ನಿರಾಭರಣ ಸುಂದರಿಯಾದರೂ
ಕಡಿಮೆಯೇನಲ್ಲ ನಿನ್ನ
ವಯ್ಯಾರ ಒನಪು|
ಬ್ಯಾಡವೆಂದರೂ ಬಂದು
ಬಂದು ಕಾಡತಾವ ನೆನೆಪು||
ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ನಿರಾಭರಣ ಸುಂದರಿಯಾದರೂ
ಕಡಿಮೆಯೇನಲ್ಲ ನಿನ್ನ
ವಯ್ಯಾರ ಒನಪು|
ಬ್ಯಾಡವೆಂದರೂ ಬಂದು
ಬಂದು ಕಾಡತಾವ ನೆನೆಪು||
ಸಿಹಿಜೀವಿ
ಮದ್ಯ ಪ್ರದೇಶ
ಬಾರ್ ಗಳ ಮುಚ್ಚಲು
ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |
ಮನೆ ಮಾತ್ರ ಕುಡಿಯುವ ತಾಣ
ಅದುವೇ ಮದ್ಯ ಪ್ರದೇಶ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ)
ಅಪ್ಸರೆ
ಆಸೆ ಪಟ್ಟೆನು ಮಾತನಾಡಿಸಲು
ಗಗನದ ತಾರೆ|
ಕನಸಲಿ ಬಂದು ಮುತ್ತನಿಟ್ಟಳು
ದೇವಲೋಕದ ಅಪ್ಸರೆ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಅರಿಕೆಯೊಂದೆ
ಭಗವಂತ ಕಾಪಾಡು
ಈ ಭುವಿಯನು
ಹಾರಾಟವೇಕೆ?
ಹರಿಯೇ ಸರ್ವಶಕ್ತ
ಅರಿವಿರಲಿ
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ನಗುವೇ ಆಭರಣ
ಕಳೆದುಕೊಂಡರೆ ಅತಿಯಾಗಿ
ಚಿಂತಿಸಬೇಡ ಅಂತಸ್ತು, ಹಣ |
ಕಳೆದುಕೊಳ್ಳಲೇಬೇಡ ಮುಖದ
ಮೇಲಿನ ನಗುವೆಂಬ ಆಭರಣ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ