25 ಸೆಪ್ಟೆಂಬರ್ 2021

ಗಜಲ್


 


ಗಜಲ್ 


ನಿನ್ನೊಡನೆ ಕಳೆದ ನೆನಪುಗಳ ಬುತ್ತಿ ಬಿಚ್ಚಿ ಮೆಲುಕು ಹಾಕುತಿರುವೆ 

ನೀನಿತ್ತ ಉಡುಗೊರೆಗಳ ನೋಡುತಾ

ಮೈ ಮರೆಯುತಿರುವೆ.


ನೀನಿಲ್ಲದೆ ಸಾಯಲೂ ಮನಸಿಲ್ಲದೆ ಬದುಕುತಿರುವೆ 

ಭರವಸೆಯ ಜೋಕಾಲಿಯ ಕಟ್ಟಿ ಜೀಕುತಿರುವೆ 


ಒಲವ ಪಡೆಯಲು ಅವಸರ ಬೇಕಿಲ್ಲ

ಎಂದು ಕಲಿಯುತಿರುವೆ

ಚೆಲುವಾಗಿರುವುದೆಲ್ಲಾ ನಂಬಿಕೆಗೆ ಅರ್ಹವಲ್ಲ ಎಂದು ಅರಿಯುತಿರುವೆ


ಸವಿನೆನೆಪುಗಳ ಮೆಲುಕು ಹಾಕಲು

ಶುಲ್ಕ ಬೇಡವೆಂದು ತಿಳಿಯುತಿರುವೆ

ಮನದಲೊಂದು ಮಹಲು ಕಟ್ಟಿ

ನಿನ್ನನ್ನು ಕರೆಯುತಿರುವೆ 


ಬಾಳಲಿ ಸಿಹಿಜೀವಿ ಬರುವಳೆಂಬ ಆಸೆಯಲಿ ಬದುಕುತಿರುವೆ  

ಭರವಸೆಯ ಕಣ್ಗಳಲಿ ನಿನ್ನ  ಹಾದಿಯನೆ ನೋಡುತಿರುವೆ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ




ದೋತಿ


 ದೋತಿ!


ಸೀಡಿ, ಡೀವಿಡಿ ಪುರಾಣ

ನೋಡಿದ ಮೇಲೆಇ ಬೇಸರವಾಗಿ

ಜನರು  ತೀರ್ಮಾನಿಸಿದ್ದರು  ನೋಡಬಾರದೆಂದು

ರಾಜಕಾರಣಿಗಳ ಮೂತಿ|

ಸದನದಲ್ಲಾದರೂ ಗಂಭೀರವಾಗಿ

ಇರುವರೆಂದು ನಿರೀಕ್ಷೆ ಇತ್ತು

ಅಲ್ಲೂ ಉದುರಿಸಿಬಿಟ್ಟರು

ತಮ್ಮ ದೋತಿ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಜನಮಿಡಿತ ೨೫/೯.೨೧


 

*ಇಂದಿನ ಸಿಂಹಧ್ವನಿ ಪತ್ರಿಕೆಯಲ್ಲಿ*...೨೫/೯.೨೧


 

24 ಸೆಪ್ಟೆಂಬರ್ 2021

ದುರ್ಗಾ ದೇವಿಗೆ ನಮನ


 

ದುರ್ಗಾ ದೇವಿಯೆ ನಿನಗೆ
ನನ್ನ ನಮನ
ದಯಮಾಡಿ ನೀಡು
ನಮ್ಮೆಡೆಗೆ ಗಮನ.

ಮನದಲೇನೋ ಬೇಗೆ
ನಿಂತಲ್ಲೆ ತಲ್ಲಣ
ದುಷ್ಷರ ಹಿಂಸೆ, ದುರ್ಗುಣಕೆ
ತಳಮಳಿಸಿದೆ ಜನಗಣ.

ರಕ್ಕಸರ ತರಿದವಳೆ
ಶಿಷ್ಟರ ರಕ್ಷಿಪಳೆ
ತರಿದು ಬಿಡು ಖೂಳರ
ಸ್ವಚ್ಚವಾಗಲಿ ಇಳೆ .

ಅಜ್ಞಾನಿಗಳಲಿ ಜ್ಞಾನ
ಬೀಜವ ಬಿತ್ತಿ ಬಿಡು
ಜಗವಾಗಲಿ ಸುಖ
ಶಾಂತಿಯ ಬೀಡು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ