12 ಡಿಸೆಂಬರ್ 2023

ಹೆಣ್ಣಿನ ದಶಗುಣಗಳು.


 


ಹೆಣ್ಣಿನ ದಶಗುಣಗಳು.


ಹೆಣ್ಣು ಎಂಬ ಎರಡಕ್ಷರದಲ್ಲಿ ಏನಿದೆ?ಏನಿಲ್ಲ? ಜಗದ ಆದಿ ಅಂತ್ಯವೇ ಹೆಣ್ಣು. ತಾಯಿಯಾಗಿ,ತಂಗಿಯಾಗಿ,ಅತ್ತೆಯಾಗಿ,ಸೊಸೆಯಾಗಿ, ಸಹೋದರಿಯಾಗಿ,ಗೆಳತಿಯಾಗಿ...ನಾನಾ ರೂಪಗಳಲ್ಲಿ ನಮ್ಮ ನಡುವೆ ಇರುವ ಹೆಣ್ಣು ಅವಳ ಮಹಾನ್ ಗುಣಗಳಿಂದ ಅಚ್ಚರಿ ಮೂಡಿಸುತ್ತಾಳೆ. ಅಂತಹ ಗುಣಗಳ ಪಟ್ಟಿ ಮಾಡುವಾಗ ನನಗೆ ದಕ್ಕಿದ್ದು ಈ ಕೆಳಗಿನ ಗುಣಗಳು.


 1. ಅವಳು ಬುದ್ಧಿವಂತೆ.


 ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದಿದ್ದರೂ  ಬುದ್ದಿವಂತಿಕೆಯೆಂದರೆ ಹೆಣ್ಣು ಎನ್ನುವಂತಾಗಿದೆ.  ಅವಳು ಬಾಯ್ತೆರೆದು ಮಾತಾನಾಡಲಾರಂಬಿಸಿದರೆ   ಬುದ್ಧಿವಂತಿಕೆಯನ್ನು ಹೊರಹಾಕುತ್ತಾಳೆ.  ಒಬ್ಬರು ಅವಳೊಂದಿಗೆ ಕಠಿಣ ಮತ್ತು ಗಂಭೀರವಾಗಿ ಮಾತನಾಡಬಹುದು.ಅದಕ್ಕೆ ತಕ್ಕಂತೆ ಅವಳ ಉತ್ತರ ಸಿದ್ದವಿರುತ್ತದೆ.


 2. ಅವಳು ಭಾವನಾತ್ಮಕವಾಗಿ ಸ್ಥಿರವಾಗಿರುತ್ತಾಳೆ.


 ಹೌದು ಹೆಣ್ಣು ಗಂಡಿಗಿಂತ ಹೆಚ್ಚು ಭಾವನಾತ್ಮಕ ಜೀವಿ. ಅವಳು  ಕೆಲವೊಮ್ಮೆ ನಗುತ್ತಾಳೆ, ಕೆಲವೊಮ್ಮೆ ಅಳು, ಮತ್ತೆ ಸಿಟ್ಟು ಸೆಡೆವು, ಕರುಣೆ , ಶಾಂತ   ಹೀಗೆ ತನ್ನ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಅವಳನ್ನು     ತನ್ನ ಭಾವನೆಗಳ ಮಾಸ್ಟರ್ ಎಂದರೆ ತಪ್ಪಾಗಲಾರದು.


 3. ಅವಳು ಗುಣಿಸುತ್ತಾಳೆ.


ಹೆಣ್ಣಿನ ಕಾರ್ಯ ವರ್ಣಿಸುವಾಗ ಅವಳಿಗೆ ಹತ್ತು ಕೈ ಒಂದೊಂದರಲ್ಲಿ ಒಂದು ಕೆಲಸ ಮಾಡುವ ಗೌರವಪೂರ್ವಕವಾದ ಚಿತ್ರ ನೋಡಿದ್ದೇವೆ.ಅದೇ ಅವಳ ತಾಕತ್ತು 

 ಅವಳು ನೂರನ್ನು   ಸಾವಿರವಾಗಿ, ಸಾವಿರವನ್ನು ಮಿಲಿಯನ್ ಆಗಿ ಪರಿವರ್ತಿಸುತ್ತಾಳೆ. ಅದು ಬರೀ ಹಣದ ಮತ್ತು ಸಂಪತ್ತಿನ ಲೆಕ್ಕಾಚಾರವಲ್ಲ  ಅದರಲ್ಲಿ ಎಲ್ಲವೂ ಇದೆ. 


 4. ಅವಳು ಪ್ರೀತಿಸಲ್ಪಡುವುದನ್ನು ಪ್ರೀತಿಸುತ್ತಾಳೆ.


ಪ್ರೀತಿಗೆ ಮನಸೋಲದವರು ಈ ಜಗದಲ್ಲಿ ಯಾರೂ ಇಲ್ಲ.ಅದಕ್ಕೆ ಅವಳು ಹೊರತಲ್ಲ.ಹಾಗೆ ನೋಡಿದರೆ ಅವಳ ಬಿಟ್ಟು ಪ್ರೀತಿಯಿಲ್ಲ.

 ಹೌದು,  ನೀವು ಅವಳನ್ನು ಪ್ರೀತಿಸಿದಾಗ ಮತ್ತು ಅವಳಿಗೆ ಒಳ್ಳೆಯದನ್ನು ಮಾಡಿದಾಗ, ಅವಳು ಸ್ವೀಕರಿಸುವಳು ಮತ್ತು ಶ್ಲಾಘಿಸುವವಳು.  


 5. ಅವಳು ಆಹಾರದ ಮೂಲಕ ಪ್ರೀತಿಸುತ್ತಾಳೆ.


ಪಾಕ ಪ್ರವೀಣ ಗಂಡಸರು ಇಬ್ಬರೇ ನಮಗೆ ಗೊತ್ತಿರುವವರು ಅವರೇ ನಳ ಮತ್ತು ಭೀಮ ಉಳಿದೆಲ್ಲಾ ಪಾಕ ಪಾಂಡಿತ್ಯವನ್ನು ಅವಳು ಗುತ್ತಿಗೆ ಪಡೆದಾಗಿದೆ.

 ಅವಳು  ಅತ್ಯುತ್ತಮ ಆಹಾರ   ಸಿದ್ದಪಡಿಸಲು  ಪ್ರಯತ್ನಿಸುತ್ತಾಳೆ  ಮತ್ತು  ಪಾಕ ಪ್ರಕ್ರಿಯೆಯಲ್ಲಿ  ನಮ್ಮ ಆತ್ಮಕ್ಕೂ ಆಹಾರವನ್ನು ನೀಡುತ್ತಾಳೆ.


 6. ಅವಳಂದರೆ ಮೋಜು. 


 ಅವಳು ಬುದ್ಧಿವಂತಳಾಗಿದ್ದರೂ, ಅವಳು ಮೂರ್ಖಳಾಗಿ ತನ್ನ ತಾನು ಅಪಹಾಸ್ಯ ಮಾಡಿಕೊಂಡು ಕೆಲವೊಮ್ಮೆ  ಹಾಸ್ಯ ಚಟಾಕಿ ಹಾರಿಸುತ್ತಾಳೆ, ಕೀಟಲೆ ಮಾಡುತ್ತಾಳೆ, ನಗುತ್ತಾಳೆ, ಅವಳಿದ್ದರೆ ಮೋಜಿಗೂ ಬರವಿಲ್ಲ.


 7. ಸಹಾಯ ಪಡೆಯುವಳು 


 ಅವಳು ಯಾವುದಾದರೂ ತೊಂದರೆಯಲ್ಲಿ ಸಿಲುಕಿಕೊಂಡಾಗ ಅಥವಾ ತೊಂದರೆಯಲ್ಲಿದ್ದಾಗ, ಸಹಾಯವನ್ನು ಹೇಗೆ ಕೇಳಬೇಕೆಂದು ಅವಳು ತಿಳಿದಿದ್ದಾಳೆ.  ಅವಳು ಒಬ್ಬಂಟಿಯಾಗಿ ಬಳಲುವುದಿಲ್ಲ. ನಾವು ಆಪತ್ತಿನಲ್ಲಿದ್ದಾಗ . ಸಮಯಕ್ಕೆ ಸರಿಯಾಗಿ ಸೂಕ್ತ ಸಹಾಯ ಬೇಡುವದು ತಪ್ಪಲ್ಲ.


 8. ಅವಳು ದೇವರ ಪ್ರತಿಬಿಂಬ.


ಅವಳು ಕಾಳಿ, ದುರ್ಗೆ, ದೇವಿ, ಶಾರದೆ, ಹೀಗೆ ನಾನಾ ರೂಪಗಳ ಪ್ರತಿಬಿಂಬವಾಗಿ

 ನೀವು ಅವಳನ್ನು ನೋಡುತ್ತೀರಿ ಮತ್ತು ದೇವರನ್ನು ನೋಡುತ್ತೀರಿ, ಅವಳು ಹೆಚ್ಚು ಹೆಚ್ಚು ದೇವರಂತೆ ಆಗುತ್ತಿದ್ದಾಳೆ  ಪ್ರೀತಿಸುವ, ಕ್ಷಮಿಸುವ, ಆಕರ್ಷಕವಾದ, ಬಲವಾದ ಮೌಲ್ಯಯುತ ಜೀವನವನ್ನು ಅವಳಿಂದ ಕಲಿಯಬಹುದು.


 9. ಅವಳೆಂದರೆ ಆತ್ಮವಿಶ್ವಾಸ 


 ಅವಳು ಅಂತರ್ಮುಖಿಯಾಗಿರಲಿ ಅಥವಾ ಬಹಿರ್ಮುಖಿಯಾಗಿರಲಿ, ಅವಳು ಹೆಚ್ಚಿನ ಸ್ವಾಭಿಮಾನವನ್ನು ಹೊಂದಿರುತ್ತಾಳೆ. ಆತ್ಮವಿಶ್ವಾಸದ ವಿಷಯದಲ್ಲಿ  ನೀವು ಅವಳನ್ನು ಬೀಟ್ ಮಾಡಲು  ಸಾಧ್ಯವಿಲ್ಲ.  ಅವಳು ಪ್ರಶಂಸನೀಯ ಗುಣಗಳನ್ನು ಹೊಂದಿದ್ದಾಳೆ


 10. ಅವಳು ಸಂಬಂಧಗಳಿಗೆ ಬೆಲೆ ಕೊಡುತ್ತಾಳೆ.


 ಉತ್ತಮ ಸ್ನೇಹಿತ, ಗೆಳತಿಯರ ಗುಂಪು ಅಥವಾ ಆಪ್ತ ಸ್ನೇಹಿತರ ಗುಂಪೇ ಆಗಿರಲಿ, ಅವಳು ಅವಳನ್ನು ಸುತ್ತುವರೆದಿರುವ ಬಲವಾದ ಜನರನ್ನು ಸುಲಭವಾಗಿ ಬೆರೆಯುತ್ತಾಳೆ.  ಅವಳು ತನ್ನ  ಗಂಡ ಅಥವಾ ಸ್ನೇಹಿತನ ಜೊತೆಯಲ್ಲಿ  ಸಂಬಂಧಕ್ಕೆ   ಬೆಲೆ ಕೊಡುವುದು  ಮಾತ್ರವಲ್ಲ      ಕುಟುಂಬದೊಂದಿಗಿನ ಸಂಬಂಧವನ್ನು ಸಹ  ಗೌರವಿಸುತ್ತಾಳೆ.


ಒಟ್ಟಾರೆ ಹೆಣ್ಣು ಅಗಣಿತ ಗುಣಗಳ ಗಣಿ ಅವಳಿಲ್ಲದ ಈ ಜಗವ ಉಳಿಸಿಕೊಳ್ಳಲು ಸಹ ಕಷ್ಟ. ಆದ್ದರಿಂದ ಹೆಣ್ಣನ್ನು ಗೌರವಿಸೋಣ. 



ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

 

11 ಡಿಸೆಂಬರ್ 2023

ತಂದೆ ತಾಯಿಗಳೇ ಅಸ್ತಿ... ಪುಸ್ತಕ ವಿಮರ್ಶೆ..

 



ತಂದೆ ತಾಯಿಗಳೇ ಅಸ್ತಿ...


ಮಾತೃದೇವೋಭವ ಪಿತೃದೇವೊಭವ ಆಚಾರ್ಯ ದೇವೋಭವ ಎಂದ ಪುಣ್ಯ ಭೂಮಿ ನಮ್ಮದು.  ಅದರಲ್ಲೂ ಮಾತಾಪಿತರ  ಋಣ ತೀರಿಸಲು ಅಸಾಧ್ಯ. ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ ರವರು ತಮ್ಮ ತಂದೆ ತಾಯಿಗಳು ಮಾಡಿದ ಆಸ್ತಿಯನ್ನು ಬಯಸದೇ ಅವರನ್ನೇ ನನ್ನ ಆಸ್ತಿ ಎಂದರು! ಎಂತಹ ಉದಾತ್ತ ಚಿಂತನೆ.  ಸ್ವಾರ್ಥವೇ ತುಂಬಿ ತುಳುಕುವ ಇಂದಿನ ಆಧುನಿಕ ಜಗತ್ತಿನಲ್ಲಿ ಕುಲಕರ್ಣಿ ರವರು ರಚಿಸಿರುವ ಈ ಕೃತಿ ಒಂದು ಆಶಾಕಿರಣದಂತೆ ತೋರುತ್ತದೆ.ಎಲ್ಲಾ ಮಕ್ಕಳು ತಮ್ಮ  ಹೆತ್ತವರನ್ನು   ಇಳಿವಯಸ್ಸಿನಲ್ಲಿ ಗೌರವದಿಂದ ಪ್ರೀತಿಯಿಂದ ನೋಡಿಕೊಂಡರೆ ವೃದ್ದಾಶ್ರಮಗಳ ಅಗತ್ಯವೇ ಇರುವುದಿಲ್ಲ.ಎಲ್ಲರೂ ಈ ಪುಸ್ತಕ ಓದೋಣ ನಮ್ಮ ತಂದೆ ತಾಯಿಗಳು ಬೆಲೆ ಕಟ್ಟದ ಆಸ್ತಿ ಎಂಬುದನ್ನು ಮನಗಂಡು ಅವರನ್ನು ಚೆನ್ನಾಗಿ ‌ನೋಡಿಕೊಳ್ಳೊಣ.ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣಕ್ಕೆ ಒಣ ತೊಡೋಣ.


ಪುಸ್ತಕ: ಮಾತಾ ಪಿತೃಗಳ ಕೊಡುಗೆ

ಲೇಖಕರು: ಪ್ರಮೋದ್ ಶ್ರೀಪಾದರಾವ್ ಕುಲಕರ್ಣಿ


ಸಿಹಿಜೀವಿ ವೆಂಕಟೇಶ್ವರ

ತುಮಕೂರು.


06 ಡಿಸೆಂಬರ್ 2023

ಸಿಹಿಜೀವಿಯ ಹಾಯ್ಕುಗಳು

 



ಹಾಯ್ಕುಗಳು 


ಸುಮ್ಮನೇ ಅಲ್ಲ 

ಲೇಖನದ  ಕಿರೀಟ

ತಲೆಬರಹ.



ಕಲಿಸುವುದು 

ತಗ್ಗಿಬಗ್ಗುವುದನು 

ತಲೆಬಾಗಿಲು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಗಜ ನಮನ

 



ಗಜ ನಮನ 


ಅಕಾಲಿಕ ಸಾವಿಗೀಡಾದ ಅಮ್ಮನ

ಅಂಬಾರಿ ಹೊತ್ತ ಅರ್ಜುನ|

ನಾಡಿನ ಜನರೆಲ್ಲರ ಪರವಾಗಿ

ಜಗ ಮೆಚ್ಚಿದ ಗಜ ಗೆ ನಮನ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

01 ಡಿಸೆಂಬರ್ 2023

ಯಶಸ್ವಿ ದಿನಕ್ಕೆ ದಶಸೂತ್ರಗಳು.


 ಯಶಸ್ಸಿ ದಿನಕ್ಕೆ ದಶಸೂತ್ರಗಳು.


"ನೀನು ಟೈಮ್ ಹೇಗೆ ಮೇನೇಜ್ ಮಾಡ್ತೀಯಾ? ಪೇಪರ್ ಗೆ ಬರೀತಿಯಾ, ಪುಸ್ತಕ ಬರೀತಿಯಾ, ಹಾಡು ಹೇಳ್ತಿಯಾ, ಪ್ಯಾಮಿಲಿ ಜೊತೆಯಲ್ಲಿ ಆಗಾಗ್ಗೆ ಪ್ರವಾಸ ಹೋಗ್ತೀಯಾ, ಪ್ರೋಗ್ರಾಮ್ ಆರ್ಗನೈಸ್ ಮಾಡ್ತೀಯಾ ಇದಕ್ಕೆಲ್ಲ ಟೈಮ್ ಹೇಗೆ ಸಿಗುತ್ತೆ?"
ಇವು   ನನ್ನ ಆತ್ಮೀಯರು ಮತ್ತು ಸ್ನೇಹಿತರು ನನಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು. ಅದಕ್ಕೆ ನನ್ನ ಉತ್ತರ ಪ್ರತಿ ದಿನ ಬೇಗ ಏಳುವುದು ಯೋಜನಾ ಬದ್ಧವಾಗಿ ಕೆಲಸ ಮಾಡುವುದು.
ಅದರ ಜೊತೆಯಲ್ಲಿ ಈ ಕೆಳಕಂಡ ಅಂಶಗಳನ್ನು ಅಳವಡಿಸಿಕೊಳ್ಳುವುದು. ಈ ಅಂಶಗಳು ನಿಮಗೆ ಇಷ್ಟವಾದರೆ ನೀವೂ ಅಳವಡಿಸಿಕೊಳ್ಳಬಹುದು. ಪ್ರಯತ್ನಿಸಿ.

1. ಸ್ಪಷ್ಟ . ಉದ್ದೇಶ

ನಮ್ಮ ದಿನವನ್ನು  ಸ್ಪಷ್ಟವಾದ ಉದ್ದೇಶದೊಂದಿಗೆ ಪ್ರಾರಂಭಿಸೋಣ.
ನಮ್ಮ ಆದ್ಯತೆಗಳನ್ನು ಪ್ರತಿಬಿಂಬಿಸಲು ಮತ್ತು ದಿನಕ್ಕೆ ನಮ್ಮ ಉದ್ದೇಶಗಳನ್ನು ಹೊಂದಿಸಲು ಪ್ರತಿ ಬೆಳಿಗ್ಗೆ ಕೆಲವು ನಿಮಿಷಗಳನ್ನು ತೆಗೆದುಕೊಳ್ಳೋಣ . ಇದು ನಮಗೆ ಏಕಾಗ್ರತೆಯಲ್ಲಿರಲು ಮತ್ತು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

2. ಒಂದು ಸಮಯದಲ್ಲಿ ಒಂದೇ  ಕಾರ್ಯ.

  ನಾವು ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ಮಾಡಲು ಪ್ರಯತ್ನಿಸಿದಾಗ  ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಬದಲಾಗಿ  ಒಂದು ಸಮಯದಲ್ಲಿ ಒಂದು ಕಾರ್ಯವನ್ನು ಕೇಂದ್ರೀಕರಿಸಿ ಮತ್ತು ನಮ್ಮ ಸಂಪೂರ್ಣ ಗಮನವನ್ನು ನೀಡಿದರೆ ಆ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

3.ವೇಳಾಪಟ್ಟಿಯಿರಲಿ.

ನಮ್ಮ ದೈನಂದಿನ ಕಾರ್ಯಗಳನ್ನು ನಿಗದಿಪಡಿಸಿಕೊಂಡು ಒಂದು ವೇಳಾಪಟ್ಟಿಯಂತೆ ಕಾರ್ಯನಿರ್ವಾಹಿಸಬೇಕು.  ಅದು ಲಿಖಿತವಾಗಿರಬೇಕಿಲ್ಲ.ಮನದಲ್ಲಿ ಮಾಡಿಕೊಂಡರೂ ಆದೀತು.   ಇದು ನಮಗೆ ನಿಗದಿತ ಸಮಯದಲ್ಲಿ ನಿಗದಿತ ಕೆಲಸ ಮಾಡಲು ಮತ್ತು ಆಲಸ್ಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ.

4. ಸಹಕಾರ ಸಮನ್ವಯ

ಕೆಲವೊಮ್ಮೆ ಎಲ್ಲಾ ಕೆಲಸಗಳನ್ನು ನಾವೇ ಮಾಡಲು ಹೋಗುತ್ತೇವೆ.
ಎಲ್ಲವನ್ನೂ ನಾವೇ ಮಾಡಬೇಕು ಎಂದು ಭಾವಿಸಬೇಡಿ.  ಸಾಧ್ಯವಾದಾಗಲೆಲ್ಲಾ ಕಾರ್ಯಗಳನ್ನು ಇತರರಿಗೆ ನಿಯೋಜಿಸಿ.  ಇದು ನಮ್ಮ ಸಮಯವನ್ನು ಉಳಿಸುತ್ತದೆ ಇದರಿಂದ ನಮ್ಮ ಪ್ರಮುಖ ಆದ್ಯತೆಗಳ ಮೇಲೆ ನಾವು ಗಮನಹರಿಸಬಹುದು.

5. ಇಲ್ಲ ಎಂದು ಬಿಡಿ

ಕೆಲವೊಮ್ಮೆ ಯಾವುದೋ ಮುಲಾಜಿಗೆ ಬಿದ್ದು ನಮ್ಮ ಇಷ್ಟವಿಲ್ಲದ ಕಾರ್ಯ ಒಪ್ಪಿಕೊಂಡು ಒದ್ದಾಡುತ್ತೇವೆ. ಅದಕ್ಕೆ ಬದಲಾಗಿ
ನಮ್ಮ ಗುರಿಗಳೊಂದಿಗೆ ಹೊಂದಿಕೆಯಾಗದ ಬದ್ಧತೆಗಳಿಗೆ ಇಲ್ಲ ಎಂದು ಹೇಳಿಬಿಡೋಣ.  ನಮ್ಮ ವೇಳಾಪಟ್ಟಿಗೆ ಹೊಂದಿಕೆಯಾಗದ ಅಥವಾ ನಮ್ಮ ಗುರಿಗಳಿಗೆ ಹೊಂದಿಕೆಯಾಗದ ವಿಷಯಗಳಿಗೆ ಇಲ್ಲ ಎಂದು ಹೇಳುವುದು ಸರಿ.  ನಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸಲು ಹಿಂಜರಿಯದಿರೋಣ.

6. ವಿರಾಮವೂ ಇರಲಿ

ನಿರಂತರವಾದ ಕೆಲಸ ಮೈ ಮನಗಳಿಗೆ ಒತ್ತಡ ತಂದು ನಮ್ಮ ಕಾರ್ಯದಕ್ಷತೆಯನ್ನು ಕಡಿಮೆಮಾಡುತ್ತವೆ.ಅದಕ್ಕಾಗಿ
ಸೂಕ್ತ ಕಾಲದಲ್ಲಿ  ವಿರಾಮಗಳನ್ನು ತೆಗೆದುಕೊಳ್ಳೋಣ.  ನಮ್ಮ ಮನಸ್ಸು ಮತ್ತು ದೇಹವನ್ನು ರಿಫ್ರೆಶ್ ಮಾಡಲು ಕನಿಷ್ಠ ಪ್ರತಿ ಗಂಟೆಗೊಮ್ಮೆ  ವಿಶ್ರಾಂತಿ ಪಡೆಯೋಣ.ವಿಶ್ರಾಂತಿ ಎಂದರೆ ಬರೀ ಮಲಗುವುದು ,ಸುಮ್ಮನೆ ಕೂರುವುದಲ್ಲ.ಕೆಲಸದ ಬದಲಾವಣೆಯೂ ವಿಶ್ರಾಂತಿಯೇ.  ವಿರಾಮಗಳನ್ನು ತೆಗೆದುಕೊಳ್ಳುವುದು ನಮಗೆ ದಿನವಿಡೀ ಉಲ್ಲಸಿತವಾಗಿರಲು  ಮತ್ತು ಹೆಚ್ಚು  ಉತ್ಪಾದಕವಾಗಿರಲು ಸಹಾಯ ಮಾಡುತ್ತದೆ.

7. ಯಶಸ್ಸನ್ನು ಸಂಭ್ರಮಿಸೋಣ

ಆ ದಿನದಂದು ನಮಗೆ ಚಿಕ್ಕ ಯಶಸ್ಸು ಸಿಕ್ಕರೆ ಅದನ್ನು ಸಂಭ್ರಮಿಸೋಣ.
ಆತ್ಮೀಯರೊಂದಿಗೆ ,ಸಮಾನ ಮನಸ್ಕರೊಂದಿಗೆ  ಯಶಸ್ಸನ್ನು ಆಚರಿಸೋಣ.  ನಮ್ಮ ಸಾಧನೆಗಳನ್ನು ಶ್ಲಾಘಿಸಲು ಸಮಯ ತೆಗೆದುಕೊಳ್ಳೋಣ  ಅವುಗಳು ಎಷ್ಟೇ ಚಿಕ್ಕ ಚಿಕ್ಕ ಯಶಸ್ಸುಗಳಾದರೂ     ಅವು ನಮ್ಮನ್ನು ಪ್ರೇರೇಪಿಸಲು ಮತ್ತು ಮುಂದುವರಿಯಲು ಸಹಾಯ ಮಾಡುತ್ತದೆ.

8. ತಪ್ಪುಗಳಿಂದ ಕಲಿಯೋಣ 

ನಮ್ಮ ದೈನಂದಿನ ಜೀವನದಲ್ಲಿ ತಿಳಿದು ತಿಳಿಯದೇ ಅನೇಕೆ ತಪ್ಪುಗಳನ್ನು ಮಾಡುತ್ತೇವೆ.ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಎಂಬಂತೆ ನಮ್ಮ ತಪ್ಪುಗಳಿಂದ ಪಾಠಗಳನ್ನು  ಕಲಿಯೋಣ.  ನಮ್ಮ ತಪ್ಪುಗಳ  ಮೇಲೆ ನಮ್ಮನ್ನು ಕೈಲಾಗದವರು ಸೋತವರೆಂದು ಹಣೆಪಟ್ಟಿ ಕಟ್ಟಿಕೊಳ್ಳುವುದು ಬೇಡ  ಬದಲಿಗೆ ತಪ್ಪುಗಳನ್ನು ಸರಿಪಡಿಸಿಕೊಂಡು  ಸುಧಾರಿಸಿಕೊಂಡು  ಅವಕಾಶವಾಗಿ ಬಳಸಿಕೊಳ್ಳೋಣ.

9. ಧನಾತ್ಮಕ ಜನರು

ಕೆಲವರು ಯಾವಾಗಲೂ ಋಣಾತ್ಮಕವಾಗಿ ಮಾತನಾಡುವ ಮೂಲಕ ನಮ್ಮ ಕಾರ್ಯಗಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಾರೆ. ನಮ್ಮ ಸುತ್ತ ಯಾವಾಗಲೂ ಧನಾತ್ಮಕ ಚಿಂತನೆ ಜನರಿರುವಂತೆ ನೋಡಿಕೊಳ್ಳೋಣ.
ನಾವು ಸಮಯ ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು.  ನಮ್ಮನ್ನು ಮತ್ತು ನಮ್ಮ ಗುರಿಗಳನ್ನು ನಂಬುವ ಸಕಾರಾತ್ಮಕವಾಗಿ  ಬೆಂಬಲ ನೀಡುವ ಜನರೊಂದಿಗಿರೋಣ. 

10.  ದೈಹಿಕ ಮತ್ತು ಮಾನಸಿಕ ಆರೋಗ್ಯ

ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯವು ನಮ್ಮ ಪ್ರಮುಖ ಆಸ್ತಿಯಾಗಿದೆ.  ಪ್ರತಿದಿನ ಸಾಕಷ್ಟು ನಿದ್ದೆ ಮಾಡಬೇಕು.ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ಯೋಗ ಧ್ಯಾನ ಪ್ರಾಣಾಯಾಮ ಮಾಡುತ್ತಾ   ವಿಶ್ರಾಂತಿಯನ್ನು ಪಡೆಯುತ್ತಾ  ಒತ್ತಡವನ್ನು ನಿವಾರಿಸಿಕೊಳ್ಳೋಣ. ಇದರ ಪರಿಣಾಮವಾಗಿ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ನಮ್ಮದಾಗುತ್ತದೆ.

ಈ ಮೇಲಿನ ದಶ ಸೂತ್ರಗಳನ್ನು    ಅನುಸರಿಸುವ ಮೂಲಕ, ನಮ್ಮ ದೈನಂದಿನ ಕಾರ್ಯಸೂಚಿಯನ್ನು ನಾವು ಹೆಚ್ಚು ಬಳಸಿಕೊಳ್ಳಬಹುದು ಮತ್ತು ನಮ್ಮ ಗುರಿಗಳನ್ನು ಸಾಧಿಸಬಹುದು.  ನೆನಪಿಡಿ, ಯಶಸ್ಸು ಕಷ್ಟಪಟ್ಟು ಕೆಲಸ ಮಾಡುವುದಲ್ಲ. ಇದರ ಬದಲಾಗಿ ಸ್ಮಾರ್ಟ್ ವರ್ಕ್ ಮಾಡಬೇಕು. ದಿನಕರನು ದಿನವೂ ತನ್ನ ಕಾರ್ಯವನ್ನು ನಿಲ್ಲಿಸದೇ ಕ್ರಮಬದ್ಧವಾಗಿ ಮಾಡುವನು ನಾವು ಸಹ ನಮ್ಮ ಮುಂದಿನ ಯಶಸ್ಸು ಗಳಿಸಲು ಈ ದಿನವನ್ನು ಫಲದಾಯಕವಾಗಿ ಮಾಡಿಕೊಳ್ಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529