11 ಫೆಬ್ರವರಿ 2024

ಮರಳುಗಾಡು ..

 ಮರಳುಗಾಡು


ಬೇಸರದಿಂದ ಕೂಡಿ

ನನ್ನ ಜೀವನವಾಗಿದೆ

ಮರಳುಗಾಡು |

ನನ್ನ ಕಾಪಾಡಲು ನನ್ನ

ಕಡೆಗೆ ಮರಳು ಗಾಡು ||



ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಬಾರದ ರತ್ನ

 


ಬಾರದ ರತ್ನ


ಈ ವರ್ಷ ಐದು ಗಣ್ಯರಿಗೆ

ಸಿಕ್ಕಿದೆ ಭಾರತ ರತ್ನ|

ತಾವು ನಿರೀಕ್ಷಿಸಿದವರಿಗೆ 

ಸಿಗದಿದ್ದರೆ ಅದು ಬಾರದ ರತ್ನ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

09 ಫೆಬ್ರವರಿ 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩ #gk #quiz @kannada

 


ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ ೩


41."ದಿ ಸ್ಟಾರಿ ನೈಟ್" ಅನ್ನು ಯಾವ ಪ್ರಸಿದ್ಧ ಕಲಾವಿದ ಚಿತ್ರಿಸಿದ್ದಾರೆ?

42.ಚೀನಾದ ಕರೆನ್ಸಿ ಯಾವುದು?

43.ವಿಶ್ವದ ಅತಿ ಎತ್ತರದ ಜಲಪಾತ ಯಾವುದು?

44.ಮೈಕ್ರೋಸಾಫ್ಟ್ ಕಾರ್ಪೊರೇಶನ್ ಅನ್ನು ಸ್ಥಾಪಿಸಿದವರು ಯಾರು?

45.ಭಾರತದ ರಾಷ್ಟ್ರೀಯ ಲಾಂಛನ ಯಾವುದು?

46.ಭೂ ವಿಸ್ತೀರ್ಣದಲ್ಲಿ ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು?

47."ದಿ ಪರ್ಸಿಸ್ಟೆನ್ಸ್ ಆಫ್ ಮೆಮೊರಿ" ಅನ್ನು ಚಿತ್ರಿಸಿದವರು ಯಾರು?

48.ಭಾರತದ ಮೊದಲ ರಾಷ್ಟ್ರಪತಿ ಯಾರು?

49.ಆಸ್ಟ್ರೇಲಿಯಾದ ರಾಜಧಾನಿ ಯಾವುದು?

50.ಪ್ರಪಂಚದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆ ಯಾವುದು?

51.ಭಾರತದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ಮತ್ತು ಗೌರವ ಯಾವುದು?

52.ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು

53.ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

54."ದಿ ಕ್ಯಾಂಟರ್ಬರಿ ಟೇಲ್ಸ್" ಬರೆದವರು ಯಾರು?

55.ವಿಶ್ವದ ಅತ್ಯಂತ ಆಳವಾದ ಸಾಗರ ಯಾವುದು?

56.ಪ್ರಸ್ತುತ ಭಾರತದ ಪ್ರಧಾನ ಮಂತ್ರಿ ಯಾರು?

57.ಗುರುತ್ವಾಕರ್ಷಣೆಯ ನಿಯಮವನ್ನು ಕಂಡುಹಿಡಿದವರು ಯಾರು?

58.ಉತ್ತರ ಅಮೇರಿಕಾದಲ್ಲಿ ಅತಿ ದೊಡ್ಡ ಜಲಪಾತ

ಯಾವುದು?

59."ದಿ ಲಾಸ್ಟ್ ಸಪ್ಪರ್" ಅನ್ನು ಚಿತ್ರಿಸಿದವರು ಯಾರು?

60.ಭಾರತದ ಅತಿ ದೊಡ್ಡ ಮರುಭೂಮಿ ಯಾವುದು


ಉತ್ತರಗಳು.

41.ವಿನ್ಸೆಂಟ್ ವ್ಯಾನ್ ಗಾಗ್.

42.ಚೈನೀಸ್ ಯುವಾನ್.

43.ಏಂಜೆಲ್ ಫಾಲ್ಸ್.

44.ಬಿಲ್ ಗೇಟ್ಸ್ ಮತ್ತು ಪಾಲ್ ಅಲೆನ್.

45. ನಾಲ್ಕು ತಲೆಯ ಸಿಂಹ.

46.ವ್ಯಾಟಿಕನ್ ಸಿಟಿ.

47.ಸಾಲ್ವಡಾರ್ ಡಾಲಿ

48.ಡಾ. ರಾಜೇಂದ್ರ ಪ್ರಸಾದ್

49.ಕ್ಯಾನ್‌ಬೆರಾ

50.ಮ್ಯಾಂಡರಿನ್ ಚೈನೀಸ್.

51.ಭಾರತ ರತ್ನ

52.ರಾಜಸ್ಥಾನ

53.ಡಾ.ಬಿ.ಆರ್. ಅಂಬೇಡ್ಕರ್

54.ಜೆಫ್ರಿ ಚಾಸರ್.

55.ಪೆಸಿಫಿಕ್ ಸಾಗರ.

56.ನರೇಂದ್ರ ಮೋದಿ.

57.ಸರ್ ಐಸಾಕ್ ನ್ಯೂಟನ್.

58.ನಯಾಗರಾ ಜಲಪಾತ.

59.ಲಿಯೊನಾರ್ಡೊ ಡಾ ವಿನ್ಸಿ.

60.ಥಾರ್ ಮರುಭೂಮಿ


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು

ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ

9900925529

08 ಫೆಬ್ರವರಿ 2024

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ 2

 



ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಭಾಗ 2 



21 ವಿಶ್ವದ ಅತಿ ಎತ್ತರದ ಪರ್ವತ ಯಾವುದು


22.ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರಸ್ತುತ ಅಧ್ಯಕ್ಷರು ಯಾರು?


23.ಭೂಪ್ರದೇಶದ ಪ್ರಕಾರ ಅತ್ಯಂತ ಚಿಕ್ಕ ಖಂಡ ಯಾವುದು?


24.ಪೆನ್ಸಿಲಿನ್ ಕಂಡುಹಿಡಿದವರು ಯಾರು?


25.ಯಾವ ಪ್ರಸಿದ್ಧ ಭೌತಶಾಸ್ತ್ರಜ್ಞ ಸಾಪೇಕ್ಷತಾ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು?


26.ಭಾರತದ ರಾಷ್ಟ್ರೀಯ ಪ್ರಾಣಿ ಯಾವುದು ?


27.ವಿಶ್ವದ ಅತಿ ದೊಡ್ಡ ಸಾಗರ ಯಾವುದು?


28.ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ ಯಾರು?


29.ನಮ್ಮ ಸೌರವ್ಯೂಹದ ಯಾವ ಗ್ರಹವನ್ನು "ಕೆಂಪು ಗ್ರಹ" ಎಂದು ಕರೆಯಲಾಗುತ್ತದೆ?


30.ಜಪಾನ್ನ ರಾಜಧಾನಿ ಯಾವುದು?


31.ದೂರವಾಣಿಯನ್ನು ಕಂಡುಹಿಡಿದವರು ಯಾರು?


32.ವಿಶ್ವದ ಅತಿ ಉದ್ದದ ನದಿ ಯಾವುದು?


33.ಭೂ ವಿಸ್ತೀರ್ಣದಲ್ಲಿ ಜಗತ್ತಿನ ಅತಿ ದೊಡ್ಡ ದೇಶ ಯಾವುದು?


34.ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು?


35.ಕೆನಡಾದ ರಾಜಧಾನಿ ಯಾವುದು?


36.ಲೈಟ್ ಬಲ್ಬ್ ಅನ್ನು ಕಂಡುಹಿಡಿದವರು ಯಾರು?


37ಜಗತ್ತಿನ ಅತಿ ದೊಡ್ಡ ಮರುಭೂಮಿ ಯಾವುದು?


38."ಹ್ಯಾಮ್ಲೆಟ್" ಎಂಬ ಪ್ರಸಿದ್ಧ ನಾಟಕವನ್ನು ಬರೆದವರು ಯಾರು?


39.ಭೂಮಿಯ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು?


40.ಜರ್ಮನಿಯ ಪ್ರಸ್ತುತ ಚಾನ್ಸೆಲರ್ ಯಾರು?



ಸರಿಉತ್ತರಗಳು.


21ಮೌಂಟ್ ಎವರೆಸ್ಟ್.

22ಜೋ ಬಿಡನ್.

23 ಆಸ್ಟ್ರೇಲಿಯಾ

24ಅಲೆಕ್ಸಾಂಡರ್ ಫ್ಲೆಮಿಂಗ್.

25ಆಲ್ಬರ್ಟ್ ಐನ್ಸ್ಟೈನ್.

26ಬಂಗಾಳ ಹುಲಿ.

27ಪೆಸಿಫಿಕ್ ಸಾಗರ.

28ನೀಲ್ ಆರ್ಮ್ಸ್ಟ್ರಾಂಗ್.

29ಮಂಗಳ

30ಟೋಕಿಯೋ

31ಅಲೆಕ್ಸಾಂಡರ್ ಗ್ರಹಾಂ ಬೆಲ್.

32 ನೈಲ್ ನದಿ.

33 ರಷ್ಯಾ

34 ಮೇರಿ ಕ್ಯೂರಿ.

35 ಒಟ್ಟಾವಾ

36. ಥಾಮಸ್ ಎಡಿಸನ್.

37 ಸಹಾರಾ ಮರುಭೂಮಿ.

38 ವಿಲಿಯಂ ಷೇಕ್ಸ್ಪಿಯರ್.

39  ನೀಲಿ ತಿಮಿಂಗಿಲ.

40 ಏಂಜೆಲಾ ಮರ್ಕೆಲ್.


ಸಿಹಿಜೀವಿ ವೆಂಕಟೇಶ್ವರ

ಶಿಕ್ಷಕರು ಮತ್ತು ಲೇಖಕರು

ತುಮಕೂರು 

 9900925529

07 ಫೆಬ್ರವರಿ 2024

ಟ್ರಾಫಿಕ್ ಪೋಲೀಸ್ ಪಾರ್ಕ್


 


ಟ್ರಾಫಿಕ್ ಪೋಲೀಸ್ ಪಾರ್ಕ್..



ಇತ್ತೀಚಿಗೆ ನಮ್ಮ ಶಾಲೆಯ ಅಪ್ರಾಪ್ತ ಬಾಲಕರು  ಅಸುರಕ್ಷಿತ ಬೈಕ್ ಚಾಲನೆಯ ಪರಿಣಾಮವಾಗಿ ಜೀವತೆತ್ತ ಘಟನೆಯು ಆಗಾಗ ನೆನಪಾಗಿ ಮನಸ್ಸು ಭಾರವಾಗುತ್ತದೆ.ಮಕ್ಕಳಿಗೆ ಮತ್ತು ಪೋಷಕರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ.

ಶಾಲೆಗೆ ಟ್ರಾಫಿಕ್ ಪೋಲೀಸ್ ಕರೆಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡೂ ಪ್ರಯತ್ನ ಮಾಡಲಾಯಿತು.

ವಿಷಯಕ್ಕೆ ಸಂಬಂಧಿಸಿದಂತೆ, ರಸ್ತೆ ಸುರಕ್ಷತೆಯು ಅತ್ಯವಶ್ಯಕವಾಗಿದ್ದು, ಶಾಲಾ ಹಂತದಲ್ಲಿ ಮಕ್ಕಳಲ್ಲಿ ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆಯು ಹಲವಾರು ಉಪಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯಪ್ರವೃತ್ತವಾಗಿರುವುದು ಶ್ಲಾಘನೀಯ.

ರಸ್ತೆ ಅಪಘಾತಗಳು ಘಟಿಸದಂತೆ ತಡೆಯುವ ಪ್ರಯತ್ನವನ್ನು ಸಂಚಾರ ವಿಭಾಗವು ಮಾಡುತ್ತಿದ್ದು, ವಿವಿಧ ಶಾಲೆಗಳಲ್ಲಿ ಸಂಚಾರಿ ಠಾಣೆಯ ಅಧಿಕಾರಿ ಸಿಬ್ಬಂದಿಯವರು Student Association for Road Safety ಯೋಜನೆಯಡಿಯಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕ್ರಮ ಕೈಗೊಳ್ಳುವುದರ ಜೊತೆಗೆ Safe Root to School ಯೋಜನೆಯಡಿಯಲ್ಲಿ ಶಾಲೆಗಳ ಸುತ್ತಮುತ್ತ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ಅಭ್ಯಸಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಏರ್ಪಡಿಸಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.


ಈ ನಿಟ್ಟಿನಲ್ಲಿ "Traffic Police Park" ನ್ನು ಬೆಂಗಳೂರಿನ ಸೇಂಟ್ ಮಾರ್ಕ್ಸ್ರ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದು, “ಮೊಳಕೆಯಲ್ಲಿಯೇ ತಿದ್ದಿರಿ” ಎಂಬುದು ಈ ಪಾರ್ಕ್‌ನ ಧ್ಯೇಯ ವಾಕ್ಯವಾಗಿದೆ. ನೂರಾರು ಮಕ್ಕಳನ್ನು ಒಂದು ಕಡೆ ಸೇರಿಸಿ ಪಾದಚಾರಿ ಮಾರ್ಗದ ಬಗ್ಗೆ ತಿಳುವಳಿಕೆ, ರಸ್ತೆ ಅಪಘಾತವನ್ನು ತಪ್ಪಿಸಿ ಜೀವವನ್ನು ಉಳಿಸುವ ಸಂಚಾರಿ ನಿಯಮಗಳ ಕುರಿತು ಮಕ್ಕಳಲ್ಲಿ ತಿಳುವಳಿಕೆ ಮೂಡಿಸುವುದು. Traffic Park ನ ಪ್ರಮುಖ ಉದ್ದೇಶವಾಗಿದೆ.

ಇಲ್ಲಿ ಜೀಬ್ರಾ ಕ್ರಾಸಿಂಗ್,ರೋಡ್ ಮಾರ್ಕಿಂಗ್, ಸಿಗ್ನಲ್, ಜೀರೋ ಟಾಲೆರೆನ್ಸ್ ಜೋನ್ ಹೀಗೆ ವಿವಿಧ ವಿಷಯಗಳ ಪರಿಚಯ ಮಾಡಿಕೊಡಲಾಗುತ್ತದೆ.

ಇದೇ ಸ್ಥಳದಲ್ಲಿ ಮಕ್ಕಳಿಗೆ ಹೆಚ್ಚಿನ ಮಾಹಿತಿ ಒದಗಿಸುವ ದೃಷ್ಟಿಯಿಂದ ಗ್ರಂಥಾಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದು ಅತ್ಯಂತ ಅನುಕೂಲಕರ ಸ್ಥಳವಾಗಿದ್ದು, ಶಾಲಾ ವಿದ್ಯಾರ್ಥಿಗಳನ್ನು ನಿರಂತರವಾಗಿ ಇಲ್ಲಿಗೆ ಕರೆ ತಂದು ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಅರಿವು ನೀಡಲಾಗುತ್ತಿದೆ.


ಸುರಕ್ಷಿತ ಚಾಲನೆ ಎಲ್ಲದ್ದಕ್ಕೂ ಸಾಧನಾ ಎಂಬ ಶೀರ್ಷಿಕೆಯಡಿ'ರಸ್ತೆ ಸುರಕ್ಷತೆ ಪ್ರಾಣ ರಕ್ಷೆ' ಎಂಬ ಅಂಶದೊಂದಿಗೆ ಸುರಕ್ಷಿತವಾದ ಹಾಗೂ ಸುರಕ್ಷಿತವಲ್ಲದ ಸಾರಿಗೆ ನಿಯಮಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆಯನ್ನು ನೀಡುತ್ತದೆ. 


ಮೇಲ್ಕಂಡ ಅಂಶಗಳನ್ವಯ ರಸ್ತೆ ಸುರಕ್ಷತೆ ಕುರಿತು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳುವಳಿಕೆ ನೀಡಲುTraffic Park ಒಂದು ಸೂಕ್ತ ತಾಣವಾಗಿದೆ. ಶಾಲಾ ಹಂತದಲ್ಲಿ ಕೈಗೊಳ್ಳುವ ಕ್ಷೇತ್ರ ಭೇಟಿ ಇಲ್ಲವೆ ಶೈಕ್ಷಣಿಕ ಪ್ರವಾಸಗಳ ಸಂದರ್ಭಗಳಲ್ಲಿ ಈ ಸ್ಥಳದ ವೀಕ್ಷಣೆ ಕೈಗೊಂಡು, ವಿದ್ಯಾರ್ಥಿಗಳಿಗೆ ಈ ಕುರಿತು ಅರಿವು ಮೂಡಿಸಲು ಕ್ರಮವಹಿಸಲು ತಿಳಿಸಲಾಗಿದೆ. ಹಾಗೂ 04 ರಿಂದ 10 ನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಕಡ್ಡಾಯ ವೀಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ 


ಈ Traffic Park ಸೆಂಟ್ ಮಾಕ್ಸರ್ ರಸ್ತೆ, ಹೋಟೆಲ್ ಏರ್ಲೈನ್ ಎದುರು, ಬೌರಿಂಗ್ ಇನ್ ಟಿಟ್ಯೂಟ್ ಹತ್ತಿರ, ಅನಿಲ್ ಕುಂಬ್ಳೆ ವೃತ್ತ ಬೆಂಗಳೂರು ಇಲ್ಲಿ ಇದೆ. ಬೆಂಗಳೂರಿನ ಶಾಲೆಗಳು ಈ ಯೋಜನೆಯ ಪ್ರಯೋಜನ ಪಡೆಯಲು ಇಲ್ಲಿಗೆ ತಪ್ಪದೇ ಮಕ್ಕಳನ್ನು ಕರೆದುಕೊಂಡು ಹೋಗಿ ಜಾಗೃತಿ ಮೂಡಿಸಬಹುದು. ಮುಂದಿನ ದಿನಗಳಲ್ಲಿ ಇಂತಹ ಜಾಗೃತಿ ಟ್ರಾಫಿಕ್ ಪಾರ್ಕ್ ಗಳು ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲೂ ಇಂತಹ ಯೋಜನೆಗಳು ವಿಸ್ತರಣೆಯಾಗಿ ಎಲ್ಲಾ ಮಕ್ಕಳಿಗೆ ಈ ಯೋಜನೆಯ ಮೂಲಕ ರಸ್ತೆ ಸುರಕ್ಷತಾ ಪಾಠ ಲಭಿಸಿದಂತಾಗುತ್ತದೆ.ತನ್ಮೂಲಕ ಭವಿಷ್ಯದ ಪ್ರಜೆಗಳಿಗೆ ಸುರಕ್ಷತಾ ಜ್ಞಾನ ಲಭಿಸಿ ಸಾವಿರಾರು ಅಮೂಲ್ಯ ಜೀವಗಳ ರಕ್ಷಣೆ ಮಾಡಿದಂತಾಗುತ್ತದೆ. ಇಂತಹ ಸತ್ಕಾರ್ಯಕ್ಕೆ ಶಿಕ್ಷಕರು, ಪೋಷಕರು, ಸಾರ್ವಜನಿಕರು ಮತ್ತು ಸಮುದಾಯ ಇಂತಹ ಕಾರ್ಯಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆ ಮತ್ತು ಸಹಕಾರ ನೀಡಿದರೆ ಅಪಘಾತಗಳು ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು