Sihijeevi .
C VENKATESHWARA
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಬದುಕು*
ಬದುಕು ನಮ್ಮದು
ನಾವು ಬದುಕಲು
ನಮ್ಮವರ ಬದುಕಿಸಲು
ಸತ್ತಂತಿಹರನು ಬದುಕಿಸಲು
ಸಾವಿಗಂಜಿದವರ ಬದುಕಿಸಲು
ಬದುಕನ್ನು ಪ್ರೀತಿಸಬೇಕು.....
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಅತಿಯಾಸೆ ಗತಿಗೇಡು*
ಶಿಶುಗೀತೆ
ರಾಮನಳ್ಳಿಯಲ್ಲಿ ರಾಮಪ್ಪನೆಂಬ
ರೈತನಿದ್ದನು
ಬೇಸಾಯದೊಂದಿಗೆ ಒಂದು
ಕೋಳಿ ಸಾಕಿದ್ದನು.
ಕೋಳಿ ಬೆಳೆದು ಮೊಟ್ಟೆ
ಇಡಲು ಶುರು ಮಾಡಿತು
ಅಚ್ಚರಿಯೆಂಬಂತೆ ಬಂಗಾರದ
ಮೊಟ್ಟೆ ಇಟ್ಟಿತು.
ಕೋಳಿ ದಿನವೂ ಬಂಗಾರದ
ಮೊಟ್ಟೆಯನು ಇಟ್ಟಿತು
ರಾಮಪ್ಪನ ಮನವು
ಸಂತೋಷದಿ ಕುಣಿದಾಡಿತು.
ಅವನಲಿ ಅತಿಯಾಸೆಯ
ಬೀಜವೊಂದು ಮೊಳಕೆಯೊಡೆಯಿತು
ಒಂದೆ ದಿನ ಎಲ್ಲಾ ಮೊಟ್ಟೆಗಳ
ಪಡೆಯಲು ಆಸೆಯಾಯಿತು.
ಕೋಳಿ ಹಿಡಿದು ಚೂರಿಯಿಂದ
ಹೊಟ್ಟೆ ಬಗೆದನು
ಬಂಗಾರವಿಲ್ಲ ಬರೀ ಕರುಳು
ಮಾಂಸವನ್ನು ಕಂಡನು.
ನಿರಾಸೆಯಿಂದ ಅಳುತಲಿ
ಜನರ ನೋಡಿದ
ಅತಿಯಾಸೆ ಪಡದಿರೆಂದು
ಜನಕೆ ಬುದ್ದಿ ಹೇಳಿದ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು