06 ಡಿಸೆಂಬರ್ 2023

ಸಿಹಿಜೀವಿಯ ಹಾಯ್ಕುಗಳು

 



ಹಾಯ್ಕುಗಳು 


ಸುಮ್ಮನೇ ಅಲ್ಲ 

ಲೇಖನದ  ಕಿರೀಟ

ತಲೆಬರಹ.



ಕಲಿಸುವುದು 

ತಗ್ಗಿಬಗ್ಗುವುದನು 

ತಲೆಬಾಗಿಲು.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ಗಜ ನಮನ

 



ಗಜ ನಮನ 


ಅಕಾಲಿಕ ಸಾವಿಗೀಡಾದ ಅಮ್ಮನ

ಅಂಬಾರಿ ಹೊತ್ತ ಅರ್ಜುನ|

ನಾಡಿನ ಜನರೆಲ್ಲರ ಪರವಾಗಿ

ಜಗ ಮೆಚ್ಚಿದ ಗಜ ಗೆ ನಮನ ||


ಸಿಹಿಜೀವಿ ವೆಂಕಟೇಶ್ವರ

ತುಮಕೂರು

01 ಡಿಸೆಂಬರ್ 2023

ಯಶಸ್ವಿ ದಿನಕ್ಕೆ ದಶಸೂತ್ರಗಳು.


 ಯಶಸ್ಸಿ ದಿನಕ್ಕೆ ದಶಸೂತ್ರಗಳು.


"ನೀನು ಟೈಮ್ ಹೇಗೆ ಮೇನೇಜ್ ಮಾಡ್ತೀಯಾ? ಪೇಪರ್ ಗೆ ಬರೀತಿಯಾ, ಪುಸ್ತಕ ಬರೀತಿಯಾ, ಹಾಡು ಹೇಳ್ತಿಯಾ, ಪ್ಯಾಮಿಲಿ ಜೊತೆಯಲ್ಲಿ ಆಗಾಗ್ಗೆ ಪ್ರವಾಸ ಹೋಗ್ತೀಯಾ, ಪ್ರೋಗ್ರಾಮ್ ಆರ್ಗನೈಸ್ ಮಾಡ್ತೀಯಾ ಇದಕ್ಕೆಲ್ಲ ಟೈಮ್ ಹೇಗೆ ಸಿಗುತ್ತೆ?"
ಇವು   ನನ್ನ ಆತ್ಮೀಯರು ಮತ್ತು ಸ್ನೇಹಿತರು ನನಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು. ಅದಕ್ಕೆ ನನ್ನ ಉತ್ತರ ಪ್ರತಿ ದಿನ ಬೇಗ ಏಳುವುದು ಯೋಜನಾ ಬದ್ಧವಾಗಿ ಕೆಲಸ ಮಾಡುವುದು.
ಅದರ ಜೊತೆಯಲ್ಲಿ ಈ ಕೆಳಕಂಡ ಅಂಶಗಳನ್ನು ಅಳವಡಿಸಿಕೊಳ್ಳುವುದು. ಈ ಅಂಶಗಳು ನಿಮಗೆ ಇಷ್ಟವಾದರೆ ನೀವೂ ಅಳವಡಿಸಿಕೊಳ್ಳಬಹುದು. ಪ್ರಯತ್ನಿಸಿ.

1. ಸ್ಪಷ್ಟ . ಉದ್ದೇಶ

ನಮ್ಮ ದಿನವನ್ನು  ಸ್ಪಷ್ಟವಾದ ಉದ್ದೇಶದೊಂದಿಗೆ ಪ್ರಾರಂಭಿಸೋಣ.
ನಮ್ಮ ಆದ್ಯತೆಗಳನ್ನು ಪ್ರತಿಬಿಂಬಿಸಲು ಮತ್ತು ದಿನಕ್ಕೆ ನಮ್ಮ ಉದ್ದೇಶಗಳನ್ನು ಹೊಂದಿಸಲು ಪ್ರತಿ ಬೆಳಿಗ್ಗೆ ಕೆಲವು ನಿಮಿಷಗಳನ್ನು ತೆಗೆದುಕೊಳ್ಳೋಣ . ಇದು ನಮಗೆ ಏಕಾಗ್ರತೆಯಲ್ಲಿರಲು ಮತ್ತು ನಮ್ಮ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. 

2. ಒಂದು ಸಮಯದಲ್ಲಿ ಒಂದೇ  ಕಾರ್ಯ.

  ನಾವು ಒಂದೇ ಬಾರಿಗೆ ಹಲವಾರು ಕೆಲಸಗಳನ್ನು ಮಾಡಲು ಪ್ರಯತ್ನಿಸಿದಾಗ  ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.  ಬದಲಾಗಿ  ಒಂದು ಸಮಯದಲ್ಲಿ ಒಂದು ಕಾರ್ಯವನ್ನು ಕೇಂದ್ರೀಕರಿಸಿ ಮತ್ತು ನಮ್ಮ ಸಂಪೂರ್ಣ ಗಮನವನ್ನು ನೀಡಿದರೆ ಆ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ.

3.ವೇಳಾಪಟ್ಟಿಯಿರಲಿ.

ನಮ್ಮ ದೈನಂದಿನ ಕಾರ್ಯಗಳನ್ನು ನಿಗದಿಪಡಿಸಿಕೊಂಡು ಒಂದು ವೇಳಾಪಟ್ಟಿಯಂತೆ ಕಾರ್ಯನಿರ್ವಾಹಿಸಬೇಕು.  ಅದು ಲಿಖಿತವಾಗಿರಬೇಕಿಲ್ಲ.ಮನದಲ್ಲಿ ಮಾಡಿಕೊಂಡರೂ ಆದೀತು.   ಇದು ನಮಗೆ ನಿಗದಿತ ಸಮಯದಲ್ಲಿ ನಿಗದಿತ ಕೆಲಸ ಮಾಡಲು ಮತ್ತು ಆಲಸ್ಯವನ್ನು ತಪ್ಪಿಸಲು ಸಹಾಯ ಮಾಡುತ್ತದೆ.

4. ಸಹಕಾರ ಸಮನ್ವಯ

ಕೆಲವೊಮ್ಮೆ ಎಲ್ಲಾ ಕೆಲಸಗಳನ್ನು ನಾವೇ ಮಾಡಲು ಹೋಗುತ್ತೇವೆ.
ಎಲ್ಲವನ್ನೂ ನಾವೇ ಮಾಡಬೇಕು ಎಂದು ಭಾವಿಸಬೇಡಿ.  ಸಾಧ್ಯವಾದಾಗಲೆಲ್ಲಾ ಕಾರ್ಯಗಳನ್ನು ಇತರರಿಗೆ ನಿಯೋಜಿಸಿ.  ಇದು ನಮ್ಮ ಸಮಯವನ್ನು ಉಳಿಸುತ್ತದೆ ಇದರಿಂದ ನಮ್ಮ ಪ್ರಮುಖ ಆದ್ಯತೆಗಳ ಮೇಲೆ ನಾವು ಗಮನಹರಿಸಬಹುದು.

5. ಇಲ್ಲ ಎಂದು ಬಿಡಿ

ಕೆಲವೊಮ್ಮೆ ಯಾವುದೋ ಮುಲಾಜಿಗೆ ಬಿದ್ದು ನಮ್ಮ ಇಷ್ಟವಿಲ್ಲದ ಕಾರ್ಯ ಒಪ್ಪಿಕೊಂಡು ಒದ್ದಾಡುತ್ತೇವೆ. ಅದಕ್ಕೆ ಬದಲಾಗಿ
ನಮ್ಮ ಗುರಿಗಳೊಂದಿಗೆ ಹೊಂದಿಕೆಯಾಗದ ಬದ್ಧತೆಗಳಿಗೆ ಇಲ್ಲ ಎಂದು ಹೇಳಿಬಿಡೋಣ.  ನಮ್ಮ ವೇಳಾಪಟ್ಟಿಗೆ ಹೊಂದಿಕೆಯಾಗದ ಅಥವಾ ನಮ್ಮ ಗುರಿಗಳಿಗೆ ಹೊಂದಿಕೆಯಾಗದ ವಿಷಯಗಳಿಗೆ ಇಲ್ಲ ಎಂದು ಹೇಳುವುದು ಸರಿ.  ನಮ್ಮ ಸಮಯ ಮತ್ತು ಶಕ್ತಿಯನ್ನು ರಕ್ಷಿಸಲು ಹಿಂಜರಿಯದಿರೋಣ.

6. ವಿರಾಮವೂ ಇರಲಿ

ನಿರಂತರವಾದ ಕೆಲಸ ಮೈ ಮನಗಳಿಗೆ ಒತ್ತಡ ತಂದು ನಮ್ಮ ಕಾರ್ಯದಕ್ಷತೆಯನ್ನು ಕಡಿಮೆಮಾಡುತ್ತವೆ.ಅದಕ್ಕಾಗಿ
ಸೂಕ್ತ ಕಾಲದಲ್ಲಿ  ವಿರಾಮಗಳನ್ನು ತೆಗೆದುಕೊಳ್ಳೋಣ.  ನಮ್ಮ ಮನಸ್ಸು ಮತ್ತು ದೇಹವನ್ನು ರಿಫ್ರೆಶ್ ಮಾಡಲು ಕನಿಷ್ಠ ಪ್ರತಿ ಗಂಟೆಗೊಮ್ಮೆ  ವಿಶ್ರಾಂತಿ ಪಡೆಯೋಣ.ವಿಶ್ರಾಂತಿ ಎಂದರೆ ಬರೀ ಮಲಗುವುದು ,ಸುಮ್ಮನೆ ಕೂರುವುದಲ್ಲ.ಕೆಲಸದ ಬದಲಾವಣೆಯೂ ವಿಶ್ರಾಂತಿಯೇ.  ವಿರಾಮಗಳನ್ನು ತೆಗೆದುಕೊಳ್ಳುವುದು ನಮಗೆ ದಿನವಿಡೀ ಉಲ್ಲಸಿತವಾಗಿರಲು  ಮತ್ತು ಹೆಚ್ಚು  ಉತ್ಪಾದಕವಾಗಿರಲು ಸಹಾಯ ಮಾಡುತ್ತದೆ.

7. ಯಶಸ್ಸನ್ನು ಸಂಭ್ರಮಿಸೋಣ

ಆ ದಿನದಂದು ನಮಗೆ ಚಿಕ್ಕ ಯಶಸ್ಸು ಸಿಕ್ಕರೆ ಅದನ್ನು ಸಂಭ್ರಮಿಸೋಣ.
ಆತ್ಮೀಯರೊಂದಿಗೆ ,ಸಮಾನ ಮನಸ್ಕರೊಂದಿಗೆ  ಯಶಸ್ಸನ್ನು ಆಚರಿಸೋಣ.  ನಮ್ಮ ಸಾಧನೆಗಳನ್ನು ಶ್ಲಾಘಿಸಲು ಸಮಯ ತೆಗೆದುಕೊಳ್ಳೋಣ  ಅವುಗಳು ಎಷ್ಟೇ ಚಿಕ್ಕ ಚಿಕ್ಕ ಯಶಸ್ಸುಗಳಾದರೂ     ಅವು ನಮ್ಮನ್ನು ಪ್ರೇರೇಪಿಸಲು ಮತ್ತು ಮುಂದುವರಿಯಲು ಸಹಾಯ ಮಾಡುತ್ತದೆ.

8. ತಪ್ಪುಗಳಿಂದ ಕಲಿಯೋಣ 

ನಮ್ಮ ದೈನಂದಿನ ಜೀವನದಲ್ಲಿ ತಿಳಿದು ತಿಳಿಯದೇ ಅನೇಕೆ ತಪ್ಪುಗಳನ್ನು ಮಾಡುತ್ತೇವೆ.ತಪ್ಪು ಮಾಡೋದು ಸಹಜ ತಿದ್ದಿ ನಡೆಯೋನು ಮನುಜ ಎಂಬಂತೆ ನಮ್ಮ ತಪ್ಪುಗಳಿಂದ ಪಾಠಗಳನ್ನು  ಕಲಿಯೋಣ.  ನಮ್ಮ ತಪ್ಪುಗಳ  ಮೇಲೆ ನಮ್ಮನ್ನು ಕೈಲಾಗದವರು ಸೋತವರೆಂದು ಹಣೆಪಟ್ಟಿ ಕಟ್ಟಿಕೊಳ್ಳುವುದು ಬೇಡ  ಬದಲಿಗೆ ತಪ್ಪುಗಳನ್ನು ಸರಿಪಡಿಸಿಕೊಂಡು  ಸುಧಾರಿಸಿಕೊಂಡು  ಅವಕಾಶವಾಗಿ ಬಳಸಿಕೊಳ್ಳೋಣ.

9. ಧನಾತ್ಮಕ ಜನರು

ಕೆಲವರು ಯಾವಾಗಲೂ ಋಣಾತ್ಮಕವಾಗಿ ಮಾತನಾಡುವ ಮೂಲಕ ನಮ್ಮ ಕಾರ್ಯಗಳಲ್ಲಿ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಾರೆ. ನಮ್ಮ ಸುತ್ತ ಯಾವಾಗಲೂ ಧನಾತ್ಮಕ ಚಿಂತನೆ ಜನರಿರುವಂತೆ ನೋಡಿಕೊಳ್ಳೋಣ.
ನಾವು ಸಮಯ ಕಳೆಯುವ ಜನರು ನಮ್ಮ ಯಶಸ್ಸಿನ ಮೇಲೆ ದೊಡ್ಡ ಪ್ರಭಾವ ಬೀರಬಹುದು.  ನಮ್ಮನ್ನು ಮತ್ತು ನಮ್ಮ ಗುರಿಗಳನ್ನು ನಂಬುವ ಸಕಾರಾತ್ಮಕವಾಗಿ  ಬೆಂಬಲ ನೀಡುವ ಜನರೊಂದಿಗಿರೋಣ. 

10.  ದೈಹಿಕ ಮತ್ತು ಮಾನಸಿಕ ಆರೋಗ್ಯ

ಆರೋಗ್ಯವೇ ಭಾಗ್ಯ. ನಮ್ಮ ಆರೋಗ್ಯವು ನಮ್ಮ ಪ್ರಮುಖ ಆಸ್ತಿಯಾಗಿದೆ.  ಪ್ರತಿದಿನ ಸಾಕಷ್ಟು ನಿದ್ದೆ ಮಾಡಬೇಕು.ಆರೋಗ್ಯಕರ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ಯೋಗ ಧ್ಯಾನ ಪ್ರಾಣಾಯಾಮ ಮಾಡುತ್ತಾ   ವಿಶ್ರಾಂತಿಯನ್ನು ಪಡೆಯುತ್ತಾ  ಒತ್ತಡವನ್ನು ನಿವಾರಿಸಿಕೊಳ್ಳೋಣ. ಇದರ ಪರಿಣಾಮವಾಗಿ ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯ ನಮ್ಮದಾಗುತ್ತದೆ.

ಈ ಮೇಲಿನ ದಶ ಸೂತ್ರಗಳನ್ನು    ಅನುಸರಿಸುವ ಮೂಲಕ, ನಮ್ಮ ದೈನಂದಿನ ಕಾರ್ಯಸೂಚಿಯನ್ನು ನಾವು ಹೆಚ್ಚು ಬಳಸಿಕೊಳ್ಳಬಹುದು ಮತ್ತು ನಮ್ಮ ಗುರಿಗಳನ್ನು ಸಾಧಿಸಬಹುದು.  ನೆನಪಿಡಿ, ಯಶಸ್ಸು ಕಷ್ಟಪಟ್ಟು ಕೆಲಸ ಮಾಡುವುದಲ್ಲ. ಇದರ ಬದಲಾಗಿ ಸ್ಮಾರ್ಟ್ ವರ್ಕ್ ಮಾಡಬೇಕು. ದಿನಕರನು ದಿನವೂ ತನ್ನ ಕಾರ್ಯವನ್ನು ನಿಲ್ಲಿಸದೇ ಕ್ರಮಬದ್ಧವಾಗಿ ಮಾಡುವನು ನಾವು ಸಹ ನಮ್ಮ ಮುಂದಿನ ಯಶಸ್ಸು ಗಳಿಸಲು ಈ ದಿನವನ್ನು ಫಲದಾಯಕವಾಗಿ ಮಾಡಿಕೊಳ್ಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

30 ನವೆಂಬರ್ 2023

ಸಂಸಾರದ ಗಾಡಿ ,ಚುಟುಕು

 


ಸಂಸಾರದ ಗಾಡಿ 


ಜರಿಯದಿರು ಇದು ನನ್ನ ಜೋಪಡಿ 

ನೀನೇ ಬೆರಗಾಗುವೆ ನನ್ನಪ್ರೀತಿ ನೋಡಿ

ಮಲಗಿಸುವೆ ನಿನ್ನ ಲಾಲಿ ಹಾಡಿ

ಇಬ್ಬರೂ ಎಳೆಯೋಣ ಸಂಸಾರದ ಗಾಡಿ 

ಕರೆದರೆ ಎಲ್ಲಿದ್ದರೂ ಬರುವೆ ಓಡಿ 

ಜೀವಿಸೋಣ ಹಕ್ಕಿಗಳಂತೆ ಜೊತೆಗೂಡಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

ರೋಗಮುಕ್ತರಾಗಿ ದೀರ್ಘಕಾಲ ಜೀವಿಸೋಣ.

 


ರೋಗಮುಕ್ತರಾಗಿ ದೀರ್ಘಕಾಲ ಜೀವಿಸೋಣ.

ಸಾವೆಂದರೆ ಎಲ್ಲರಿಗೂ ಅವ್ಯಕ್ತ ಭಯ. ಸಾಯಲು ಯಾರೂ ತಯಾರಿರುವುದಿಲ್ಲ.ಅದರಲ್ಲೂ ಅಕಾಲಿಕ ಸಾವನ್ನು ಯಾರೂ ಬಯಸುವುದಿಲ್ಲ.ಆದರೂ ಇತ್ತೀಚಿನ ದಿನಗಳಲ್ಲಿ ಪ್ರಾಂತ್ಯ ಭೇದಗಳಿಲ್ಲದೇ ಸಾಯಬಾರದ ವಯಸ್ಸಿನಲ್ಲಿ ಎಲ್ಲಾ ವಯೋಮಾನದವರು ಮರಣಹೊಂದುತ್ತಿರುವುದು ಆಘಾತಕಾರಿ ಸಂಗತಿ.ಇದಕ್ಕೆ ಹವಾಮಾನ ವೈಪರೀತ್ಯ, ಆಹಾರ ಪದ್ದತಿ, ಮಾಲಿನ್ಯ,ಒತ್ತಡದ ಜೀವನ, ಆಶಿಸ್ತಿನ ಜೀವನಶೈಲಿ ಹೀಗೆ ನಾನಾ ಕಾರಣಗಳನ್ನು ಪಟ್ಟಿ ಮಾಡಬಹುದು.

ಇತ್ತೀಚಿನ ಒಂದು  ಅಧ್ಯಯನದ ಪ್ರಕಾರ, ಆರೋಗ್ಯಕರ ಆಹಾರವನ್ನು ಅಳವಡಿಸಿಕೊಂಡು ನಮ್ಮ ಜೀವನ ಶೈಲಿಯನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಂಡರೆ     ಮಧ್ಯವಯಸ್ಕ ವ್ಯಕ್ತಿಗಳ ಜೀವಿತಾವಧಿಯನ್ನು ಸುಮಾರು ಒಂದು ದಶಕದವರೆಗೆ ವಿಸ್ತರಿಸಬಹುದು ಎಂಬ ಮಾಹಿತಿಯನ್ನು ನೀಡಿದೆ.  ಈ ವಾರದ ಆರಂಭದಲ್ಲಿ ನೇಚರ್ ಫುಡ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯು ಯುಕೆ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸುವ ಸುಮಾರು ಅರ್ಧ ಮಿಲಿಯನ್ ಬ್ರಿಟಿಷ್ ನಿವಾಸಿಗಳ ಆರೋಗ್ಯ ಡೇಟಾವನ್ನು ವಿಶ್ಲೇಷಿಸಿದೆ, ಕಾಲಾನಂತರದಲ್ಲಿ ಅವರ ಆಹಾರ ಪದ್ಧತಿಯನ್ನು ದಾಖಲಿಸಿದೆ.
ಸಂಶೋಧಕರು 467,354 ಭಾಗವಹಿಸುವವರನ್ನು ಅವರ ಆಹಾರದ ಆಯ್ಕೆಗಳ ಆಧಾರದ ಮೇಲೆ ವರ್ಗೀಕರಿಸಿ  ಈ ಅಭ್ಯಾಸಗಳು ಹೇಗೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ಟ್ರ್ಯಾಕ್ ಮಾಡಿದ್ದಾರೆ. ಆರೋಗ್ಯಕರ ಆಹಾರದಿಂದ ದೀರ್ಘಾಯುಷ್ಯಕ್ಕೆ ಸಂಬಂಧಿಸಿದ 40 ರ ವಯಸ್ಸಿನ ವ್ಯಕ್ತಿಗಳು ತಮ್ಮ ಜೀವಿತಾವಧಿಯಲ್ಲಿ  ಸುಮಾರು 10 ವರ್ಷಗಳಷ್ಟು ಹೆಚ್ಚು ಕಾಲ ಜೀವಿಸಬಹುದು ಎಂಬುದನ್ನು  ಬಹಿರಂಗಪಡಿಸಿದೆ. 

ಹೆಚ್ಚಿನ  ಜೀವಿತಾವಧಿಯು ನಮ್ಮದಾಗಲು  ಆರೋಗ್ಯಕರ ಆಹಾರದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ.  ಆಹಾರ ಪದ್ಧತಿ ಈ ಕೆಳಗಿನಂತಿದ್ದರೆ  ಉತ್ತಮ ಆಯುರಾರೋಗ್ಯ ನಮ್ಮದಾಗುವಲ್ಲಿ ಸಂದೇಹವಿಲ್ಲ.

ಅನಾರೋಗ್ಯಕರ ಕೊಬ್ಬು ,ಸಕ್ಕರೆ, ಸೋಡಿಯಂ  ಪದಾರ್ಥಗಳನ್ನು ಅಧಿಕವಾಗಿ ಸೇವಿಸಿದರೆ ಹೃದ್ರೋ, ಪಾರ್ಶ್ವವಾಯು ಮತ್ತು ಟೈಪ್ 2 ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗಬಹುದು. ಆದಷ್ಟು ಇಂತಹ ಆಹಾರವನ್ನು ಕಡಿಮೆ ಸೇವಿಸೋಣ.

ಪೈಬರ್,ಜೀವಸತ್ವಗಳು, ಖನಿಜಗಳು, ಮತ್ತು ಪೋಷಕಾಂಶಗಳನ್ನು ಅಗತ್ಯಕ್ಕೆ ಅನುಗುಣವಾಗಿ ತೆಗೆದುಕೊಳ್ಳೋಣ. ಇಂತಹ ಸಮತೋಲಿತ ಆಹಾರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಹಣ್ಣು ತರಕಾರಿಗಳಲ್ಲಿ   ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು  ಒಟ್ಟಾರೆ ಆರೋಗ್ಯಕ್ಕೆ  ಉತ್ತಮ  ಕೊಡುಗೆ ನೀಡುತ್ತವೆ  ಮತ್ತು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಅದ್ದರಿಂದ ಪ್ರತಿ ದಿನ ಇವುಗಳು ನಮ್ಮ ಆಹಾರದಲ್ಲಿರುವಂತೆ ಗಮನಹರಿಸೋಣ.

ಶಾಖಾಹಾರಿಗಳು ಮೀನುಗಳನ್ನು ಸೇವಿಸಬಹುದು ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್ಗಳಂತಹ ಮೀನುಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ದೀರ್ಘಾಯುಷ್ಯಕ್ಕೆ ಕೊಡುಗೆ ನೀಡುತ್ತದೆ

ಬೀಜಗಳು ಮತ್ತು ಧಾನ್ಯಗಳು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.   
ಇವು ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲಗಳಾಗಿವೆ.  ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ  ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತವೆ
ಕಂದು ಅಕ್ಕಿ,  ಗೋಧಿಯಂತಹ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು, ಫೈಬರ್ ಮತ್ತು ವಿವಿಧ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಅವು  ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತವೆ.

ಹೀಗೆ ಆಹಾರಕ್ಕೂ ನಮ್ಮ ಸರಾಸರಿ ಜೀವಿತಾವಧಿಗೂ ಪರಸ್ಪರ ಸಂಬಂಧವಿರುವುದರಿಂದ ಉತ್ತಮ ಸಮತೋಲಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳೋಣ ಮತ್ತು ರೋಗಮುಕ್ತರಾಗಿ  ಆರೋಗ್ಯದಿಂದ  ದೀರ್ಘಕಾಲ ಬಾಳೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529