14 ಆಗಸ್ಟ್ 2024

ನಮ್ಮ ಆಯ್ಕೆ.

 


ನಮ್ಮ ಆಯ್ಕೆ.


ನಮ್ಮ ಆಯ್ಕೆಯಿಂದಲೇ  ತಂದಿರುತ್ತೇವೆ ಹೆಂಡತಿ ಮತ್ತು ಸರ್ಕಾರ|

ಇವು ನಮಗೇ ತಿರುಗಿ ಬೀಳುತ್ತವೆ

ಸಿಕ್ಕರೆ ಅಧಿಕಾರ||


ಸಿಹಿಜೀವಿ ವೆಂಕಟೇಶ್ವರ


ಭದ್ರಾ


 


ಭದ್ರಾ.


ರೈತರ ಜೀವನಾಡಿಯಾಗಿ 

ನಿಂತಿದೆ ನಮ್ಮ ಹೆಮ್ಮೆಯ ಅಣೆಕಟ್ಟು ತುಂಗಭದ್ರಾ|

ಜಲಾಶಯದ ನೀರು ಅನವಶ್ಯಕವಾಗಿ ಪೋಲಾಗದಂತೆ ಮಾಡ್ರಪ್ಪ ಗೇಟ್ ಗಳನ್ನು ಭದ್ರಾ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

13 ಆಗಸ್ಟ್ 2024

ಇಂಧನ


 


ಇಂಧನ 


ಸಂಕಷ್ಟಗಳು ಬಂದಾಗ 

ಬಗೆಹರಿಸದಿರಬಹುದು ಧನ`

ಎಲ್ಲಾ ಕಷ್ಟಗಳ ಜಯಿಸಿಬಿಡಬಹುದು

ನಮ್ಮಲಿದ್ದರೆ ಜ್ನಾನವೆಂಬ ಇಂಧನ||


ಸಿಹಿಜೀವಿ ವೆಂಕಟೇಶ್ವರ

12 ಆಗಸ್ಟ್ 2024

ಹಣವೂ ಇರಲಿ.ವಿವೇಕ ಮೊದಲಿರಲಿ


 


ಹಣವೂ ಇರಲಿ.ವಿವೇಕ ಮೊದಲಿರಲಿ


ಹಣದಿಂದ ಎಲ್ಲವನ್ನೂ ಪಡೆಯಬಹುದು ಎಂಬ ಭಾವನೆ ಬಹಳ ಜನರಿಗಿದೆ. ಇದಕ್ಕೆ ಕೆಲವರು  #money makes many things  ಎಂದೂ ಹೇಳುತ್ತಾರೆ. ಆದರೆ ಎಷ್ಟೋ ಅಮೂಲ್ಯವಾದವುಗಳನ್ನು  ಹಣದಿಂದ ಕೊಳ್ಳಲು ಸಾದ್ಯವಿಲ್ಲ. ಇದಕ್ಕೆ ವಿರುದ್ಧವಾಗಿ ಕೇವಲ ಜ್ಞಾನದಿಂದ ಮಾತ್ರ ಜೀವನ ಸಾಗಿಸಲು ಸಾಧ್ಯ ಎಂಬುದನ್ನು ಸಹ ಒಪ್ಪಲು ಸಾಧ್ಯವಿಲ್ಲ. ಪರಿಪೂರ್ಣವಾದ ಜೀವನ ನಮ್ಮದಾಗಲು ಜ್ಞಾನವೂ ಬೇಕು. ವಿವೇಕವಿರಬೇಕು.ಹಣವೂ ಅಗತ್ಯ. ಅಲ್ಲವೇ?


ಸಿಹಿಜೀವಿ ವೆಂಕಟೇಶ್ವರ

10 ಆಗಸ್ಟ್ 2024

ಪ್ರೀತಿಯ ಶಕ್ತಿ.

 

ಪ್ರೀತಿಯ ಶಕ್ತಿ


ಪರಸ್ಪರ ದ್ವೇಷ ಸಾಧಿಸುತ

ಕಚ್ಚಾಡುತಿಹೆವು ನಾವು|

ಪ್ರೀತಿಯನ್ನು ತೋರಿದರೆ ಚಿಗುರದೇ ಕೊಡಲಿಯ ಕಾವು?