09 ಜೂನ್ 2022

ಎರಡು ಚುಟುಕುಗಳು


ಎರಡು ಚುಟುಕುಗಳು 


ಹಗರಣ 


ನಾಚಿಕೆ ಮತ್ತು ನೈತಿಕತೆಯಿಲ್ಲದ

ರಾಜಕಾರಣಿಗಳು ಮಾಡುತ್ತಲೇ

ಇರುವರು ದಿನವೂ ಹಗರಣ|

ಬಹುಶಃ ಇವರು ತಿಳಿದಿರಬಹುದು

ಸತ್ತಾಗ ಹೊತ್ತೊಯ್ಯಬಹುದು ಹಣ||



ಬಿಲ್ಲು 


ಬರಿಕೈಯಲ್ಲಿ ಕಛೇರಿಗೆ ಹೋದರೆ

ಆಧಿಕಾರಿ ಗದರುವನು ಅಲ್ಲೇ ನಿಲ್ಲು|

ಕೈ ಬಿಸಿ ಮಾಡಿದರೆ ಸಹಿ ಮಾಡಿ

ತಕ್ಷಣವೇ ಕೊಡುವನು ಬಿಲ್ಲು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

 

07 ಜೂನ್ 2022

ಬೊಗಸೆ ಪ್ರೀತಿ


 


ಬೊಗಸೆ ಪ್ರೀತಿ 


ಪ್ರಿಯೆ ನಾ ಕೇಳುವುದಿಲ್ಲ 

ಹಣ ಅಂತಸ್ತು ಜಾತಿ|

ನೀಡಿಬಿಡು ಸಾಕು

ಬೊಗಸೆ ತುಂಬ ಪ್ರೀತಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

06 ಜೂನ್ 2022

ಸ್ನೇಹ ಎಂಬ ಹೊತ್ತಗೆ.


 

ಸ್ನೇಹ ಎಂಬ ಹೊತ್ತಗೆ.

ಎಷ್ಟು ಬರೆದರೂ.ಮುದ್ರಿಸಿದರೂ
ಅಪೂರ್ಣವಾಗಿಯೇ ಉಳಿವುದು

ಸ್ನೇಹ ಎಂಬ ಹೊತ್ತಗೆ|


ಅದನ್ನು ಅಗಾಗ್ಗೆ ಪರಿಷ್ಕರಿಸುತ್ತಾ
ಇರಬೇಕು ಹೊತ್ತು ಹೊತ್ತಿಗೆ||

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

03 ಜೂನ್ 2022

ಸೈಕಲ್ .ಹನಿಗವನ


 ಸೈಕಲ್ 

ಸೈಕಲ್


ಯಾವಾಗಲೂ ಬ್ಯಾಲೆನ್ಸ್

ಮಾಡುತ್ತಾ ತುಳಿಯಬೇಕು

ಸಂಸಾರವೆಂಬ ಸೈಕಲ್ |

ಆಗಾಗ್ಗೆ ಇರಲೇಬೇಕು

ಸರಸ ವಿರಸಗಳು 

ಊಟದಲ್ಲಿದ್ದಂತೆ ಪಿಕ್ಕಲ್||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು