ಮರ.
ನೆಟ್ಟು ಬಿಡು
ಕನಿಷ್ಠಪಕ್ಷ ಒಂದು ಮರ|
ಪರಿಸರ ಸಂರಕ್ಷಣಾ
ಕಾರ್ಯಕ್ರಮದಲ್ಲಿ
ನೀನಾಗುವೆ ಅಮರ||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಬಾರಥ
ಅಡ್ವಾಣಿಯವರು ಅಂದು
ಭಾರತ ಯಾತ್ರೆ
ಮಾಡಿದ್ದರು ಏರಿ ರಥ|
ಇಂದು ಅವರಿಗೆ
ಅತ್ಯುನ್ನತವಾದ ಗೌರವ
ನೀಡಿ ಸನ್ಮಾನಿಸಿದೆ ಭಾರತ||
ಬಜೆಟ್ ಅರ್ಥ.
ಬಜೆಟ್ ಗ ಮುಖ್ಯವಾಗಿ
ಆಧಾರವಾಗಿರುವುದು
ಅರ್ಥ|
ಬಜೆಟ್ ನ ಟೀಕಿಸುವ
ಕೆಲವರಿಗೇ ಆಗಿರುವುದೇ ಇಲ್ಲ
ಅರ್ಥ||
ಪೋಷಕರಿಗೊಂದು ಪತ್ರ...
ಆತ್ಮೀಯ ಪೋಷಕರೇ....
ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದಿನಾಂಕ 5.2.2024 ರಿಂದ ಎರಡನೇ ಅಭ್ಯಾಸ ಪತ್ರಿಕೆಯ ಪರೀಕ್ಷೆ ಪ್ರಾರಂಭವಾಗುವುದರಿಂದ ತಮ್ಮ ಮಗುವನ್ನು ಪರೀಕ್ಷೆಗೆ ತಯಾರಿ ನಡೆಸಿ ಉತ್ತಮ ಅಂಕ ಪಡೆಯಲು ಮನೆಯಲ್ಲಿ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿ...ಈ ಪರೀಕ್ಷೆಗೆ ಗೈರುಹಾಜರಾಗದಂತೆ ಕಡ್ಡಾಯವಾಗಿ ಹಾಜರಾಗಲು ಕ್ರಮ ವಹಿಸಿ.....
ಮಕ್ಕಳಿಗೆ ಆದಷ್ಟೂ ಮೊಬೈಲ್ ಮತ್ತು ಬೈಕ್ ಕೊಡುವುದನ್ನು ನಿಲ್ಲಿಸಿ...ಓದಿನ ಕಡೆ ಹೆಚ್ಚು ಗಮನ ಕೊಡಲು ತಿಳಿಸಿ...
8 ಮತ್ತು ಒಂಭತ್ತನೆಯ ತರಗತಿಯ ಮಕ್ಕಳಿಗೆ ಈ ವರ್ಷ ಮೌಲ್ಯಂಕನ ಪರೀಕ್ಷೆ ಇರುವುದರಿಂದ ಆ ಮಕ್ಕಳಿಗೆ ಸೋಮವಾರ ಅಂದರೆ 5/2/2024 ರಿಂದ ಸಂಜೆ 4.20 ರಿಂದ 5 ಗಂಟೆಯ ವರೆಗೆ ವಿಶೇಷ ತರಗತಿಗಳನ್ನು ಆರಂಭಿಸುತ್ತಿದ್ದೇವೆ... ನಿಮ್ಮ ಮಕ್ಕಳು ಶಾಲಾ ಅವಧಿ ಮುಗಿದ ಬಳಿಕ ಮನೆ ತಲುಪುವುದನ್ನು ಖಚಿತ ಮಾಡಿಕೊಳ್ಳಿ.
ಮತ್ತೊಮ್ಮೆ ಎಲ್ಲಾ ಮಕ್ಕಳ ಪೋಷಕರಿಗೆ ತಮ್ಮ ಮಕ್ಕಳು ಯೂನಿಫಾರ್ಮ್ ,ಶೂ ,ಹಾಕಿಕೊಂಡು, ಸಭ್ಯವಾದ ರೀತಿಯಲ್ಲಿ ಕಟಿಂಗ್ ಮಾಡಿಸಿ ಶಾಲೆಗೆ ಕಳಿಸುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ.ಶಾಲೆಯ ಶಿಸ್ತು ಕಾಪಾಡಲು, ಮಕ್ಕಳ ವ್ಯಕ್ತಿತ್ವ ರೂಪಿಸಲು ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ನಿಮ್ಮ ಸಹಕಾರ ಅಗತ್ಯ... ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ....
ಇಂದ...
ಮುಖ್ಯ ಶಿಕ್ಷಕರು
ಮತ್ತು ಸಿಬ್ಬಂದಿ
ಸರ್ಕಾರಿ ಪ್ರೌಢಶಾಲೆ ಕ್ಯಾತ್ಸಂದ್ರ
ಉದ್ಯಮಿಯಾಗಲು ದಶಸೂತ್ರಗಳು.
ಅಂದು ಒಂದು ಚಿಕ್ಕ ಗ್ಯಾರೇಜ್ ನಲ್ಲಿ ಆರಂಭವಾದ ಒಂದು ಐಟಿ ಕಂಪನಿಯು ಇಂದು ಲಕ್ಷಾಂತರ ಕೋಟಿ ವ್ಯವಹಾರ ಮಾಡುತ್ತಾ ಸಾವಿರಾರು ಕುಟುಂಬಕ್ಕೆ ಆಧಾರ ಸ್ತಂಭವಾಗಿರುವ ತನ್ಮೂಲಕ ದೇಶದ ಜಿ ಡಿ ಪಿ ಗೂ ಕೊಡುಗೆ ಸಲ್ಲಿಸುತ್ತಿರುವ ನಮ್ಮ ಕರ್ನಾಟಕದ ಹೆಮ್ಮೆಯ ಇನ್ಪೋಸಿಸ್ ಯಶೋಗಾಥೆ ನಮಗೆಲ್ಲ ತಿಳಿದಿದೆ. ನಾರಾಯಣಮೂರ್ತಿ ರವರು ಯಶಸ್ವಿ ಉದ್ಯಮಿಯಾಗಿ ಇಂದಿನ ಯುವ ಉದ್ಯಮಿಗಳಿಗೆ ಮತ್ತು ಉದ್ಯಮಗಾರಿಕೆಗೆ ಪ್ರೇರಕ ಶಕ್ತಿಯಾಗಿದ್ದಾರೆ.
ರಿಸ್ಕ್ ತೆಗೆದುಕೊಳ್ಳುವ ಗುಣ ,ಸತತ ಪರಿಶ್ರಮ ಸ್ಮಾರ್ಟ್ ವರ್ಕ್ ಮಾಡುವ ಯಾರಾದರೂ ಯಶಸ್ವಿ ಉದ್ಯಮಿಯಾಗಬಹುದು. ಇದರ ಜೊತೆಗೆ ನಿಮ್ಮ ಈ ಕೆಳಕಂಡ ಗುಣಗಳಿದ್ದರೆ ಉದ್ಯಮಗಾರಿಕೆ ನಿಮ್ಮದಾಗುವಲ್ಲಿ ಸಂದೇಹವಿಲ್ಲ.
1 ವ್ಯಾಪಾರ ಗಮನ:
ಎಲ್ಲಾ ನಿರ್ಧಾರಗಳು ಮತ್ತು ಕ್ರಿಯೆಗಳಿಗೆ ಆಧಾರವಾಗಿರುವ ಉದ್ದೇಶವು ಯಾವಾಗಲೂ ವ್ಯಾಪಾರ ಲಾಭ ಮತ್ತು ಬೆಳವಣಿಗೆಯಾಗಿದೆ.ಆದ್ದರಿಂದ ಉದ್ಯಮಿಯಾಗಬೇಕಾದವನು ಸದಾ ತನ್ನ ವ್ಯಾಪಾರದ ಬಗ್ಗೆ ವಿಶೇಷ ಗಮನಹರಿಸಬೇಕು.
2 ಆತ್ಮವಿಶ್ವಾಸ:
ತಾನು ಹಿಡಿದ ಕಾರ್ಯವನ್ನು ಮಾಡಿಯೇ ತೋರುತ್ತೇನೆ ಎಂಬ ಆತ್ಮವಿಶ್ವಾಸ ಇರಲೇಬೇಕು
ಸ್ವಯಂ ನಂಬಿಕೆಯನ್ನು ಹೊಂದಿ ವ್ಯವಹಾರದ ಬೆಳವಣಿಗೆಗೆ ಒಬ್ಬರ ಸಾಮರ್ಥ್ಯವನ್ನು ಗುರ್ತಿಸಿ ಬೆಳೆಸಲು ಮೊದಲು ತಾನು ಆತ್ಮವಿಶ್ವಾಸ ಹೊಂದಿರಬೇಕಾಗುತ್ತದೆ.
3 ಸೃಜನಾತ್ಮಕತೆ:
ಸೃಜನಾತ್ಮಕ ಉದ್ಯಮಿಗಳು ಯಾವಾಗಲೂ ತಮ್ಮ ವ್ಯವಹಾರವನ್ನು ಉತ್ತಮಗೊಳಿಸಲು ಅನನ್ಯ ಮಾರ್ಗಗಳ ಬಗ್ಗೆ ಯೋಚಿಸುತ್ತಾರೆ. ಅವರು ವ್ಯಾಪಾರ ಕ್ಷೇತ್ರದಲ್ಲಿನ ಬದಲಾವಣೆಗಳ ಬಗ್ಗೆ ತಿಳಿದಿರುತ್ತಾರೆ ಮತ್ತು ಔಟ್ ಆಪ್ ಬಾಕ್ಸ್ ಚಿಂತನೆಯಲ್ಲಿ ಪ್ರವೀಣರಾಗಿರುತ್ತಾರೆ. ಹಾಗೂ ಅವರು ನವೀನ ವ್ಯವಹಾರ ಕಲ್ಪನೆಗಳು ಮತ್ತು ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಾರೆ.
4 ಪ್ರತಿನಿಧಿ:
ವ್ಯವಹಾರವು ಬೆಳೆಯುತ್ತಿರುವಾಗ ಸ್ಮಾರ್ಟ್ ಉದ್ಯಮಿಗಳು ತಾವು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುತ್ತಾರೆ ಮತ್ತು ಅವರು ತಮ್ಮ ತಂಡಕ್ಕೆ ಹೆಚ್ಚಿನ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕಾಗುತ್ತದೆ.ಅದು ವ್ಯವಹಾರಗಳ ವಿಸ್ತರಣೆ ಮತ್ತು ತಮ್ಮ ಕಂಪನಿಯ ಬೆಳವಣಿಗೆಗೆ ಪೂರಕವಾಗಿರುತ್ತದೆ.
5 ಸಂಕಲ್ಪ:
ಯಾವುದೇ ಶ್ರೇಷ್ಠ ಕೆಲಸಗಳು ಉತ್ತಮ ಸಂಕಲ್ಪದಿಂದ ಆರಂಭವಾಗುತ್ತವೆ.
ಯಶಸ್ವಿ ಉದ್ಯಮಿಗಳು ಉತ್ತಮ ಸಂಕಲ್ಪದೊಂದಿಗೆ ಕಠಿಣ ಸಮಯಗಳಲ್ಲಿ ಪರಿಶ್ರಮ ಪಡುತ್ತಾರೆ ಮತ್ತು ಅವರ ದೃಢತೆ ಅವರಿಗೆ ಹಿಂದೆಂದೂ ಬಲವಾಗಿ ಪುಟಿದೇಳಲು ಸಹಾಯ ಮಾಡುತ್ತದೆ.
6 ಸ್ವತಂತ್ರ:
ಒಬ್ಬ ವ್ಯಕ್ತಿಯು ಏಕಾಂಗಿಯಾಗಿ ವ್ಯವಹಾರವನ್ನು ಪ್ರಾರಂಭಿಸಬಹುದು ಮತ್ತು ನಡೆಸಬಹುದು ಇದರ ಜೊತೆಗೆ ಸಕಾಲದಲ್ಲಿ ಉತ್ತಮ. ನಿರ್ಣಯವನ್ನು ಕೈಗೊಳ್ಳಲು ಉದ್ಯಮಿಯಾದವನು ಹಿಂದೆ ಮುಂದೆ ನೋಡಬಾರದು.
7 ಜ್ಞಾನ ಅನ್ವೇಷಕ:
ಮಹಾನ್ ವಾಣಿಜ್ಯೋದ್ಯಮಿಗಳು 'ಜ್ಞಾನವು ಶಕ್ತಿ' ಎಂದು ಅರಿತುಕೊಳ್ಳುತ್ತಾರೆ ಮತ್ತು ಅವರು ತಮ್ಮ ಪ್ರತಿ ಸ್ಪರ್ಧಿಗಳಿಗಿಂತ ಮುಂದೆ ಇರಲು ಎಲ್ಲಾ ಉದ್ಯಮದ ಬೆಳವಣಿಗೆಗಳು ಮತ್ತು ಮಾಹಿತಿಗಳನ್ನು ಅಪ್ಡೇಟ್ ಮಾಡಿಕೊಂಡಿರುತ್ತಾರೆ. ಹೊಸತಿಗೆ ಹಾತೊರೆಯುತ್ತಾರೆ.
8 ಪ್ರವರ್ತಕ:
ಪರಿಣಾಮಕಾರಿ ಉದ್ಯಮಿಗಳು ತಮ್ಮ ವ್ಯಾಪಾರವನ್ನು ಅನುಮೋದಿಸಲು ಮತ್ತು ಎಲ್ಲಾ ವೇದಿಕೆಗಳಲ್ಲಿ ಅದನ್ನು ಉತ್ತೇಜಿಸುತ್ತಾರೆ.ಇದಕ್ಕೆ ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳ ಬಳಕೆ ಮಾಡಿಕೊಂಡು ತನ್ನ ಉತ್ಪನ್ನಗಳನ್ನು ಸರ್ವರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು.
9 ಉತ್ತಮ ಸಂಬಂಧ:
ಹೆಚ್ಚು ಯಶಸ್ವಿ ಉದ್ಯಮಿಗಳು ಸಾಮಾನ್ಯವಾಗಿ ಉದ್ಯೋಗಿಗಳು, ಗ್ರಾಹಕರು ಮತ್ತು ಗ್ರಾಹಕರೊಂದಿಗೆ ಬಲವಾದ ಪರಸ್ಪರ ಕೌಶಲ್ಯಗಳನ್ನು ಪೋಷಿಸುವ ಉತ್ತಮ ಸಂಬಂಧವನ್ನು ಹೊಂದಿರುತ್ತಾರೆ. ಇದು ಅವರ ಉದ್ಯಮದ ಯಶಸ್ಸಿಗೆ ಪೂರಕವಾದ ಅಂಶವಾಗಿದೆ.
10 ರಿಸ್ಕ್ ಟೇಕಿಂಗ್:
ಫಾರ್ಚೂನ್ ಪೇವರ್ಸ್ ಬ್ರೇವ್ ಎಂಬಂತೆ ಕೆಲವೊಮ್ಮೆ ನಾವು ಮುನ್ನುಗ್ಗಲೇ ಬೇಕು.
ದ್ಯಮಶೀಲತೆಯ ಮೂಲತತ್ವವು ಅಪಾಯ ತೆಗೆದುಕೊಳ್ಳುವಿಕೆಯನ್ನು ಒಳಗೊಳ್ಳುತ್ತದೆ ಮತ್ತು ಯಶಸ್ವಿ ವ್ಯಾಪಾರ ವ್ಯಕ್ತಿಗಳು ಲೆಕ್ಕ ಹಾಕಿದ ಅಪಾಯಗಳನ್ನು ತೆಗೆದುಕೊಳ್ಳುವಲ್ಲಿ ಪ್ರವೀಣರಾಗಿರುತ್ತಾರೆ.
ಈ ಮೇಲಿನ ದಶಗುಣಗಳಿರುವ ಯಾರಾದರೂ ಹೊಸ ಉದ್ಯಮ ಆರಂಭಿಸಲು ಮುಂದಡಿ ಇಡಬಹುದು. ಇದಕ್ಕೆ ಪೂರಕವಾಗಿ ಸರ್ಕಾರದ ಅರ್ಥಿಕ ಬೆಂಬಲ ಆತ್ಮೀಯರ ಪ್ರೋತ್ಸಾಹ ಇದ್ದರೆ ಉದ್ಯಮಗಾರಿಕೆ ಕಷ್ಟದಾಯಕವಲ್ಲ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529