ಕಳೆದು ಹೋಗಿರುವ
ಶಾರ್ವರಿ ನಾಮ ಸಂವತ್ಸರದಿ
ಬೇವಿಗಿಂತ ಬೆಲ್ಲವನೇ
ಹೆಚ್ಚು ನೀಡಿ ಕೊರೋನದೊಂದಿಗೆ
ಬಾಧಿಸಿತು ಎಲ್ಲರ |
ಬರುವ ನೀನಾದರೂ
ಸಕಲರಿಗೆ ನೆಮ್ಮದಿಯ ಕರುಣಿಸು
ಓ ಪ್ಲವನಾಮಸಂವತ್ಸರ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
*ಲಸಿಕೆ*
ಆಧಾರವಿಲ್ಲದ ವದಂತಿಗಳನ್ನು
ನಂಬಿ ಮುಂಜಾಗ್ರತಾ ಕ್ರಮಕ್ಕೆ
ಏಕೆ ಹಿಂಜರಿಕೆ|
ನಮ್ಮ ಜೀವ ಮತ್ತು
ಜೀವನವನ್ನು ಉಳಿಸಿಕೊಳ್ಳಲು
ಇಂದೇ ಹಾಕಿಸಿಕೊಳ್ಳೋಣ
ಕೊರೋನ ಲಸಿಕೆ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
*ಮಾದರಿ ಮಾನವ*
ನಾವೂ ಮಾದರಿ
ಮಾನವನಾಗಬೇಕಾದರೆ
ಯಜಮಾನನಾಗಿದ್ದರೂ
ಇರಬೇಕು
ಕ್ಷಮಾಗುಣ|
ಬಡವನಾಗಿದ್ದರೂ
ಇರಬೇಕು
ದಾನಗುಣ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ