30 ಆಗಸ್ಟ್ 2022

ಸಿರಿಗೌರಿಗೆ ಮನವಿ


 


ಸಿರಿಗೌರಿಗೆ ಮನವಿ 


ಸ್ವರ್ಣ ಗೌರಿ ಹಬ್ಬದ ಶುಭಾಶಯಗಳು 



ಭುವಿಯ ಸಕಲ ಜೀವಿಗಳು

ಅತಿವೃಷ್ಟಿ, ಅನಾವೃಷ್ಟಿ ಯಿಂದ

ಅನುಭವಿಸುತಿಹೆವು ಕಷ್ಟಗಳ ಪರಿಪರಿ |

ನಿನ್ನ ಪುತ್ರನ ಕಳಿಸಿ

ವಿಘ್ನಗಳ ನಿವಾರಿಸು

ಸಕಲ ಜೀವಿಗಳ ಹರಸು ಸಿರಿಗೌರಿ ||



ಸಿಹಿಜೀವಿ

29 ಆಗಸ್ಟ್ 2022

ನಂಬರ್ ಒನ್

 

ನಂಬರ್ ಒನ್ 


(ಭಾರತ ಹಾಲು ಉತ್ಪಾದನೆಯಲ್ಲಿ ನಂಬರ್ ಒನ್ ಇಂದಿನ ಸುದ್ದಿ)


ಭಾರತವೀಗ ನಂಬರ್ ಒನ್

ಆಗಿದೆ ಅಧಿಕವಾಗಿ ಉತ್ಪಾದಿಸುವ

ಮೂಲಕ ಕ್ಷೀರ |

ಭಾರತಾಂಬೆಯ ಮಕ್ಕಳೆಲ್ಲ 

ಸಂತಸದಿಂದ ಜೈಕಾರ

ಕೂಗೋಣ ಎತ್ತಿ ನಮ್ಮಯ ಕರ ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

28 ಆಗಸ್ಟ್ 2022

ಪ್ರಜಾ ಪ್ರಗತಿ ೨೮/೮/೨೨


 

ನೀನನ್ನನೇನೇ ಅನ್ನು...

 



ನೀನನ್ನನೇನೇ ಅನ್ನು 

ನಾನಿನ್ನನೇನೂ ದೂಷಿಸೆನು.

ನೀನಾದರೂ ಅಷ್ಟೇ

ನಾನೇನೆಂದರೂ ಬಿಟ್ಟುಬಿಡು.

ನಾ, ನೀ ಬೇರೆಯಲ್ಲ ಒಂದೇ.

ನೀನಾ ,ನೀ ,ನಾ, ಎಂಬ ಭೇದವೇಕೆ?

ನಾನೆಂಬ ಅಹಂ ಬೇಡವೇ ಬೇಡ.

ನೀನೇ ಎಲ್ಲಾ ಎಂಬ ಭಾವದಿ ಬದುಕೋಣ.

ನಿನ್ನೆಯ ಚಿಂತೆ ಬಿಟ್ಟು 

ನನ್ನಯ ಹೃದಯದಿ

ನೀನೆಲೆಸು ಎಂದಿಗೂ

ನಿನ್ನಯ ಹೃದಯದಿ 

ನಾನು ವಿಹರಿಸುವೆನು.

ನಿನ್ನ ನನ್ನ ನಡುವೆ ಒಲವಿದೆ

ನನ್ನನಿನ್ನ ಬಿಡಿಸಲು ಆಗುವುದೇ?

ನಾ ನೀ ಒಂದೇ ಪ್ರಾಣ 

ನೀನಿಲ್ಲದೇ ನನಗೆ ಜೀವನವಿಲ್ಲ

ನಾನಿಲ್ಲದೆ ನಿನಗೆ ಬಾಳಿಲ್ಲ .

ನಿನಗಾಗಿಯೇ ಮೀಸಲು ನನ ಬಾಳು 

       ಇಂತಿ ನಿನ್ನವ 

         ಸಿಹಿಜೀವಿ


ಅನುಮತಿ

 


ಅನುಮತಿ 


ಅವನು ಹೆಮ್ಮೆಯಿಂದ

ಹೇಳುತ್ತಲೇ ಇದ್ದ ನಮ್ಮ

ಮನೆಗೆ ನಾನೇ ಯಜಮಾನ

ಏನೇ ಕೆಲಸ ಮಾಡಲು ಪಡೆಯಲೇ

ಬೇಕು ನನ್ನ ಅನುಮತಿ| 

ಹೀಗೆ ಮಾತನಾಡಲು

ಮೊದಲು ನಾನು ಪಡೆದಿರುತ್ತೇನೆ

ನನ್ನವಳ ಸಹಮತಿ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ