09 ಆಗಸ್ಟ್ 2021

ಸ್ವಾಭಿಮಾನ .ಹನಿ


 


ಸ್ವಾಭಿಮಾನ



ನಮ್ಮ ಹಿರಿಯರು ನಮಗೆ

ಸ್ವಾತಂತ್ರ್ಯ ಕೊಡಿಸಲು

ಮಾಡಿದ್ದಾರೆ ತ್ಯಾಗ

ಬಲಿದಾನ|

ನಾವೀಗ ಪಣತೊಡಬೇಕಿದೆ

ಉಳಿಸಿ ಬೆಳೆಸಲು ದೇಶದ

ಮಾನ ಸಮ್ಮಾನ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


07 ಆಗಸ್ಟ್ 2021

ಸತ್ಯದ ಹೊನಲು . ೭/೮/೨೧


 

ಸಿಹಿಜೀವಿಯ ಹನಿಗಳು.


 #ಭಾರತಕ್ಕೆ_ಬಂಗಾರ

#ಸಿಹಿಜೀವಿಯ_ಹನಿ


 

ಒಲಿಂಪಿಕ್ಸ್ನಲ್ಲಿ 

ಭರ್ಜಿ ಎಸೆತದಲ್ಲಿ 

ಭಾರತಕ್ಕೆ ಬಂದಿದೆ

ಬಂಗಾರ| 

ಇನ್ನೇಕೆ ತಡ 

ಎಲ್ಲರೂ ಸೇರಿ

ಕುಣಿಯೋಣ ಬಾರ ||



ಭಾರತಕ್ಕೆ ಬಂಗಾರದ

ಪದಕ ತಂದಿದೆ

ನೀರಜ್ ಚೋಪ್ರ 

ರವರ ಭರ್ಜಿ ಎಸೆತ|

ಇಡೀ ಭಾರತ ಇಂದು

ಸಂತಸದಲ್ಲಿ ಹುಚ್ಚೆದ್ದು

ಕುಣಿಯುತ್ತಿದೆ ಸತತ||


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ