This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
30 ಏಪ್ರಿಲ್ 2021
29 ಏಪ್ರಿಲ್ 2021
ಅತಿಯಾಸೆ ಗತಿಗೇಡು .ಶಿಶುಗೀತೆ
*ಅತಿಯಾಸೆ ಗತಿಗೇಡು*
ಶಿಶುಗೀತೆ
ರಾಮನಳ್ಳಿಯಲ್ಲಿ ರಾಮಪ್ಪನೆಂಬ
ರೈತನಿದ್ದನು
ಬೇಸಾಯದೊಂದಿಗೆ ಒಂದು
ಕೋಳಿ ಸಾಕಿದ್ದನು.
ಕೋಳಿ ಬೆಳೆದು ಮೊಟ್ಟೆ
ಇಡಲು ಶುರು ಮಾಡಿತು
ಅಚ್ಚರಿಯೆಂಬಂತೆ ಬಂಗಾರದ
ಮೊಟ್ಟೆ ಇಟ್ಟಿತು.
ಕೋಳಿ ದಿನವೂ ಬಂಗಾರದ
ಮೊಟ್ಟೆಯನು ಇಟ್ಟಿತು
ರಾಮಪ್ಪನ ಮನವು
ಸಂತೋಷದಿ ಕುಣಿದಾಡಿತು.
ಅವನಲಿ ಅತಿಯಾಸೆಯ
ಬೀಜವೊಂದು ಮೊಳಕೆಯೊಡೆಯಿತು
ಒಂದೆ ದಿನ ಎಲ್ಲಾ ಮೊಟ್ಟೆಗಳ
ಪಡೆಯಲು ಆಸೆಯಾಯಿತು.
ಕೋಳಿ ಹಿಡಿದು ಚೂರಿಯಿಂದ
ಹೊಟ್ಟೆ ಬಗೆದನು
ಬಂಗಾರವಿಲ್ಲ ಬರೀ ಕರುಳು
ಮಾಂಸವನ್ನು ಕಂಡನು.
ನಿರಾಸೆಯಿಂದ ಅಳುತಲಿ
ಜನರ ನೋಡಿದ
ಅತಿಯಾಸೆ ಪಡದಿರೆಂದು
ಜನಕೆ ಬುದ್ದಿ ಹೇಳಿದ .
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕತ್ತಿವರಸೆ .ಹನಿಗವನ
ಜನನಾಯಕರೆ
ಜನರು ಸಂಕಷ್ಟದಲ್ಲಿ
ಇರುವಾಗ ಸಾದ್ಯವಾದರೆ
ಅವರ ಕಣ್ಣೀರ ಒರೆಸಿ
ನೀಡಿ ಸಾಂತ್ವನ ಭರವಸೆ|
ಅದು ಬಿಟ್ಟು ನೊಂದವರ
ಮೇಲೆ ನಡೆಸಲೇ ಬೇಡಿ
ಅಮಾನವೀಯವಾಗಿ
"ಕತ್ತಿ ವರಸೆ"||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
28 ಏಪ್ರಿಲ್ 2021
ಒಗ್ಗಟ್ಟಿನಲ್ಲಿ ಬಲವಿದೆ .ಶಿಶುಗೀತೆ೨೬
ಶಿಶುಗೀತೆ
*ಒಗ್ಗಟ್ಟಿನಲ್ಲಿ ಬಲವಿದೆ*
ಒಂದು ಊರಿನಲ್ಲಿ ಒಬ್ಬ
ರೈತನಿದ್ದನು
ಅವನಿಗೆ ಮೂರು ಗಂಡು
ಮಕ್ಕಳಿದ್ದರು.
ದಿನವು ಅವರು ತಮ್ಮ ತಮ್ಮಲ್ಲೆ
ಕಚ್ಚಾಡುತ್ತಿದ್ದರು
ಅಪ್ಪನ ಕಿವಿಮಾತು ಕೇಳದೆ
ಬಡಿದಾಡುತ್ತಿದ್ದರು.
ಮಕ್ಕಳಿಗೆ ಬುದ್ದಿ ಹೇಳಲು
ಅಪ್ಪ ಯೋಚಿಸಿದ
ಒಂದು ಉಪಾಯವನ್ನು
ಅವನು ಯೋಜಿಸಿದ.
ಮೂರು ಕಡ್ಡಿಯ ಗಂಟನ್ನು
ಅವರಿಗೆ ನೀಡಿದನು
ಒಬ್ಬೊಬ್ಬರು ಮುರಿಯಲು
ಪ್ರಯತ್ನಿಸಲು ಹೇಳಿದನು.
ಕಷ್ಟಪಟ್ಟರೂ ಯಾರಿಗೂ
ಮುರಿಯಲಾಗಲಿಲ್ಲ
ಮಕ್ಕಳ ಪೆಚ್ಚು ಮೋರೆ
ಅಪ್ಪಗೆ ನೋಡಲಾಗಲಿಲ್ಲ.
ಅಪ್ಪನೆದರು ಮೂವರು
ತಲೆ ತಗ್ಗಿಸಿ ನಿಂತರು
ದಾರಬಿಚ್ಚಿದ ಒಂದೊಂದು
ಕಟ್ಟಿಗೆಯ ಪಡೆದರು.
ಈಗ ಮುರಿಯಿರೆಂದು
ಅಪ್ಪ ಆಜ್ಞೆ ನೀಡಿದರು
ಸುಲಭವಾಗಿ ಮಕ್ಕಳು ಕಟ್ಟಿಗೆ
ಮುರಿದು ಹಾಕಿದರು.
ಒಗ್ಗಟ್ಟಿನಲ್ಲಿ ಬಲವಿದೆ ಎಂದು
ಅಪ್ಪ ಹೇಳಿದರು
ಜಗಳವಾಡದೆ ಬದುಕುವುದನು
ಮಕ್ಕಳು ಕಲಿತರು.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕರೋನ ಮೆಟ್ಟಿ ನಿಲ್ಲಬಹುದು. ಲೇಖನ #corona
*ಕೊರೋನಾ ಮೆಟ್ಟಿ ನಿಲ್ಲಬಹುದು*
ಕರ್ನಾಟಕ ಮತ್ತು ಭಾರತದ ಇಂದಿನ ಕೊರೋನಾದ ಭೀಕರತೆಯನ್ನು ನೋಡಿ ಆಡಳಿತ ಮತ್ತು ವಿರೋಧ ಪಕ್ಷದವರು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪರಸ್ಪರ ಕೆಸರೆರೆಚಿಕೊಂಡು ತಾವೂ ಬಟಾಬಯಮಸೀದಿುದರ ಜೊತೆಗೆ ನೋವಿನಿಂದಾಗಿ ನರಳುವವರ ಗಾಯಕ್ಕೆ ಉಪ್ಪು ಸವರುವ ಕಾರ್ಯ ಮಾಡುವದಲ್ಲದೇ ಮತ್ತೇನೂ ಅಲ್ಲ ,ಸಂಕಷ್ಟ ಕಾಲದಲ್ಲಿ ನಾವೆಲ್ಲರೂ ಕಚ್ಚಾಡದೇ ಕೆಲಸ ಮಾಡಬೇಕೆಂದು ಯಾರೋ ಜಾಲ ತಾಣದಲ್ಲಿ ಚೆನ್ನಾಗಿ ಹೇಳಿ ರಾಜಕಾರಣಿಗಳ ಬಾಯಿ ಮುಚ್ಚಿಸಿದ್ದಾರೆ"ಮಧ್ಯಪ್ರದೇಶದಲ್ಲಿ ಕೊರೋನ ಬಂದಿದೆ ಎಂದರೆ ಅದು ಬಿ ಜೆಪಿ ಸರ್ಕಾರದ ವೈಫಲ್ಯ ಎನ್ನಬೇಕೆ? ಚತ್ತೀಸ್ಘಡ ಮತ್ತು ಪಂಜಾಬ್ ನಲ್ಲಿ ಕೊರೋನ ಬಂದರೆ ಅದು ಕಾಂಗ್ರೆಸ್ ಸರ್ಕಾರದ ವಿಫಲತೆ ಎನ್ನಬೇಕೆ? ಮಹಾರಾಷ್ಟ್ರದ ಕೊರೋನ ಹರಡಿದರೆ ಶಿವಸೇನೆಯ ವೈಫಲ್ಯದ ಸಂಕೇತವೆ?ಭಾರತದಲ್ಲಿ ಕೊರೋನ ಹರಡಿದರೆ ಅದು ಮೋದಿಯವರ ವೈಫಲ್ಯ ಎಂಬುದಾದರೆ ಇಡೀ ಪ್ರಪಂಚದಲ್ಲಿ ಕೊರೋನ ಹರಡಿದರೆ ಪ್ರಪಂಚದಲ್ಲಿ ಯಾರೂ ಉತ್ತಮ ನಾಯಕರಿಲ್ಲ ಎಂದು ಅರ್ಥವೆ? ದುಡ್ಡು ಇದ್ದವರ ಬಳಿ ಕೊರೋನ ಹೋಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಹಾಗಿದ್ದಿದ್ದರೆ ಅಮೆರಿಕ, ಜಪಾನ್ ಮುಂತಾದ ದೇಶಗಳಲ್ಲಿ ಕೊರೊನ ಸುಳಿಯುತ್ತಿರಲಿಲ್ಲ."
ಈ ಸಂದೇಶವು ಚಿಂತನಾರ್ಹ
ಅದ್ದರಿಂದ ಸ್ನೇಹಿತರೆ ಇದು ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸಿಕೊಂಡು ಕಚ್ಚಾಟ ಆಡುವ ಸಮಯವಲ್ಲ , ಹಳ್ಳಿ,ತಾಲ್ಲೂಕು, ಜಿಲ್ಲೆ,ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಹಕಾರದಿಂದ ಈ ಮಹಾಮಾರಿಯನ್ನು ತೊಲಗಿಸಲು ಪಣ ತೊಡಬೇಕಿದೆ, ಇದರಲ್ಲಿ ಎಲ್ಲರೂ ಪಕ್ಷ, ಜಾತಿ, ಮತಗಳ ಎಲ್ಲೆ ಮೀರಿ ನಮ್ಮ ಉಳಿವಿಗೆ ನಾವು ಕಾರ್ಯ ಪ್ರವೃತ್ತವಾಗಬೇಕಿದೆ.
ಯುದ್ದ ಆರಂಭವಾದಾಗ ಸೈನಿಕರ, ನಮ್ಮ ಸಂಪನ್ಮೂಲಗಳ ನಿಜವಾದ ಶಕ್ತಿ ಮತ್ತು ಉಳುಕು ಹೊರಬರುವುದು. ಈಗಿನ ಕರೋನ ವಿರುದ್ಧದ ಯುದ್ದದಲ್ಲಿ ಬಹುತೇಕ ವಿಶ್ವದ ಎಲ್ಲಾ ರಾಷ್ಟ್ರಗಳು ಮತ್ತು ನಮ್ಮ ದೇಶದಲ್ಲಿ ಎಲ್ಲಾ ರಾಜ್ಯಗಳು ನಮ್ಮ ಆರೋಗ್ಯ ಸೇವೆಯ ಉಳುಕುಗಳನ್ನು ಬಿಚ್ಚಿಟ್ಟು ಬಟಾ ಬಯಲಾಗಿವೆ . ಇದಕ್ಕೆ ಆಳುವವರು ,ಜನ ನಾಯಕರು ಎಷ್ಟು ಕಾರಣರೋ ಸಾಮಾನ್ಯ ಜನರಾದ ನಾವೂ ಸಹ ಅಷ್ಟೇ ಕಾರಣರು.
ನಾವು ಆರೋಗ್ಯವಾಗಿದ್ದಾಗ ಬರೀ ,ಮಂದಿರ ,ಮಸೀದಿ, ಚರ್ಚು,ಜಾತಿ ಮೀಸಲಾತಿ, ಗಡಿಗಳು, ಎಂದು ಮುಷ್ಕರ, ಹೋರಾಟ ಮಾಡಿದೆವೇ ವಿನಃ ಉತ್ತಮ ಆಸ್ಪತ್ರೆ, ಶಾಲಾ ಕಾಲೇಜುಗಳಿಗಾಗಿ ಮುಷ್ಕರ ಮಾಡಲಿಲ್ಲ ಹಾಗೆ ಮಾಡಿದ್ದರೆ ಇಂದು ಡಾಕ್ಟರ್ ,ಆಸ್ಪತ್ರೆಗಳ ಮುಂದೆ ವೆಂಟಿಲೇಟರ್ ಆಕ್ಸಿಜನ್, ಬೆಡ್ ಗಳಿಗಾಗಿ ಕಣ್ಣೀರಿಡುತ್ತಾ ಜಗಳ ಮಾಡಬೇಕಿರಲಿಲ್ಲ.
ಇನ್ನೂ ಭಾರತದ ಆರೋಗ್ಯ ವ್ಯವಸ್ಥೆಯ ನೈಜ ಚಿತ್ರಣ ಕಂಡು ಎಂತವರು ಸಹ ಬೆಚ್ಚಿ ಬೀಳುವಂತಿದೆ . ನಮ್ಮ ಜನಸಂಖ್ಯೆ ಹೆಚ್ಚಾದಂತೆ ನಮ್ಮ ಆರೋಗ್ಯ ಮೂಲಸೌಕರ್ಯಗಳು ಇನ್ನೂ ಓಬಿರಾಯನ ಕಾಲದಲ್ಲಿ ಇರುವುದು ದುರದೃಷ್ಟಕರ.
ಪ್ರಪಂಚದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಹತ್ತು ಸಾವಿರ ಜನಸಂಖ್ಯೆ ಗೆ ಕೇವಲ 7 ಜನ ವೈದ್ಯ ರು ಇದ್ದರೆ, ಅಮೆರಿಕಾದಲ್ಲಿ 25 ವೈದ್ಯರು, ಅಷ್ಟೇ ಏಕೆ ಪಾಕಿಸ್ತಾನದಲ್ಲಿ 9 ವೈದ್ಯರು ಲಭ್ಯ.
ಇನ್ನೂ ಇಷ್ಟೇ ಜನಸಂಖ್ಯೆಗೆ ಭಾರತದ ಆಸ್ಪತ್ರೆಯಲ್ಲಿ ಸರಾಸರಿ 7 ಬೆಡ್ ಲಭ್ಯವಿರುವ ಕಾಲದಲ್ಲಿ ಚೀನಾದಲ್ಲಿ42, ಶ್ರೀಲಂಕಾ ದಲ್ಲಿ 36 ಹಾಸಿಗೆಗಳು ಲಭ್ಯವಿವೆ
ರೋಗಿಗಳನ್ನು ಶುಶ್ರೂಷೆ ಮಾಡಲು ನರ್ಸಿಂಗ್ ವಿಷಯಕ್ಕೆ ಬಂದರೆ ,ಅಮೆರಿಕಾ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ 86 ನರ್ಸ್ ಗಳು ಸೇವೆಗೆ ಲಭ್ಯವಿದ್ದರೆ, ಅದು ಭಾರತದಲ್ಲಿ ಕೇವಲ 21 ಅಂದರೆ ನಿಮಗೆ ಆಶ್ಚರ್ಯಕರವಾಗಿ ಕಾಣಬಹುದು. ಮತ್ತು ಆರೋಗ್ಯ ಸಮಸ್ಯೆಗಳ ಮೂಲ ತಿಳಿಯಬಹುದು.
ಭಾರತವನ್ನು ಹೊರತು ಪಡಿಸಿ ಈ ಮೇಲೆ ತಿಳಿಸಿದ ಕೆಲ ದೇಶಗಳಲ್ಲಿ ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಇದ್ದದ್ದರಲ್ಲೇ ವಾಸಿ ಎಂದು ಹೇಳಲು ಕಾರಣ ಆ ದೇಶಗಳು ಆರೋಗ್ಯಕ್ಕೆ ಮೀಸಲಿಡುವ ಹಣ, ಅಮೇರಿಕಾವು ತನ್ನ ಜಿ ಡಿ ಪಿ ಯ 17% ಹಣವನ್ನು ಆರೋಗ್ಯ ಕ್ಕೆ ಮೀಸಲು ಇಡುತ್ತದೆ .ನಮ್ಮ ಭಾರತದಲ್ಲಿ ಇದು ಕೇವಲ 3.7%.
ಈ ನಿಟ್ಟಿನಲ್ಲಿ ನಾವು ಇಂದು ಬಹಳ ಚಿಂತನೆ ಮಾಡಿ ಮುಂದೆ ನಮ್ಮ ಆದ್ಯತೆ ಯಾವುದಾಗಬೇಕು ಎಂದು ಚಿಂತನ ಮಂಥನ ಮಾಡಿ ಕಾರ್ಯ ಪ್ರವೃತ್ತರಾಗಬೇಕಿದೆ .
ಅನಿಷ್ಟಕ್ಕೆಲ್ಲ ಶನೇಶ್ವರನೇ ಕಾರಣ ಎಂದು ಯಾವುದೊ ದೇಶವನ್ನೋ, ಯಾವುದೋ ನಾಯಕರನ್ನು ದೂಷಿಸುತ್ತಾ ಕೂರುವುದನ್ನು ಬಿಟ್ಟು, ಕಷ್ಟ ಬಂದಾಗ ಎಲ್ಲಾ ಸೇರಿ ಆ ಕಷ್ಟ ಪರಿಹಾರ ಮಾಡುವ ಮಾರ್ಗದ ಕಡೆ ಯೋಚಿಸೋಣ ಯೋಜಿಸೋಣ.
ಸ್ನೇಹಿತರೇ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಮನಸ್ಥಿತಿಯನ್ನು ಬಿಟ್ಟು , ಮುಂದೆ ಬರುವ ಆಪತ್ತುಗಳನ್ನು ಎದುರಿಸುವ ಕಡೆ ಯೋಚಿಸಬೇಕಿದೆ. ಆರೋಗ್ಯ,ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು, ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನ ಪಡೋಣ. ಇದೆಲ್ಲಕ್ಕಿಂತ ಮಿಗಿಲಾಗಿ ಓರ್ವ ಪ್ರಜ್ಞಾವಂತ ಪ್ರಜೆಯಾಗಿ ಸರ್ಕಾರದೊಂದಿಗೆ ನಿಂತರೆ ಇಂತಹ ನೂರಾರು ಕರೋನ ಗಳು ಮೆಟ್ಟಿ ನಿಲ್ಲಬಹುದು .ನೀವೇನಂತೀರಿ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು




