ಕಾನನ
ಜೀವಿಗಳ ಒಳಿತಿಗಾಗಿ
ನಮ್ಮ ಉಳಿವಿಗಾಗಿ
ನಿಲ್ಲಿಸಬೇಕಿದೆ ಮರಗಳ ಹನನ|
ಎಲ್ಲರೂ ಒಂದೊಂದು
ಗಿಡವ ನೆಡುತ ,ಉಳಿಸಿ
ಬೆಳೆಸಬೇಕಿದೆ ಕಾನನ ||
(ಇಂದು ವಿಶ್ವ ಅರಣ್ಯ ದಿನ )
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಾನನ
ಜೀವಿಗಳ ಒಳಿತಿಗಾಗಿ
ನಮ್ಮ ಉಳಿವಿಗಾಗಿ
ನಿಲ್ಲಿಸಬೇಕಿದೆ ಮರಗಳ ಹನನ|
ಎಲ್ಲರೂ ಒಂದೊಂದು
ಗಿಡವ ನೆಡುತ ,ಉಳಿಸಿ
ಬೆಳೆಸಬೇಕಿದೆ ಕಾನನ ||
(ಇಂದು ವಿಶ್ವ ಅರಣ್ಯ ದಿನ )
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮಾರ್ಚ್ 21 ರ ವಿಶೇಷ.
ಖಗೋಳವೆಂದರೆ ವಿಸ್ಮಯ! ತಿಳಿದಷ್ಟೂ ಕುತೂಹಲಕಾರಿ ಪ್ರತಿದಿನವೂ ಒಂದೊಂದು ವಿಶೇಷವಾದ ಸಂಗತಿಗಳು ಖಗೋಳದಲ್ಲಿ ಸಂಭವಿಸುತ್ತಾ ನಮ್ಮನ್ನು ಸೆಳೆಯುತ್ತವೆ.
ಅಂತಹ ವಿಶೇಷ ವಿದ್ಯಮಾನಗಳಲ್ಲಿ ಒಂದು ವಸಂತ ವಿಷುವ (ವಿಷುವತ್ ಸಂಕ್ರಾಂತಿ) ಪ್ರತಿ ವರ್ಷ ಭೂಮಿ- ಸೂರ್ಯನ ಬಂಧನದಿಂದ ಸಂಭವಿಸುವ ಈ ವಿದ್ಯಮಾನ ಮಾ.21 ರಂದು ಸಂಭವಿಸಲಿದೆ.
ವಿಷುವತ್ ಸಂಕ್ರಾಂತಿಯು ಒಂದು ವಿಶೇಷ ಖಗೋಳ ವಿದ್ಯಮಾನವಾಗಿದ್ದು, ಈ ದಿನ ಭೂಮಿಯ ಮೇಲೆ ಹಗಲು ಹಾಗೂ ರಾತ್ರಿ ಅವಧಿ ಸಮನಾಗಿರುತ್ತದೆ. ವರ್ಷಕ್ಕೆ ಎರಡು ಬಾರಿ, ಮಾರ್ಚ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಈ ವಿದ್ಯಮಾನ ಸಂಭವಿಸುತ್ತದೆ. ವಿಷುವತ್ ಸಂಕ್ರಾಂತಿಯಂದು ಸೂರ್ಯನು ನಿಖರವಾಗಿ
ಪೂರ್ವ ದಿಕ್ಕಿನಲ್ಲಿ ಉದಯಿಸಿ ಪಶ್ಚಿಮ ದಿಕ್ಕಿನಲ್ಲಿ ಅಸ್ತವಾಗುತ್ತಾನೆ ಮತ್ತು ಈ ದಿನ ಸೂರ್ಯನ ಬೆಳಕು ಭೂಮಿಯ ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುತ್ತದೆ. ವಸಂತ ವಿಷುವತ್ ಸಂಕ್ರಾಂತಿಯ ದಿನದಂದು ಸೂರ್ಯನು ಉತ್ತರ ದಿಕ್ಕಿನಿಂದ ದಕ್ಷಿಣ ದಿಕ್ಕಿನೆಡೆಗೆ ಚಲಿಸಲು ಪ್ರಾರಂಭಿಸುವುದರಿಂದ ಉತ್ತರ ಗೋಳಾರ್ಧದಲ್ಲಿ ವಸಂತ ಋತು ಆರಂಭವಾಗುತ್ತದೆ.
ಖಗೋಳ ಸಮಭಾಜಕ (ವಿಷುವವೃತ್ತ), ಕ್ರಾಂತಿ ವೃತ್ತವು
ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಈ ಬಿಂದುಗಳೇ ವಿಷುವದ್ವಂದುಗಳು.
ಸೂರ್ಯನು ಈ ಬಿಂದುವನ್ನು ಸಂಕ್ರಮಿಸಿ, ಪ್ರತಿ ದಿನ ಆಕಾಶದಲ್ಲಿ ಉತ್ತರದ ಕಡೆ ಚಲಿಸುವುದು ನೋಡಬಹುದು (ಉತ್ತರ ಅಯನ).
ವಿಶ್ವಾದ್ಯಂತ ವಿಷುವತ್ ಸಂಕ್ರಾಂತಿಯನ್ನು ಮಾರ್ಚ್ ಈಕ್ವಿನಾಕ್ಸ್ ಎಂದು ಕರೆಯುತ್ತಾರೆ.
ಭೂಗೋಳಾರ್ಧದ ಮೇಲ್ಬಾಗದವರು ಈ ದಿನವನ್ನು ವರ್ನಲ್ ಈಕ್ವಿನಾಕ್ಸ್ ಎಂದು ಕೂಡಾ ಕರೆಯುತ್ತಾರೆ .
ಸಿ ಜಿ ವೆಂಕಟೇಶ್ವರ
ತುಮಕೂರು
*ಮೊಳೆಯಲಿ ಸದ್ಭಾವನೆ*
ಅಹರ್ನಿಶಿ ಭಜಿಸುವೆನು ದೇವ
ನೀಗು ಜಗದ ಜೀವಿಗಳ ನೋವ
ಅಳಿಯಲಿ ಎಲ್ಲೆಡೆ ದುರ್ಭಾವನೆ
ಮೊಳೆಯಲಿ ಸರ್ವರಲಿ ಸದ್ಭಾವನೆ
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ತಾಳಿದವನು ಬಾಳಿಯಾನು
ಮದುವೆಯಾಗಲು ಹಾತೊರೆಯುವವನು
ಯೋಚಿಸುವುದೊಂದೆ
ತಾಳಿಕಟ್ಟಿದವನು ಬಾಳಿಯಾನು |
ಮದುವೆಯಾದವನು ಸಲಹೆ
ಕೊಡುವುದೊಂದೆ
ತಾಳಿದವನು ಬಾಳಿಯಾನು||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಸ್ನೇಹ ಸಮ್ಮಿಲನ*
ಬೇಡವೆಂದರೂ ನೆನಪಾಗುತ್ತದೆ
ಬಾಲ್ಯದಿ ಗೆಳಯರೊಡಗೂಡಿ
ಆಡಿ ಹಾಡಿ ನಲಿದ ದಿನ |
ಹಾತೊರೆಯುತ್ತಿದೆ ಮನ
ಎಂದು ಆಗುವುದೋ
ಸ್ನೇಹ ಸಮ್ಮಿಲನ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ