This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
11 ಜೂನ್ 2022
09 ಜೂನ್ 2022
ಎರಡು ಚುಟುಕುಗಳು
ಎರಡು ಚುಟುಕುಗಳು
ಹಗರಣ
ನಾಚಿಕೆ ಮತ್ತು ನೈತಿಕತೆಯಿಲ್ಲದ
ರಾಜಕಾರಣಿಗಳು ಮಾಡುತ್ತಲೇ
ಇರುವರು ದಿನವೂ ಹಗರಣ|
ಬಹುಶಃ ಇವರು ತಿಳಿದಿರಬಹುದು
ಸತ್ತಾಗ ಹೊತ್ತೊಯ್ಯಬಹುದು ಹಣ||
ಬಿಲ್ಲು
ಬರಿಕೈಯಲ್ಲಿ ಕಛೇರಿಗೆ ಹೋದರೆ
ಆಧಿಕಾರಿ ಗದರುವನು ಅಲ್ಲೇ ನಿಲ್ಲು|
ಕೈ ಬಿಸಿ ಮಾಡಿದರೆ ಸಹಿ ಮಾಡಿ
ತಕ್ಷಣವೇ ಕೊಡುವನು ಬಿಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
07 ಜೂನ್ 2022
ಬೊಗಸೆ ಪ್ರೀತಿ
ಬೊಗಸೆ ಪ್ರೀತಿ
ಪ್ರಿಯೆ ನಾ ಕೇಳುವುದಿಲ್ಲ
ಹಣ ಅಂತಸ್ತು ಜಾತಿ|
ನೀಡಿಬಿಡು ಸಾಕು
ಬೊಗಸೆ ತುಂಬ ಪ್ರೀತಿ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
06 ಜೂನ್ 2022
ಸ್ನೇಹ ಎಂಬ ಹೊತ್ತಗೆ.
ಸ್ನೇಹ ಎಂಬ ಹೊತ್ತಗೆ.
ಎಷ್ಟು ಬರೆದರೂ.ಮುದ್ರಿಸಿದರೂ
ಅಪೂರ್ಣವಾಗಿಯೇ ಉಳಿವುದು
ಸ್ನೇಹ ಎಂಬ ಹೊತ್ತಗೆ|
ಅದನ್ನು ಅಗಾಗ್ಗೆ ಪರಿಷ್ಕರಿಸುತ್ತಾ
ಇರಬೇಕು ಹೊತ್ತು ಹೊತ್ತಿಗೆ||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
03 ಜೂನ್ 2022
ಸೈಕಲ್ .ಹನಿಗವನ
ಸೈಕಲ್
ಸೈಕಲ್
ಯಾವಾಗಲೂ ಬ್ಯಾಲೆನ್ಸ್
ಮಾಡುತ್ತಾ ತುಳಿಯಬೇಕು
ಸಂಸಾರವೆಂಬ ಸೈಕಲ್ |
ಆಗಾಗ್ಗೆ ಇರಲೇಬೇಕು
ಸರಸ ವಿರಸಗಳು
ಊಟದಲ್ಲಿದ್ದಂತೆ ಪಿಕ್ಕಲ್||
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು




