ತಾಯಿ ತನ್ನ ಬಟ್ಟೆಯನ್ನೂ ದೀವಟಿಗೆಗೆ ಕಟ್ಟಿ ಉರಿಸಿ ಕೈಯಲ್ಲಿ ಹಿಡಿದು ಬೀಸಿದಳು.

ಚಾಲಕ ರೈಲು ನಿಲ್ಲಿಸಿದ. ಸೇತುವೆ ಬಿದ್ದು ಹೋಗಿರುವುದನ್ನು ನೋಡಿ ತಾಯಿ ಮಗಳ ತ್ಯಾಗಕ್ಕೆ ತಲೆಬಾಗಿದ.ರೈಲಿನಲ್ಲಿದ್ದ ಸಾವಿರ-ಸಾವಿರ ಜನರು ಆ ತಾಯಿ ಮಗಳಿಗೆ ಬಟ್ಟೆಯನ್ನು ಉಡಿಸಿ ಗೌರವಿಸಿದರು.ಹಾಡಿ ಹರಸಿದರು.ಆಗಿನ ಆ0ಗ್ಲ ಅಧಿಕಾರಿಗಳೂ ಆ ತಾಯಿ ಮಗಳನ್ನು ಸ0ತಸದಿ0ದ ಸತ್ಕರಿಸಿದರು..


ಎಂತಹ ತ್ಯಾಗ ಮತ್ತು ಸಹಕಾರದ ಮನೋಭಾವದ ಜನರು ನಮ್ಮ ದೇಶದಲ್ಲಿ ಇದ್ದರು ಎಂಬುದು ನಮ್ಮ ಹೆಮ್ಮೆ.

 

01 ಅಕ್ಟೋಬರ್ 2024

ವನಸ್ನಾನದ ಬಗ್ಗೆ ನಿಮಗೆಷ್ಟು ಗೊತ್ತು?


#ವನಸ್ನಾನ 


ಸನ್ ಬಾತ್, ಮಡ್ ಬಾತ್ ಬಗ್ಗೆ ಕೇಳಿರುವ ನಾವು ವನ ಸ್ನಾನದ ಬಗ್ಗೆ ಕೇಳಿರುವುದು ಕಡಿಮೆ. ಹೌದು ಹೀಗೊಂದು ಅರಣ್ಯ ಸ್ನಾನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಸೆಳೆಯುತ್ತಿದೆ.

1980 ರ ದಶಕದಲ್ಲಿ ಜಪಾನ್‌ನಲ್ಲಿ ಶಿನ್ರಿನ್-ಯೋಕು ಎಂಬ ಹೆಸರಿನಿಂದ ಆರಂಭವಾದ  ಅರಣ್ಯ ಸ್ನಾನ ಪರಿಕಲ್ಪನೆ ಇಂದು ಬಹುತೇಕ ದೇಶಗಳಲ್ಲಿ ಜಾರಿಯಲ್ಲಿದೆ.

  1990 ರ ದಶಕದಲ್ಲಿ ಸಂಶೋಧಕರು ಅರಣ್ಯ ಸ್ನಾನದ ಶಾರೀರಿಕ ಪ್ರಯೋಜನಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು.  

ವನಸ್ನಾನವನ್ನು  ವನಪ್ರಿಯರು ಮಾತ್ರವಲ್ಲ ಎಲ್ಲರೂ  ಅಭ್ಯಾಸ ಮಾಡಬಹುದು. 


ಅರಣ್ಯ ಅಥವಾ ವನ   ಸ್ನಾನವೆಂದರೆ ಕಾಡಿನ ಪರಿಸರದಲ್ಲಿ ಹೋಗಿ ಸುಮ್ಮನೆ ಮಾತಾನಾಡದೆ ಕೂತು ಕಾಡಿನ ಶಬ್ದಗಳನ್ನು ಕೇಳುವುದು.‌ ದೂರದಲ್ಲೊಂದು‌ ಹಕ್ಕಿ ತನ್ನ ಸಂಗಾತಿಗೆ ಕರೆಯವ ಶಬ್ದ, ಮೆಲ್ಲನೆ ತೇಲಿ ಬಂದು ಕಿವಿಗೆ ಅಪ್ಪಳಿಸುವ ಗಾಳಿ, ದೂರದ ಕಾಡಿನ ಮದ್ಯದಿಂದ ಬರುವ ಚಿತ್ರವಿಚಿತ್ರ ಶಬ್ದಗಳು ಇವುಗಳನ್ನು ಕೇಳಬಾರದು "ಆಲಿಸಬೇಕು". ಕಾಡಿನಲ್ಲಿ ನಾವು ಮಾತಾಡದೆ ಸುಮ್ಮನಿದ್ದರೆ ಕಾಡು ಮಾತನಾಡಲು ಪ್ರಾರಂಭಿಸುತ್ತದೆ.  ಅದನ್ನು ಅನುಭವಿಸಬೇಕು.


ನಾವು ದೇಹವನ್ನು ಪ್ರಕೃತಿಯೊಂದಿಗೆ ಜೋಡಿಸಿದಾಗ ಅದು ಯಾವಾಗಲೂ ಶಾಂತವಾಗಿರುತ್ತದೆ. ಆಗ ಮನಸ್ಸಿನಲ್ಲೊಂದು ಹೊಸ ಚೈತನ್ಯ ಮೂಡುತ್ತದೆ. ಎಂದು 

ಹಲವಾರು ವರ್ಷಗಳಿಂದ ವನ ಸ್ನಾನ ಮಾಡುತ್ತಿರುವ 

ನಿವೃತ್ತ ಉಪನ್ಯಾಸಕರಾದ ನಂಜುಂಡಪ್ಪ ರವರು ಅಭಿಪ್ರಾಯಪಡುತ್ತಾರೆ. ಪ್ರಕೃತಿಯ ಶಬ್ದಗಳನ್ನು ಆಲಿಸಿ, ನಮಗಾಗಿ ಹಾಡುವ ನಿರ್ದಿಷ್ಟ ಪಕ್ಷಿಗಳನ್ನು ವೀಕ್ಷಿಸಬಹುದು. ಮರವನ್ನು ತಬ್ಬಿಕೊಳ್ಳಿ, ಹೂವುಗಳನ್ನು ವಾಸನೆ ಗ್ರಹಿಸಿ, ತೊಗಟೆ ಮತ್ತು ಎಲೆಗಳ ವಿನ್ಯಾಸವನ್ನು ಪರಿಶೀಲಿಸಬಹುದು. ಭೂಮಿಯನ್ನು ಸ್ಪರ್ಶಿಸಿ ಮತ್ತು ಭೂಮಿಯ ವಾಸನೆಯನ್ನು ಅನುಭವಿಸಬಹುದು. 

ನಮಗೆ ದಣಿವಾದಾಗ, ಹುಲ್ಲು ಅಥವಾ ಬಿದ್ದ ಮರದ ಮೇಲೆ ಕುಳಿತು ವಿಶ್ರಾಂತಿ ಪಡೆಯಬಹುದು. ಕ್ಯಾಮರಾದಿಂದ ಚಿತ್ರಗಳನ್ನು ತೆಗೆದುಕೊಳ್ಳುವ ಬದಲು, ನಮ್ಮ ಕಣ್ಣುಗಳಿಂದ ಶೂಟ್ ಮಾಡುವ ಪ್ರಯತ್ನ ಮಾಡಬೇಕು. ಪ್ರತಿ ವಿವರವನ್ನು ನೋಡಿ ಮತ್ತು ಆಶ್ಚರ್ಯಪಡುತ್ತಾ ಆನಂದ ಪಟ್ಟರೆ  ಇದಕ್ಕಿಂತ ‌ದೊಡ್ಡ ಯೋಗ, ಧ್ಯಾನ ಮತ್ತೊಂದಿಲ್ಲ ಎನಿಸುತ್ತದೆ.

ಇಂತಹ ಅನುಭವದ ಅನುಭೂತಿಯನ್ನು ಪಡೆಯಲು ‌ನೀವು ಒಮ್ಮೆ ಅಥವಾ ಆಗಾಗ್ಗೆ ವನ ಸ್ನಾನ ಮಾಡಬಹುದು.


ಸಿಹಿಜೀವಿ ವೆಂಕಟೇಶ್ವರ

#sihijeeviVenkateshwara #forestbathing #forest #floral #bathing #relaxation



 

ಅಮರ .ಹನಿಗವನ


 

#ಅಮರ

ಆ ಮರ
ತಬ್ಬಿದೆ
ಈ ಮರ
ಹೇಳುತ್ತಿವೆ
ನಮ್ಮ ಸ್ನೇಹ
ಅಮರ

ಸಿಹಿಜೀವಿ ವೆಂಕಟೇಶ್ವರ

ಚಿತ್ರ ಕೃಪೆ: ಅಂತರ್ಜಾಲ..

ಮರೀನಾ ಬೀಚ್ ಚೆನ್ನೈ


 ಮರೀನಾ ಬೀಚ್..


ಕಳೆದ ವರ್ಷ ಅಕ್ಟೋಬರ್ ರಜೆಯಲ್ಲಿ  ಅಂಡಮಾನ್ ಗೆ ಟೂರ್ ಹೊರಟಾಗ ಎರ್ ಇಂಡಿಯಾದ ಪ್ರಮಾದದಿಂದ ಫ್ಲೈಟ್ ಕ್ಯಾನ್ಸಲ್ ಆದ ಪರಿಣಾಮವಾಗಿ ಎರಡು ದಿನ ಅವರ ಖರ್ಚಿನಲ್ಲಿ ‌ಚೆನ್ನೈನ ಒಂದು  ಹೋಟೆಲ್ ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ನಮಗೆ ಅದೊಂದು ಬೋನಸ್ ಟ್ರಿಪ್ ಮಾಡಲು ಸಹಕಾರಿಯಾಯಿತು. ಆ ಸಮಯದಲ್ಲಿ ನಾವು ಮರೀನಾ ಬೀಚ್ ನ ಸೌಂದರ್ಯ ಸವಿದೆವು.

ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಲ್ಲಿರುವ ಮರೀನಾ ಬೀಚ್ ಭಾರತದ ಅತಿ ಉದ್ದದ ಮತ್ತು ವಿಶ್ವದ ಎರಡನೇ ಅತಿ ಉದ್ದದ ಬೀಚ್ ಆಗಿದೆ. ಸುಮಾರು 12 ಕಿಲೋಮೀಟರ್‌ಗಳ ಈ ಬೀಚ್ ದಕ್ಷಿಣದಲ್ಲಿ ಬೀಸಂಟ್ ನಗರದಿಂದ ಉತ್ತರದಲ್ಲಿ ಸೇಂಟ್ ಜಾರ್ಜ್ ಕೋಟೆಯವರೆಗೆ ವ್ಯಾಪಿಸಿದೆ. ಚೆನ್ನೈ ಮರೀನಾ ಬೀಚ್ ಅನ್ನು ಗವರ್ನರ್ ಮೌಂಟ್‌ಸ್ಟುವರ್ಟ್ ಎಲ್ಫಿನ್‌ಸ್ಟೋನ್ ಗ್ರಾಂಟ್ ಡಫ್ 1880 ರಲ್ಲಿ ನವೀಕರಿಸಿದರು. ಚೆನ್ನೈಗೆ ಪ್ರಯಾಣಿಸುವ ಎಲ್ಲಾ ಪ್ರವಾಸಿಗರು ಈ ಭವ್ಯವಾದ ಚೆನ್ನೈ ಬೀಚ್‌ಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಮರೀನಾ ಬೀಚ್ ಅನ್ನು ಬಸ್ಸುಗಳು, ಟ್ಯಾಕ್ಸಿಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.



ಮರೀನಾ ಬೀಚ್ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಚಟುವಟಿಕೆಯಿಂದ ತುಂಬಿರುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಡಲತೀರಗಳ ಉದ್ದಕ್ಕೂ ನಡೆಯುವುದು ಎಲ್ಲರಿಗೂ ಆಹ್ಲಾದಕರ ಅನುಭವ ನೀಡುತ್ತದೆ ಸಂಜೆಯ ವೇಳೆಗೆ ಈ ಬೀಚ್ ಕಲಾಕೃತಿಗಳು, ಕರಕುಶಲ ಪ್ರದರ್ಶನಗಳು,  ಆಭರಣಗಳು ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಹಲವಾರು ಮಳಿಗೆಗಳೊಂದಿಗೆ ಜಗಮಗಿಸುತ್ತದೆ.

 

 ಗಾಳಿಪಟಗಳನ್ನು ಹಾರಿಸುವುದು ಮತ್ತು ಕುದುರೆ ಸವಾರಿ ಈ ಕಡಲತೀರದಲ್ಲಿ ಜನಪ್ರಿಯ ಚಟುವಟಿಕೆಗಳಾಗಿವೆ.



ಮರೀನಾ ಕಡಲತೀರದ ಪ್ರಮುಖ ಆಕರ್ಷಣೆಗಳೆಂದರೆ  ಅಕ್ವೇರಿಯಂ ಮತ್ತು ಐಸ್ ಹೌಸ್. ಚೆಪಾಕ್ ಅರಮನೆ, ಸೆನೆಟ್ ಹೌಸ್, PWD ಕಛೇರಿ, ಪ್ರೆಸಿಡೆನ್ಸಿ ಕಾಲೇಜು ಮತ್ತು ಚೆನ್ನೈ ವಿಶ್ವವಿದ್ಯಾನಿಲಯವು ಬೀಚ್ ಡ್ರೈವ್‌ನಲ್ಲಿರುವ ಐತಿಹಾಸಿಕ ಕಟ್ಟಡಗಳಾಗಿವೆ.


ವಿಕ್ಟರಿ ಆಫ್ ಲೇಬರ್ ಮತ್ತು ಮಹಾತ್ಮ ಗಾಂಧಿ ಮರೀನಾ ಬೀಚ್‌ನಲ್ಲಿರುವ ಎರಡು ಪ್ರಮುಖ ಪ್ರತಿಮೆಗಳು. ಈ ಚೆನ್ನೈ ಕಡಲತೀರದ ಉದ್ದಕ್ಕೂ ಇರುವ ಇತರ ಪ್ರತಿಮೆಗಳಲ್ಲಿ ಸ್ವಾಮಿ ಶಿವಾನಂದ, ಅವಯ್ಯರ್, ತಂತೈ ಪೆರಿಯಾರ್, ತಿರುವಳ್ಳುವರ್, ಡಾ. ಅನ್ನಿ ಬೀಸೆಂಟ್, ಜಿಯು ಪೋಪ್, ಸರ್ ಥಾಮಸ್ ಮನ್ರೋ, ಸುಬ್ರಮಣಿಯ ಭಾರತಿಯಾರ್, ಕಾಮರಾಜರ್, ರಾಬರ್ಟ್ ಕಾಲ್ಡ್ವೆಲ್, ಕನ್ನಗಿ, ಕಾಮರಾಜರ್, ಎಂಜಿ ರಾಮಚಂದ್ರನ್ ಮತ್ತು ಶಿವಾಜಿ  ಗಣೇಶನ್ ಪ್ರತಿಮೆಗಳು ಮುಖ್ಯವಾಗಿವೆ.