ನಂಬರ್ ಒನ್
(ಭಾರತ ಹಾಲು ಉತ್ಪಾದನೆಯಲ್ಲಿ ನಂಬರ್ ಒನ್ ಇಂದಿನ ಸುದ್ದಿ)
ಭಾರತವೀಗ ನಂಬರ್ ಒನ್
ಆಗಿದೆ ಅಧಿಕವಾಗಿ ಉತ್ಪಾದಿಸುವ
ಮೂಲಕ ಕ್ಷೀರ |
ಭಾರತಾಂಬೆಯ ಮಕ್ಕಳೆಲ್ಲ
ಸಂತಸದಿಂದ ಜೈಕಾರ
ಕೂಗೋಣ ಎತ್ತಿ ನಮ್ಮಯ ಕರ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ನಂಬರ್ ಒನ್
(ಭಾರತ ಹಾಲು ಉತ್ಪಾದನೆಯಲ್ಲಿ ನಂಬರ್ ಒನ್ ಇಂದಿನ ಸುದ್ದಿ)
ಭಾರತವೀಗ ನಂಬರ್ ಒನ್
ಆಗಿದೆ ಅಧಿಕವಾಗಿ ಉತ್ಪಾದಿಸುವ
ಮೂಲಕ ಕ್ಷೀರ |
ಭಾರತಾಂಬೆಯ ಮಕ್ಕಳೆಲ್ಲ
ಸಂತಸದಿಂದ ಜೈಕಾರ
ಕೂಗೋಣ ಎತ್ತಿ ನಮ್ಮಯ ಕರ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ನೀನನ್ನನೇನೇ ಅನ್ನು
ನಾನಿನ್ನನೇನೂ ದೂಷಿಸೆನು.
ನೀನಾದರೂ ಅಷ್ಟೇ
ನಾನೇನೆಂದರೂ ಬಿಟ್ಟುಬಿಡು.
ನಾ, ನೀ ಬೇರೆಯಲ್ಲ ಒಂದೇ.
ನೀನಾ ,ನೀ ,ನಾ, ಎಂಬ ಭೇದವೇಕೆ?
ನಾನೆಂಬ ಅಹಂ ಬೇಡವೇ ಬೇಡ.
ನೀನೇ ಎಲ್ಲಾ ಎಂಬ ಭಾವದಿ ಬದುಕೋಣ.
ನಿನ್ನೆಯ ಚಿಂತೆ ಬಿಟ್ಟು
ನನ್ನಯ ಹೃದಯದಿ
ನೀನೆಲೆಸು ಎಂದಿಗೂ
ನಿನ್ನಯ ಹೃದಯದಿ
ನಾನು ವಿಹರಿಸುವೆನು.
ನಿನ್ನ ನನ್ನ ನಡುವೆ ಒಲವಿದೆ
ನನ್ನನಿನ್ನ ಬಿಡಿಸಲು ಆಗುವುದೇ?
ನಾ ನೀ ಒಂದೇ ಪ್ರಾಣ
ನೀನಿಲ್ಲದೇ ನನಗೆ ಜೀವನವಿಲ್ಲ
ನಾನಿಲ್ಲದೆ ನಿನಗೆ ಬಾಳಿಲ್ಲ .
ನಿನಗಾಗಿಯೇ ಮೀಸಲು ನನ ಬಾಳು
ಇಂತಿ ನಿನ್ನವ
ಸಿಹಿಜೀವಿ
ಅನುಮತಿ
ಅವನು ಹೆಮ್ಮೆಯಿಂದ
ಹೇಳುತ್ತಲೇ ಇದ್ದ ನಮ್ಮ
ಮನೆಗೆ ನಾನೇ ಯಜಮಾನ
ಏನೇ ಕೆಲಸ ಮಾಡಲು ಪಡೆಯಲೇ
ಬೇಕು ನನ್ನ ಅನುಮತಿ|
ಹೀಗೆ ಮಾತನಾಡಲು
ಮೊದಲು ನಾನು ಪಡೆದಿರುತ್ತೇನೆ
ನನ್ನವಳ ಸಹಮತಿ ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ತಟ್ಟೆ ,ಹೊಟ್ಟೆ*
ಅವನು ಗೊಣಗಿದ
ನನಗೆ ಇತ್ತೀಚಿಗೆ ಯಾಕೋ
ಜಾಸ್ತಿಯಾಗುತ್ತಿದೆ ಹೊಟ್ಟೆ |
ಅವಳು ಉತ್ತರಿಸಿದಳು
ಹೌದು ಈಗೀಗ ಕೊಂಚವೂ
ಕಡಿಮೆಯಾಗಿಲ್ಲ ನಿಮ್ಮ ತಟ್ಟೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ