02 ಅಕ್ಟೋಬರ್ 2022

ಸತ್ಯವಂತ ...

 


ಸತ್ಯವಂತ? 

ನ್ಯಾನೋ ಕಥೆ 


"ಸದಾ ನಾವು ಸತ್ಯವಂತರಾಗಿರಬೇಕು. ಸುಳ್ಳು ಹೇಳಲೇಬಾರದು.ಸತ್ಯವೇ ನಮ್ಮ ತಂದೆ ತಾಯಿ ಸತ್ಯವಾಕ್ಯಕ್ಕೆ ಮೆಚ್ಚಿ ನಡೆದರೆ ಆ ಪರಮಾತ್ಮ ಮೆಚ್ಚುವುದಿಲ್ಲ. ಗಾಂಧೀಜಿಯವರಂತೆ ಸತ್ಯಾಗ್ರಹ ನಮ್ಮ ಅಸ್ತ್ರವಾಗಬೇಕು" ಹೀಗೆ ಸಮಾರಂಭದಲ್ಲಿ ಮಕ್ಕಳಿಗೆ ಭಾಷಣ ಮಾಡುತ್ತಿದ್ದ ತನ್ನ ತಂದೆಯ ಮಾತು ಕೇಳಿದ ಮಗಳಿಗೆ ಸಾಲಗಾರರು ಮನೆಯ ಮುಂದೆ ಬಂದು ಕೇಳಿದಾಗ "ಅಪ್ಪ ಮನೇಲಿ ಇಲ್ಲ ಅಂತ ಹೇಳು" ಎಂದು  ಹೇಳಿದ್ದು  ನೆನಪಾಯಿತು.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


01 ಅಕ್ಟೋಬರ್ 2022

ವಿಶ್ವ ವಾಣಿ ೧/೧೦/೨೨


 

ಆ ನೋಟ..

 ಆ..ನೋಟ*


ಮರೆತು ಬಿಡಬಹುದು

ನಿನ್ನಸೌಂದರ್ಯಯುಕ್ತ ಮೈಮಾಟ |

ಮರೆಯಲು ಆಗುತ್ತಲೇ ಇಲ್ಲ

ಇಣುಕಿ ಕೆಣಕಿದ ಆ...ನೋಟ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮಳೆನಾಡು.

 #ಯಲ್ಲೋಅಲರ್ಟ್ 


ಅಂದು ಅತಿ ಹೆಚ್ಚು ಮಳೆ

ಎಂದರೆ ನೆನಪಾಗುತ್ತಿತ್ತು 

ಮಲೆನಾಡು |

ಇಂದು ಇಡೀ ರಾಜ್ಯ, ದೇಶವೇ

ಆಗಿಹೋಗಿದೆ ಮಳೆನಾಡು ||



#ಸಿಹಿಜೀವಿಯ_ಹನಿ 

30 ಸೆಪ್ಟೆಂಬರ್ 2022

ಸಿಹಿಜೀವಿಯ ಹನಿ

 



☘️☘️🌻☘️☘️🌻☘️☘️


ಸಿಹಿಜೀವಿಯ ಹನಿ 


ಯಾವುದೇ ಪದಾರ್ಥಗಳಾಗಲಿ   

ನಮ್ಮ ಹೊಟ್ಟೆಯಲ್ಲಿ ಉಳಿಯುವುದಿಲ್ಲ ತಿಂದದ್ದು |

ನಮ್ಮ ಮನಸಿನಲ್ಲಿ 

ಅಚ್ಚಳಿಯದೆ  ಉಳಿದೇಬಿಡುತ್ತದೆ

ಮನನೋಯುವಂತೆ ಅಂದದ್ದು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


          *ಶುಭೋದಯ ಸುಪ್ರಭಾತ ,*☘️☘️🌻☘️☘️🌻☘️☘️



.