09 ಮಾರ್ಚ್ 2023

ಅಪ್ಸರೆ.

 ಅಪ್ಸರೆ 


ಆಸೆ ಪಟ್ಟೆನು ಮಾತನಾಡಿಸಲು

ಗಗನದ ತಾರೆ|

ಕನಸಲಿ ಬಂದು ಮುತ್ತನಿಟ್ಟಳು 

ದೇವಲೋಕದ ಅಪ್ಸರೆ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಎರಡು ಹಾಯ್ಕುಗಳು




ಅರಿಕೆಯೊಂದೆ

ಭಗವಂತ ಕಾಪಾಡು

ಈ ಭುವಿಯನು 



ಹಾರಾಟವೇಕೆ?

ಹರಿಯೇ ಸರ್ವಶಕ್ತ 

ಅರಿವಿರಲಿ





ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


05 ಮಾರ್ಚ್ 2023

ನಗುವೆಂಬ ಆಭರಣ.


 


ನಗುವೇ ಆಭರಣ 


ಕಳೆದುಕೊಂಡರೆ ಅತಿಯಾಗಿ

ಚಿಂತಿಸಬೇಡ ಅಂತಸ್ತು, ಹಣ |

ಕಳೆದುಕೊಳ್ಳಲೇಬೇಡ ಮುಖದ

ಮೇಲಿನ ನಗುವೆಂಬ ಆಭರಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

02 ಮಾರ್ಚ್ 2023

ಸುದಿನ

 


ಸುದಿನ 


ಪ್ರಾರ್ಥಿಸಬೇಕು ಅವನ ಪ್ರತಿದಿನ 

ನಾವಾಗಬೇಕು ದೇವರ ಅಧೀನ

ಅರ್ಪಿಸಿ ಕಾರ್ಯ ಮಾಡು ತನು ಮನ 

ಬಂದೇ ಬರುವುದು ನಿನಗೆ ಸುದಿನ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


01 ಮಾರ್ಚ್ 2023

ಹಾಯ್ಕುಗಳು

 



ಎರಡು ಹಾಯ್ಕುಗಳು.




ಅಣಿಯಾಗಿರು

ಸತ್ಕಾರ್ಯವೆಸಗಲು

ಜನ್ಮ‌ಸಾರ್ಥಕ 



ಬಾಳು ,ಬಾಳಿಸು 

ಅತಿಯಾಸೆಯ ಬಿಡು 

ಬಾಳು ಹಸನು 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು