*ಸಂಗಮ*
ಓ ನನ್ನ ನಲ್ಲೆ
ನೀನು ಬಿಸಿಲು,
ನಾನು ಮಳೆ ,
ಎಂದು ಏಕೆ
ಓಡುವೆ ನಿಲ್ಲು|
ಎರಡೂ ಸೇರಲು
ಆಗುವುದು
ಮಳೆಬಿಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಸಂಗಮ*
ಓ ನನ್ನ ನಲ್ಲೆ
ನೀನು ಬಿಸಿಲು,
ನಾನು ಮಳೆ ,
ಎಂದು ಏಕೆ
ಓಡುವೆ ನಿಲ್ಲು|
ಎರಡೂ ಸೇರಲು
ಆಗುವುದು
ಮಳೆಬಿಲ್ಲು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
ಕುಂಚ .ಪ್ರಪಂಚ
ಕಲಾವಿದರು ಕೈಯಲ್ಲಿ
ಹಿಡಿದರೆ ಕುಂಚ|
ತೋರಿಸುವರು
ನಾವು ಕಾಣದ
ಸುಂದರ ಪ್ರಪಂಚ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
೧
*ನಮನ*
ಭಾವನೆಗಳನು ಹೊರಸೂಸಲು
ಚಿತ್ತಾರ ಬಿಡಿಸಿ
ಚಿತ್ರಗಳಿಗೆ ಬಣ್ಣಗಳ ಪೂಸಿ
ಬರೆದ ಚಿತ್ರಗಳು ಸೆಳೆಯುವವು
ನಮ್ಮ ಮನ|
ಚಿತ್ರ ಬರೆವ ಚಿತ್ರಕಲಾವಿದರೆ
ನಿಮಗಿದೋ ನಮ್ಮ ನಮನ||
ಬದುಕು
ಬೇವು ಬೆಲ್ಲದಂತೆ ಬದುಕು
ಉತ್ತಮರ ಮಾರ್ಗದಲಿ ಬದುಕು
ಏಳು ಬೀಳುಗಳಿದ್ದರೂ ಬದುಕು
ನಾವು ನಾವಾಗಿದ್ದಾಗ ಮಾತ್ರ
ಸುಂದರ ಈ ಬದುಕು
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
*ಹೊಸ ವರುಷ*
ಹರುಷ ತರಲಿ ನಮಗೆ
ಹೊಸ ವರುಷ
ತ್ಯಜಿಸೋಣ ದ್ವೇಷ
ಕಳಚೋಣ ಕೆಟ್ಟ ವೇಷ|
ಮಾಡೋಣ ಒಳ್ಳೆಯ
ಗುಣಗಳ, ಒಳ್ಳೆಯವರ
ಸತ್ಸಂಗ ಸಮಾವೇಶ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ