21 ಜುಲೈ 2022

ಶ್ವಾನ...



ಶ್ವಾನ..

ತಾತ್ಸರ ಬೇಡ
ಇದು ಕೇವಲ ನಾವಾಕುವ
ಅನ್ನತಿಂದು ಮನೆ
ಕಾಯುವ ಶ್ವಾನ |
ಕೆಲವರಿಗೆ ಮಾತ್ರ
ಅರ್ಥವಾಗಿದೆ ನಾಯಿ
ಕೆಳವರ್ಗದ ಪ್ರಾಣಿಯಲ್ಲ
ವಿಧೇಯತೆಗೊಂದು ವ್ಯಾಖ್ಯಾನ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


 

19 ಜುಲೈ 2022

ನಿನ್ನ ಇರವ ನಂಬಿ...


 ನಿನ್ನ ಇರವ ನಂಬಿ...


ಗುಡಿ, ಮಸೀದಿ, ಚರ್ಚಿಗೆ ಬಂದು 

ಕಷ್ಟ ಕಾಲದಿ ಕರೆಯುತಲೆ ಇದ್ದೆ|

ನೀ ಬರಲೇ ಇಲ್ಲ ನಾ ಕರೆದಾಗ

ಕಣ್ಣ ತೆರೆದು ನೋಡಿದಾಗ 

ನೀ ಅಲ್ಲಿರಲಿಲ್ಲ ನನ್ನೊಳಗಿದ್ದೆ ||


ಸಿಹಿಜೀವಿ

18 ಜುಲೈ 2022

*ತೊಂಭತ್ತು ...ತೊಂಭತ್ತು...

 



*ತೊಂಭತ್ತು... ತೊಂಬತ್ತು*


ಸಂಶೋಧನೆಯೊಂದು 

ಹೇಳಿದೆ ಮದ್ಯ ಸೇವಿಸಿದರೆ

ತಪ್ಪಿಲ್ಲವಂತೆ ದಾಟಿದರೆ      ನಮ್ಮ ವಯಸ್ಸು ನಲವತ್ತು|

ಇಂದಿನಿಂದಲೇ ಬಿಟ್ಟುಕೊಂಡು ಬಿಡೋಣ 

ಆಗಾಗ ತೊಂಭತ್ತು ,ತೊಂಭತ್ತು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಮುಂಗಾರು ಅಧಿವೇಶನ ...

 


#ಮುಂಗಾರುಅಧಿವೇಶನ 


ಶುರುವಾಗುತ್ತಿದೆ ಈ ಬಾರಿಯ 

ಮುಂಗಾರಿನಸಂಸತ್  ಅಧಿವೇಶನ |

ಜನ ಹಿತ ಬಯಸುವ ಚರ್ಚೆಗಳಾಗಲಿ 

ಜನಪ್ರತಿನಿಧಿಗಳು ಪರಸ್ಪರ ಜಗಳವಾಡಿ ಸದನದಲ್ಲಿ ಮಾಡದಿರಲಿ

ಕೈ ಕೈ ಮಿಲಾಯಿಸಿ  ಕದನ ||


@ಸಿಹಿಜೀವಿ

ನನ್ನೊಳಗಿನ ನೀನು.


 



#ನನ್ನೊಳಗಿರುವ_ನೀನು 


ಎಷ್ಟು ಪ್ರಯತ್ನ

ಪಟ್ಟರೂ ಆಗುತ್ತಿಲ್ಲ 

ಮರೆಯಲು ನಿನ್ನನ್ನು ನಾನು |

ಬಿಡದಂತೆ ಸದಾ

ಕಾಡುತ್ತಲೇ ಇರುವೆ 

ನನ್ನೊಳಗಿನ ನೀನು ||


@ಸಿಹಿಜೀವಿ 

ಸಿ ಜಿ ವೆಂಕಟೇಶ್ವರ