#ಸುಮ್ಮನಿರೋದಾ?
ಕಾಯಿಸುತಾ ವಿಳಂಬವಾಗಿ ಬಂದೆನೆಂದು
ಹುಸಿಕೋಪ ತೋರುತಾ
ದೂರ ತಳ್ಳದಿರು ರಾಧಾ |
ನಿನ್ನ ನೋಡಲು ಬರುವಾಗ
ನೂರಾರು ಗೋಪಿಕೆಯರು
ಸಿಕ್ಕರು ನೋಡಿ ಸುಮ್ಮನಿರೋದಾ? ||
#ಸಿಹಿಜೀವಿ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಕಾಯಿಸುತಾ ವಿಳಂಬವಾಗಿ ಬಂದೆನೆಂದು
ಹುಸಿಕೋಪ ತೋರುತಾ
ದೂರ ತಳ್ಳದಿರು ರಾಧಾ |
ನಿನ್ನ ನೋಡಲು ಬರುವಾಗ
ನೂರಾರು ಗೋಪಿಕೆಯರು
ಸಿಕ್ಕರು ನೋಡಿ ಸುಮ್ಮನಿರೋದಾ? ||
#ಸಿಹಿಜೀವಿ
ಸ್ಮಾರಕಗಳನ್ನು ಸಂರಕ್ಷಿಸೋಣ..
ಪ್ರಾಗೈತಿಹಾಸಿಕ ಆಧಾರಗಳು ಇತಿಹಾಸ ರಚನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಅದರಲ್ಲೂ ಐತಿಹಾಸಿಕ ಮಹತ್ವದ ಸ್ಮಾರಕಗಳು ನಮ್ಮ ಪರಂಪರೆಯ ಹೆಮ್ಮೆಯ ಪ್ರತೀಕವೂ ಆಗಿವೆ. ಇಂತಹ ಸ್ಮಾರಕಗಳ ಮಹತ್ವ ತಿಳಿಯದೆ ಬಹುತೇಕ ಸ್ವಾರಕಗಳು ಇಂದು ಅನಾಥವಾಗಿವೆ.ಕೆಲವು ಕಡೆ ಶಾಸನಗಳು ಮತ್ತು ಸ್ಮಾರಕಗಳನ್ನು ಬಟ್ಟೆ ಒಗೆಯೊ ಕಲ್ಲುಗಳಾಗಿ ದನ ಕಟ್ಟುವ ಗೂಟಗಳಾಗಿ ಬಳಕೆ ಮಾಡುತ್ತಿರುವುದು ದುರದೃಷ್ಟಕರ ಸಂಗತಿ.ಇತ್ತೀಚೆಗೆ ಸ್ನೇಹಿತರ ಜೊತೆಯಲ್ಲಿ ಗಂಗರ ರಾಜಧಾನಿಯಾಗಿದ್ದ ಮಣ್ಣೆ ಗೆ ಹೋದಾಗ ಅಲ್ಲಿಯ ಸ್ಮಾರಕಗಳ ದುಸ್ತಿತಿ ಕಂಡು ಮನಸ್ಸಿಗೆ ಬಹಳ ಬೇಸರವಾಗಿ ಅಂತಹ ಸ್ಮಾರಕಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂಬುವ ಆಗ್ರಹಪೂರ್ವಕ ಲೇಖನ ಬರೆದಿದ್ದೆ.ಇದಕ್ಕೆ ಇತಿಹಾಸ ಪ್ರಿಯರು ಮತ್ತು ಸ್ಮಾರಕಗಳ ಬಗ್ಗೆ ಆಸಕ್ತಿ ಇರುವವರು ದನಿಗೂಡಿಸಿದ್ದರು.
ಆಶಾದಾಯಕ ಬೆಳವಣಿಗೆಯಂತೆ ಕಳೆದ ವಾರ ಕರ್ನಾಟಕ ಸರ್ಕಾರ
21 ತಾಲ್ಲೂಕುಗಳಲ್ಲಿ “ಸಂರಕ್ಷಣ್" ಹೆಸರಿನಲ್ಲಿ ಪಾರಂಪರಿಕ ಮಹತ್ವದ ಸ್ಮಾರಕಗಳನ್ನು ಗುರುತಿಸಿ, ಸಂರಕ್ಷಣೆಗೆ ಯೋಜನೆ ರೂಪಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ.
2022- 23ನೇ ಸಾಲಿನಲ್ಲಿ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆಗಾಗಿ ಪುರಾತತ್ವ ಇಲಾಖೆಯು ರಾಜ್ಯದಲ್ಲಿ 844 ರಾಜ್ಯ ಸಂರಕ್ಷಿತ ಹಾಗೂ 65 ಕೇಂದ್ರ ಸಂರಕ್ಷಿತ ಸ್ಮಾರಕಗಳನ್ನು ಗುರುತಿಸಲಾಗಿದೆ.
ಸಾವಿರಕ್ಕೂ ಹೆಚ್ಚು ಪ್ರಕಾರದ ಅಸಂರಕ್ಷಿತ ಸ್ಮಾರಕಗಳಿವೆ. ಅವುಗಳ ವ್ಯವಸ್ಥಿತ ಅಧ್ಯಯನ ಮತ್ತು ಸಮೀಕ್ಷೆ ಮಾಡಿ ಸಂರಕ್ಷಣೆಗೆ ನಿಖರವಾದ ಮಾಹಿತಿ ಸಂಗ್ರಹದ ಅಗತ್ಯವಿದೆ . ಮೂರೂವರೆ ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶವಿದೆ. ಸಮೀಕ್ಷೆಯ ನಂತರ ಒಂದೂವರೆ ತಿಂಗಳು ದಾಖಲೆಗಳ ಕ್ರೂಢೀಕರಣ ನಡೆಯಲಿದೆ.
ಎಚ್.ಡಿ.ಕೋಟೆ, ಹುಣಸೂರು, ಕೆ.ಆರ್.ನಗರ, ಮಾಗಡಿ, ದೇವನ ಹಳ್ಳಿ ರಾಣೆಬೆನ್ನೂರು, 'ಶಹಬಾದ್ ಕಂಪ್ಲಿ, ಸಂಡೂರು, ಚಿಕ್ಕಮಗಳೂರು, ಸೋಮವಾರಪೇಟೆ, ಕುಶಾಲನಗರ, ಪಾಂಡವಪುರ ಹಾಗೂಭದ್ರಾವತಿ,
ಪುತ್ತೂರು,ಹಿರಿಯೂರು ತಾಲ್ಲೂಕುಗಳಲ್ಲಿ ಈಗ ಸಮೀಕ್ಷೆ ಆರಂಭವಾಗಲಿದೆ.ಈ ಉದ್ದೇಶಕ್ಕಾಗಿ ಸರ್ಕಾರ 35 ಲಕ್ಷ ಅನುದಾನ ಒದಗಿಸಿದೆ. ಅಧಿಕಾರಿಗಳು, ಕ್ಯುರೇಟರ್ಗಳು, ಸಿಬ್ಬಂದಿ, ತಜ್ಞರು, ಪರಂಪರೆಯ ವಿಷಯ ದಲ್ಲಿ ಸ್ನಾತಕೋತ್ತರ ಪದವೀಧರರು, ಪದವೀಧರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು
ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥ ರೊಂದಿಗೆ ಚರ್ಚೆ ನಡೆಸಲಿವೆ, ಅಲ್ಲಿರುವ ವೀರಗಲ್ಲು, ಮಾಸ್ತಿಗಲ್ಲು, ಮಂಟಪ, ದೇವಸ್ಥಾನಗಳು ಮೊದಲಾದ ರಚನೆಗಳ ಮಾಹಿತಿಯನ್ನು ದಾಖಲಿಸ ಲಾಗುತ್ತದೆ. ಅವು ಯಾವ ಸ್ಥಿತಿಯಲ್ಲಿವೆ ಎಂಬುದನ್ನು
ನಮೂದಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ದೇಗುಲವಿದ್ದರೆ ವಿಶೇಷವಾಗಿ ದಾಖಲಿಸಲಾಗುತ್ತದೆ. ನಿಗದಿತ ನಮೂನೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ.
ದೇಶದ ಬದಲಾಯಿಸಲಾಗದ ಮತ್ತು ನವೀಕರಿಸಲಾಗದ ಸಾಂಸ್ಕೃತಿಕ ಸಂಪನ್ಮೂಲಗಳಾದ ಸ್ಮಾರಕಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ಪುರಾತತ್ವ ಇಲಾಖೆ ಮತ್ತು ಸರ್ಕಾರ ಕೈಗೊಂಡಿರುವ ಈ ಕಾರ್ಯಕ್ಕೆ ನಾಗರೀಕರ ಮತ್ತು ಸಮಾಜದ ಬೆಂಬಲ ಅಗತ್ಯವಿದೆ. ತನ್ಮೂಲಕ ನಮ್ಮ ದೇಶದ ಭವ್ಯ ಐತಿಹಾಸಿಕ ಸ್ಮಾರಕಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಗುರುತರವಾದ ಜವಾಬ್ದಾರಿ ನಮ್ಮ ಮೇಲಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ.
ಮಾರ್ಗಸೂಚಿ ಫಲಕ
ಜೀವನವೆಂಬ ದಾರಿಯನ್ನು
ಕ್ರಮಿಸಲು ನಾವು ಯಾವಾಗಲೂ
ಆಗಿರಬೇಕು ಜಾಗರೂಕ ಚಾಲಕ |
ಇದರ ಜೊತೆಗೆ ಗಮನಿಸಲೇಬೇಕು ಅನುಭವಸ್ತರು ನಮಗಾಗಿ
ನೆಟ್ಟಿರುವ ಮಾರ್ಗಸೂಚಿ ಫಲಕ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಮಾನವ ಹಕ್ಕುಗಳ ದಿನ ...
ಇಂದು ವಿಶ್ವದಲ್ಲಿ ಬಹುತೇಕ ದೇಶಗಳು ಸ್ವತಂತ್ರವಾದರೂ ಯಾವ ದೇಶದಲ್ಲೂ ಹಿಂಸೆ, ದೌರ್ಜನ್ಯ ಇತ್ಯಾದಿಗಳು ಕಡಿಮೆಯಾಗಿಲ್ಲ ಪರಸ್ಪರ ಅಪನಂಬಿಕೆ ,ಹಿಂಸೆ ಹೆಸರಲ್ಲಿ ಎರಡು ವಿಧ್ವಂಸಕ ವಿಶ್ವ ಸಮರ ಕಂಡರೂ ಪರಸ್ಪರ ಕಚ್ಚಾಟ ಮಾಡುತ್ತ ಮಾನವ ತನ್ನ ಹಕ್ಕುಗಳನ್ನು ತಾನೇ ಉಲ್ಲಂಘನೆ ಮಾಡುವ ಪ್ರಕರಣಗಳು ಈಗಲೂ ಮುಂದುವರೆದಿರುವುದು ವಿಪರ್ಯಾಸ.
ವಿಶ್ವ ಮಾನವ ಹಕ್ಕುಗಳ ದಿನದಂದು ಹೀಗೊಂದು ಚಿಂತನೆ ನನ್ನ ಮನದಿ ಬಂದು ಹೋಯಿತು.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1948 ನವೆಂಬರ್ 10 ರಂದು ಮಾನವ ಹಕ್ಕುಗಳನ್ನು ಅಂಗೀಕಾರ ಮಾಡಲಾಯಿತು ಅದರ ನೆನಪಿಗಾಗಿ ಪ್ರತಿವರ್ಷ ನಾವು ಈ ದಿನವನ್ನು ಮಾನವ ಹಕ್ಕುಗಳ ದಿನ ಎಂದು ಆಚರಿಸುತ್ತೇವೆ.
ಭಾರತದ ಸಂವಿಧಾನದಲ್ಲಿ ನಮ್ಮ ಹಕ್ಕುಗಳಿಗೆ ವಿಶೇಷವಾದ ಒತ್ತು ನೀಡಿರುವುದು ನಮಗೆ ತಿಳಿದೇ ಇದೆ.
ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು.ಇದು ನಾಗರಿಕ ರಾಜಕೀಯ, ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿರುವುದು. ಇವುಗಳಲ್ಲಿ ಅತಿ ಮುಖ್ಯವಾದವು ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣಿ ರಹಿತ ಆರೋಗ್ಯಪೂರ್ಣ ಪರಿಸರದಲ್ಲಿ ಗೌರವಯುತ ಜೀವನ ನಡೆಸುವ ಹಕ್ಕು, ತಮ್ಮ ಆಯ್ಕೆಯ ವೃತ್ತಿ, ಕಲಕೆಯ ಹಕ್ಕು, ಭಾರತದ ಯಾವುದೇ ಸ್ಥಳಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು, ಆತ್ಮಸಾಕ್ಷಿ ಸ್ವಾತಂತ್ರ್ಯ, ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಸ್ಪೃಶ್ಯತೆ ಅಥವಾ ಜಾತಿ ಮತ ಅಥವಾ ಲಿಂಗ ಆಧಾರಿತ ತಾರತಮ್ಯದಿಂದ ಮುಕ್ತಿ ಇತ್ಯಾದಿ...
ಈ ಮಹತ್ತರ ಚಿಂತನೆಯ ಮೇರೆಗೆ ಮಾನವ ಹಕ್ಕುಗಳ ರಕ್ಷಣಿಗೆ ಮತ್ತು ಅವುಗಳ ಪರಿಣಾಮಕಾರಿ ಜಾರಿಗಾಗಿ ಮಾನವ ಹಕ್ಕುಗಳ ರಕ್ಷಣೆ ಕಾಯ್ದೆ, 1993ರ ಅನ್ವಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚನೆ ಮಾಡಲಾಗಿದೆ.
ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ, ರಾಜ್ಯದ ಯಾವುದೇ ಕಛೇರಿಯಿಂದಾಗಲೇ ಅಥವಾ ಸಂಸ್ಥೆಯಿಂದಾಗಲೀ' ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದ ಪಕ್ಷದಲ್ಲಿ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದವರಾಗಲೀ ಅಥವಾ ಆತನ/ಆಕೆಯ ಪರವಾಗಿ ಬೇರೆ ಯಾರಾದರಾಗಲೀ ಅವರ ಕುಂದು ಕೊರತೆಗಳನ್ನು ಪರಿಹರಿಸಲು, ನ್ಯಾಯ ದೊರಕಿಸಿಕೊಡಲು ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಲಾಗಿದೆ.ನಮ್ಮ ಸುತ್ತ ಮುತ್ತ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಕಂಡು ಬಂದರೆ ಸೂಕ್ತ ಪ್ರಾಧಿಕಾರಕ್ಕೆ ಮಾಹಿತಿಯನ್ನು ನೀಡೋಣ. ನಾವು ಮಾನವರಾಗಿ ಮಾನವ ಹಕ್ಕುಗಳ ಸಂರಕ್ಷಕರಾಗೋಣ...
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಜೇನು.
ಎಷ್ಟೇ ಅಡೆ ತಡೆಗಳು
ಸವಾಲುಗಳು ಬಂದರೂ
ನಿಲ್ಲಿಸಬೇಡ ಪ್ರಯತ್ನವ ನೀನು|
ಯಾರೋ ಕಿಡಿಗೇಡಿಗಳು
ಕಿತ್ತುಹಾಕಿದರೆಂದು ಗೂಡು ಕಟ್ಟುವುದ
ನಿಲ್ಲಿಸುವದೇ ಜೇನು ||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ