19 ಸೆಪ್ಟೆಂಬರ್ 2022

ಕರುಣೆ

 ಕರುಣೆ 


ಪ್ರತಿಯೊಬ್ಬರ ಹೃದಯದಲ್ಲಿ

ಇದ್ದೇ ಇರುತ್ತವೆ ಹೃತ್ಕರ್ಣ ಮತ್ತು

ಹೃತ್ಕುಕ್ಷಿಗಳೆಂಬ  ಕೋಣೆ |

ಕೆಲವರ ಹೃದಯದಲ್ಲಿ 

ಮಾತ್ರ ನೆಲೆಸಿರುತ್ತವೆ 

ಮನುಷ್ಯತ್ವ  ಮತ್ತು  ಕರುಣೆ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ 

ತುಮಕೂರು

ಆಧುನಿಕ ಬದುಕು

 #ಆಧುನಿಕಬದುಕು 


ಎದುರಿಗಿರುವ ತಂದೆತಾಯಿಗಳ,

ಬಂಧುಬಳಗದ  ಪ್ರೀತಿ ಅರಿಯದೆ 

ಬೆದಕುವರು ಸಾಮಾಜಿಕ ಮಾಧ್ಯಮಗಳಲ್ಲಿ ಎಷ್ಟಿದೆ ಲೈಕು |

ವಾಸ್ತವಕ್ಕಿಂತ ಮರೀಚಿಕೆಯ 

ಹಿಂದೆ ಓಡತಲಿರುವರು 

ಇದೇ ಆಧುನಿಕ  ಬದುಕು ||


#ಸಿಹಿಜೀವಿಯ_ಹನಿ 


18 ಸೆಪ್ಟೆಂಬರ್ 2022

ಸದಾ ಸುಖಿ

 #ನಿತ್ಯಸುಖಿ 


ನೀ ನನ್ನೊಂದಿಗಿದ್ದರೆ

ಸಾಕು ಸಖಿ |

ಇನ್ನೇನು ಬೇಕು

ನಾ ಸದಾ ಸುಖಿ ||


#ಸಿಹಿಜೀವಿಯ_ಹನಿ 

15 ಸೆಪ್ಟೆಂಬರ್ 2022

ಬರಬಾರದೇನು

 


#ಇಂದಾದರು_ನೀ_ಬರಬಾರದೇನು 



ಎಂದಿನಂತೆ ಜಾತಕ ಪಕ್ಷಿಯಾಗಿ

ನೀ ಹೇಳಿದ ಮರದ ಕೆಳೆಗೆ ನಿಂದೆನು |

ಅದೇಕೆ ಹಾಗೆ ಸತಾಯಿಸುತಿರುವೆ

ಇಂದಾದರೂ ನೀ ಬರಬಾರದೇನು 



#ಸಿಹಿಜೀವಿಯ_ಹನಿ