*ಅಪ್ಪನೇ ಆಸ್ತಿ*
ಎಲ್ಲೆಡೆ ಅಣ್ಣತಮ್ಮಂದಿರಲಿ
ಕಚ್ಚಾಟ ಪಡೆಯಲು
ಅಪ್ಪ ಮಾಡಿದ ಆಸ್ತಿ|
ಎಲ್ಲೋ ಕೆಲವರು
ಈಗಲೂ ನಂಬಿದ್ದಾರೆ
ಅಪ್ಪನೇ ಆಸ್ತಿ ||
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಎಲ್ಲೆಡೆ ಅಣ್ಣತಮ್ಮಂದಿರಲಿ
ಕಚ್ಚಾಟ ಪಡೆಯಲು
ಅಪ್ಪ ಮಾಡಿದ ಆಸ್ತಿ|
ಎಲ್ಲೋ ಕೆಲವರು
ಈಗಲೂ ನಂಬಿದ್ದಾರೆ
ಅಪ್ಪನೇ ಆಸ್ತಿ ||
ಎರಡು ಚುಟುಕುಗಳು
ಹಗರಣ
ನಾಚಿಕೆ ಮತ್ತು ನೈತಿಕತೆಯಿಲ್ಲದ
ರಾಜಕಾರಣಿಗಳು ಮಾಡುತ್ತಲೇ
ಇರುವರು ದಿನವೂ ಹಗರಣ|
ಬಹುಶಃ ಇವರು ತಿಳಿದಿರಬಹುದು
ಸತ್ತಾಗ ಹೊತ್ತೊಯ್ಯಬಹುದು ಹಣ||
ಬಿಲ್ಲು
ಬರಿಕೈಯಲ್ಲಿ ಕಛೇರಿಗೆ ಹೋದರೆ
ಆಧಿಕಾರಿ ಗದರುವನು ಅಲ್ಲೇ ನಿಲ್ಲು|
ಕೈ ಬಿಸಿ ಮಾಡಿದರೆ ಸಹಿ ಮಾಡಿ
ತಕ್ಷಣವೇ ಕೊಡುವನು ಬಿಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಬೊಗಸೆ ಪ್ರೀತಿ
ಪ್ರಿಯೆ ನಾ ಕೇಳುವುದಿಲ್ಲ
ಹಣ ಅಂತಸ್ತು ಜಾತಿ|
ನೀಡಿಬಿಡು ಸಾಕು
ಬೊಗಸೆ ತುಂಬ ಪ್ರೀತಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ