ಮಳೆಯಲಿ...
ಮಳೆಗೆ ಮುಖವೊಡ್ಡಿ
ನಿಂತಿದ್ದೆ
ನನ್ನ ಕಣ್ಣಿಂದ
ಬೀಳುವ
ಕಣ್ಣೀರ ಹನಿಗಳು
ಯಾರಿಗೂ
ಗೊತ್ತಾಗದಿರಲೆಂದು!
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಮಳೆಯಲಿ...
ಮಳೆಗೆ ಮುಖವೊಡ್ಡಿ
ನಿಂತಿದ್ದೆ
ನನ್ನ ಕಣ್ಣಿಂದ
ಬೀಳುವ
ಕಣ್ಣೀರ ಹನಿಗಳು
ಯಾರಿಗೂ
ಗೊತ್ತಾಗದಿರಲೆಂದು!
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಹಣ ಪಾಶಾಣ* ನ್ಯಾನೋ ಕಥೆ
ಹಣವೆಂದರೆ ಪಾಷಾಣ, ಬದುಕಲು ಹಣವೊಂದೇ ಬೇಕಿಲ್ಲ, ಹಣ ಸಂಬಂಧಗಳನ್ನು ಬೇರ್ಪಡಿಸುತ್ತದೆ .ಆದಷ್ಟೂ ಹಣದಿಂದ ದೂರವಿರಿ ಎಂದು ವೇದಿಕೆಯಲ್ಲಿ ಭಾಷಣ ಮಾಡಿದ ಸ್ವಾಮಿಜಿಗಳು ವೇದಿಕೆಯ ಕೆಳಭಾಗದಲ್ಲಿ ನಮಸ್ಕರಿಸಿದ ಭಕ್ತನಿಗೆ ತನ್ನ ಮಠಕ್ಕೆ ದೇಣಿಗೆ ಕೇಳಿದರು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಓದುವುದನ್ನು ಕಲಿಯಬೇಕಿದೆ
ಓದುವುದನ್ನು ಕಲಿಯಬೇಕಿದೆ
ನಾನು ಮನಸ್ಸು ಓದುವುದನ್ನು
ಕಲಿಯಬೇಕಿದೆ.
ನೀನೇ ಇಂದ್ರ ಚಂದ್ರನೆಂದು
ಅಟ್ಟಕ್ಕೆ ಹತ್ತಿಸಿ ದೀಢೀರ್ ಎಂದು
ಕೈಕೊಟ್ಟು ಮತ್ತೊಬ್ಬರ ಕೈಹಿಡಿವವರ
ಮನಸ್ಸು ಓದುವುದನ್ನು ಕಲಿಯಬೇಕಿದೆ.
ನೀನೇ ಆರತಿ, ಭಾರತಿ, ರತಿ
ಎಂದು ಊರೆಲ್ಲಾ ಅಲೆದಾಡಿ
ಎಲ್ಲವ ಮುಗಿಸಿ,ಮುದುವೆಯ
ಮಾತೆತ್ತಿದಾಗ ಪರಾರಿಯಾಗುವವರ
ಮನಸ್ಸು ಓದುವುದನ್ನು ಕಲಿಯಬೇಕಿದೆ.
ನೀವೇ ನಮ್ಮ ಸರ್ವಸ್ವ. ಪ್ರಭುಗಳು
ನಾವು ನಿಮ್ಮ ಸೇವಕರು
ನಮಗೇ ಮತ ನೀಡಿ ಎಂದವರು
ಗೆದ್ದ ಬಳಿಕ ಮತದಾರರ ನಂಬಿ
ಮತಗಳ ಮೇಲೆ ರಾಜಕೀಯ
ಮಾಡುವವರ ಮನಸ್ಸು ಓದುವುದನ್ನು ಕಲಿಯಬೇಕಿದೆ.
ವಿಶ್ವಶಾಂತಿ ನಮ್ಮ ಮೂಲತತ್ವ
ಎಂದು ಸಾರುತ್ತಲೇ ಒಬ್ಬರ
ಮೇಲೊಬ್ಬರು ಬಾಂಬ್, ಕ್ಷಿಪಣಿ
ಹಾಕಲು ಹಾತೊರೆಯುವ ವಿಶ್ವ
ನಾಯಕರ ಮನಸ್ಸು ಓದುವುದನ್ನು ಕಲಿಯಬೇಕಿದೆ.
ಓದುವುದು ಕಲಿಯುವುದು ಬಹಳವಿದೆ
ಯಾವುದರಿಂದ ಆರಂಭಿಸಲಿ ನೀವೇ ಹೇಳಿ?
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
#ಸಿಹಿಜೀವಿಯ_ಹನಿ
ಮೊದಲ ರಜತ
ಪದಕ ತಂದು
ಭಾರತಾಂಭೆಯ
ಮುಡಿಗೇರಿಸಿದೆ
ಮೀರಾಬಾಯಿ
ಚಾನು|
ಇದೋ ನಿನಗೆ
ನೂರೊಂದು ನಮನ
ಸಲ್ಲಿಸುವೆ ಎಲ್ಲರ
ಪರವಾಗಿ ನಾನು| |
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ