20 ಆಗಸ್ಟ್ 2021

ಲಕುಮಿಗೆ ನಮನ


 


ಖುಷಿ


ಖುಷಿಯಾಗುವುದೆನ್ನ

ಮನ ನಾ ಮುಂಜಾನೆಯ

ನಿದ್ದೆಯಿಂದೆದ್ದಾಗ |

ನಮಿಸುವೆನು ಶಿರಬಾಗಿ 

ವರಮಹಾಲಕುಮಿಗೆ

ಬದುಕಿಸಿದ್ದಕ್ಕಾಗಿ ಮತ್ತೊಂದು

ಮತ್ತೊಂದು ದಿನ

ನೋಡಲು ಈ ಜಗ ||


ಸಿಹಿಜೀವಿ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

18 ಆಗಸ್ಟ್ 2021

ಡುಂಡಿರಾಜರು


 


ಇವರು ಕನ್ನಡದ

ಹೆಮ್ಮೆಯ ಹನಿ ಕವಿ 

ಡುಂಡಿರಾಜರು|

ಇವರ ಕವಿತೆ ,ಹನಿ,

ಓದಲು ಮತ್ತು ಕೇಳಲು 

ಎಲ್ಲರೂ ಹಾಜರು||


(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)

ಗೆದ್ದೆತ್ತಿನ ಬಾಲ ‌.ಹನಿ

 

ನನ್ನ ಗುಣಗಳ ಹೊಗಳಿ

ಹಲವರು ಏರಿಸಿರುವರು

ಹೊನ್ನ ಶೂಲ|

ಅದೇನು ಅಚ್ಚರಿಯಲ್ಲ

ಬಿಡಿ ಎಲ್ಲರೂ ಹಿಡಿದೇ

ಹಿಡಿಯುವರು 

ಗೆದ್ದೆತ್ತಿನ ಬಾಲ||


(ಇಂದು ಹನಿ ಕವಿ ಡುಂಡಿರಾಜರ ಜನ್ಮ ದಿನ ಅವರಿಗೆ ಈ ಹನಿ ಅರ್ಪಣೆ)



ಸಿಹಿಜೀವಿ

ಸಿ ಜಿ ವೆಂಕಟೇಶ್ವರ