14 ಮಾರ್ಚ್ 2023

ಕಾಡತಾವ ನೆನೆಪು...

 ನಿರಾಭರಣ ಸುಂದರಿಯಾದರೂ

ಕಡಿಮೆಯೇನಲ್ಲ ನಿ‌ನ್ನ

ವಯ್ಯಾರ ಒನಪು|

ಬ್ಯಾಡವೆಂದರೂ ಬಂದು

ಬಂದು ಕಾಡತಾವ ನೆನೆಪು||


ಸಿಹಿಜೀವಿ 


ಮದ್ಯ ಪ್ರದೇಶ

 ಮದ್ಯ ಪ್ರದೇಶ 


ಬಾರ್ ಗಳ ಮುಚ್ಚಲು 

ಹೊಸ ಆದೇಶ ಮಾಡಿದೆ ಮಧ್ಯ ಪ್ರದೇಶ |

ಮನೆ  ಮಾತ್ರ ಕುಡಿಯುವ ತಾಣ

ಅದುವೇ ಮದ್ಯ ಪ್ರದೇಶ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


(ಮಧ್ಯ ಪ್ರದೇಶ ರಾಜ್ಯದಲ್ಲಿ ಬಾರ್ ಮುಚ್ಚಿ ,ಮದ್ಯ ಸೇವಿಸುವವರು  ಮನೆ ಗೆ ಮದ್ಯ ಕೊಂಡೊಯ್ಯಲು ಮಾಡಿದ ಆದೇಶ) 


09 ಮಾರ್ಚ್ 2023

ಅಪ್ಸರೆ.

 ಅಪ್ಸರೆ 


ಆಸೆ ಪಟ್ಟೆನು ಮಾತನಾಡಿಸಲು

ಗಗನದ ತಾರೆ|

ಕನಸಲಿ ಬಂದು ಮುತ್ತನಿಟ್ಟಳು 

ದೇವಲೋಕದ ಅಪ್ಸರೆ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಎರಡು ಹಾಯ್ಕುಗಳು




ಅರಿಕೆಯೊಂದೆ

ಭಗವಂತ ಕಾಪಾಡು

ಈ ಭುವಿಯನು 



ಹಾರಾಟವೇಕೆ?

ಹರಿಯೇ ಸರ್ವಶಕ್ತ 

ಅರಿವಿರಲಿ





ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


05 ಮಾರ್ಚ್ 2023

ನಗುವೆಂಬ ಆಭರಣ.


 


ನಗುವೇ ಆಭರಣ 


ಕಳೆದುಕೊಂಡರೆ ಅತಿಯಾಗಿ

ಚಿಂತಿಸಬೇಡ ಅಂತಸ್ತು, ಹಣ |

ಕಳೆದುಕೊಳ್ಳಲೇಬೇಡ ಮುಖದ

ಮೇಲಿನ ನಗುವೆಂಬ ಆಭರಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ