#ಅಮರ
ಆ ಮರ
ತಬ್ಬಿದೆ
ಈ ಮರ
ಹೇಳುತ್ತಿವೆ
ನಮ್ಮ ಸ್ನೇಹ
ಅಮರ
ಸಿಹಿಜೀವಿ ವೆಂಕಟೇಶ್ವರ
ಚಿತ್ರ ಕೃಪೆ: ಅಂತರ್ಜಾಲ..
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಳೆದ ವರ್ಷ ಅಕ್ಟೋಬರ್ ರಜೆಯಲ್ಲಿ ಅಂಡಮಾನ್ ಗೆ ಟೂರ್ ಹೊರಟಾಗ ಎರ್ ಇಂಡಿಯಾದ ಪ್ರಮಾದದಿಂದ ಫ್ಲೈಟ್ ಕ್ಯಾನ್ಸಲ್ ಆದ ಪರಿಣಾಮವಾಗಿ ಎರಡು ದಿನ ಅವರ ಖರ್ಚಿನಲ್ಲಿ ಚೆನ್ನೈನ ಒಂದು ಹೋಟೆಲ್ ನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿದ್ದರು. ನಮಗೆ ಅದೊಂದು ಬೋನಸ್ ಟ್ರಿಪ್ ಮಾಡಲು ಸಹಕಾರಿಯಾಯಿತು. ಆ ಸಮಯದಲ್ಲಿ ನಾವು ಮರೀನಾ ಬೀಚ್ ನ ಸೌಂದರ್ಯ ಸವಿದೆವು.
ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಲ್ಲಿರುವ ಮರೀನಾ ಬೀಚ್ ಭಾರತದ ಅತಿ ಉದ್ದದ ಮತ್ತು ವಿಶ್ವದ ಎರಡನೇ ಅತಿ ಉದ್ದದ ಬೀಚ್ ಆಗಿದೆ. ಸುಮಾರು 12 ಕಿಲೋಮೀಟರ್ಗಳ ಈ ಬೀಚ್ ದಕ್ಷಿಣದಲ್ಲಿ ಬೀಸಂಟ್ ನಗರದಿಂದ ಉತ್ತರದಲ್ಲಿ ಸೇಂಟ್ ಜಾರ್ಜ್ ಕೋಟೆಯವರೆಗೆ ವ್ಯಾಪಿಸಿದೆ. ಚೆನ್ನೈ ಮರೀನಾ ಬೀಚ್ ಅನ್ನು ಗವರ್ನರ್ ಮೌಂಟ್ಸ್ಟುವರ್ಟ್ ಎಲ್ಫಿನ್ಸ್ಟೋನ್ ಗ್ರಾಂಟ್ ಡಫ್ 1880 ರಲ್ಲಿ ನವೀಕರಿಸಿದರು. ಚೆನ್ನೈಗೆ ಪ್ರಯಾಣಿಸುವ ಎಲ್ಲಾ ಪ್ರವಾಸಿಗರು ಈ ಭವ್ಯವಾದ ಚೆನ್ನೈ ಬೀಚ್ಗೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಮರೀನಾ ಬೀಚ್ ಅನ್ನು ಬಸ್ಸುಗಳು, ಟ್ಯಾಕ್ಸಿಗಳು, ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.
ಮರೀನಾ ಬೀಚ್ ಮುಂಜಾನೆ ಮತ್ತು ಸಂಜೆಯ ಸಮಯದಲ್ಲಿ ಚಟುವಟಿಕೆಯಿಂದ ತುಂಬಿರುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಕಡಲತೀರಗಳ ಉದ್ದಕ್ಕೂ ನಡೆಯುವುದು ಎಲ್ಲರಿಗೂ ಆಹ್ಲಾದಕರ ಅನುಭವ ನೀಡುತ್ತದೆ ಸಂಜೆಯ ವೇಳೆಗೆ ಈ ಬೀಚ್ ಕಲಾಕೃತಿಗಳು, ಕರಕುಶಲ ಪ್ರದರ್ಶನಗಳು, ಆಭರಣಗಳು ಮತ್ತು ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಹಲವಾರು ಮಳಿಗೆಗಳೊಂದಿಗೆ ಜಗಮಗಿಸುತ್ತದೆ.
ಗಾಳಿಪಟಗಳನ್ನು ಹಾರಿಸುವುದು ಮತ್ತು ಕುದುರೆ ಸವಾರಿ ಈ ಕಡಲತೀರದಲ್ಲಿ ಜನಪ್ರಿಯ ಚಟುವಟಿಕೆಗಳಾಗಿವೆ.
ಮರೀನಾ ಕಡಲತೀರದ ಪ್ರಮುಖ ಆಕರ್ಷಣೆಗಳೆಂದರೆ ಅಕ್ವೇರಿಯಂ ಮತ್ತು ಐಸ್ ಹೌಸ್. ಚೆಪಾಕ್ ಅರಮನೆ, ಸೆನೆಟ್ ಹೌಸ್, PWD ಕಛೇರಿ, ಪ್ರೆಸಿಡೆನ್ಸಿ ಕಾಲೇಜು ಮತ್ತು ಚೆನ್ನೈ ವಿಶ್ವವಿದ್ಯಾನಿಲಯವು ಬೀಚ್ ಡ್ರೈವ್ನಲ್ಲಿರುವ ಐತಿಹಾಸಿಕ ಕಟ್ಟಡಗಳಾಗಿವೆ.
ವಿಕ್ಟರಿ ಆಫ್ ಲೇಬರ್ ಮತ್ತು ಮಹಾತ್ಮ ಗಾಂಧಿ ಮರೀನಾ ಬೀಚ್ನಲ್ಲಿರುವ ಎರಡು ಪ್ರಮುಖ ಪ್ರತಿಮೆಗಳು. ಈ ಚೆನ್ನೈ ಕಡಲತೀರದ ಉದ್ದಕ್ಕೂ ಇರುವ ಇತರ ಪ್ರತಿಮೆಗಳಲ್ಲಿ ಸ್ವಾಮಿ ಶಿವಾನಂದ, ಅವಯ್ಯರ್, ತಂತೈ ಪೆರಿಯಾರ್, ತಿರುವಳ್ಳುವರ್, ಡಾ. ಅನ್ನಿ ಬೀಸೆಂಟ್, ಜಿಯು ಪೋಪ್, ಸರ್ ಥಾಮಸ್ ಮನ್ರೋ, ಸುಬ್ರಮಣಿಯ ಭಾರತಿಯಾರ್, ಕಾಮರಾಜರ್, ರಾಬರ್ಟ್ ಕಾಲ್ಡ್ವೆಲ್, ಕನ್ನಗಿ, ಕಾಮರಾಜರ್, ಎಂಜಿ ರಾಮಚಂದ್ರನ್ ಮತ್ತು ಶಿವಾಜಿ ಗಣೇಶನ್ ಪ್ರತಿಮೆಗಳು ಮುಖ್ಯವಾಗಿವೆ.
ಕಲೆಯಲ್ಲಿ ಪ್ರಪಂಚದ ಅತ್ಯಂತ ಹಳೆಯ ಆಪ್ಟಿಕಲ್ ಭ್ರಮೆಗಳಲ್ಲಿ ಒಂದಾದ
ಆನೆ ಮತ್ತು ಗೂಳಿ ಒಂದೇ ತಲೆಯನ್ನು ಹೊಂದಿರುವ
900 ವರ್ಷಗಳಷ್ಟು ಹಳೆಯದಾದ ಈ ಸೊಗಸಾದ ಈ ಶಿಲ್ಪ ತಮಿಳುನಾಡಿನ ಐರಾವತೇಶ್ವರ ಮಂದಿರದಲ್ಲಿ ಕಾಣಬಹುದು ಇದು ಚೋಳರ ವಾಸ್ತುಶಿಲ್ಪದ ಶ್ರೇಷ್ಠತೆಗೆ ಮತ್ತೊಂದು ಉದಾಹರಣೆ.
ನಮ್ಮ ಸಾಂಸ್ಕೃತಿಕ ಪರಂಪರೆ ನಮ್ಮ ಹೆಮ್ಮೆ..
#ನಂತರ
ನಮ್ಮಲ್ಲಿ ನಾನೂ ಸೇರಿ ಹಲವರು ಯಾವುದೇ ಕಾರ್ಯವನ್ನು ಮುಂದೂಡುವ ರೋಗ ಹೊಂದಿದ್ದೇವೆ.ಆಮೇಲೆ ಮಾಡಿದರಾಯಿತು.ಮುಂದೆ ನೋಡೋಣ ನಂತರ ಮಾಡಿದರಾಯಿತು ಎಂಬ ನೆಪ ಹೇಳಿ ಸುಮ್ಮನಾಗುತ್ತೇವೆ.ಇತ್ತೀಚೆಗೆ
"ಬಿಫೋರ್ ದ ಕಾಫಿ ಗೆಟ್ಸ್ ಕೋಲ್ಡ್ "ಎಂಬ ತೋಶಿಕಾಜು ಕವಾಗುಚಿಯವರ ಕಾದಂಬರಿಯ ಬಗ್ಗೆ ಓದುವಾಗ ಅಲ್ಲಿನ ಕೆಲ ಸಾಲುಗಳು ಇಷ್ಟವಾದವು.
ನಂತರ ಮಾಡುವೆ ಎಂಬುದನ್ನು ತೆಗೆದು ಹಾಕಿ.
ನಂತರ ಕಾಫಿ ತಣ್ಣಗಾಗುತ್ತದೆ.
ನಂತರ, ನೀವು ಆಸಕ್ತಿ ಕಳೆದುಕೊಳ್ಳುತ್ತೀರಿ.
ನಂತರ, ಹಗಲು ರಾತ್ರಿಯಾಗಿ ಬದಲಾಗುತ್ತದೆ.
ನಂತರ, ಜನರು ಬೆಳೆಯುತ್ತಾರೆ.
ನಂತರ, ಜನರಿಗೆ ವಯಸ್ಸಾಗುತ್ತದೆ.
ನಂತರ, ಜೀವನವೇ ಕಳೆದುಹೋಗುತ್ತದೆ.
ನಂತರ, ನೀವು ಏನನ್ನೂ ಮಾಡಲಿಲ್ಲ ಎಂದು ವಿಷಾದಿಸುತ್ತೀರಿ ...
ನಿಮಗೆ ಅವಕಾಶ ಸಿಕ್ಕಾಗ.
ನಿಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಪ್ರಮಾಣಿಕವಾಗಿ ಮಾಡಬೇಕು..
ಹೌದಲ್ಲವೆ?
#sihijeeviVenkateshwara
#think #inspiration #literature
ಎಪಿಕೆ ಫೈಲ್ ಡೌನ್ಲೋಡ್ ಆಗಿದ್ದರಿಂದ ನನ್ನ ಮೊಬೈಲ್ ಹ್ಯಾಕ್ ಮಾಡಿ ನನ್ನ ಮೊಬೈಲ್ ಕಂಟ್ರೋಲ್ ತೆಗೆದುಕೊಂಡು ನಾನು ನೋಡು ನೋಡುತ್ತಿದ್ದಂತೆ ನನಗೊಂದು ಓಟಿಪಿ ಅವರಿಗೊಂದು ಓಟಿಪಿ ಬರುತ್ತಿತ್ತು, ನಮಗೆ ಗೊತ್ತಿಲ್ಲದ ಹಾಗೆ ಮೆಸೇಜ್ ಗಳಿಂದ ಬರುವ ಓಟಿಪಿಗಳನ್ನು ತಾವೇ ಸ್ವೀಕರಿಸಿ ಫ್ಲಿಪ್ ಕಾರ್ಟ್ ನಲ್ಲಿ ತಲಾ 10,000 ಅಂತೆ ಎರಡು ಸಲ ಆರ್ಡರ್ ಮಾಡಿ ಆನ್ಲೈನ್ ಮೂಲಕ ಎಲೆಕ್ಟ್ರಾನಿಕ್ ಇ-ಮೇಲ್ ಗಿಫ್ಟ್ ಓಚರ್ ಗಳನ್ನು ಪಡೆದುಕೊಂಡಿರುತ್ತಾರೆ. ಮಧ್ಯಾಹ್ನ 12 ಗಂಟೆಗೆ ಆರ್ಡರ್ ಮಾಡಿದರು, 12:30ಕ್ಕೆ ಅವರಿಗೆ ಡೆಲಿವರಿ ಆಯಿತು. ಯಾರೋ ಮಹಾನ್ ಬಾವರು ಗ್ರೂಪಿಗೆ ಎಪಿಕೆ ಫೈಲ್ಸ್ ಕಳಿಸಿಕೊಟ್ಟಿದ್ದರಿಂದ ನಾನು ಸರಿಯಾಗಿ ಪರಿಶೀಲದೆ ಅವಸರವಾಗಿ ಡೌನ್ಲೋಡ್ ಮಾಡಿದೆ, ಆಕರಗಳು ನನ್ನ ಮೊಬೈಲನ್ನು ಮೊಬೈಲ್ ಇರೋ ಮಾಹಿತಿಗಳನ್ನು ನಿಧಾನವಾಗಿ ಸಂಗ್ರಹಿಸಿ, ಒಂದೇ ಸಲ ತಲಾ ಹತ್ತು ಸಾವಿರ ರೂಪಾಯಿಗೆ ಐದು ಸಲ ಆರ್ಡರ್ ಮಾಡಿದರು, ಅಂದರೆ 50,000ಗಳನ್ನು ಆರ್ಡರ್ ಮಾಡಿದರು, ನಾನು ತಕ್ಷಣ ಬ್ಯಾಂಕ್ಗೆ ಫೋನ್ ಮಾಡಿ ನನ್ನ ಎಲ್ಲಾ ಯುಪಿಐ ಬ್ಯಾಂಕ್ ಎಟಿಎಂ ಕಾರ್ಡ್ ಗಳನ್ನು ಸ್ಟಾಪ್ ಮಾಡುವಂತೆ ಕೋರಿಕೊಂಡಿದ್ದರಿಂದ, ಬ್ಯಾಂಕಿನವರು ತಕ್ಷಣ ಕಾರ್ಡನ್ನು ಲಾಕ್ ಮಾಡಿದರು, ಅಷ್ಟರೊಳಗಾಗಿ, 20,000 ಹ್ಯಾಕರ್ಸ್ ಕೈಗೆ ಹೋಗಿತ್ತು. ಹಾಗಾಗಿ ನಾನು ಎಲ್ಲರಲ್ಲಿ ಕೇಳಿಕೊಳ್ಳುವುದೇನೆಂದರೆ ಅಮೆಜಾನ್, ಫ್ಲಿಪ್ಕಾರ್ಟ್, ಆರ್ಡರ್ ಮಾಡುವಾಗ ಡೋರ್ ಡೆಲಿವರಿ ಮಾಡಿ, ದಯವಿಟ್ಟು ಎಟಿಎಂ ಕಾರ್ಡ್ ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಹಾಕಿದ್ದರೆ ದಯವಿಟ್ಟು ಈಗ ಕೂಡಲೇ ಡಿಲೀಟ್ ಮಾಡಿ, ನನಗಾದ ಪರಿಸ್ಥಿತಿ ನಿಮಗೆ ಬರುವುದು ಬೇಡ, ಜಾಗರೂಕರಾಗಿರಿ, ಎಚ್ಚರವಾಗಿರಿ. ನಮ್ಮ ನ್ಯಾಯಾಲಯದಲ್ಲಿ ಈ ರೀತಿ 20 ರಿಂದ 25 ಕೇಸ್ಗಳು ಪ್ರತಿದಿನ ನೋಂದಣಿ ಆಗುತ್ತಿದೆ. ನಮಗೆ ಈ ರೀತಿ ಆದರೆ ಜನಸಾಮಾನ್ಯರ ಗತಿಯೇನು?. ನನಗಾದ ಪರಿಸ್ಥಿತಿಯನ್ನು ಎಲ್ಲರಿಗೂ ತಿಳಿಸಿ ನೀವು ಸಹ ಎಚ್ಚರದಿಂದಿರಿ. 🙏🙏