ಸಂತಸದ ಮಾರ್ಗ
ಎಂದಿಗೂ ಅಳಲು ಬೇಡ
ಜಗಳವಾಡಲೇ ಬೇಡ
ಇತರರ ಕೆಣಕಬೇಡ
ಇದೇ ಸಂತಸದ ಮಾರ್ಗ ನೋಡ
ಸಿಹಿಜೀವಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಸಂತಸದ ಮಾರ್ಗ
ಎಂದಿಗೂ ಅಳಲು ಬೇಡ
ಜಗಳವಾಡಲೇ ಬೇಡ
ಇತರರ ಕೆಣಕಬೇಡ
ಇದೇ ಸಂತಸದ ಮಾರ್ಗ ನೋಡ
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಇಂಧನ
ಪ್ರಮಾಣಿಕತೆ, ಬದ್ದತೆ,ಮೌಲ್ಯಗಳು
ಪ್ರಜಾಪ್ರಭುತ್ವ ಮತ್ತು ಚುನಾವಣೆಗೆ ಇಂಧನ|
ಈಗೀಗ ಇವೆಲ್ಲವೂ ಗೌಣ
ಇವಿರದಿದ್ದರೂ ಚಿಂತೆಯಿಲ್ಲ
ಇದ್ದರೆ ಸಾಕು ಧನ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಅಸಲಿ, ನಕಲಿ
ದಿನಕ್ಕೊಂದು ವಸ್ತು ಸಂತೆಯಲಿ
ಯಾವುದು ಅಸಲಿ? ನಕಲಿ?
ಗುರುತಿಸುವುದನ್ನು ನೀ ಕಲಿ
ಬುದ್ದಿವಂತನಾಗು ಈ ಜಗದಲಿ
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ವಿಶ್ವ ಆರೋಗ್ಯ ದಿನ. ನನ್ನ ಆರೋಗ್ಯ ನನ್ನ ಹಕ್ಕು.
ಮಾನವನ ಜೀವಿತ ಸರಾಸರಿ ಆಯುಷ್ಯ ಹೆಚ್ಚಾಗಿರುವುದು ಇತ್ತೀಚಿನ ಸಮೀಕ್ಷೆಯಿಂದ ಸಾಬೀತಾಗಿದೆ. ಆದರೂ ಜಾಗತಿಕ ತಾಪಮಾನ ಮತ್ತು ಇತರ ಕಾರಣದಿಂದಾಗಿ ವಿವಿಧ ರೋಗಗಳಿಂದ ಬಳಲುವವರೂ ಹೆಚ್ಚಾಗಿದ್ದಾರೆ.
ವಿಶ್ವದ ಸಕಲ ಮನುಜರ ಆರೋಗ್ಯವನ್ನು ಕಾಪಾಡಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಹಲವು ಯೋಜನೆಗಳನ್ನು ಪ್ರಾರಂಭಿಸಲಾಯಿತು. 1948ರಲ್ಲಿ ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಶೃಂಗಸಭೆಯಲ್ಲಿ ವರ್ಷಕ್ಕೊಮ್ಮೆ ವಿಶ್ವ ಆರೋಗ್ಯ ದಿನವನ್ನು ಆಚರಿಸುವ ಮಹತ್ವದ ಬಗ್ಗೆ ಸಮಾಲೋಚಿಸಲಾಯಿತು.
1950ರ ಏಪ್ರಿಲ್ 7 ರಂದು ಪ್ರಥಮ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ಅಂದಿನಿಂದ ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷವೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಶ್ವದೆಲ್ಲೆಡೆ ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಾ ಬಂದಿದೆ. ಪ್ರತಿ ವರ್ಷ ಒಂದೊಂದು ಥೀಮ್ ಆಧರಿಸಿ ಈ ದಿನವನ್ನು ಆಚರಿಸಲಾಗುತ್ತದೆ. "ನನ್ನ ಆರೋಗ್ಯ ನನ್ನ ಹಕ್ಕು" ಇದು 2024 ರ ಥೀಮ್! ಹೌದು ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಹಕ್ಕೂ ಹೌದು ಕರ್ತವ್ಯ ಕೂಡ.
ಆರೋಗ್ಯದ ಕಾಳಜಿಯ ಕುರಿತಾದ ವಿಷಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಮತ್ತು ಈ ಬಗ್ಗೆ ಅರಿವು ಮೂಡಿಸಲು ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಹಲವು ಖ್ಯಾತನಾಮರು ಈ ಕಾರ್ಯಕ್ರಮಗಳಲ್ಲಿ ಯಾವುದೇ ಪ್ರತಿಫಲವಿಲ್ಲದೇ ಭಾಗಿಯಾಗಿ ಜನಹಿತ ಕಾರ್ಯಕ್ರಮಗಳಿಗೆ ಬಂಬಲ ನೀಡುತ್ತಾ ಬಂದಿದ್ದಾರೆ. ವಿಷಯದ ಕುರಿತಾದ ಪ್ರಸ್ತುತಿಗಳು ಇಡಿಯ ವರ್ಷ ಜನರ ಮನದಲ್ಲಿ ಹಸಿರಾಗಿ ಉಳಿಯಲು ಕ್ರಮ ಕೈಗೊಳ್ಳಲಾಗುತ್ತದೆ.
ಅರಿವಿಲ್ಲದೇ ಜನತೆ ಆಚರಿಸುತ್ತಾ ಬಂದಿರುವ ಅನಾರೋಗ್ಯಕರ ಮತ್ತು ಪಿಡುಗುಗಳ ಬಗ್ಗೆ ಮಾಹಿತಿ ನೀಡಿ ಜನರನ್ನು ಸರಿದಾರಿಗೆ ತರಲು ಪ್ರಯತ್ನಪಡುತ್ತಾರೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ಔಷಧಿ, ಕಾಪಾಡಬೇಕಾದ ನೈರ್ಮಲ್ಯ, ಸ್ವಚ್ಛತಾ ಅಭ್ಯಾಸಗಳು, ನೀರಿನ ದುಂದುವೆಚ್ಚ, ಪರಿಸರದ ಸ್ವಚ್ಛತೆ, ಮೊದಲಾದ ವಿಷಯಗಳ ಬಗ್ಗೆ ಕಾಳಜಿವಹಿಸುವ ಮಾಹಿತಿಯನ್ನು ನೀಡುತ್ತಾರೆ. ನಮ್ಮ ಆರೋಗ್ಯ ಕಾಪಾಡಿಕೊಂಡು ಸಮಾಜದ ಆರೋಗ್ಯ ಉತ್ತಮಗೊಳಿಸುವ ಪ್ರಯತ್ನಕ್ಕೆ ನಾವೂ ಕೈಜೋಡಿಸೋಣ ತನ್ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪಣ ತೊಡೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
ಉಗಾದಿ ಹಬ್ಬಕ್ಕೆ ಅಲಂಕಾರದ ಟ್ರೆಂಡ್ .
ಹಬ್ಬಗಳೆಂದರೆ ಏನೋ ಖುಷಿ ತಿಂಗಳಿಂದ ಹೊಸ ಬಟ್ಟೆ ಕೊಂಡು , ಸಾಮಗ್ರಿಗಳನ್ನು ಕೊಂಡು ಸಂಭ್ರಮಿಸಲು ಸಿದ್ದತೆ ಮಾಡಿಕೊಳ್ಳುತ್ತೇವೆ.ಬಹುತೇಕ ಭಾರತೀಯರಿಗೆ ಹೊಸ ವರ್ಷ ಆರಂಭವಾಗುವುದು ಉಗಾದಿಯಂದು ಹಾಗಾಗಿ ಆ ಹಬ್ಬಕ್ಕೆ ಇತ್ತೀಚಿನ ದಿನಗಳಲ್ಲಿ ಮನೆಯನ್ನು ವಿನೂತನ ರೀತಿಯಲ್ಲಿ ಡೆಕೊರೇಶನ್ ಮಾಡುವ ಟ್ರೆಂಡ್ ಶುರುವಾಗಿದೆ.ಈ ಶುಭ ಸಂದರ್ಭದಲ್ಲಿ ನೀವೂ ನಿಮ್ಮ ಮನೆಯನ್ನು ಹೊಸ ಟ್ರೆಂಡ್ ಮೂಲಕ ಅಲಂಕರಿಸಲು ಈ ಅಂಶಗಳನ್ನು ಗಮನಿಸಬಹುದು.
೧ ಮನೆಯನ್ನು ಚೆನ್ನಾಗಿ ಸ್ವಚ್ಚಗೊಳಿಸೋಣ..
ಇಂದಿನ ಧಾವಂತದ ಜೀವನದಲ್ಲಿ ಹಾಗೂ ವಿಭಕ್ತ ಕುಟುಂಬಗಳು ಹೆಚ್ಚಾಗಿರುವ ಕಾಲದಲ್ಲಿ ಮನೆಯ ಎಲ್ಲರೂ ಉದ್ಯೋಗ ಮಾಡುವವರಾಗಿರುವುದರಿಂದ ಮನೆಯನ್ನು ಸಮಗ್ರವಾಗಿ ಸ್ವಚ್ಚತೆ ಮಾಡಲು ಸಮಯ ಸಿಗದಿರಬಹುದು ಈ ಹಬ್ಬಕ್ಕೆ ನಮ್ಮ ಮನೆಯನ್ನು ಎಲ್ಲರೂ ಸೇರಿ ಸ್ವಚ್ಚ ಮಾಡೋಣ.
೨ ಹಬ್ಬಕ್ಕೆ ತಾಜಾ ಹೂ ಸುಗಂಧವನ್ನುಖರಿದಿಸೋಣ
ಬಹುತೇಕ ಮನೆಗಳಲ್ಲಿ ಸೌಗಂಧವಿರದ ಕೃತಕ ಹೂವಿನ ಹಾರಗಳು ಮನೆಯ ಬಾಗಿಲು ಮತ್ತು ಇತರೆಡೆ ನೇತಾಡುವುದು ಸಾಮಾನ್ಯ. ಆದರೆ ತಾಜಾ ಹೂವಿನ ಸುಗಂಧ ಪರಿಮಳದ ಆನಂದ ಅನುಭವಿಸಲು ಸ್ವಾಭಾವಿಕವಾದ ತಾಜಾ ಹೂಗಳನ್ನು ನಮ್ಮ ಮನೆಯ ಅಲಂಕಾರಕ್ಕೆ ಬಳಸೋಣ.
೩ ಮಾವಿನ ಎಲೆಗಳ ಅಲಂಕಾರ.
ಉಗಾದಿಗೂ ಮಾವು ಬೇವಿಗೂ ಅವಿನಾಭಾವ ಸಂಬಂಧವಿದೆ ಮಾವಿನ ತಳಿರು ತೋರಣದಿಂದ ನಮ್ಮ ಬಾಗಿಲು ಮತ್ತು ಮನೆಯನ್ನು ಸಿಂಗರಿಸೋಣ ಜೊತೆಗೆ ಬೇವಿನ ಸೊಪ್ಪನ್ನು ಸಹ ಬಳಸೋಣ.
೪ ವರ್ಣ ರಂಜಿತ ರಂಗೋಲಿ.
ಸಂಕ್ರಾಂತಿ ದೀಪಾವಳಿ ಸೇರಿದಂತೆ ಎಲ್ಲಾ ಹಬ್ಬಕ್ಕೆ ನಾವು ರಂಗೋಲಿ ಹಾಕುವುದು ಸಾಮಾನ್ಯವಾದರೂ ಯುಗಾದಿಗೆಂದೇ ಒಂದು ಸುಂದರ ವಿನ್ಯಾಸದ ರಂಗೋಲಿಯಿಂದ ನಮ್ಮ ಮನೆಯಂಗಳವನ್ನು ಅಲಂಕರಿಸೋಣ.
೫ ಹಿತ್ತಾಳೆ ಬಟ್ಟಲಿನಲ್ಲಿ ತೇಲುವ ವಿವಿಧ ರೀತಿಯ ಹೂಗಳ ಅಲಂಕಾರದ ಮೂಲಕ ನಮ್ಮ ಮನೆಯನ್ನು ಇನ್ನೂ ಸುಂದರವಾಗಿ ಕಾಣುವಂತೆ ಮಾಡೋಣ ಇದು ಇತ್ತೀಚಿನ ಹೊಸ ಟ್ರೆಂಡ್ ಆಗಿದೆ.
೬ ಪೂಜಾ ಕೊಠಡಿಯನ್ನು ಸ್ವಚ್ಚಗೊಳಿಸಿ ಉಗಾದಿ ಹಬ್ಬಕ್ಕೆ ನಮ್ಮ ಮನೆಯ ದೇವ ದೇವತೆಗಳನ್ನು ವಿಭಿನ್ನವಾಗಿ ತಾಜಾ ಹೂಗಳನ್ನು ಬಳಸಿ ಅಲಂಕಾರ ಮಾಡಿ ಧೂಪದ್ರವ್ಯ ಗಳಿಂದ ಮನೆಯ ಸದಸ್ಯರೆಲ್ಲರೂ ಸೇರಿ ದೇವರ ಪೂಜಿಸಿ ಆನಂದಿಸೋಣ.
೭ ಹಬ್ಬಕ್ಕೆ ವಿಭಿನ್ನವಾದ ಉಡುಗೆ ತೊಡುಗೆಗಳನ್ನು ತೊಟ್ಟು ಅನಂದಿಸೋಣ.ಈ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಈ ವರ್ಷ ಬಂದ ಹೊಸ ಟ್ರೆಂಡ್ ನ ಬಟ್ಟೆಗಳಿಗೆ ಆದ್ಯತೆ ನೀಡಿ ಕುಟುಂಬದ ಸದಸ್ಯರೆಲ್ಲರೂ ತೊಟ್ಟು ಗ್ರೂಪ್ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸೋಣ.
೮ ಹಬ್ಬದ ಸಂಜೆ ದೀಪ ಬೆಳಗಿಸೋಣ.
ಸಾಮಾನ್ಯವಾಗಿ ದೀಪಾವಳಿಯಲ್ಲಿ ಸಂಜೆ ದೀಪಗಳನ್ನು ಬೆಳಗಿ ಹಬ್ಬದ ಆಚರಣೆಯನ್ನು ಮಾಡುತ್ತೇವೆ ಉಗಾದಿಯ ಸಂಜೆಯೂ ನಾವು ಮನೆಯ ಮುಂದೆ ದೀಪಗಳ ಬೆಳಗಬಹುದು ಜೊತೆಗೆ ಅಲಂಕಾರಿಕ ಎಲೆಕ್ಟ್ರಿಕ್ ಎಲ್ ಇ ಡಿ ಸಹ ಬಳಸಿಕೊಂಡು ಮನೆ ಮನವನ್ನು ಜಗಮಗಿಸಬಹುದು.
ಕಾಲಕ್ಕೆ ತಕ್ಕಂತೆ ನಾವು ನಮ್ಮ ಆಚಾರ ವಿಚಾರಗಳನ್ನು ಪಾಲಿಸುತ್ತಾ ತಂತ್ರಜ್ಞಾನದ ಟಚ್ ನೀಡುವ ಮೂಲಕ ಹೊಸ ರೀತಿಯಲ್ಲಿ ಅಚರಣೆ ಮಾಡುತ್ತಾ ನಮ್ಮ ಸಂಸ್ಕೃತಿಯನ್ನು ಪಾಲಿಸೋಣ ಈ ವರ್ಷದ ಉಗಾದಿ ಹಬ್ಬವನ್ನು ಇನ್ನೂ ಹೆಚ್ಚು ಸಂಭ್ರಮಿಸೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529